ದಿನಾಚರಣೆಗಳ ಹಿಂದಿರುವ ಮಹಾನ್ ಆಶಯಗಳ ಮರೆಯದಿರೋಣ
ಒಂದು ಲೆಕ್ಕಾಚಾರದ ಪ್ರಕಾರ ವರ್ಷದ ಪ್ರತೀ ದಿನವೂ ಯಾವುದಾದರೂ ಒಂದು ದೇಶದಲ್ಲಿ ವಿಶೇಷ ದಿನವಾಗಿ ಆಚರಣೆಗೆ ಸಿದ್ಧವಾಗಿರುತ್ತದೆ. ನವೆಂಬರ್ ಹದಿನಾಲ್ಕು ಭಾರತದಲ್ಲಿ ಮಕ್ಕಳ ದಿನಾಚರಣೆ. ಎಲ್ಲಾ ಮಕ್ಕಳಿಗೂ ವಿಧವಿಧವಾದ ಉಡುಗೆಗಳನ್ನು ತೊಡಿಸಿ ಪ್ರಪಂಚದಾದ್ಯಂತ ಎಲ್ಲಾ ಭಾರತೀಯರು ಮಕ್ಕಳ ದಿನಾಚರಣೆಯನ್ನು ಆಚರಿಸಿ ಅವರವರ ಮಕ್ಕಳ ಛಾಯಾಚಿತ್ರವನ್ನು ಸಾಮಾಜಿಕ ತಾಣಗಳಲ್ಲಿ ಹರಿಬಿಟ್ಟಿದ್ದರು.
ರಂಗದ ಬೆಳಕಿನಲ್ಲಿ ಅಕ್ಕನ ಹೃದಯವನ್ನು ‘ನೀವು ಕಾಣಿರೆ..’?
ಅಕ್ಕಮಹಾದೇವಿ ಅಂದಕೂಡಲೇ ಬಹುತೇಕರ ಮನಸ್ಸಲ್ಲಿ ಸುಳಿದಾಡುವ ಚಿತ್ರ ಆಕೆ ಬೆತ್ತಲಾಗಿದ್ದಳು ಎಂಬುದು. ಮತ್ತು ಆ ಬೆತ್ತಲನ್ನು ಅವಳ ನೀಳ ಕೂದಲು ಮರೆಮಾಚಿತ್ತು ಎಂಬುದು. ಆದರೆ ಆ ಬೆತ್ತಲೆ ಎಂಥದ್ದು? ಅಕ್ಕನ ಚೆನ್ನಮಲ್ಲಿಕಾರ್ಜುನ ಎಂಥವನು? ಇಷ್ಟಕ್ಕೂ ಶಿವ ಯಾರು? ಹೀಗೆ ನಾವು ಯೋಚಿಸುವ ಮತ್ತು ಅಕ್ಕನ ವಚನಗಳಲ್ಲಿ ಕಾಣುವ ಬೆತ್ತಲೆ ಪರಿಕಲ್ಪನೆಯನ್ನು ಬಿಟ್ಟು ನಾವು ಕಟ್ಟಿಕೊಂಡಿರುವ ಬೆತ್ತಲೆ…
ಕ್ಲಾಸ್ಮೇಟ್ಸುಗಳ ಮಕ್ಕಳು ಮತ್ತು ಫಯಾಜ್ನ ಪುಲಾವು
‘ಮದುವೆಯಾದ ನಂತರ ಗಂಡು ಅಡುಗೆ ಮಾಡುವುದು ಅವಮಾನ, ಅದೇನಿದ್ದರೂ ಹೆಂಡತಿಯ ಕೆಲಸ’ ಎಂಬ ಅರೆಬೆಂದ ಅಲಿಖಿತ ಕಟ್ಟುಪಾಡೊಂದು ಉಂಟಲ್ಲ, ಅದು ಮೌಢ್ಯ. ಮದುವೆಯಾದ ನಂತರವೂ ಅಡುಗೆ ಕೆಲಸಗಳನ್ನು ಮಾಡುವುದು ಖಂಡಿತ ಅವಮಾನದ ಸಂಗತಿಯಲ್ಲ. ಬದಲಿಗೆ, ಪ್ರೀತಿ ಹೆಚ್ಚಿಸುವ ಸಂಗತಿ. ಕುಟುಂಬವೊಂದು ಹೀಗಿದ್ದಾಗ, ಅದು ಮಕ್ಕಳ ಯೋಚನಾ ಲಹರಿಯ ಮೇಲೂ ಪರಿಣಾಮ ಬೀರುತ್ತದೆ. ಅಪ್ಪನ ಈ…
ಹೆಸರು ಗುರುತಿಲ್ಲದ ಕಳೆದುಹೋದ ಜನರ ನೆನಪುಗಳ ದಿನ
ಮೊದಲನೇ ಮತ್ತು ಎರಡನೆ ಮಹಾಯುದ್ಧಗಳಲ್ಲಿ ಬ್ರಿಟನ್ನಿನ ಮತ್ತು ಅವರ ಮಿತ್ರರಾಷ್ಟ್ರಗಳ ಪರವಾಗಿ ಪಾಲ್ಗೊಂಡಿದ್ದ ಆಸ್ಟ್ರೇಲಿಯದ ಸೈನಿಕ ಕುಟುಂಬಗಳಿಗೆ ದೇಶದೊಳಗೆ ಅನೇಕ ಮನ್ನಣೆ ಸಂದಿದೆ. ಆದರೆ ಅವರಲ್ಲಿ ಬಹುತೇಕರು ಬಿಳಿಯರು. ಮಿಕ್ಕವರಿಗೆ ಅದೇ ಮಟ್ಟದಲ್ಲಿ ಮನ್ನಣೆ ಸಿಗಲಿಲ್ಲ. ಆ ಮಿಕ್ಕವರಲ್ಲಿ ಮುಖ್ಯವಾಗಿ ಸೇರಿದವರು ಆಸ್ಟ್ರೇಲಿಯನ್ ಅಬೊರಿಜಿನಲ್ ಜನರು, ಸ್ವಲ್ಪಮಟ್ಟಿಗೆ ಬ್ರಿಟಿಷರ ವಸಾಹತು…
ತಂದೆಯಂತೆ ಸಮಾಜಮುಖಿಯಾಗಿದ್ದ ಪುನೀತ್ ನೆನಪುಗಳು
ಪುನೀತ್ ಕನ್ನಡ ಸಿನೆಮಾಕ್ಕೆ ನಾಯಕನಾಗಿ ಬರುವಷ್ಟರಲ್ಲಿ ಶಿವರಾಜಕುಮಾರ್ ಆಗಲೇ ದೊಡ್ಡ ತಾರೆಯಾಗಿದ್ದರು ಮತ್ತು ರಾಘವೇಂದ್ರ ರಾಜಕುಮಾರ್ ಹಲವು ಸಿನೆಮಾ ಮಾಡಿ ತೆರೆಯಿಂದ ಮರೆಯಾಗಿದ್ದರು. ಬಾಲನಟನಾಗಿ ಕನ್ನಡಿಗರ ಮನೆಮಾತಾಗಿದ್ದ ಲೋಹಿತ್, ಪುನೀತ್ ಆಗಿ ತೆರೆಯ ಮೇಲೆ ಹೀರೋ ಆಗಿ ಬಂದು ಶಿವಣ್ಣನ ಹಾದಿ ಹಿಡಿಯುತ್ತಾರೋ ಇಲ್ಲವೋ ಎಂದು ಬಹಳ ಚರ್ಚೆ ನಡೆಯುತ್ತಿತ್ತು. ಪುನೀತ್ ಇಬ್ಬರ ಹಾದಿಯನ್ನೂ ತುಳಿಯದೇ ತಂದೆಯ ಹಾದಿ ಹಿಡಿದರು. ಹೀರೋ ವೈಭವೀಕರಣದ ಸಿನೆಮಾಗಳಿದ್ದರೂ ತಂದೆಯಂತೆ ಸಮಾಜ ಮುಖಿಯಾದ…
ಕಾಜುಗಾರ ಮನೆಯ ಇರುಳ ಬೆಳಕು
ಆ ದಿನ ನಾಗರಪಂಚಮಿ ಹಬ್ಬ. ಇದ್ದ ಸಾಮಾನಿನಲ್ಲಿಯೇ ಸೂಳಿರೊಟ್ಟಿ ಮಾಡಬೇಕೆಂಬುದು ಶಿಕ್ಷಕಿಯರ ಸಂಕಲ್ಪ. ಕರಾವಳಿ ಜನರ ಸಂಪ್ರದಾಯದಂತೆ ಹಬ್ಬಕ್ಕೆ ಮನೆ ಮಂದಿಯೆಲ್ಲ ಸೇರಿ ಮಾಡುವ ಸೂಳಿರೊಟ್ಟಿ ಆ ದಿನದ ವಿಶೇಷ ತಿಂಡಿ. ಇದನ್ನು ಮಾಡಲು ಇಡ್ಲಿ ಬೇಯಿಸುವ ಪಾತ್ರೆ ಬೇಕೆ ಬೇಕು. ಆದರೂ ಹೊಂದಿಸಿ ಗುಣಿಸಿ ಇದ್ದ ಅಡುಗೆ ಪಾತ್ರೆಯಲ್ಲಿಯೆ ಸೂಳಿರೊಟ್ಟಿ ಮಾಡಿ ತಿಂದಾಗ ಒಂದು ಸಾಹಸವೇ ಆಗಿತ್ತು. ಅಷ್ಟೊಂದು ನೀಟಾಗಿ ಬರದ ಸೂಳಿರೊಟ್ಟಿಗಳು ಸಿ.ಆರ್. ನಾಯ್ಕರ ಬಾಯಿಗೂ ಬಿತ್ತು. ಅಣಶಿಯ ಚಳಿ ಮಳೆ ಗಾಳಿಯಲ್ಲಿ ಹಬೆಯಾಡುವ ಬೆಳಗ್ಗಿನ ಬಿಸಿ ಬಿಸಿ ಚಹಾದ ಜೊತೆಗೆ…
ಇದೆಲ್ಲದಕ್ಕೂ ಒಂದು ಅರ್ಥ ಬೇಕಲ್ಲ!
ಮನುಕುಲ ಕಂಡ ಘೋರ ದುರಂತಗಳ ಹಸಿ ಹಸಿ ವಿವರಗಳು ಓದುಗರ ಗಂಟಲು ಕಟ್ಟಿಸುತ್ತವೆ. ಅಧಿಕಾರ ಮಾತ್ರದಿಂದ ಒಂದು ಜನಾಂಗಕ್ಕೆ ಸೇರಿದ ಜನರೆಲ್ಲರ ಹೆಸರು, ವಿದ್ಯೆ, ಊರುಗಳನ್ನೆಲ್ಲ ತೊಡೆದು ಹಾಕಿ ಸಂಖ್ಯೆಯೊಂದರಿಂದ ಮಾತ್ರ ಅವರನ್ನೆಲ್ಲ ಸಾಮೂಹಿಕವಾಗಿ ಗುರುತಿಸುವ ಈ ಜಾಗದಲ್ಲಿ ಇರಬೇಕಾಗಿ ಬಂದವರು ಬದುಕನ್ನು ಹೇಗೆ ಕಾಪಾಡಿಕೊಳ್ಳುತ್ತಿದ್ದರು ಎಂಬ ಬಗ್ಗೆ ಜ್ವಲಂತ ವಿವರಣೆಗಳಿವೆ. ಈ ಪುಸ್ತಕದ ಮೊದಲ ಭಾಗದಲ್ಲಿ ಆಸ್ವಿಚ್ ಎಂಬ ಕುಖ್ಯಾತ ನಾಜಿ ಕ್ಯಾಂಪಿನಲ್ಲಿ ಲೇಖಕರನ್ನು ಬಂಧಿಸಿಟ್ಟಾಗ ಅವರು ಅವರ ಸಹಚರರೊಂದಿಗೆ…
ನ್ಯಾಯದ ಹಾದಿಯಲ್ಲಿ ನಡೆಯಲಾಗದೇಕೆ?
ನಿರ್ಗತಿಕರಿಗೆ, ಅಸಹಾಯಕರಿಗೆ, ಹಿಂದುಳಿದವರಿಗೆ, ಅವಕಾಶವಂಚಿತರಿಗೆ ಸರಿ ಸಮಾನವಾದ ಹಕ್ಕು ಸಿಗಲೆಂದು ಹೋರಾಡಿದ ಅಂಬೇಡ್ಕರ್, ಅವರೇ ರಚಿಸಿದ ಸಂವಿಧಾನವನ್ನು ದುರುಪಯೋಗಪಡಿಸಿಕೊಂಡ ರಾಜಕಾರಣಿಗಳಿಂದ ಇವತ್ತಿಗೂ ಬಹು ದೊಡ್ಡ ವರ್ಗ ನಿರ್ಗತಿಕರಾಗಿ, ಅಸಹಾಯಕರಾಗಿ, ಅವಕಾಶವಂಚಿತರಾಗಿ ಬದುಕುತ್ತಿದ್ದಾರೆ. ಇದಕ್ಕೆಲ್ಲಾ ಮೂಲ ಕಾರಣವಾಗಿ ಬಂಡೆಯಂತೆ ಕುಳಿತಿರುವುದು ಲಂಚವೆನ್ನುವ ಭೂತ. ಜೈ ಭೀಮ್ ನಲ್ಲೂ ಕಾಣಬರುವುದು…
ಮಾಸ್ತಿಯವರ ಐತಿಹಾಸಿಕ ಕಾದಂಬರಿಗಳ ಕಥಾವಿಸ್ತಾರ
ಮಾಸ್ತಿಯವರು ಐತಿಹಾಸಿಕ ಕಾದಂಬರಿಗಳನ್ನು ಬರೆಯುವ ಕಾಲಕ್ಕೆ ಆದರ್ಶಪ್ರಾಯ ಚಾರಿತ್ರಿಕ ಕಥಾನಾಯಕರನ್ನು ಚಿತ್ರಿಸುವ ಮಾದರಿ ಒಂದು ಕಡೆ ಇತ್ತು. ಇನ್ನೊಂದು ಕಡೆ ಬಂಗಾಳದ ‘ಆನಂದಮಠ’ದಂಥ ಕಾದಂಬರಿ, ಶಿವಾಜಿ, ರಾಜಸಿಂಹರಂಥ ದೇಶಭಕ್ತರ ಜೀವನವನ್ನು ವೈಭವೀಕರಿಸಿ ಬರೆಯುವ ಮಾದರಿ ಇತ್ತು. ಇವರಿಗೆ ಹೋಲಿಸಿದರೆ ಮಾಸ್ತಿಯವರ ಎರಡೂ ಕಾದಂಬರಿಗಳ ಕಥಾನಾಯಕರು ಇಂಥ ಅದರ್ಶಪೂರ್ಣ ಮಾದರಿಗಳಿಗೆ ಹೊರತಾಗಿದ್ದಾರೆ.









