ಮಾಜಿ ಸಿಪಾಯಿಯೊಬ್ಬನ ಬದುಕು-ಬವಣೆಯ ಕತೆ :ಲಕ್ಷ್ಮಣ ವಿ.ಎ. ಅಂಕಣ
“ಆ ಇಕ್ಕಟ್ಟಿನಲ್ಲೇ ಹಿಮಗಟ್ಟಿದ ನೀರು ಕಾಯಿಸಿ, ಅಡುಗೆ ಬೇಯಿಸಿ ತಿನ್ನಬೇಕು. ಅಪ್ಪಿ ತಪ್ಪಿಯೂ ಆ ಒಲೆಯಿಂದ ಬರುವ ಹೊಗೆ ಬೆಂಕಿ ಕಾಣಿಸಕೂಡದು. ಒಂದು ವೇಳೆ ಕಂಡರೆ ಕೆಲವೇ ನಿಮಿಷಗಳಲ್ಲಿ ಈ ಡ್ರ್ಯಾಗನ್ ಸೈನಿಕರ ಶೆಲ್ ದಾಳಿಗೆ ತುತ್ತಾಗಿ ಬಂಕರುಗಳ ಇವರ ಶವ ಎಣಿಸಲು ಬರುವವರಿಗಾಗಿ ಒಂದು ವಾರ ತಿಂಗಳಾದರೂ ಕಾಯಬೇಕು.”
ನಿರಾಕಾರಣವಾಗಿ ಹೃದಯದಿಂದ ಹೊರಟ ಕಣ್ಣೀರು….: ಆಶಾ ಜಗದೀಶ್ ಅಂಕಣ
“ಇಲ್ಲಿನ ತಾಯಿ ಏಕೆ ಮುಖ್ಯವಾಗುತ್ತಾಳೆಂದರೆ, ಇವಳು ತನ್ನ ಬಾಲ್ಯವನ್ನಾಗಲೀ, ತಾರುಣ್ಯವನ್ನಾಗಲೀ ಅನುಭವಿಸಿ ಕಂಡವಳಲ್ಲ. ಜಗತ್ತನ್ನು ಬೆರಗಿನಿಂದ ಕಂಡು ಅರಿತವಳಲ್ಲ. ನಲವತ್ತು ವರ್ಷ ವಯಸ್ಸಿಗೇ ತನ್ನನ್ನು ತಾನು ಮುದುಕಿ ಎಂದುಕೊಂಡುಬಿಟ್ಟವಳು. ತನ್ನ ನಲವತ್ತು ವರ್ಷ ವಯಸ್ಸನ್ನು ದಾಟಿದ ಮೇಲೆ ಬದುಕನ್ನು ಅರ್ಥ ಮಾಡಿಕೊಂಡವಳು. ಆಗ ಅವಳು ತನ್ನ ಬದುಕಿನಲ್ಲಿ ತಾನು ಏನನ್ನು ಕಳೆದುಕೊಂಡಿದ್ದಳೋ ಅದನ್ನು ಹುಡುಕಿಕೊಂಡು ಹೊರಡುತ್ತಾಳೆ.”
ಪೂರ್ವಸೂರಿಗಳ ಪ್ರಾರ್ಥನೆಗಳು: ಕೃಷ್ಣ ದೇವಾಂಗಮಠ ಅಂಕಣ
“ಕಾವ್ಯದ ಆರಂಭದ ಭಾಗದಲ್ಲಿ ಮಾತ್ರವಲ್ಲದೇ ಕಾವ್ಯದ ಮುಂದುವರಿದ ಕೆಲ ಭಾಗಗಳಲ್ಲೂ ಸ್ತುತಿ ಪದ್ಯಗಳು ರಚನೆಗೊಂಡಿವೆ. ಷಡಕ್ಷರ ಕವಿ ತನ್ನ ಮೂರು ಕಾವ್ಯಗಳಾದ ವೃಷಭೇಂದ್ರ ವಿಜಯದಲ್ಲಿ ನಲವತ್ತಕ್ಕೂ ಹೆಚ್ಚು, ಶಬರ ಶಂಕರ ವಿಳಾಸದಲ್ಲಿ ಐದು ಮತ್ತು ರಾಜಶೇಖರ ವಿಳಾಸದಲ್ಲಿ ಹನ್ನೆರೆಡು, ಹೀಗೆ ಒಟ್ಟಿನಲ್ಲಿ ಐವತ್ತೈದಕ್ಕೂ ಹೆಚ್ಚು ಶಿವ ಸ್ತುತಿಗಳು, ಮತ್ತು ಅಷ್ಟೇ ಸಮನಾಗಿ ಪಾರ್ವತಿ ಪ್ರಾರ್ಥನೆಗಳು ಸಿಗುತ್ತವೆ.”
ಈಡಿಪಸ್ ಕಾಂಪ್ಲೆಕ್ಸ್ ಮತ್ತು ದಾರ್ಶನಿಕ ಸಾಹಿತ್ಯ : ಮಧುಸೂದನ್ ಅಂಕಣ
“ದಾರ್ಶನಿಕ ಸಾಹಿತ್ಯ ರಚಿಸಲು ಲೇಖಕ ಸ್ವತಃ ತಾನುದಾರ್ಶನಿಕ ಮೌಲ್ಯಗಳನ್ನು ಹೊಂದಿರಬೇಕಾಗುತ್ತದೆ. ಆದ್ದರಿಂದಲೇ ಎಲ್ಲರೂ ಮೆಚ್ಚುವಂತಹ ಓದುವಂತಹ ದಾರ್ಶನಿಕ ಸಾಹಿತ್ಯವೆಲ್ಲವೂ ದಾರ್ಶನಿಕರಿಂದಲೇ ಬರೆಸಿಕೊಂಡಿರುವುದು.ಯಾವ ದಾರ್ಶನಿಕ ಸಾಹಿತ್ಯ ಸತ್ತುಹೋಗಿದೆಯೋ ಅದು ದಾರ್ಶನಿಕನಿಂದ ಬರೆಸಿಕೊಂಡಿಲ್ಲವೆಂದರ್ಥ. ಗಮನಿಸಿ, ಇಂತಹ ಸಾಹಿತ್ಯವೆಲ್ಲವೂ ಹಿರಿಯ ವಯಸ್ಸಿನಲ್ಲಿ ಬರೆದಿರುವುದು.”
ಸಾವು ಬದುಕೆಂಬ ಹಸಿರು ಹಳದಿ ಎಲೆಗಳು: ಡಾ.ವಿನತೆ ಶರ್ಮ ಅಂಕಣ
“ಸುದ್ದಿಮಾಧ್ಯಮಗಳಿಗೆ ಪೊಲೀಸರು ತಿಳಿಸಿದ್ದು ಏನೆಂದರೆ ಆ ವ್ಯಕ್ತಿ ತನ್ನ ಜೀವಹಾನಿಗೆ ಮುಂದಾಗಿದ್ದ. ಅವರು ಅವನು ತನ್ನ ಪ್ರಾಣ ತೆಗೆದುಕೊಳ್ಳದಂತೆ ಮಾತನಾಡಿಸುತ್ತಾ ಪುಸಲಾಯಿಸುತ್ತಾ ಮನವೊಲಿಕೆಗೆ ಪ್ರಯತ್ನಿಸುತ್ತಿದ್ದರು. ರೇಡಿಯೋ ಡೀಜೆಗಳು ಪಟಪಟನೆ ಪರಿಸ್ಥಿತಿಯ ವಿಶ್ಲೇಷಣೆ ಶುರುಮಾಡಿದರು. ಅವನ್ಯಾರು, ಯಾತಕ್ಕೆ ಪ್ರಾಣ ತೆಗೆದುಕೊಳ್ಳಲು ಮುಂದಾದ…”
ಬಸರಿಮರ ಮತ್ತು ವಿಷಪೂರಿತ ಅಣಬೆ: ಮುನವ್ವರ್ ಬರೆಯುವ ಪರಿಸರ ಕಥನ
“ಬಾಲ್ಯದಲ್ಲಿ ಚಾರೆ ಮರದಡಿಯಲ್ಲಿ ನಡೆಯಬಾರದೆಂಬ ಮೂಢನಂಬಿಕೆಯಿತ್ತು. ಅವುಗಳ ಹಣ್ಣುಗಳು ಮೈ ಮೇಲೆ ಬಿದ್ದರೆ ಚರ್ಮದಲ್ಲಿ ಬೊಕ್ಕೆಯೇಳುವ ಕಾರಣಕ್ಕಿರಬಹುದು. ಅವು ಭೂತದ ಮರವೆಂಬ ಹೆದರಿಕೆಯೂ ಬೇರೆ. ಸಾಲದಕ್ಕೆ ಅದರಲ್ಲಿ ಹಾವುಗಳು ವಾಸಿಸುತ್ತವೆಯೆಂದು ಹೆದರಿಸಿಬಿಟ್ಟಿದ್ದರು. ಒಮ್ಮೆ ಕಟ್ಟಿಗೆಗೆ ಹೋದಾಗ..”
ವಿಮಾನ ಪಯಣದ ವಿದಾಯ ಸಮಾರಂಭ: ಯೋಗೀಂದ್ರ ಮರವಂತೆ ಅಂಕಣ
“ವಿಮಾನ ನಿಲ್ದಾಣದ ಆಸುಪಾಸಿನ ಬಾನಾಡಿ ಪಕ್ಷಿಗಳನ್ನು, ಲೋಹದ ಹಕ್ಕಿಗಳನ್ನು, ಅವುಗಳ ಯೋಚನಾ ಲಹರಿಗಳನ್ನು ಆಕಾಶದಲ್ಲಿಯೇ ಬಿಟ್ಟು ಇದೀಗ ದೂರ ಬಂದಿದ್ದೇನೆ. ಬಾನಿನ ತುಂಬಾ ವಿಮಾನ ಹಕ್ಕಿಗಳೇ ತುಂಬಿರುವ ಲಂಡನ್ ಊರಿನಲ್ಲಿ ಬೀಳ್ಕೊಡುವ ಕಾರ್ಯಕ್ರಮ ಮುಗಿಸಿ ಅಲ್ಲಿಂದ ನೂರು ಮೈಲು ದೂರದ ವಿಮಾನಗಳ ಸದ್ದುಗಳು ಕೇಳದ ಬ್ರಿಸ್ಟಲ್ ಮನೆಗೆ ಮರಳಿದ್ದೇನೆ.”
ಮರ ಹತ್ತುವ ಮೀನು ಮತ್ತು ನಮ್ಮ ಶಿಕ್ಷಣ ವ್ಯವಸ್ಥೆ: ಡಾ. ಲಕ್ಷ್ಮಣ ವಿ.ಎ. ಅಂಕಣ
“ಮಾನವನ ವಿಕಾಸವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಪರಿಸರ ಪ್ರತಿಯೊಂದು ತಲೆಮಾರಿಗೂ ಒಂದೊಂದು ಹೊಸ ಪ್ರಶ್ನೆಪತ್ರಿಕೆಯಂತಹ ಸವಾಲೆಸುವುದು ನಮ್ಮ ಗಮನಕ್ಕೆ ಬರುತ್ತದೆ. ನಮ್ಮ ಮುಂದಿರುವ ಈ ಹೊಸ ಪೀಳಿಗೆಗೂ ಪೂರ್ಣ ಪ್ರಮಾಣದಲ್ಲಿ ಉಲ್ಬಣಗೊಂಡ ಕಾಯಿಲೆಯಂತಹ ಜಾಗತೀಕರಣ, ಖಾಸಗೀಕರಣ ಮತ್ತು ವ್ಯಾಪಾರೀಕರಣದ..”
ತನ್ನ ನೂಲ ತಾನೇ ಸುತ್ತಿ…. : ಆಶಾ ಜಗದೀಶ್ ಅಂಕಣ
“ವಿಮಾನ ಹತ್ತಿದಾಗ ಆಕಾಶವೆಂಬ ಅವಕಾಶದಿಂದ ಭೂಮಿಯನ್ನು ಕಾಣುವ ನಮಗೆ ಅದರ ನೈಸರ್ಗಿಕ ಭೌತಿಕ ಅಂಶಗಳು ಅಚ್ಚರಿ ಉಂಟುಮಾಡುವಷ್ಟೇ ಮನುಷ್ಯನ ರೀತಿನೀತಿಗಳೂ ಅಚ್ಚರಿ ಹುಟ್ಟಿಸುತ್ತವೆ. ಜೆಟ್ ಆಕಾಶಕ್ಕೆ ಚಿಮ್ಮಿ, ಒಂದು ಮೈಲಿ ಎತ್ತರದಿಂದ ಬರೀ ಆರಿಂಚಿನಷ್ಟು ಕಾಣುವಾಗ, ಕವಿಗೆ ನಗರಗಳು ಯಾಕೆ ಹೀಗೆ ಹುಟ್ಟಿ ಬೆಳೆದು ಬಂದಿವೆ ಎಂದು ತಿಳಿಯುತ್ತದೆ. ಮತ್ತೆ ಭೂಮಿಯ ಮೇಲಿನ..”










