Advertisement
ನಂದಿನಿ ವಿಶ್ವನಾಥ ಹೆದ್ದುರ್ಗ ಬರೆದ ಗಜಲ್

ನಂದಿನಿ ವಿಶ್ವನಾಥ ಹೆದ್ದುರ್ಗ ಬರೆದ ಗಜಲ್

ಕಡುನೋವಿನ ಕುರಿತು ಹಾಡೊಂದು ಬರೆಯಬಲ್ಲೆ ಈ ರಾತ್ರಿ..
ಖಾಲಿ ನಿಲ್ದಾಣದ ಕುರಿತು ಬರೆಯಬಲ್ಲೆ ಈ ರಾತ್ರಿ

ಹಾಡು ಹಕ್ಕಿಯ ರೆಕ್ಕೆ ಕತ್ತರಿಸುತಿದೆ ಹಾಳಾದ ಕಡು ಒಲವು
ವಲಸೆ ಹೊರಟವನ ಕುರಿತು ಬರೆಯಬಲ್ಲೆ ಈ ರಾತ್ರಿ

ಎದೆಯ ರುದ್ರಭೂಮಿಯಲ್ಲಿ ಮುಕ್ತಿ ಕಾಣದ ಎಷ್ಟೊಂದು
ಹೃದಯಗಳು..
ಹಚ್ಚಿಕೊಂಡ ನಂಬಿಕೆಯೊಂದು ಚುಚ್ಚಿ ನೋಯಿಸಿದ ಕುರಿತು ಬರೆಯಬಲ್ಲೆ ಈ ರಾತ್ರಿ

ಮಿಲನ ಮುಂಗಾರು, ಚುಂಬನದ ‘ಹನಿ’ಸೋನೆ
ಬೆದೆಗೆ ಬಯಲಾದ ಕಾಯ..
ಭರವಸೆಗಳೆಲ್ಲಾ ಬಸವಳಿದು ಬಳಲಿದ ಕುರಿತು ಬರೆಯಬಲ್ಲೆ ಈ ರಾತ್ರಿ..

 

ನಂದಿನಿ ವಿಶ್ವನಾಥ ಹೆದ್ದುರ್ಗ ಕಾಫಿಬೆಳೆಗಾರ್ತಿ ಮತ್ತು ಕೃಷಿ ಮಹಿಳೆ.
ಕಾವ್ಯ, ಸಾಹಿತ್ಯ ಮತ್ತು ಫೋಟೋಗ್ರಫಿ ಇವರ ಆಸಕ್ತಿಯ ವಿಷಯಗಳು.

 

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

2 Comments

  1. jvramesh24

    ಚೆನ್ನಾಗಿದೆ! ???

    Reply
  2. Prajna

    very nice poem nandini

    Reply

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ