ಕಲಾಭಿರುಚಿಯ ಹಲವು ಮುಖಗಳು: ರೂಪಶ್ರೀ ಕಲ್ಲಿಗನೂರ್ ಅಂಕಣ
“ಹೆಚ್ಚಾಗಿ ಭಾರತೀಯ ಸಂಗೀತವನ್ನು ಕೇಳುವ ನನಗೆ ಪಾಪ್ ಮತ್ತು ರಾಕ್ ಸಂಗೀತ ಪ್ರಾಕಾರಗಳು ಅಷ್ಟು ರುಚಿಸಿರಲಿಲ್ಲ. ಆದರೆ ಇವೆರೆಡು ಹಾಡುಗಳು ಮನಸ್ಸಿಗೆ ಮುದ ನೀಡಿದ್ದವು ಅನ್ನೋದನ್ನು ತಳ್ಳಿಹಾಕಲಾರೆ. ಹಾಗಾಗಿ ಚಿತ್ರದ ಬಗ್ಗೆ ಕೊಂಚ ನಿರೀಕ್ಷೆ ಇಟ್ಟುಕೊಂಡೇ “ಬೊಹೇಮಿಯನ್ ರ್ಯಾಪ್ಸೊಡಿ”ಯನ್ನು ನೋಡಿದ್ದೆ. ಆ ಮೊದಲು ಫ್ರೆಡ್ಡಿಯ ಪೂರ್ವಾಪರವೇನೂ ನನಗೆ ಗೊತ್ತಿರಲಿಲ್ಲ.”
ಹತ್ತನೆಯ ರಸದ ಕುರಿತು (ಅನ್ನಮಾಚಾರ್ಯರ ಒಂದು ಕೀರ್ತನೆಯ ಸುತ್ತ): ದಿಲೀಪ್ ಕುಮಾರ್ ಅಂಕಣ
“ಭಾಷಾಂತರ ಅನ್ನುವುದು ಚಲನೆ ಮತ್ತು ಬದಲಾವಣೆ ಅನ್ನುವುದನ್ನ ಒಪ್ಪಿದರೂ ಮೂಲ ಪಠ್ಯನಿಷ್ಟವಾಗುವುದು ಎಲ್ಲಾ ಕಾಲದಲ್ಲೂ ಬಹಳ ಮುಖ್ಯವಾಗುತ್ತದೆ. ಆ ಚಲನೆ ಅರ್ಥಸ್ಥರದಲ್ಲಿ ಮಾತ್ರ ಆದಷ್ಟು ಉಪಯೋಗ. ಪರಿಚಯಾತ್ಮಕವಾಗಿ ಮೊದಲಬಾರಿಗೆ ನಮ್ಮ ಭಾಷೆಗೆ ಭಾಷಾಂತರ ಮಾಡುವಾಗಲಂತೂ ಈ ಚಲನೆ ಮತ್ತು ಬದಲಾವಣೆಯನ್ನು….’
ಶಿಕ್ಷಣ ಮತ್ತು ಮೀಸಲಾತಿಗಳು: ಮಧುಸೂದನ್ ವೈ.ಎನ್ ಅಂಕಣ
“ಮ್ಯಾನೇಜ್ಮೆಂಟ್ ಕೋಟಾದಿಂದ ಬಂದವರು ಕೆಲಸ ಮಾಡುವಾಗ ಒದ್ದಾಡುವುದನ್ನು ಕಣ್ಣಾರೆ ಕಂಡಿದ್ದೇನೆ. ಸಂಬಂಧಿಕರ ಸ್ನೇಹಿತರ ಸಂಪರ್ಕ ಬಳಸಿ ಕಂಪನಿ ಸೇರಿಕೊಂಡುಬಿಡುತ್ತಾರೆ. ಹಂಗೂ ಹಿಂಗೂ ಕಾಲ ತಳ್ಳಿ ಒಂದು ಮ್ಯಾನೇಜ್ಮೆಂಟು ಕೋರ್ಸು ಮುಗಿಸಿ ಮ್ಯಾನೇಜ್ಮೆಂಟ್ ವಲಯಕ್ಕೆ ಹಾರುತ್ತಾರೆ. ಇಂಗ್ಲೀಷು ಮತ್ತು ಎಲೈಟಿಸ್ಟ್ ಅಪ್ಪಿಯರೆನ್ಸು – ಅಲ್ಲಿ ಬೇಕಾದ ಬಹುಮುಖ್ಯವಾದ ಅಸ್ತ್ರಗಳು. ಕೋಟಿಯಷ್ಟು ಹಣ ಸುರಿದು ಡಿಗ್ರಿ ಪಡೆದ ಇವರ ಪ್ರಾಥಮಿಕ ಶಿಕ್ಷಣವು ಇಂಟರ್ ನ್ಯಾಶನಲ್ ಕಾನ್ವೆಂಟುಗಳಲ್ಲಾಗಿದ್ದು ಸಹಜವಾಗಿಯೆ ಅವುಗಳನ್ನು ಒಲಿಸಿಕೊಂಡು ಬಂದಿರುತ್ತಾರೆ.”
ದೇಸಿ ವಿದ್ಯಾರ್ಥಿಗಳ ಇನ್ನಷ್ಟು ಕಥೆಗಳು: ಡಾ. ವಿನತೆ ಶರ್ಮ ಅಂಕಣ
“ಭಾರತದಲ್ಲಿ ಸರ್ಜನ್ ಆಗಿದ್ದ ಗಂಡನಿಗೆ ಕೆಲಸವಿಲ್ಲದೇ ನಿರುದ್ಯೋಗಿ ಪಟ್ಟ ಸಿಕ್ಕು ತಲೆಕೆಟ್ಟಂತಾಗಿತ್ತು. ಇಲ್ಲಿನ ಕ್ರಮ, ಪದ್ಧತಿಯಂತೆ ದಂತವೈದ್ಯನಾಗಿ ನೋಂದಣಿ ಮಾಡಿಸಲು, ತನ್ನ ವೃತ್ತಿಯನ್ನು ಪ್ರಾಕ್ಟಿಸ್ ಮಾಡಲು ಪರವಾನಗಿ ಪಡೆಯಬೇಕಿತ್ತು. ಅದಕ್ಕಾಗಿ ಬಹುಕಷ್ಟದ ಪರೀಕ್ಷೆಗಳನ್ನು ಬರೆದು ಉತ್ತಮ ಅಂಕಗಳನ್ನು ಪಡೆಯಬೇಕಿತ್ತಂತೆ. ಅದಕ್ಕಾಗಿ ಆತ ಹೆಣಗಾಡುತ್ತಿದ್ದ. ಅವರಿಬ್ಬರ ಮಧ್ಯೆ ಆ ಐದು ವರ್ಷದ ಬಾಲಕ ಕಂಗೆಟ್ಟುಹೋಗಿದ್ದ.”
ಕೇರಳ ಕಾಂತೆಯರು: ಆಶಾ ಜಗದೀಶ್ ಅಂಕಣ
“ಸ್ತ್ರೀವಾದಿ ಎನ್ನುವುದರ ಅರ್ಥ ಸ್ತ್ರೀವಾದಿ ಅಂತ ಮಾತ್ರ ಅಷ್ಟೇ… ಸ್ತ್ರೀವಾದಿ ಎಂದರೆ ಪುರದ ದ್ವೇಷಿ ಎಂದಲ್ಲ. ಎಂದಾಗಬೇಕಾಗೂ ಇಲ್ಲ. ಈ ಭಾವದ ಅದೆಷ್ಟೋ ಚಿಂತಕಿಯರು ನಮ್ಮ ನಡುವಿದ್ದಾರೆ. ಅವರ ಯೋಚನೆಗಳ ಮೂಲ ಪ್ರಚೋದನೆ ಏನೇ ಇರಲಿ ಇಂದಿಗೂ ತಮ್ಮ ಬದುಕನ್ನು ಹಂಚಿಕೊಂಡ ಪುರುಷರನ್ನು ದ್ವೇಷಿಸಿ ಸ್ತ್ರೀವಾದವನ್ನು ಕಟ್ಟಬೇಕೆಂದು ಪ್ರಚೋದಿಸಿದವರನ್ನು ಕಾಣುವುದು ಕಷ್ಟ.”
ಜೋಗಿಬೆಟ್ಟುವಿನಲ್ಲಿ ಚಿರತೆ: ಮುನವ್ವರ್ ಜೋಗಿಬೆಟ್ಟು ಅಂಕಣ
“ಒಮ್ಮೆ ನಮ್ಮಜ್ಜಿ ಮನೆಯಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ದನವೊಂದು ಕಳವಾಯಿತಂತೆ. ಎಲ್ಲಿ ಹುಡುಕಿದರೂ ಪತ್ತೆ ಇಲ್ಲ. ಮುತ್ತಜ್ಜಿಯ ಧ್ವನಿ ಗುರುತಿಸಿ ಬರುತ್ತಿದ್ದ ದನ ಎಷ್ಟು ಕರೆದರೂ ಬಾರಲೇ ಇಲ್ಲವಂತೆ. ಕೊನೆಗೆ ಆಗ ಸಣ್ಣವರಿದ್ದ ನನ್ನಜ್ಜಿಯನ್ನು ಕೈಲಿ ಹಿಡಿದುಕೊಂಡು ಮುತ್ತಜ್ಜಿ ಹುಡುಕಲೆಂದು ಹೊರಟರಂತೆ. ಅದು ಸಂಜೆಯ ಹೊತ್ತು, ಮುತ್ತಜ್ಜಿ ಮೊದಲಡಿ ಬಳಿಗೆ “ದಾ ದಾ” ಎಂದು ಕರೆಯಬೇಕಾದರೆ..”
ಸರ್ವೇಜನ ಸುಖೀನೋ ಭವಂತು….: ಲಕ್ಷ್ಮಣ ವಿ.ಎ. ಅಂಕಣ
“ಈ ದೇಶದ ಶ್ರಮಿಕವರ್ಗವಿದೆಯಲ್ಲ ಇವರ್ಯಾರೂ ಧರ್ಮ ಪಂಥ ಪಂಗಡಗಳ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಂಡವರಲ್ಲ. ದೇವರನ್ನು ಮನೆಯ ಜಗುಲಿಗಳಿಗೇ ಕಟ್ಟಿ ಹಾಕಿ ರೊಟ್ಟಿ ಬುತ್ತಿ ಅಂಬಲಿಯನ್ನು ಸಾಬರು ಮಾಲಗಾರರು ಲಿಂಗಾಯತರೆನ್ನದೇ ಜೋಳದ ಹೊಲದಲ್ಲಿ ಕುಳಿತು ಬುತ್ತಿಯ ಬಿಚ್ಚಿ ಹಂಚಿ ತಿಂದು ಬದುಕುವವರು. ಹೀಗೆ ಮಾಡುವುದು ಇದೊಂದು ಅವರಿಗೆ ಆದರ್ಶವೆನ್ನುವ ಅಹಂ…”
ಶೃಂಗಾರ ಸಾರ ವರ್ಣನ-4: ಆರ್. ದಿಲೀಪ್ ಕುಮಾರ್ ಬರೆಯುವ ಅಂಕಣ
“ಕವಿಯೊಬ್ಬ ಯಾವ ಭಾಗಕ್ಕೆ ಪ್ರಾಶಸ್ತ್ಯ ಕೊಟ್ಟು ರಚನೆ ಮಾಡುವನೋ ಅದನ್ನು ನಡೆಸಲು ಬಹಳ ಸೂಕ್ಷ್ಮ ಮತಿಯಾಗಿರಬೇಕು ಅನ್ನುವುದಕ್ಕೆ ಪಂಪನ ಈ ಭಾಗ ಉದಾಹರಣೆ ಅನಿಸುತ್ತದೆ. ಇಲ್ಲಿ ವಿಪ್ರಲಂಭ ಶೃಂಗಾರದ ವರ್ಣನೆಯೇ ಮುಖ್ಯವಾಗಿ ಇರುವಾಗ, ಅದರ ಮುಂದಿನ ಭಾಗವಾದ ಸಂಭೋಗವನ್ನು ವರ್ಣಿಸುವುದು ಅಥವಾ ಶೃಂಗಾರದೊಂದಿಗೆ….”
ಎನ್ಸೈಕ್ಲೋಪಿಡಿಯಾದಿಂದ ವಿಕಿಪೀಡಿಯಾವರೆಗೂ….: ಮಧುಸೂದನ್ ವೈ.ಎನ್ ಅಂಕಣ
“ಗೊತ್ತಿರಲಿ ಇದು ಲಾಭರಹಿತ ಸಾಮುದಾಯಿಕ ಸಂಸ್ಥೆ. ಯಾರೂ ಸಂಬಳಕ್ಕಾಗಿ ಇದನ್ನು ಮಾಡುತ್ತಿಲ್ಲ. ಜಗತ್ತೆ ಕೈಜೋಡಿಸಿ ತನಗೆ ಬೇಕಾದ ಉತ್ತಮ ವಿಶ್ವಕೋಶವನ್ನು ಸೃಷ್ಟಿಸುವುದು ಇದರ ಮೂಲ ಉದ್ದೇಶ. ಪ್ರಪಂಚದ ಯಾವ ಮೂಲೆಯಿಂದಲಾದರೂ ಯಾರು ಬೇಕಾದರೂ ಇಲ್ಲಿ ಅಂಕಣ ಬರೆಯಬಹುದು, ಅಥವಾ ಇನ್ನೊಬ್ಬರು ಬರೆದದ್ದನ್ನು ತಿದ್ದಬಹುದು.”










