ಕಂಡೂ ಕಾಣದಂತೆ ಸರಿದು ಹೋಗುವ ಅನಿವಾರ್ಯತೆಗಳು
ರಂಗಭೂಮಿ ಮೇಲ್ನೋಟಕ್ಕೆ ಕಾಣುವ ಹಾಗೆ ಕೇವಲ ಬಣ್ಣದ ಲೋಕದ ಹೊರಮೈ ಅಲ್ಲ. ಇದು ತಿಳಿಯುವುದು ಆ ರಂಗ ಒಳಹೊಕ್ಕಾಗ ಮಾತ್ರ. ಕಲೆ ಮತ್ತು ಕಲಾವಿದರನ್ನು ತುಂಬು ಆದರ ಭಾವದಿಂದ ಕಾಣುವವರಿಗೆ ಆ ಎಲ್ಲವನ್ನು ಒಟ್ಟು ಮಾಡಿ ಚಿತ್ರ ಕಟ್ಟಿಕೊಡುವವನಿಗೆ ಅಸಲಿ ಚಿತ್ರ ತಿಳಿದಿರುತ್ತದೆ. ಅವನು ಪ್ರೇಕ್ಷಕರ ಚಪ್ಪಾಳೆಯ ಜೊತೆಗೆ ಕುಹಕವನ್ನೂ ಸೈರಿಸಿಕೊಳ್ಳಬೇಕಿರುತ್ತದೆ. ಮತ್ತೆ ಎಲ್ಲವನ್ನೂ ಕೇವಲ ಶೋಕಿಗೆ ಮಾಡುತ್ತ ಮಾರ್ಕೆಟಿಂಗ್ ಸರಕಾಗಲು ಹವಣಿಸುವವರನ್ನೂ ಅನಿವಾರ್ಯವಾಗಿ ಸೈರಿಸಿಕೊಂಡು ಮುಂದೆ ಸಾಗಬೇಕಿರುತ್ತದೆ.
‘ರಂಗ ವಠಾರ’ ಅಂಕಣದಲ್ಲಿ ಕೋವಿಡ್ ಸಮಯದಲ್ಲಿ ರಂಗ…
ರಾಜರಥದಲ್ಲಿ ವಿರಾಜಮಾನರಾದ ಭುವನಮ್ಮನ ಕತೆ
‘ನಮ್ಮನೆಯವನಿಗೆ ಊಟಾನು ನಾನೇ ತಿನಿಸಬೇಕು. ತಿಂಡಿನೂ ನಾನೆ ತಿನಿಸಬೇಕು. ಅವ್ನ ಪ್ರತಿ ಕೆಲ್ಸನೂ ನಾನೇ ಮಾಡಿಕೊಡಬೇಕು. ಸದಾ ನನ್ ಹಿಂದೇನೆ ಸುತ್ತುತ್ತಾ ಇರುತ್ತೆ ಅಸಾಮಿ. ಪ್ರೀತಿ ವಿಷಯಕ್ಕೆ ಬಂದಾಗ ಒಂದು ಎಳ್ಳಷ್ಟೂ ಕೂಡ ಕಡಿಮೆ ಮಾಡಿಲ್ಲ. ನನ್ನನ್ನು ಜೀವಕ್ಕೆ ಜೀವಕ್ಕಿಂತ ಪ್ರೀತಿಸ್ತಾರೆ. ಆ ವಿಷ್ಯದಲ್ಲಿ ನಾನು ತುಂಬಾ ತುಂಬಾ ಪುಣ್ಯವಂತೆ.’ಎಂದು ಮಿಂಚುಗಣ್ಣಾಗಿ ಆಕೆ ಹೇಳಿದ್ದು ಇಂದಿಗೂ ನೆನಪಿದೆ. ‘ಆದ್ರೆ ದುಡ್ಡಿನ ಜವಾಬ್ದಾರಿ ಅಂದ್ರೆ ಉಹೂ ಎಂದುಬಿಡುತ್ತಾರೆ’ ಎಂದು ಆಕೆ ಸೇರಿಸಿದರು.
ದಾದಾಪೀರ್ ಜೈಮನ್ ಬರೆಯುವ ‘ಜಂಕ್ಷನ್ ಪಾಯಿಂಟ್’ ಅಂಕಣ ಬರಹ
ಮತ್ತೊಂದು ಜನಪದವನ್ನು ಗೌರವಿಸುವ ವಿನಯಶೀಲತೆಗೆ ಕಾಯುತ್ತಾ..
ಒಂದು ಕರಕುಶಲ ಮಳಿಗೆಯಲ್ಲಿ ಇರಿಸಿದ್ದ ಗಣೇಶನ ವಿಗ್ರಹಕ್ಕೆ ‘ಬುದ್ಧ’ ಎಂದು ಲೇಬಲ್ ಇತ್ತು. ನಾನು ಮಾಲೀಕಳ ಬಳಿ ಹೋಗಿ ‘ನೋಡಿ, ಅದು ಗಣೇಶನ ಪ್ರತಿಮೆ, ದಯವಿಟ್ಟು ಆ ‘ಬುದ್ಧ’ ಲೇಬಲ್ ತೆಗೆದುಹಾಕಿ’ ಎಂದರೆ ಆಕೆ ಉಡಾಫೆಯಿಂದ ‘ನನ್ನ ಸ್ಟಾಫ್ ಒಬ್ಬಳು ಆ ಲೇಬಲ್ ಹಚ್ಚಿದ್ದು. ನಾಳೆ ಬಂದಾಗ ಅವಳಿಗೆ ಹೇಳುತ್ತೀನಿ’ ಎನ್ನುವುದೇ! ಅಂದರೆ ಬೇರೆ ಸಂಸ್ಕೃತಿ, ಧರ್ಮ, ನಂಬಿಕೆಗಳಿಗೆ ಅಲ್ಲಿ ಕಿಂಚಿತ್ತೂ ಬೆಲೆಯಿರಲಿಲ್ಲ. ಹತ್ತು ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಧಾರಾಳವಾಗಿ ಕಾಣಿಸುತ್ತಿದ್ದ ಅಬೊರಿಜಿನಲ್ ಜನ ಈಗ ಯಾಕಿಲ್ಲ ಎನ್ನುವ ನನ್ನ ಪ್ರಶ್ನೆಗೆ ಸ್ವಲ್ಪಮಟ್ಟಿಗೆ ಉತ್ತರ ದೊರಕಿತ್ತು.
ಡಾ. ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಅಂಕಣ
ಓದುವ ಸುಖ: ಗಿರಿಧರ್ ಗುಂಜಗೋಡ್ ಹೊಸ ಅಂಕಣ ಆರಂಭ
‘ದೇಶ ಸುತ್ತು ಕೋಶ ಓದು’ ಎಂಬುದು ಹಿರಿಯರ ನಾಣ್ಣುಡಿ. ನಾಣ್ಣುಡಿ ಎಂದಮೇಲೆ ಅದೆಂದೂ ಸುಳ್ಳಾಗುವ ಮಾತಿಲ್ಲವಲ್ಲ. ಓದಿನ ಬಲವು ಸುತ್ತಾಟವನ್ನು ಇನ್ನಷ್ಟು ಆಪ್ತವಾಗಿಸುತ್ತದೆ. ಸುತ್ತಾಟದ ಅನುಭವವು ಓದಿಗೆ ಮತ್ತಷ್ಟು ಪ್ರೇರಣೆ ನೀಡುತ್ತದೆ. ಹೀಗೆ ಪರಸ್ಪರ ಪೂರಕವಾಗಿರುವ ಇವು ಒಟ್ಟಾಗಿ ಮನುಷ್ಯನ ವ್ಯಕ್ತಿತ್ವವನ್ನು ವಿಕಾಸಗೊಳಿಸುತ್ತವೆ. ಓದು ಮತ್ತು ಪ್ರವಾಸವನ್ನು ಏಕಕಾಲಕ್ಕೇ ಇಷ್ಟಪಡುವ ಗಿರಿಧರ್ ಗುಂಜಗೋಡು, ತಮ್ಮ ಓದಿನ ಹಿನ್ನೆಲೆಯನ್ನಿಟ್ಟುಕೊಂಡು ಬರಹಗಳನ್ನು ಬರೆಯಲಿದ್ದಾರೆ. ಪುಸ್ತಕಗಳ ಓದಿನ ಹೂರಣಕ್ಕಷ್ಟೇ ಸೀಮಿತವಾಗದೇ ವಿಸ್ತಾರವಾದ ಹರವಿನೊಂದಿಗೆ ಅವರು ಬರೆಯುವ…
ಹೆಸರು ಧರಿಸಲೊಲ್ಲದ ಅನಾಮಧೇಯರು
ಈ ಮಿಡಲ್ ಸಿಸ್ಟರ್, ಹದಿನೆಂಟು ವರ್ಷದ ಯುವತಿ. ಅವಳಿಗೆ ಪಕ್ಕದೂರಿನಲ್ಲಿ ತನ್ನ ಮತಕ್ಕೆ ಸೇರದ ಒಬ್ಬ ‘ಮೇ ಬಿ’ ಬಾಯ್ಫ್ರೆಂಡ್ ಕೂಡ ಇದ್ದಾನೆ. “ನಾನು ಯಾವತ್ತೂ ಹತ್ತೊಂಬತ್ತನೆಯ ಶತಮಾನದ ಕಾದಂಬರಿಗಳನ್ನೇ ಓದುತ್ತೇನೆ, ಇಪ್ಪತ್ತನೆಯ ಶತಮಾನದ ರಾಜಕೀಯದಿಂದ ತಪ್ಪಿಸಿಕೊಳ್ಳಲು ನಾನೇ ಕಂಡುಕೊಂಡ ಶಾಂತಿಮಾರ್ಗವಿದು” ಎನ್ನುವ ಮಿಡಲ್ ಸಿಸ್ಟರ್ ಮನೆಯಿಂದ ಕೆಲಸಕ್ಕೆ, ಕೆಲಸದಿಂದ ಮನೆಗೆ ಸಾಗುವ ರಸ್ತೆಯಲ್ಲಿ ಪುಸ್ತಕ ಓದುತ್ತ ನಡೆಯುತ್ತಾಳೆ. ಓದುವ ಸಂಸ್ಕೃತಿ ಇರದ, ಅಷ್ಟೇನೂ ವಿದ್ಯಾವಂತರಿಲ್ಲದ ಈ ಪ್ರಾಂತ್ಯದಲ್ಲಿ ಅವಳ ಈ ವಿಚಿತ್ರ ಹವ್ಯಾಸಕ್ಕೆ ಮೂಗು ಮುರಿಯುವವರೇ ಎಲ್ಲ.
ಕಾವ್ಯಾ ಓದಿದ ಹೊತ್ತಿಗೆ ಅಂಕಣ.
ಆಲೋಚನೆಗಳನ್ನು ರೂಪಿಸಿದ ಪತ್ರಿಕೆಗಳೂ, ಕಾಡುವ ಸೋಂಕುಗಳ ವಿಚಾರವೂ..
‘ತರಂಗ’ವಾಗಲಿ, ‘ಸುಧಾ’ ಆಗಲಿ ಮನೆಗೆ ಬರುವುದು ಒಂದು ದಿನ ತಡವಾದರೂ ಚಡಪಡಿಕೆಯಾಗುತ್ತಿತ್ತು. ಪತ್ರಿಕೆ ಹಾಕುವ ಹುಡುಗ ಬರುವ ವೇಳೆಗೆ ಹದ್ದಿನಂತೆ ಕಾಯುತ್ತ ಕೂತಿರುತ್ತಿದ್ದೆವು. ಪತ್ರಿಕೆಯ ಹುಡುಗ ‘ಸುಧಾ’ ಅಥವಾ ‘ತರಂಗ’ವನ್ನು ಬಾಗಿಲಿನಿಂದ ಎಸೆಯುತ್ತಿದ್ದಂತೆ ಆ ಪತ್ರಿಕೆಯ ಮೇಲೆ ಮುಗಿಬೀಳುತ್ತಿದ್ದೆವು. ಎಷ್ಟೊಂದು ಸಲ ನಮ್ಮ (ನನ್ನ ಸಹೋದರರು) ನಡುವೆ ಮಿನಿಯುದ್ಧಗಳು ಮಹಾಯುದ್ಧಗಳು ಜರುಗಿವೆ. ಒಮ್ಮೆಯಂತೂ ಅದೇ ತಾನೆ ಮನೆಯ ಹೊಸ್ತಿಲ ಒಳಗೆ ಬಂದ ‘ತರಂಗ’ ಇಂಥದ್ದೇ ಯುದ್ಧದಲ್ಲಿ ಹರಿದು ಹೋದದ್ದಿದೆ!
ಕೇಶವ ಕುಲಕರ್ಣಿ ಬರೆಯುವ ‘ಇಂಗ್ಲೆಂಡ್ ಪತ್ರ’
ವಸ್ತುನಿಷ್ಠ ವಿಮರ್ಶೆ-ಟೀಕೆಗಳಿಗೆ ಜಾಗವಿಲ್ಲದ ಕಾಲ
ಸರಿಸುಮಾರು ಇಪ್ಪತ್ತು ದಿನಗಳಿಂದ ಈ ಕಥೆಯನ್ನು ರೂಪಕವಾಗಿಸಿಕೊಂಡು ಯೋಚಿಸುತ್ತಿದ್ದೇನೆ. ವಿಭೂತಿಪುರುಷರ ಉತ್ತುಂಗ ಸ್ಥಿತಿಯ ಬಗ್ಗೆ ನನಗೆ ಇಂದಿಗೂ ತಿಳಿದಿಲ್ಲ. ಅವರು ಎಲ್ಲದರಲ್ಲೂ ಸುಂದರತೆ ಕಾಣಲು ಬಯಸುವವರು. ಆದರೆ ನಾನು ಆ ಸುಂದರತೆಯ ಬಗೆಗೆ ನಿತ್ಯ ಅನುಮಾನಗಳನ್ನ ಇಟ್ಟುಕೊಂಡಿರುವವನು. ತಮಾಷೆ ಮಾಡುತ್ತ ಎಲ್ಲವನ್ನೂ ತೇಲಿಸುತ್ತ ಜಗತ್ತನ್ನು ಸುಂದರ ಗೋಳವನ್ನಾಗಿ ಪರಿವರ್ತಿಸಿಕೊಳ್ಳುವವರ ಬಗೆಗೆ ನನ್ನಲ್ಲಿ ಗೌರವವೇನೊ ಇದೆ. ಹಾಗೆಯೇ ದಾರಿಹೋಕನಿಗೆ ಜ್ಞಾನೋದಯದ ಬಗೆಗೂ ಚಕಾರಗಳಿವೆ.
ಎನ್.ಸಿ. ಮಹೇಶ್ ಬರೆಯುವ ‘ರಂಗ ವಠಾರ’ ಅಂಕಣ
ಕಡೆಪಾನ್ ಬಸ್ಯಾನ ಲೀಲಾವಳಿ
ಅವನು ಹೇಳುತ್ತಿರುವುದು ಬರಿ ಕಥೆಯೇ. ಸುಳ್ಳು ಕಥೆ. ಅವನ ಕಲ್ಪನೆಯಲ್ಲಿ ಅರಳುವ ಕಥೆ ಎನ್ನುವುದಕ್ಕೆ ಪುರಾವೆ ಎಂಬಂತೆ ನನ್ನ ಬಳಿ ಹಲವಾರು ನಿದರ್ಶನಗಳಿವೆ. ಅವನು ತನ್ನೆಲ್ಲಾ ದಿನಚರಿಯಲ್ಲಿ ನಟ ಯಶ್ ಅನ್ನು ಅನುಕರಿಸುತ್ತಿದ್ದ. ಕೆ. ಜಿ. ಎಫ್. ಸಿನಿಮಾದ ಅವನ ಗೆಟಪನ್ನು ಅನುಕರಿಸುವುದು. ಪುರುಷ ಪ್ರಾಧಾನ್ಯದ ಮುಖ್ಯವಾಹಿನಿಯ ಮಾಸ್ ಸಿನಿಮಾಗಳಲ್ಲಿ ಹೀರೋಗಳು ಹೊಡೆಯುವ ಅಸೂಕ್ಷ್ಮ ಡೈಲಾಗುಗಳನ್ನು ಅವನು ವಾಟ್ಸಪ್ಪ್ ರೀಲಾಗಿ ಇಡುತ್ತಿದ್ದ. ಅವನು ಕನಸುತ್ತಿದ್ದ ಭವಿಷ್ಯದ ಬಸವರಾಜನ ಪೂರ್ವ ಬಿಂಬದ ಪರಿಕರಗಳನ್ನು ಪುಷ್ಟೀಕರಿಸುವಂತೆ ಅವು ಇರುತ್ತಿದ್ದವು.
ದಾದಾಪೀರ್ ಜೈಮನ್ ಬರೆಯುವ ‘ಜಂಕ್ಷನ್ ಪಾಯಿಂಟ್’ ಅಂಕಣ
ಓಮಿಕ್ರೋನ್ ಜೊತೆ ಹೊಸವರ್ಷ ಆರಂಭದ ಪಲುಕು
ವಿಷಯದಲ್ಲೀಗ ಬಗೆಬಗೆಯ ವಾಗ್ವಾದಗಳು. ಲಸಿಕೆ-ಪರ ಮತ್ತು ವಿರೋಧಗಳ ಜನರು ನೇರಾನೇರ ಎರಡು ಗುಂಪುಗಳಲ್ಲಿದ್ದಾರೆ. ಅವರನ್ನು ಬಿಟ್ಟು ರಾಜಕೀಯದಲ್ಲಿ, ವ್ಯಾಪಾರಸ್ಥರಲ್ಲಿ, ಪರಿಸರ ಸಂರಕ್ಷಣೆ ಹಿತಾಸಕ್ತಿ ಗುಂಪು, ಮಾನವ ಹಕ್ಕುಗಳ ಪ್ರತಿಪಾದಕರು, ಶಾಲಾಶಿಕ್ಷಕರು ಮತ್ತು ಅವರ ಯೂನಿಯನ್, ಆರೋಗ್ಯಸೇವಾ ಸಿಬ್ಬಂದಿ ವರ್ಗ, ತಂದೆತಾಯಂದಿರು, ಶಾಲಾ ಮಕ್ಕಳು, ಎಲ್ಲರೂ ಈ ವಾದ-ಪ್ರತಿವಾದಗಳಲ್ಲಿ ಸೇರಿಕೊಂಡುಬಿಟ್ಟಿದ್ದಾರೆ. ವರದಿಗಾರರು, ಸುದ್ದಿವಾಹಿನಿಗಳಿಗಂತೂ ಪರಮ ಸಂತೋಷ. ಯಾಕೆಂದರೆ ನಾಡಿನಲ್ಲಿ…










