Advertisement

ಅಂಕಣ

ಕನಸಿಗಿದೆ ಘನತೆ ಎನ್ನುತ ಕಾಡುವ ವಸಂತ

ಕನಸಿಗಿದೆ ಘನತೆ ಎನ್ನುತ ಕಾಡುವ ವಸಂತ

ಬೇರೆಬೇರೆ ದೇಶಗಳಿಂದ ತಂದಿಟ್ಟು ಬೆಳೆದ ಸಸ್ಯಸಂಪತ್ತಿಗೆ ಹೋಲಿಸಿದರೆ ಆಸ್ಟ್ರೇಲಿಯಾದ ಸ್ವಾಭಾವಿಕ, ದೇಶೀಯ ಹೂಗಳು ಇಲ್ಲಿ ಹೆಚ್ಚಾಗಿ ಜನಜನಿತವಾಗಿಲ್ಲ. ಕಾರಣ ನಿಮಗೆ ಹೊಳೆದಿರಬಹುದು. ಸಮಾಜವು ವಸಾಹತುಶಾಹಿ ಆಡಳಿತದಲ್ಲಿ ಇಲ್ಲಿನ ಎಲ್ಲವನ್ನೂ ಇಲ್ಲವಾಗಿಸುವ ಮನೋಭಾವವನ್ನಿಟ್ಟುಕೊಂಡು ದೇಶೀಯ ಹೂಹಣ್ಣುಗಳನ್ನು ಮೂಲೆಗೊತ್ತಿತ್ತು. ಕಳೆದೆರಡು ದಶಕಗಳಲ್ಲಿ ಬದಲಾವಣೆ ಗಾಳಿಗೆ ಶಕ್ತಿಬಂದಿದೆ. ಈಗ ಸರಕಾರಗಳು ಮತ್ತು ತೋಟಗಾರಿಕೆ ಸಮುದಾಯಗಳು ದೇಶೀಯ…”

read more
ಸರಿ ತಪ್ಪುಗಳ ನಡುವೆ ರೇಖೆ ಎಳೆಯುವ ಮೊದಲು

ಸರಿ ತಪ್ಪುಗಳ ನಡುವೆ ರೇಖೆ ಎಳೆಯುವ ಮೊದಲು

ಒಬ್ಬರಿಗೆ ಸರಿ ಎನ್ನಿಸಿದ್ದು ಇನ್ನೊಬ್ಬರಿಗೆ ತಪ್ಪಾಗುವ ಈ ಚಮತ್ಕಾರವನ್ನು ಲೇಖಕರು ಆನೆ ಮತ್ತು ಮಾವುತನ ಉಪಮೆ ಬಳಸಿ ವಿಶ್ಲೇಷಿಸುತ್ತಾರೆ. ಅಷ್ಟು ದೊಡ್ಡ ಆನೆಯ ಮುಂದೆ ಮಾವುತ ಕಾಣುವುದೇ ಇಲ್ಲ. ಆದರೆ ಕೈಯಲ್ಲಿರುವ ಪುಟ್ಟದಾದ ಅಂಕುಶವನ್ನು ಉಪಯೋಗಿಸಿಕೊಂಡು ಅಂಥ ಬೃಹತ್ ಆಸೆಯನ್ನು ಅವನು ಪಳಗಿಸಬಲ್ಲ. ಹಾಗೆಯೇ ನಮ್ಮ ಯೋಚನೆಗಳನ್ನು ಕೂಡ ನಮ್ಮ ಅಂತರ್ದೃಷ್ಟಿಯೇ ಪಳಗಿಸುತ್ತದೆ, ಅದು ಕಣ್ಣಿಗೆ ಕಾಣಿಸದಿದ್ದರೂ ಬಹಳ ಪ್ರಭಾವಶಾಲಿಯಾದುದು ಎನ್ನುತ್ತಾರೆ.

read more
ಪಯಣಪ್ರಿಯರ ನಾಡಿನ ಕೆಲವು ಮಾತುಗಳು

ಪಯಣಪ್ರಿಯರ ನಾಡಿನ ಕೆಲವು ಮಾತುಗಳು

ನಾನು ಚಿಕ್ಕವನಿದ್ದಾಗ, ‘ಕುಟುಂಬ ಸಮೇತ ಹಾಲಿಡೆʼಗಳೇನಿದ್ದರೂ ತೀರ್ಥಯಾತ್ರೆಗಳೇ! ನಮ್ಮ ನಮ್ಮ ಮನೆಯ ದೇವರುಗಳ ಮತ್ತು ನಂಬಿಕೆಗಳ ಪ್ರಕಾರ ನಮ್ಮ ಹಾಲಿಡೆಯ ಗಮ್ಯಸ್ಥಾನಗಳು ನಿಗದಿಯಾಗಿರುತ್ತಿದ್ದವು. ತುಳಸಿಗೇರಿ, ಯಲಗೂರ, ಬಸವನ ಬಾಗೇವಾಡಿಗಳೇ ಕುಟುಂಬ ಸಮೇತ ಪ್ರಯಾಣದ ‘ಡೇಟ್ರಿಪ್ʼ ಜಾಗಗಳು. ಅವನ್ನು ಬಿಟ್ಟರೆ, ಮಂತ್ರಾಲಯ, ತಿರುಪತಿ, ಧರ್ಮಸ್ಥಳ ಅಥವಾ ಶೃಂಗೇರಿಗಳಿಗೆ ಬಸ್ಸಿನಲ್ಲಿ ಪಯಣಿಸಿ, ಅಲ್ಲಿಯ ಧರ್ಮಛತ್ರಗಳಲ್ಲೇ ತಂಗಿದ್ದು ದೇವರ ದರ್ಶನ ಮಾಡಿ…”

read more
ಬೀಳುವವರನ್ನು ಕೈಹಿಡಿಯಬೇಕಾದವರು ಯಾರು?

ಬೀಳುವವರನ್ನು ಕೈಹಿಡಿಯಬೇಕಾದವರು ಯಾರು?

ಅಸಹಾಯಕರು, ನಿರ್ಗತಿಕರು, ಬಡವರು ಹಾಗು ಅವಕಾಶ ವಂಚಿತರು ಪ್ರಪಂಚದ ಯಾವುದೇ ದೇಶದಲ್ಲಿದ್ದರೂ ಅವರು ಶಾಪಗ್ರಸ್ತರೆ. ಎಲ್ಲೋ ಕೆಲವರಿಗೆ ನೆರವು ಸಿಗುತ್ತದೆ, ಎಲ್ಲೋ ಕೆಲವು ನಿರ್ಗತಿಕರು ಸೆಟೆದು ನಿಲ್ಲುತ್ತಾರೆ, ಎಲ್ಲೋ ಕೆಲವು ಬಡವರು ತಿರುಗಿ ಬೀಳುತ್ತಾರೆ, ಕೆಲವರಿಗಷ್ಟೇ ಅವಕಾಶ ಸಿಗುತ್ತದೆ, ಆದರೆ ಉಳಿದವರಿಗೆ ದಾರಿ ಎಲ್ಲಿ. ಹಣವಂತರ ಜಗತ್ತಿನಲ್ಲಿ, ಮೋಸಗಾರರ ವಂಚನೆಯಲ್ಲಿ ಮುಗ್ಧರಿಗೆ ಮತ್ತು ನ್ಯಾಯವಂತರಿಗೆ ಸೋಲು ಕಟ್ಟಿಟ್ಟ ಬುತ್ತಿ. ಸಣ್ಣ ಹೋರಾಟ ನಡೆದರೆ ಅವರನ್ನು ಮಟ್ಟ ಹಾಕಲು ತುದಿಗಾಲಲ್ಲಿ ನಿಂತಿರುತ್ತದೆ ಈ ಜಗತ್ತು. ಪ್ರಶಾಂತ್‌ ಬೀಚಿ ಅಂಕಣ

read more
ಅರ್ಥಲೋಕದ ಬೆರಗುಗಳ ಅನಾವರಣ

ಅರ್ಥಲೋಕದ ಬೆರಗುಗಳ ಅನಾವರಣ

ಈ ಕಾದಂಬರಿಯ ಕಥನ ಶೈಲಿ ಸರಳವಾಗಿಲ್ಲ; ಯಾಕೆಂದರೆ, ಇಕೋ ತಾನು ಪ್ರಸ್ತುತ ಪಡಿಸುತ್ತಿರುವುದು ಮಧ್ಯಯುಗೀಯ ಅಧಿಕೃತ ಹಸ್ತಪ್ರತಿಯೆಂಬ ಕಲ್ಪನೆ ಓದುಗರಲ್ಲಿ ಮೂಡಿಸಲಿಕ್ಕಾಗಿ ಪ್ರಯತ್ನಿಸಿದ್ದಾನೆ. ಮಧ್ಯಯುಗದ ಐತಿಹಾಸಿಕ ವಿವರಗಳು, ಅಂದಿನ ಸಮಕಾಲೀನ ಚರ್ಚೆಗಳು, ಆವಿಷ್ಕಾರಗಳು, ಚರ್ಚು ಮತ್ತದರ ಆಂತರಿಕ ವಿವಾದಗಳು, ಇತ್ಯಾದಿ ಅನೇಕ ವಿವರಗಳನ್ನು ಬಳಸಿಕೊಳ್ಳಲಾಗಿದೆ. ಹಾಗೆಯೇ ಅನೇಕ ಸಮಕಾಲೀನ ವಿದ್ವಾಂಸರು, ಅನೇಕ ಭಾಷೆಗಳಲ್ಲಿರುವ ಅವರ ಬರಹಗಳನ್ನು, ಅನೇಕ ಪುರಾತನ ಉದ್ಧರಣಗಳನ್ನು ಉಲ್ಲೇಖಿಸಲಾಗಿದೆ.
ಉಂಬರ್ಟೋ ಇಕೋ ಬರೆದ “ದ ನೇಮ್ ಆಫ್ ದ ರೋಸ್”ಕಾದಂಬರಿಯ ಕುರಿತು ಬರೆದಿದ್ದಾರೆ ಕಮಲಾಕರ ಕಡವೆ

read more
ತ್ರಿಮೂರ್ತಿಗಳನ್ನು ರಂಗದ ಬದುಕಿನ ಚಿತ್ರಗಳೊಂದಿಗೆ ಸಮೀಕರಿಸುತ್ತ…

ತ್ರಿಮೂರ್ತಿಗಳನ್ನು ರಂಗದ ಬದುಕಿನ ಚಿತ್ರಗಳೊಂದಿಗೆ ಸಮೀಕರಿಸುತ್ತ…

‘ಕಾಯೌ ಶ್ರೀಗೌರಿ..’ ಎಂಬ ನಾಡಗೀತೆಯನ್ನು ಅಂದು ಬರೆದಿದ್ದ ಬಸವಪ್ಪ ಶಾಸ್ತ್ರಿಗಳು ನೆನಪಾಗುತ್ತಾರೆ. ಮೈಸೂರನ್ನು ನಾವಿಂದು ಸಾಂಸ್ಕೃತಿಕ ನಗರಿ ಎಂದು ಕರೆದುಕೊಳ್ಳುತ್ತೇವೆ. ವಿದ್ವತ್ತಿಗೆ ಹೆಸರಾದದ್ದು ಎಂದು ತಿಳಿದೇ ಇದೆ. ಇಷ್ಟಿದ್ದೂ ಬಸವಪ್ಪ ಶಾಸ್ತ್ರಿಗಳ ಸ್ಮಾರಕದ ಕಡೆಗೆ ಅಸಡ್ಡೆ ಯಾಕೆ ಮತ್ತು ಹೇಗೆ ಬೆಳೆಯಿತೋ ಗೊತ್ತಿಲ್ಲ. ಮೈಸೂರಿನಲ್ಲಿರುವ ಎಲ್.ಐ.ಸಿ ಬಿಲ್ಡಿಂಗ್ ಬಳಿ ರಸ್ತೆ ಪಕ್ಕದಲ್ಲಿ ಬಸವಪ್ಪ ಶಾಸ್ತ್ರಿಗಳ ಸ್ಮಾರಕವಿದೆ. ಅದರ ಬಣ್ಣ ಮಾಸಿ, ಗೋಡೆಗಳ ಮೇಲೆಲ್ಲ ಬಳ್ಳಿ ಹಬ್ಬಿಕೊಳ್ಳುವಷ್ಟು ನಿರ್ಲಕ್ಷ್ಯವೇಕೆ..”

read more
ಲೇಡೀಸ್ ಹಾಸ್ಟೆಲ್ ದಯ್ಯ ಬಿಡಿಸಿದ ಭಟ್ಕಳದ ಬಾಲೆ

ಲೇಡೀಸ್ ಹಾಸ್ಟೆಲ್ ದಯ್ಯ ಬಿಡಿಸಿದ ಭಟ್ಕಳದ ಬಾಲೆ

ನನ್ನಲ್ಲಿ ಲೇಡೀಸ್ ಹಾಸ್ಟೆಲ್ ಬಗೆಗೊಂದು ಅಸೀಮ ಕುತೂಹಲ ಬೆಳೆದಿತ್ತು. ಹಾಸ್ಟೆಲ್ ನಲ್ಲಿ ಹುಡುಗಿಯರ ಸಾಮ್ರಾಜ್ಯ ಹೇಗಿದ್ದೀತು? ಹರಟೆಯ ಹೊತ್ತಲ್ಲಿ ಏನೆಲ್ಲ ವಾಗ್ವಾದ ನಡೀಬಹುದು? ಅಡುಗೆ ಸರೀಗಿಲ್ಲ ಅಂದ್ರೆ ಅಡುಗೆಯವ್ರಿಗೆ ಕ್ಲಾಸ್ ತಗೋತಾರಾ? ಪೊಲಿಟಿಕ್ಸ್ ಬಗ್ಗೆ ಮಾತಾಡ್ತಾರಾ? ಹೊಡೆದಾಟಗಳು ನಡೆದ್ರೆ ಹೇಗೆ ನಡೀತದೆ? ಸಂಚುಗಳು ಹೆಂಗೆ ಎಕ್ಸಿಕ್ಯೂಟ್ ಆಗ್ತವೆ? ರೂಮು ಗಲೀಜು ಇಟ್ಕೊಂಡಿರ್ತಾರಾ ಅಥವಾ ಸಿಕ್ಕಾಪಟ್ಟೆ ನೀಟಾಗಿರ್ತದಾ?… ಹೀಗೆ ತರಹೇವಾರಿ ತರ್ಕಗಳು -ಸಹ್ಯಾದ್ರಿ ನಾಗರಾಜ್ ಬರೆಯುವ ‘ಸೊಗದೆ’ ಅಂಕಣ ನಿಮ್ಮ ಓದಿಗೆ.

read more
ಸಮಬೆಸಗಳ ಸರಿಗಮ ತಪ್ಪಿದ್ದಲ್ಲ

ಸಮಬೆಸಗಳ ಸರಿಗಮ ತಪ್ಪಿದ್ದಲ್ಲ

ಈ ಬಾರಿ ಸಿಡ್ನಿ ಮಹಾನಗರ ವಲಯದಲ್ಲಿ ಜಾರಿಗೆ ಬಂದ ಲಾಕ್ ಡೌನ್ ಸ್ವಲ್ಪ ಗಲಾಟೆ ಎಬ್ಬಿಸಿದೆ. ನಗರದ ಪಶ್ಚಿಮ ಬಡಾವಣೆಗಳಲ್ಲಿ ಹೆಚ್ಚು ಡೆಲ್ಟಾ ವೈರಸ್ ಸೋಂಕು ಕಾಣಿಸಿದ್ದು ವರದಿಯಾಗಿತ್ತು. ಆ ಪ್ರದೇಶದಲ್ಲಿ ವಾಸಿಸುತ್ತಿರುವ, ಅನೇಕತೆಗಳಿರುವ- ಅಂದರೆ ಆಂಗ್ಲೋ-ಆಸ್ಟ್ರೇಲಿಯನ್ ಅಲ್ಲದ ಬೇರೆ ಸಂಸ್ಕೃತಿಗಳ ಜನರು ಲಾಕ್ ಡೌನ್ ನಿಯಮಗಳನ್ನು ಸರಿಯಾಗಿ ಪಾಲಿಸಲಿಲ್ಲವೆಂದು ಸುದ್ದಿಯಾಗಿತ್ತು. ರಾಜ್ಯಸರ್ಕಾರ ಆ ಬಡಾವಣೆಗಳಲ್ಲಿ ಬಂದೋಬಸ್ತು ಮಾಡಲು, ಪೊಲೀಸರನ್ನು ಕಳಿಸಿತು. ಇದು ಅಲ್ಲಿನ ವಿವಿಧ ಸಂಸ್ಕೃತಿಗಳ ಜನಸಮುದಾಯಗಳನ್ನು ಆತಂಕಕ್ಕೀಡು ಮಾಡಿದೆ ಎಂಬ ಸುದ್ದಿ ಚರ್ಚೆಗೆ ಬಂದಿದೆ. ಡಾ. ವಿನತೆ ಶರ್ಮ ಬರೆಯುವ ‘ಆಸ್ಟ್ರೇಲಿಯಾ ಪತ್ರ’

read more
ಒಬ್ಬರೊಳಗೊಬ್ಬರು ಮಾಯವಾಗುವ ಬಗೆ

ಒಬ್ಬರೊಳಗೊಬ್ಬರು ಮಾಯವಾಗುವ ಬಗೆ

‘ದಿ ವೈಟ್ ಕ್ಯಾಸಲ್’ ಕಾದಂಬರಿ ಟರ್ಕಿಯ ಆಟಮನ್ ಸಾಮ್ರಾಜ್ಯದಲ್ಲಿ ಗುಲಾಮನಾಗಿರುವ ಇಟಲಿ ದೇಶದ ವಿದ್ಯಾರ್ಥಿಯೊಬ್ಬನ ಪ್ರವರ. ಇದು ಹದಿನೇಳನೆಯ ಶತಮಾನದ ಕತೆ. ಇಟಲಿಯ ವೆನಿಸ್ ನಗರದಿಂದ ನೇಪಲ್ಸ್ ನಗರಕ್ಕೆ ಹಡಗಿನಲ್ಲಿ ಪ್ರಯಾಣಿಸುತ್ತಿದ್ದಾಗ ಈತ ಟರ್ಕರ ಸೈನ್ಯಕ್ಕೆ ಸೆರೆ ಸಿಕ್ಕವನು. ಜೀವ ಹೋದರೂ ತಾನು ಹುಟ್ಟಿದ ಕ್ರಿಶ್ಚಿಯನ್ ಧರ್ಮವನ್ನು ಬಿಡಲಾರೆ ಎಂಬ ಪಣ ತೊಟ್ಟವನು. ತೊಟ್ಟ ಪಣವನ್ನು ಕಾಯ್ದುಕೊಳ್ಳುವುದು ಸುಲಭವೇ ? ಧರ್ಮದ ಈ ನಂಟು ಅವನನ್ನು ಎತ್ತ ಕೊಂಡೊಯ್ಯುವುದು?”

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ