Advertisement

ಪ್ರವಾಸ #-test

ರೂಪ್ಮತಿ ಮಹಲಿನಲಿ… ರೂಪ್ಮತಿಯ ನೆನಪಿನಲಿ…

ರೂಪ್ಮತಿ ಮಹಲಿನಲಿ… ರೂಪ್ಮತಿಯ ನೆನಪಿನಲಿ…

ರಕ್ತದಲ್ಲಿ ಮಧುರ ದನಿಯನ್ನು ಹೊತ್ತು ತಂದಿದ್ದ ಮಗು ಬಾಲೆಯಾಗಿ ಬೆಳೆಯುತ್ತಾ ವಿಪರೀತ ಚಂದದ ಗಾಯಕಿ ಆದಳು. ವಯಸ್ಸಿನ ಹುಡುಗಿಯನ್ನು ಸ್ವಯಂವರದ ಮೂಲಕ ಗ್ವಾಲಿಯರಿನ ದೊರೆ ಮಾನ್ ಸಿಂಗ್‍ಗೆ ಮದುವೆ ಮಾಡಿಕೊಡಲಾಗಿತ್ತು. ನಿತ್ಯವೂ ನರ್ಮದೆಯ ಪೂಜೆ ಸಲ್ಲಿಸದೆ ಗುಟುಕು ನೀರನ್ನೂ ಒಲ್ಲೆ ಎನ್ನುತ್ತಿದ್ದ ರೂಪ್ಮತಿಗೆ, ಗ್ವಾಲಿಯರಿನಲ್ಲಿ ನರ್ಮದೆ ಕಾಣದಾಗಿದ್ದಳು.
ಕಂಡಷ್ಟೂ ಪ್ರಪಂಚ ಪ್ರವಾಸ ಅಂಕಣದಲ್ಲಿ ಮಧ್ಯಪ್ರದೇಶದ ಮಾಂಡುವಿನಲ್ಲಿ ಸುತ್ತಾಡಿದ ಅನುಭವಗಳನ್ನು ಹಂಚಿಕೊಂಡಿದ್ದಾರೆ ಅಂಜಲಿ ರಾಮಣ್ಣ ಬರಹ

read more
ಗುಮ್ಮನಿಂದಲೂ ಚಾಕೋಲೇಟ್‌ ಕೊಡಿಸುವ “ಕಾರ್ನಿವಲ್” ಹಬ್ಬ…

ಗುಮ್ಮನಿಂದಲೂ ಚಾಕೋಲೇಟ್‌ ಕೊಡಿಸುವ “ಕಾರ್ನಿವಲ್” ಹಬ್ಬ…

ಅಕ್ಟೋಬರ್‌ನಿಂದ ಖಿನ್ನಗೊಂಡ ಮನಸ್ಸುಗಳು ಮತ್ತೆ ಸೂರ್ಯನ ಬೆಳಕು ಹೆಚ್ಚಾಗುವುದನ್ನು ಕಾದು ಕುಳಿತಿರುತ್ತವೆ. ಚಳಿಗಾಲದ ಸಂಕ್ರಮಣ ಬದುಕಿನ ಹುರುಪನ್ನು ಹಿಂದಿರುಗಿ ಕೊಡುತ್ತದೆ. ಬಹಳ ಹಿಂದಿನ ದಿನಗಳಲ್ಲಿ ನಂಬಿಕೆಗಳು ಹುಟ್ಟುವ ಕಾಲಘಟ್ಟದಲ್ಲಿ, ಫೆಬ್ರವರಿ ಸಮಯದ ದಿನಗಳನ್ನು ವಿಶೇಷವಾಗಿ ನೋಡಲಾಗುತ್ತಿತ್ತು. ಕತ್ತಲು ಎಂಬ ದುಷ್ಟ ಶಕ್ತಿಯನ್ನು ತೊಲಗಿಸಿ, ಬೆಳಕು ಎಂಬ ಭರವಸೆಯನ್ನು ಮರುಸ್ಥಾಪಿಸಲು ಜನರು ಒಂದು ಹಬ್ಬವನ್ನು ಹುಟ್ಟು ಹಾಕಿದರು.
“ದೂರದ ಹಸಿರು” ಸರಣಿಯಲ್ಲಿ ಗುರುದತ್ ಅಮೃತಾಪುರ ಬರಹ

read more
ದಾರಾಸುರಂನ ಐರಾವತೇಶ್ವರ ದೇಗುಲದ ಒಳಗೂ… ಹೊರಗೂ…

ದಾರಾಸುರಂನ ಐರಾವತೇಶ್ವರ ದೇಗುಲದ ಒಳಗೂ… ಹೊರಗೂ…

ನಮಗೆ ರಥ ಅಂದ ಕೂಡಲೇ ನೆನಪಾಗುವುದು ಹಂಪಿಯ ವಿಜಯ ವಿಠ್ಠಲ ದೇವಾಲಯದ ರಥ, ಆಮೇಲೆ ಕೋನಾರ್ಕಿನ ಸೂರ್ಯ ದೇವಾಲಯದ ಚಕ್ರಗಳು. ಆದರೆ ಅದೇ ರೀತಿ ಇರುವ ರಥದ ಕಲ್ಪನೆಯಲ್ಲಿ ಕಟ್ಟಿರುವ ಇನ್ನೂ ಹಲವು ದೇವಾಲಯಗಳಿವೆ. ತಾಡಿಪತ್ರಿಯ ರಥದ ಮಾದರಿಯಲ್ಲಿರುವ ಗರುಡಗಂಬ, ಕುಂಭಕೋಣಂನ ಸಾರಂಗಪಾಣಿ ದೇವಾಲಯ ಹಾಗೂ ದಾರಾಸುರಮ್‌ನ ದೇವಾಲಯ ತಕ್ಷಣಕ್ಕೆ ನೆನಪಿಗೆ ಬರುವ ನಾನು ಕಂಡ ರಥದ ದೇವಾಲಯಗಳು.
‘ದೇವಸನ್ನಿಧಿ’ ಅಂಕಣದಲ್ಲಿ ಗಿರಿಜಾ ರೈಕ್ವ ಬರಹ

read more
ಇನ್ಸ್ಬ್ರುಕ್ ಎಂಬ ಮಾಯಾಲೋಕ

ಇನ್ಸ್ಬ್ರುಕ್ ಎಂಬ ಮಾಯಾಲೋಕ

ನಾರ್ಡ್ ಕೆಟ್ಟೆಯಲ್ಲಿ ಪ್ರವಾಸಿಗರಿಗೋಸ್ಕರ “ಇಗ್ಲೂ” ಕೂಡ ಮಾಡಿ ಇಡಲಾಗಿತ್ತು. ಗಟ್ಟಿಯಾದ ಹಿಮದ ಇಟ್ಟಿಗೆಗಳಿಂದ ಕಟ್ಟಿದ ಪುಟ್ಟ ಮನೆಯೇ ಇಗ್ಲೂ. ತಾಪಮಾನ ಹೆಚ್ಚಿದ ಹಾಗೆ ಕರಗಿ ಹೋಗುವ ಈ ಮನೆ, ಬೇಸಿಗೆಯಲ್ಲಿ ಮಾಯವಾಗಿಬಿಡುತ್ತದೆ. ಮತ್ತೆ ಚಳಿಗಾಲದಲ್ಲಿ ಹೊಸದಾಳಿ ಹಿಮ ಬಿದ್ದು, ಗಟ್ಟಿಯಾದಮೇಲೆ ಪುನಃ ಕಟ್ಟಿಕೊಳ್ಳಬೇಕು. ಅಲ್ಲಿಗೆ ಹಿಂದಿನವರ ಕಾಲದಲ್ಲಿ ಪ್ರತಿವರ್ಷ ಹೊಸ ಮನೆ ಕಟ್ಟಿ, ಗೃಹಪ್ರವೇಶ ನಡೆಯುತ್ತಿತ್ತು ಅನ್ನಿಸುತ್ತದೆ!
“ದೂರದ ಹಸಿರು” ಸರಣಿಯಲ್ಲಿ ಇನ್ಸ್ಬ್ರುಕ್ ನಗರದಲ್ಲಿ ಓಡಾಡಿದ ಅನುಭವಗಳ ಬರೆದಿದ್ದಾರೆ ಗುರುದತ್ ಅಮೃತಾಪುರ

read more
ಕ್ರಿಸ್ಮಸ್ ರಾಜಧಾನಿಯಲ್ಲಿ ಸುತ್ತಾಡಿದ ಕ್ಷಣಗಳು

ಕ್ರಿಸ್ಮಸ್ ರಾಜಧಾನಿಯಲ್ಲಿ ಸುತ್ತಾಡಿದ ಕ್ಷಣಗಳು

ಚೆಸ್ಟ್ ನಟ್ ಎಂದರೆ ಒಂದು ರೀತಿಯ ಹಲಸಿನ ಬೀಜದ ಹಾಗಿರುತ್ತದೆ. ಕೆಂಡದಲ್ಲಿ ಆಗ ತಾನೇ ಸುಟ್ಟು ಒಂದು ಪೊಟ್ಟಣದಲ್ಲಿ ತುಂಬಿಸಿ ಕೊಡುತ್ತಾರೆ. ಈ ಪೊಟ್ಟಣದ ವಿಶೇಷ ಎಂದರೆ, ಇದರಲ್ಲಿ ಎರಡು ಭಾಗವಿರುತ್ತದೆ. ಒಂದರಲ್ಲಿ ಬಿಸಿ ಬಿಸಿ ಚೆಸ್ಟ್ ನಟ್ ಹಾಕಿದ್ದರೆ, ಮತ್ತೊಂದು ಭಾಗ ಖಾಲಿ ಇರುತ್ತದೆ. ಬಿಡಿಸಿದ ಸಿಪ್ಪೆ ಹಾಕಲು ಖಾಲಿ ಭಾಗವನ್ನು ಬಳಸಬೇಕು!
“ದೂರದ ಹಸಿರು” ಸರಣಿಯಲ್ಲಿ ಯೂರೋಪಿನ ಕ್ರಿಸ್ಮಸ್ ರಾಜಧಾನಿ ಸ್ಟ್ರಾಸ್‌ಬುರ್ಗ್‌ನಲ್ಲಿ ಓಡಾಡಿದ ಅನುಭವದ ಕುರಿತು ಬರೆದಿದ್ದಾರೆ ಗುರುದತ್ ಅಮೃತಾಪುರ

read more
ಡಚ್ ಜನರ ಸೈಕಲ್ ಪ್ರೀತಿ!

ಡಚ್ ಜನರ ಸೈಕಲ್ ಪ್ರೀತಿ!

ಗಿತೋರ್ನ್ ಪಟ್ಟಣದ ಐತಿಹಾಸಿಕ ಭಾಗಗಳಿಗೆ ರಸ್ತೆ ಮಾರ್ಗವಿಲ್ಲ. ದೋಣಿಯ ಸಹಾಯದಿಂದ ಮಾತ್ರ ತಲುಪಬಹುದು. ಇಲ್ಲಿನ ಬಹುತೇಕ ಮನೆಗಳು ಇಂದು “ಹೋಂ ಸ್ಟೇ” ಆಗಿ ಮಾರ್ಪಟ್ಟಿವೆ. ಪ್ರವಾಸಿಗರಿಗೆ ಇದೊಂದು ಅನನ್ಯ ಅನುಭವ. ನಮ್ಮಲ್ಲಿ ಪ್ರಯಾಣಿಕರ ಅನುಕೂಲಕ್ಕೆ ಬಸ್ ವ್ಯವಸ್ಥೆ ಇದ್ದಂತೆ, ಇಲ್ಲಿ ಬೋಟಿನ ವ್ಯವಸ್ಥೆ ಇದೆ. ಕಾಲುವೆಗಳ ಪಕ್ಕದಲ್ಲಿ ನಡೆದು ಹೋಗಲು ಪಾದಚಾರಿ ಮಾರ್ಗವಿದೆ. ಅಲ್ಲಲ್ಲಿ ಪಾದಚಾರಿಗಳಿಗೆ ಸಣ್ಣ ಸೇತುವೆಗಳಿವೆ.
ಗುರುದತ್ ಅಮೃತಾಪುರ ಬರೆಯುವ “ದೂರದ ಹಸಿರು” ಸರಣಿ

read more
ಅರೋರಾ ಬೋರಿಯಾಲಿಸ್: ನರ್ತಿಸುವ ಬೆಳಕಿನ ನೂರೆಂಟು ಮೋಹಕ ರೂಪ

ಅರೋರಾ ಬೋರಿಯಾಲಿಸ್: ನರ್ತಿಸುವ ಬೆಳಕಿನ ನೂರೆಂಟು ಮೋಹಕ ರೂಪ

ಹಿಂದಿನ ಸಾಲಿನಲ್ಲಿ ಮಲಗಿದ್ದ ಶ್ವೇತಾ ಜೋರಾಗಿ ಭುಜ ಅಲುಗಿಸಿ ನನ್ನನೆಬ್ಬಿಸುತ್ತಿದ್ದಾಳೆ. ಅವಳಿಗೆ ಗಂಟಲುಬ್ಬಿ ಮಾತೇ ಹೊರಡುತ್ತಿಲ್ಲ. ಕೈಸನ್ನೆ ಮಾಡಿ ಕಿಟಕಿಯ ಪರದೆ ಎತ್ತು ಎನ್ನುತ್ತಿದ್ದಾಳೆ. ಪೈಲಟ್ ಕಡೆ ಬೆರಳು ತೋರಿಸುತ್ತಿದ್ದಾಳೆ. ನನಗೋ ಎದೆ ಧಸಕ್ ಎಂದಿತು. ಅವಳ ಮುಖದ ತುಂಬಾ ಇದ್ದ ನಗು ನೋಡಿ ವಿಮಾನ ಅಪಾಯದಲ್ಲಿಲ್ಲ ಎಂದು ಖಾತ್ರಿಯಾಯಿತು. ಅಂದರೆ.. ಅಂದರೆ.. ನಿಜಕ್ಕೂ ನಾರ್ಥರ್ನ್ ಲೈಟ್ಸ್ ಕಾಣಿಸುತ್ತಿದೆಯಾ? ಇವೆಲ್ಲ ನಡೆದಿದ್ದು ಕೆಲವೇ ಸೆಕೆಂಡುಗಳಲ್ಲಿ ಎನ್ನಬಹುದು.
ʻಜಗದ ಜಗಲಿಯಲಿ ನಿಂತುʼ ಪ್ರವಾಸ ಬರಹಗಳ ಸಾಲಿನಲ್ಲಿ ವೈಶಾಲಿಹೆಗಡೆ ಬರಹ

read more
ನಮ್ಮಲ್ಲೆ ಅದೆಷ್ಟು ನಂದನದ ತುಣುಕುಗಳು!

ನಮ್ಮಲ್ಲೆ ಅದೆಷ್ಟು ನಂದನದ ತುಣುಕುಗಳು!

ಹಿಮಾಲಯದ ಒಳ ಸುಳಿಗಳಲ್ಲಿ ಇರುವ ದೇವಸರೋವರಗಳದ್ದೇ ಒಂದು ಲೋಕ. ಕೈಲಾಸದ ಮಾನಸಸರೋವರ, ಲೇ ಲಡಾಕ್‌ನ ಪಾಂಗಾಂಗ್‌, ಚಂದ್ರತಾಲ್‌, ನಾಕೋ, ಟ್ರೆಕ್ಕಿಂಗ್‌ ಮಾಡಿ ಮಾತ್ರ ತಲುಪಬಹುದಾದ ಹೆಸರೇ ಇಲ್ಲದ ಇನ್ನೂ ಅನೇಕ ಸರೋವರಗಳಿವೆ. ಮನುಷ್ಯ ಜಗತ್ತು ಕೊನೆಗೊಳ್ಳುತ್ತಾ ಅದು ದೇವಜಗತ್ತಾಗುತ್ತದೆ. ಅದೆಲ್ಲಾ ದೇವಸಂಚಾರಕ್ಕೆ ಮಾಡಿದ ಜಾಗಗಳೇನೋ ಅನಿಸುತ್ತದೆ. ಈ ಸುಂದರ ಸರೋವರಗಳನ್ನು ಆಸ್ವಾದಿಸಲು ಸೂರ್ಯನ ಸಹಕಾರ ಬೇಕು.
‘ದೇವಸನ್ನಿಧಿ’ ಅಂಕಣದಲ್ಲಿ ತಾವು ಕಂಡ ಸರೋವರಗಳ ಕುರಿತು ಬರೆದಿದ್ದಾರೆ ಗಿರಿಜಾ ರೈಕ್ವ

read more
ಕಾವಿಧಾರಿಗಳೊಂದಿಗೆ ಕಳೆದ ಕಾಲದ ಮೆಲುಕುಗಳು…

ಕಾವಿಧಾರಿಗಳೊಂದಿಗೆ ಕಳೆದ ಕಾಲದ ಮೆಲುಕುಗಳು…

ಜಿಪ್ಸಿಯಂತಿದ್ದ ಆತ ಎಲ್ಲರೊಡನೆ ಚಕ್ಕಲ್ಮಟ್ಟ್ಕೆ ಹಾಕಿಕೊಂಡು ಊಟ ಮಾಡುತ್ತಿದ್ದರು. ನನ್ನ ಕ್ಯಾಮೆರ ಲೆನ್ಸ್ ಆತನನ್ನು ನೋಡುತ್ತಿದ್ದದ್ದು ಗಮನಕ್ಕೆ ಬಂದೊಡನೆ ಒಂದು ನಗು ಒಂದು ಜ್ಞಾನ ಮುದ್ರೆಯನ್ನು ನನ್ನೆಡೆಗೆ ಬಿಸ್ಹಾಕಿದರು. ಈ ಮೇಳದ ಜಾಗದಲ್ಲಿ ಸ್ವಲ್ಪ ಹಳೇ ಹುಲಿಯಂತೆಯೇ ಕಂಡರವರು. ಕ್ಯಾಮೆರ ಮತ್ತು ಮೀಡಿಯಾವನ್ನು ಆಕರ್ಷಿಸಲು ಬೇಕಾದ ಹಾವಭಾವ ಅವರಲ್ಲಿತ್ತು ಅನ್ನಿಸಿತು.. ಮಾತು ಬೆಳೀತಾ ಬೆಳೀತಾ ಗೊತ್ತಾಯ್ತು ಆತ ಅಮೆರಿಕೆಯ ಅಲೆಮಾರಿ ಅಂತ. ಹಾಡು ನಟನೆ ಪ್ಯಾಷನ್. ಅದರಲ್ಲೇ ಜೀವನ ಕಂಡುಕೊಳ್ಳಲು ಸಾಕಷ್ಟು ಪರಿಶ್ರಮ ಹಾಕಿದರೂ ಉಹುಂ, ಯಶಸ್ಸು ಒಲ್ಲೆ ಅಂತ ಹಠ ಹಿಡಿದಿತ್ತು. ಅಂಜಲಿ ರಾಮಣ್ಣ ಬರಹ

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ