ಆಧುನಿಕ ಜಗತ್ತಿನ ‘ಮಹಾತಿಪ್ಪೆ’ಯಲ್ಲಿ ಬಿದ್ದ ಮನುಷ್ಯ
“ಆಧುನಿಕ ಜೀವನಶೈಲಿ ಮನುಷ್ಯ ಅಸ್ತಿತ್ವವನ್ನು ಕುಬ್ಜಗೊಳಿಸುವುದರ ಜೊತೆಗೆ ಅವನ ತೀವ್ರ ಭಾವವಲಯಗಳನ್ನು, ಸೃಜನಶೀಲ ಆದರ್ಶಗಳ ಹಂಬಲಗಳನ್ನು ಗೇಲಿಮಾಡಿ ಅಪಹಾಸ್ಯಕ್ಕೀಡು ಮಾಡುವುದನ್ನು ಗುರುತಿಸಿರುವುದು ಸಂಕಲನದ ಹೆಚ್ಚುಗಾರಿಕೆಯಾಗಿದೆ. ಎಲ್ಲ ಕಡೆ ಮಾರುಕಟ್ಟೆಯ ಕಸ ತುಂಬಿರುವ, ವಸ್ತುಗುಡ್ಡಗಳು ಜನರನ್ನು ತಿಂದುತೇಗುವ, ಪ್ರತಿಬಿಂಬಗಳ ಮೆರವಣಿಗೆ ಸಾಗಿರುವ ದಟ್ಟವಾಸನೆಗಳ ನಗರದಲ್ಲಿ ಇದೇ ನಿರೂಪಕನ ಒಣನಾಲಿಗೆ ಜಡತ್ವ ಮೀರಿ…”
ಕಳೆಯುತ್ತಿರಲು ಇಲ್ಲಿ ಬೆಳೆಯುತ್ತಲಿದೆ ಅಲ್ಲಿ….!
“ಇಲ್ಲಿ ಬ್ರಿಟನ್ನಿನಲ್ಲಿ ಪರಿಸ್ಥಿತಿ ಈ ಥರ ಸುಧಾರಿಸುತ್ತಿರಬೇಕಾದರೆ ಅಲ್ಲಿ ತವರೂರು ಭಾರತದಲ್ಲಿ ಎರಡನೇ ಅಲೆ ಇನ್ನೂ ವ್ಯಾಪಿಸುತ್ತಲೇ ಇದೆ. ಅದಕ್ಕೆ ಸ್ಪಂದಿಸಿ ಇಲ್ಲಿ ಬ್ರಿಟನ್ನಿನಲ್ಲಿರುವ ಕನ್ನಡಿಗರು ವಿವಿಧ ಸಂಘಗಳಿಂದ ಧನ ಸಂಗ್ರಹಿಸಿ ಕೊಟ್ಟ ವಿಷಯವನ್ನು ಕಳೆದ ಸಲ ಬರೆದಿದ್ದೆ. ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಬ್ರಿಟನ್ನಿನಲ್ಲಿರುವ ಸುಮಾರು ನಲವತ್ತು ಕನ್ನಡದ ವೈದ್ಯರು ಮೈಸೂರಿನ ನಗರಪಾಲಿಕೆಯೊಂದಿಗೆ ಕೈಗೂಡಿಸಿದ್ದಾರೆ.”
ಪರಿಹಾರವೆಂಬ ‘ಗಾಡೊ’; ಪಿಜ್ಜಾ ಮತ್ತು ಬಂಗಾಲಿ ಸ್ವೀಟ್ಸ್
“ನ್ಯೂಯಾರ್ಕ್ ಡ್ರಾಮಾ ಕ್ರಿಟಿಕ್ಸ್ ಸರ್ಕಲ್ ನವರು ‘ಲಾಂಗ್ ಡೇಸ್ ಜರ್ನಿ ಇನ್ಟು ನೈಟ್..’ ನಾಟಕವನ್ನ ಬೆಸ್ಟ್ ಪ್ಲೇ ಅಂತ ತೀರ್ಪು ಕೊಟ್ಟರು. ಬೆಸ್ಟ್ ಫಾರಿನ್ ಪ್ಲೇ ಆಗಿ ‘ವಾಲ್ಟ್ಸ್ ಆಫ್ ದಿ ಟೊರಿಯಾಡೋರ್ಸ್’ ಆರಿಸಿದರು. ಮೂರು ಇತರ ಫಾರಿನ್ ನಾಟಕಗಳಿಗೆ ಅವರ ಓಟ್ ನಮೂದಿಸಿದ್ದರು. ಆದರೆ ‘ವೇಯ್ಟಿಂಗ್ ಫಾರ್ ದಿ ಗಾಡೋ’ ಗೆ ಒಂದೇ ಒಂದು ಓಟ್ ದಕ್ಕಿರಲಿಲ್ಲ. ಇದು ನಿಜವಾದ ಅಬ್ಸರ್ಡಿಟಿ. ಹಾಗೇ ಆಯಾ ಘಟ್ಟದಲ್ಲಿ ನಾಟಕಕ್ಕೆ…”
‘ನಿನಗೆ ಅರ್ಥವಾಗುವುದಿಲ್ಲ ಬಿಡು!’ ಅಂದರೇನು?
“ಅವರು ಮೊದಲ ಬಾರಿಗೆ ತಾಂಜಾನಿಯಾಕ್ಕೆ ಬಂದಿದ್ದರು, ಹೆಚ್ಚಿನ ಮಾಹಿತಿ ಇಲ್ಲದೆ ಕೈಲಿದ್ದ ಲ್ಯಾಪ್ ಟಾಪ್ ಬಹಳ ಸುಲಭವಾಗಿ ಹೆಗಲಿಗೆ ಹಾಕಿಕೊಂಡು ಸುತ್ತಾಡಿದ್ದಾರೆ. ಇವರಿಗೆ ಇಂಗ್ಲೀಷ್ ಸರಿಯಾಗಿ ಬರುವುದಿಲ್ಲ ಮತ್ತು ಹೊಸಬರು ಎನ್ನುವುದು ಕೆಲವರಿಗೆ ಗೊತ್ತಾಗಿ ಸಣ್ಣ ಕಳ್ಳರು ಇವರನ್ನು ಹಿಂಬಾಲಿಸಿದ್ದಾರೆ. ಕಡಿಮೆ ಜನರು ಓಡಾಡುವ ಸ್ಥಳ ಬಂದಾಗ ಇವರ ಕೈಲಿದ್ದ ಕ್ಯಾಮೆರಾ, ಲ್ಯಾಪ್ ಟಾಪ್ ಮತ್ತು ಒಬ್ಬರ ಪೋನ್ ಕಿತ್ತುಕೊಂಡು ಓಡಿದ್ದಾರೆ…”
‘ಬಿರಿಯಾನಿ’ ನಾಡಲ್ಲಿ ಇಡ್ಲಿ ಸಾಂಬಾರಿನ ಹುಡುಕಾಟ
‘ಬಾಲ್ಯ ಯೌವ್ವನದ ದಿನಗಳಲ್ಲಿ ರೂಪುಗೊಳ್ಳುವ ವ್ಯಕ್ತಿತ್ವದಲ್ಲಿ ಭಾಷೆ, ಭವನ, ಭೋಜನ, ಆಚಾರ ವಿಚಾರಗಳ ಒಂದು ಚೌಕಟ್ಟು ರೂಢಿಯಾಗಿರುತ್ತದೆ. ನಂತರದ ದಿನಗಳಲ್ಲಿ ಆ ಚೌಕಟ್ಟಿಗೆ ಹೊಂದುವ ಭಾಷೆ, ಭೋಜನ, ವಾಡಿಕೆಗಳು ಕಂಡಾಗ ಎಷ್ಟೊಂದು ಸಂತೋಷ ಉಕ್ಕುತ್ತದೆ. ಅದರಲ್ಲಿಯೂ ಆಹಾರ ಎನ್ನುವುದು ಬದುಕಿನ ಮೂಲಭೂತ ಅಗತ್ಯಗಳಲ್ಲಿ ಒಂದು’. ಕರ್ನಾಟಕ ಬಿಟ್ಟು ಕಾರ್ಯ ನಿಮಿತ್ತ ಇನ್ನೊಂದು ಊರಿಗೆ ಹೋದಾಗ ಪ್ರೀತಿಯ ತಿನಿಸಿಗಾಗಿ ನಡೆಸಿದ ಹುಡುಕಾಟವನ್ನು…”
ಕೇಶವ ಕುಲಕರ್ಣಿ ಬರೆಯುವ ‘ಇಂಗ್ಲೆಂಡ್ ಪತ್ರ’ ಇಂದಿನಿಂದ…
“ಬ್ರಿಟನ್ನಿನ ಜನಕ್ಕೆ ಆರೋಗ್ಯವಿಮೆ ಇಲ್ಲ. ಕೆಮ್ಮು, ನೆಗಡಿ, ರಸ್ತೆ ಅಪಘಾತದಿಂದ ಹಿಡಿದು ಕ್ಯಾನ್ಸರ್ ಚಿಕಿತ್ಸೆ, ಕಿಡ್ನಿ ಟ್ರಾನ್ಸ್ ಪ್ಲಾಂಟ್ ಗೆ ಪ್ರತಿಯೊಂದು ರೋಗ ಮತ್ತು ಶಸ್ತ್ರಚಿಕಿತ್ಸೆ ಸಂಪೂರ್ಣ ಫ್ರೀ. ಆದ್ದರಿಂದ ಕೊರೊನಾದ ಎರಡನೇ ಅಲೆ ಎದುರಿಸಲು ಎಲ್ಲ ವಿಭಾಗಗಳೂ ಸಜ್ಜಾಗಿದ್ದವು.”
ಬ್ರಿಟನ್ನಿನಲ್ಲಿ ವೈದ್ಯರಾಗಿರುವ ಕೇಶವ ಕುಲಕರ್ಣಿ ಇನ್ನುಮುಂದೆ ತಿಂಗಳಿಗೆರಡು ಇಂಗ್ಲೆಂಡ್ ಪತ್ರವನ್ನು ಕೆಂಡಸಂಪಿಗೆಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.
ನಿತ್ಯಸಂಸ್ಕೃತಿಯ ನಿಖರ ನಿರೂಪಣೆ
“ತಾನು ಜೋಗಪ್ಪನಾದ ಪರಿಸ್ಥಿತಿಯನ್ನು ನೆನಪಿಗೆ ತರುವಂತ ಬೇನೆಬಿದ್ದ ಬಾಲಕನನ್ನು ತಾಯಪ್ಪನ ಬಳಿ ತಂದಾಗ ವಾಡಿಕೆಯ ಪ್ರಕಾರ ಗುಡ್ಡದ ಎಲ್ಲವ್ವನಿಗೆ ಬಿಡಿರೆಂಬ ಸಲಹೆ ಕೊಡುವುದಿಲ್ಲ. ಒಳ್ಳೆಯ ವೈದ್ಯರ ಬಳಿ ತೋರಿಸಿ ಎನ್ನುವ ಅವನ ಸಲಹೆಯಲ್ಲಿ ಈ ಕಾದಂಬರಿ ದೇವದಾಸಿ ಪದ್ಧತಿಯ ಅಂತ್ಯಕ್ಕೆ ಈ ಪದ್ಧತಿಯ ಮೂಲಸೆಲೆಗಳನ್ನು ಹೇಗೆ ಒಳಗಿನಿಂದಲೇ ಕೊನೆಗಾಣಿಸಲು ಸಾಧ್ಯವೆನ್ನುವುದನ್ನು ಗ್ರಹಿಸುತ್ತದೆ.”
ಭಾರತದಲ್ಲಿ ‘ಪ್ರಚಂಡ ರಾವಣ’, ಡಬ್ಲಿನ್ನಲ್ಲಿ ಕಿಂಗ್ ಲಿಯರ್…
“ಇದನ್ನು ಪುರಾಣದ ಕಾಂಟೆಕ್ಸ್ಟ್ ನಲ್ಲಿ ಓದಿದರೆ ಪುರಾಣವೇ. ಇಂದಿನ ಕಾಲಗತಿಗೆ ಅನ್ವಯಿಸಿಕೊಂಡರೆ ಅನ್ವಯವಾಗುತ್ತದೆ. ನನ್ನ ಈ ಅನ್ವಯ ಕಂಡು ಗೆಳೆಯ ಕೊಂಚ ಮಂಕಾದ. ಕೇವಲ ಕೊರೋನ ಎಂದು ತಿಳಿದಿದ್ದ ಅವನ ಕಣ್ಣುಗಳಲ್ಲಿ ಈಗ ಅದು ಪ್ರಚಂಡ ರಾವಣನಾಗಿ ಕಾಣಿಸಿಕೊಳ್ಳುತ್ತಿರುವ ಬಗೆ ಗುರುತಿಸಿದೆ. ರಂಗ, ನಟನೆ, ಆಗಾಗ ಬ್ಯಾಕ್ ಸ್ಟೇಜ್ ಎಂದು ಓಡಾಡಿಕೊಂಡು ತುಂಬ ಚಟುವಟಿಕೆಯಿಂದಿದ್ದ..”
ಮಾನವೀಯತೆಯ ಧರ್ಮವೊಂದು ಈ ಬದುಕಿಗೆ ಸಾಕಲ್ಲವೇ!
“ಇದನ್ನೆಲ್ಲ ನೋಡಿ ಇನ್ನೊಂದು ಧರ್ಮದ ಜನ ಅಲ್ಲಿಗೆ ಧಾವಿಸಿದರು. ಅವರೂ ಕೂಡ ಹಳ್ಳಿಯ ಜನರಿಗೆ ಕೆಲವು ಅಮಿಷವನ್ನು ನೀಡಲು ಶುರುಮಾಡಿದರು. ಮಳೆ ಬರುವಾಗ ವ್ಯವಸಾಯ ಮಾಡಿ ತಿನ್ನುತ್ತಿದ್ದ ಜನರಿಗೆ, ಉಚಿತವಾಗಿ ಮಾಂಸವನ್ನು ನೀಡಿದರು. ಸಿಹಿ ಇಷ್ಟಪಡುತ್ತಿದ್ದ ಕಾಡುಜನಾಂಗದವರಿಗೆ ಪಾಯಸ ನೀಡಿ ಒಲಿಸಿಕೊಂಡರು. ಖಾಯಿಲೆ ಬಂದವರಿಗೆ ಕೆಲವು ಔಷಧಿಗಳನ್ನು..”









