“ಇನ್ ಆನ್ ಆಂಟೀಕ್ ಲ್ಯಾಂಡ್”: ಪುರಾತನ ಪ್ರಯಾಣಗಳ ಅನನ್ಯ ಅನ್ವೇಷಣೆ
“ಈ ಕೃತಿಯ ಇತಿಹಾಸಕ್ಕೆ ಸಂಬಂಧಿಸಿದ ವಸ್ತುವಾದರೆ, ಘೋಷ್ ಕ್ಷೇತ್ರಕಾರ್ಯಕ್ಕಾಗಿ ಇಜಿಪ್ಟಿನಲ್ಲಿ ಬಾಳ್ವೆ ನಡೆಸಿದ ದಿನಗಳ ಅನುಭವಗಳ ಕತೆ ಪ್ರವಾಸಕಥನಕ್ಕೆ ಸಂಬಂಧಿಸಿದ ವಸ್ತು. ಯಹೂದಿ-ಅರೇಬಿಕ್ ಭಾಷೆ ಕಲಿಯುವ ಸಲುವಾಗಿ ಘೋಷ್ ಲತಾಯಿಫಾ ಮತ್ತು ನಶಾವೀ ಎಂಬ ಹಳ್ಳಿಗಳಲ್ಲಿ ವಾಸ ಮಾಡುತ್ತಾರೆ. ಅದು ಯಾಕೆ ಈ ಹಳ್ಳಿಗಳಲ್ಲಿ ವಾಸ ಮಾಡಬೇಕಾಗಿ ಬರುತ್ತದೆ ಎನ್ನುವುದೂ ಕೂಡ ಮುಖ್ಯವೇ. ಕೈರೋದ ಜೆನಿಜಾದಲ್ಲಿ ಸಂಶೋಧಕರಿಗೆ ಬೆನ್..”
ಎನ್.ಸಿ. ಮಹೇಶ್ ಬರೆಯುವ ʼರಂಗ ವಠಾರʼ ಇನ್ನು ಪ್ರತಿ ಗುರುವಾರ
“ಯಾವುದೇ ಒಂದು ಪ್ರಕಾರದ ಬಗ್ಗೆ ತಿಳಿಯಬೇಕಿದ್ದರೆ ಅದರ ಹಿನ್ನೆಲೆ ಕೊಂಚವಾದರೂ ಅರಿವಿರಬೇಕಲ್ಲ..? ಈ ರಂಗದ ಕಾನ್ಸೆಪ್ಟ್ ಹುಟ್ಟಿಕೊಂಡದ್ದು ಹೇಗೆ ಮತ್ತು ಎಲ್ಲಿಂದ? ಗ್ರೀಕ್ ಮತ್ತು ರೋಮನ್ ಪರಿಕಲ್ಪನೆಗಳ ಬಗ್ಗೆ ಅಕ್ಷರ ಸರ್ ಅಧ್ಯಯನ ಮಾಡಿ ಬರೆದಿದ್ದದ್ದು ಗೊತ್ತಿತ್ತು. ಅಷ್ಟು ಡೀಟೆಲ್ಸ್ ಹೇಳಿದರೆ ಸ್ಟೂಡೆಂಟ್ಸ್ ಏನು ಮಾಡಬಹುದು ಎಂಬ ಅಂದಾಜು ನನ್ನಲ್ಲಿ ಇದ್ದಿತಾದ್ದರಿಂದ ನಾನು ನೇರವಾಗಿ ಭಾರತೀಯ ಸಂದರ್ಭಕ್ಕೆ ಶಿಪ್ಟ್ ಆಗಿ ನಾಟ್ಯಶಾಸ್ತ್ರದಲ್ಲಿ ಉಲ್ಲೇಖವಾಗಿರುವ ಕಥೆಯಿಂದ..”
ನ್ಯೂಟನ್ ನ ಬದುಕು ಮತ್ತು ಪ್ರಯೋಗಗಳು: ಶೇಷಾದ್ರಿ ಗಂಜೂರು ಅಂಕಣ
“ನ್ಯೂಟನ್, ಪಾರ್ಲಿಮೆಂಟಿನಿಂದ ಹೊರಬಿದ್ದ ನಂತರ, ಬ್ರಿಟನ್ನಿನ ರಾಣಿ ಅವನನ್ನು ರಾಯಲ್ ಮಿಂಟ್ ನ ಮುಖ್ಯಸ್ಥನನ್ನಾಗಿ ನೇಮಿಸಿದಳು. ತನ್ನ ಸ್ಥಾನವನ್ನು ಗಂಭೀರವಾಗಿ ಪರಿಗಣಿಸಿದ ನ್ಯೂಟನ್, ಫೇಕ್ ಕರೆನ್ಸಿಯನ್ನು ತಡೆಗಟ್ಟಲು ಹಲವಾರು ವಿಧಾನಗಳನ್ನು ರೂಪಿಸಿದ. ಅಷ್ಟೇ ಅಲ್ಲ, ಫೇಕ್ ಕರೆನ್ಸಿಯನ್ನು ನಿರ್ಮಿಸಿ ಹಂಚುವವರನ್ನು ಹಿಡಿಯಲೆಂದು ವೇಷ ಮರೆಸಿಕೊಂಡು ಬಾರ್-ಪಬ್ ಗಳಿಗೆ ಹೋಗುತ್ತಿದ್ದ. ನ್ಯೂಟನ್ ನ ಕ್ರಮಗಳಿಂದ…”
ಖಾಲಿ ಕುರ್ಚಿಗಳ ಕ್ರಿಸ್ಮಸ್!: ಯೋಗೀಂದ್ರ ಮರವಂತೆ ಅಂಕಣ
“ಹಿಂದಿನ ಕ್ರಿಸ್ಮಸ್ ನಲ್ಲಿ ಭಾಗವಹಿಸಿದ್ದ ಅರವತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಈ ಸಲ ಪಾಲ್ಗೊಳ್ಳುತ್ತಿಲ್ಲ ಎನ್ನುವುದು ಯು.ಕೆ. ಕೋವಿಡ್ ಡೈರಿಯೊಳಗಿನ ಸರ್ವವಿಧಿತ ಕಠೋರ ಲೋಕಸತ್ಯ. ಈ ಇವರೆಲ್ಲರೂ ಕೊರೊನ ಕಾರಣಕ್ಕೆ ಇಲ್ಲವಾದವರು, ಇನ್ನೂ ಇಲ್ಲೇ ವ್ಯಾಪಕವಾಗಿ ಹಾಯಾಗಿ ಹಬ್ಬಿ ಹರಿದಾಡಿ ಹಾರಾಡಿಕೊಂಡಿರುವ ಅಸಾಧಾರಣ ವಿನಾಶ ಶಕ್ತಿಯ ಕ್ರಿಮಿ ಜಂತುವಿನ ಹಾವಳಿಯೊಂದಿಲ್ಲದಿದ್ದಿದ್ದರೆ ಬಹುಷಃ ಇನ್ನೂ ಕೆಲವು ಹಲವು ಕ್ರಿಸ್ಮಸ್ ಗಳನ್ನು…”
“ಕಾಬೂಲಿವಾಲ” ಎಂಬ ಕಳೆದುಹೋದ ನಂದನದ ಕತೆ: ಎಸ್. ಸಿರಾಜ್ ಅಹಮದ್ ಅಂಕಣ
“ಕತೆಯ ಒಳವಿವರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಆರಂಭದಲ್ಲಿ ಅವನ ಆಕಾರ ಭಾಷೆ ವೇಷ ಭೂಷಣಗಳ ಕಾರಣದಿಂದ ಕೇವಲ ಕಾಬೂಲಿವಾಲನಾಗಿದ್ದ ವ್ಯಕ್ತಿ ನಿಧಾನವಾಗಿ ರಹಮತಖಾನನಾಗಿದ್ದಾನೆ. ಕಾಬೂಲಿವಾಲ ಹಾಗೂ ಮಿನಿಯ ನಡುವೆ ನಿಧಾನವಾಗಿ ಗಟ್ಟಿಗೊಳ್ಳುತ್ತಿರುವ ಸ್ನೇಹಕ್ಕೆ ಅವಳ ತಂದೆಯ ಸಮ್ಮತಿ ಇಲ್ಲದಿದ್ದರೂ ಮಿನಿಯ ತಾಯಿಯಂತೆ ಬಲವಾದ ವಿರೋಧವಿಲ್ಲ. ನಿತ್ಯವೂ ಕಾಬೂಲಿವಾಲ ಬಂದು ಮಿನಿಯ ಜೊತೆ ಆಟವಾಡುತ್ತ ಅವಳಿಗೆ..”
ಪ್ರಿಂಟಿಂಗ್ ಪ್ರೆಸ್ಸಿನಲ್ಲಿ ರೂಪುಗೊಂಡ ವಿಜ್ಞಾನಿ!: ಶೇಷಾದ್ರಿ ಗಂಜೂರು ಅಂಕಣ
“ಓದು ಬರಹ ಬಲ್ಲವನಾದರೂ ಕ್ರಮ ಶಿಕ್ಷಣ ಪಡೆಯದಿದ್ದ ಫ್ಯಾರಡೆಗೆ ಆ ಪುಸ್ತಕ ಒಂದು ವರದಾನವಾಯಿತು. ರಾಸಾಯನಿಕ ಶಾಸ್ತ್ರದ ಪ್ರಥಮ ಪಾಠಗಳನ್ನು ಅವನು ಕಲಿತದ್ದು ಆ ಪುಸ್ತಕದ ಮೂಲಕವೇ. ಆ ಪುಸ್ತಕವನ್ನು ಬರೆದವಳು ಜೇನ್ ಮಾರ್ಸೆಟ್ ಎಂಬ ಲೇಖಕಿ. ವೈಜ್ಞಾನಿಕ ರಂಗದಲ್ಲಿ ತನ್ನ ಬೆಳವಣಿಗೆಗೆ ಕಾರಣೀಭೂತವಾದ ಆ ಪುಸ್ತಕ ಮತ್ತು ಆ ಲೇಖಕಿಯನ್ನು ಫ್ಯಾರಡೆ ಮರೆಯಲ್ಲಿಲ್ಲ. ವಿಜ್ಞಾನಿಯಾಗಿ ಹೆಸರು ಮಾಡಿದ ನಂತರವೂ ತನ್ನೆಷ್ಟೋ ಲೇಖನ….”
ತಂತ್ರಜ್ಞಾನದ ವ್ಯಾಖ್ಯೆಗಳು: ಕಮಲಾಕರ ಕಡವೆ ಬರೆಯುವ ಬೆರಗು ಮತ್ತು ಭೀತಿ ಅಂಕಣ- 4:
“ನಮ್ಮಲ್ಲಿ ಸಾಮಾನ್ಯಜ್ಞಾನವಾಗಿಹೋಗಿರುವ ಒಂದು ಭಾವವೆಂದರೆ ತಂತ್ರಜ್ಞಾನವೆನ್ನುವುದು ಆಧುನಿಕ ಬೆಳವಣಿಗೆಯೆಂದು. ಆದರೆ, ಸ್ವಲ್ಪವೇ ಕೆದಕಹೋದವರೂ ಕೂಡ ಬಲುಬೇಗ ಈ ಸಾಮಾನ್ಯಜ್ಞಾನದ ನೇಪಥ್ಯ ತಲುಪಿದಂತೆ, ಭ್ರಮೆಯ ಪರದೆ ಸರಿದು, ತಂತ್ರಜ್ಞಾನದ ಪುರಾತತ್ವ ಗಮನಕ್ಕೆ ಬರುತ್ತದೆ. ಪಾಶ್ಚಿಮಾತ್ಯ ದೇಶಗಳಲ್ಲಿ ತಂತ್ರಜ್ಞಾನದ ಕುರಿತು ನಿರ್ದಿಷ್ಟವಾದ ತತ್ವಶಾಸ್ತ್ರೀಯ ಬರಹಗಳು ಬಂದದ್ದು ಹತ್ತೊಂಬತ್ತನೇ ಶತಮಾನದಲ್ಲಿ.”
ಕಾಲದಲ್ಲಿ ಲೀನವಾಗುವುದೆಂದರೆ….: ಶೇಷಾದ್ರಿ ಗಂಜೂರು ಅಂಕಣ
“ಮ್ಯಾಕ್ಸ್ವೆಲ್ ನ ಕಾಲಕ್ಕೆ ಸುಮಾರು ಎರಡು ಶತಮಾನದ ಮುನ್ನವೇ, ಐಸಾಕ್ ನ್ಯೂಟನ್ “ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು” ಎಂದು ತೋರಿಸಿಕೊಟ್ಟಿದ್ದ. ಅದರ ಕುರಿತು ಮತ್ತಷ್ಟು ಅಧ್ಯಯನ ನಡೆಸಿದ ಮ್ಯಾಕ್ಸ್ವೆಲ್, ಕೇವಲ ಕೆಂಪು, ಹಸಿರು ಮತ್ತು ನೀಲಿ ಬಣ್ಣಗಳಿಂದಲೇ ಯಾವುದೇ ಬಣ್ಣವನ್ನು ನಿರ್ಮಿಸಬಹುದೆಂದು ತೋರಿಸಿಕೊಟ್ಟ. ಅಷ್ಟೇ ಅಲ್ಲ, ೧೮೬೧ರಲ್ಲಿ, ಲಂಡನ್ನಿನ ರಾಯಲ್ ಸೊಸೈಟಿಯ ಪ್ರದರ್ಶನ ಒಂದರಲ್ಲಿ..”
ಮಹಾನತೆಯ ಅಹಂಕಾರದ ಹುಂಬತನ: ಶೇಷಾದ್ರಿ ಗಂಜೂರು ಅಂಕಣ
“ಅದು, ನಾವು ಸಾಮಾನ್ಯವಾಗಿ ಕಾಣುವ ಆರಡಿ-ಮೂರಡಿಯ ಗೋರಿಯಲ್ಲ; ಅದು ಹಲವಾರು ಕೋಣೆಗಳಿರುವ ಕಟ್ಟಡ. ಒಂದು ಕೋಣೆಯಲ್ಲಿ, ಶವಪೆಟ್ಟಿಗೆ ಇದೆ. ಆ ಶವಪೆಟ್ಟಿಗೆ ಮರದಿಂದ ಮಾಡಿದ್ದಾದರೂ, ಅದಕ್ಕೆ ಚಿನ್ನದ ಹಾಳೆಗಳನ್ನು ಲೇಪಿಸಲಾಗಿದೆ. ಆ ಶವಪೆಟ್ಟಿಗೆಯನ್ನು ತೆರೆದು ನೋಡಿದರೆ, ಅದರಲ್ಲಿ ಇನ್ನೊಂದು ಶವಪೆಟ್ಟಿಗೆ ಇದೆ. ಅದೂ ಸಹ, ಮೊದಲನೆಯ ಶವಪೆಟ್ಟಿಗೆಯಂತಹುದೇ. ಅದನ್ನೂ ತೆರೆದು ನೋಡಿದರೆ, ಅದರಲ್ಲಿ ಇನ್ನೊಂದು ಶವಪೆಟ್ಟಿಗೆ!”









