ಹಾಡುಗಾರ ಇಬ್ರಾಹೀಮನ ಅತಿಶಯ ಜೀವನ ಪ್ರಸಂಗಗಳು
“ಕಥೆಯೊಂದನ್ನು ನಡೆದ ಹಾಗೆ ಕಾಲಾನುಕ್ರಮಣದಲ್ಲಿ ಹೇಳುತ್ತಾ ಹೋಗುವುದು ಒಂದು ಬಗೆ. ಆದರೆ ಹೀಗೆ ಹೇಳುತ್ತಾ ಹೋಗುವುದರಿಂದ ಹೇಳುವವನಲ್ಲೂ ಕೇಳುವವನಲ್ಲೂ ಒಂದು ರೀತಿಯ ಅಸಹಜವಾದ ತಾಧ್ಯಾತ್ಮತೆಯೂ, ಬೋರು ಹೊಡೆಸುವ ಏಕತಾನತೆಯೂ ಉಂಟಾಗುತ್ತದೆ. ಆದರೆ ನನಗೆ ಗೊತ್ತಿರುವ ಹಾಗೆ ಲೋಕ ನಡೆಯುವುದೇ ಅನೀರೀಕ್ಷಿತ ಸಂಭವಗಳಿಂದಾಗಿ.”
ಅಬ್ದುಲ್ ರಶೀದ್ ಬರೆಯುವ ಮಿನಿಕಾಯ್ ಫೋಟೋ ಕಥಾನಕದ ಮೂರನೆಯ ಕಂತು.
ಪುಟ್ಟದೊಂದು ಹೂಹಕ್ಕಿಯ ಹುಡುಕುವುದು ಇಲ್ಲಿಗೆ ಹೊರಟ ಕಾರಣವಾಗಿತ್ತು
ಈ ಹಕ್ಕಿಯ ಹೆಸರು ‘ಫೂಕುಂಞಿ’ . ಅಂದರೆ ಹೂಮರಿ ಎಂದು ಅರ್ಥ. ಅಷ್ಟು ಹಗುರ.ಅಷ್ಟು ಸೂಕ್ಷ್ಮ, ಮತ್ತು ಅಷ್ಟೊಂದು ಸುಂದರ. ಒಂದು ಕಾಲದಲ್ಲಿ ಈ ದ್ವೀಪದ ಮನೆಮನೆಗಳ ಎದುರಿಗಿರುವ ಬುಗುರಿ ಮರದ ಎಲೆಗಳಿಗೆ ಜೋತಾಡುತ್ತ, ಎಲೆ ಯಾವುದು ಹಕ್ಕಿ ಯಾವುದು ಎಂದು ಗೊತ್ತಾಗದ ಹಾಗೆ ಉಲಿಯುತ್ತಿದ್ದ ಈ ಹೂ ಹಕ್ಕಿಗಳು ಇವರ ಹಾಡುಗಳಲ್ಲಿ ಮತ್ತು ಕತೆಗಳಲ್ಲಿ ದಂಡಿಯಾಗಿ ಸಿಗುತ್ತವೆ. ಅವುಗಳು ಈಗ ಇಲ್ಲದಿರುವುದಕ್ಕೆ…”
ಮಿನಿಕಾಯ್ ಎಂಬ ಮಾಯಾದ್ವೀಪ: ಅಬ್ದುಲ್ ರಶೀದ್ ಬರೆಯುವ ಫೋಟೋ ಕಥಾನಕ
ನಾನು ಹೊರಟಿದ್ದುದು ಒಬ್ಬ ನೆಂಟನಂತೆ. ಒಂದು ಔತಣಕೂಟಕ್ಕೆ. ಆ ಔತಣಕೂಟವೂ ವಿಶೇಷವಾಗಿತ್ತು. ಆ ಹಳ್ಳಿ ಈ ಸಲದ ದೋಣಿ ಸ್ಪರ್ದೆಯಲ್ಲಿ ಮೊದಲ ಬಹುಮಾನ ಪಡೆದಿತ್ತು. ನಾನಾದರೋ ಹದಿನೆಂಟು ಗಂಟೆಗಳ ಕಾಲ ಕಡಲಲ್ಲಿ ಚಲಿಸುವ ಹಡಗೊಂದನ್ನು ಹತ್ತಿ, ಸೈಕಲನ್ನೂ ಹತ್ತಿಸಿ ಹೊರಟು ನಿಂತಿದ್ದೆ. ಜೊತೆಗೆ ಕಳೆದ ಕಾಲು ಶತಮಾನದಿಂದ ನನ್ನ ಜೀವನದ ವ್ಯಸನಗಳಾಗಿ ಹೋಗಿರುವ ಕ್ಯಾಮರಾ ಮತ್ತು ಮಸೂರಗಳು.
ಹೊಸಪೇಟೆಯ ಅನಂತಶಯನಗುಡಿ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಮುಖಮಂಟಪದ ತುಂಬ ಕಂಬಗಳು. ಆ ಕಂಬಗಳ ಮೇಲೆಲ್ಲ ವಿವಿಧ ಪ್ರಾಣಿ ಪಕ್ಷಿ ದೇವತೆ ಪರಿಜನ ನರ್ತಕಿ ಗಾಯಕರಾದಿಯಾಗಿ ಅಸಂಖ್ಯ ಉಬ್ಬುಶಿಲ್ಪಗಳು. ನಮ್ಮ ಊಹೆಗೂ ಮೀರಿದ ಇಷ್ಟೊಂದು ಸಂಖ್ಯಾಪ್ರಮಾಣದ ಉಬ್ಬುಶಿಲ್ಪಗಳು ವಿಜಯನಗರದ ಎಲ್ಲ ಸ್ಮಾರಕಗಳಲ್ಲೂ ಕಂಡುಬರುತ್ತವೆ. ಇವೇ ಗಹನವಾದ ಒಂದು ಅಧ್ಯಯನಕ್ಕೆ ವಸ್ತುವಾಗಬಲ್ಲವು..”
ಹಾರನಹಳ್ಳಿಯ ಚನ್ನಕೇಶವ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ನಕ್ಷತ್ರಾಕಾರದ ತ್ರಿಕೂಟಾಚಲ ದೇಗುಲ. ಮುಖ್ಯ ಗರ್ಭಗುಡಿಗೆ ಮಾತ್ರ ಶಿಖರವಿದೆ. ಗರ್ಭಗುಡಿಯಲ್ಲಿ ಕೇಶವನೂ ಉಳಿದೆರಡು ಗರ್ಭಗುಡಿಗಳಲ್ಲಿ ವೇಣುಗೋಪಾಲ, ಲಕ್ಷ್ಮೀನರಸಿಂಹರೂ ನೆಲೆಸಿದ್ದಾರೆ. ಗರ್ಭಗುಡಿಯ ದ್ವಾರಪಟ್ಟಕದ ಮೇಲಿನ ಕೆತ್ತನೆ ಸೊಗಸಾಗಿದೆ. ಒಳಗುಡಿಯ ಕೋಷ್ಠಗಳಲ್ಲಿ ಗಣೇಶ, ಸರಸ್ವತಿಯರ ವಿಗ್ರಹಗಳಿವೆ. ನವರಂಗದಲ್ಲಿ ತಿರುಗಣೆಯ ಯಂತ್ರದಿಂದ ಕೊರೆದ ಕಂಬಗಳು. ಕಂಬಗಳ ವಿನ್ಯಾಸ ಒಂದಕ್ಕಿಂತ ಒಂದು…”
ಹೊಸಹೊಳಲಿನ ಲಕ್ಷ್ಮೀನಾರಾಯಣ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಇದೊಂದು ತ್ರಿಕೂಟಾಚಲ ದೇಗುಲ. ಆದರೆ ನಡುವಣ ಗರ್ಭಗುಡಿಯ ಮೇಲೆ ಮಾತ್ರವೇ ಶಿಖರ ಕಂಡುಬರುತ್ತದೆ. ನಾಲ್ಕು ಸ್ತರದ ಅಲಂಕರಣಗಳು, ಅದರ ಮೇಲೆ ಮೊಗುಚಿದ ಕಮಲದಂತಹ ಶಿಖರ, ಎಲ್ಲಕ್ಕೂ ಮೇಲೆ ಕಳಶ- ಆಕರ್ಷಕವಾಗಿ ಕಾಣುತ್ತವೆ, ಗೋಪುರದ ಅಲಂಕರಣಗಳ ನಡುವೆ ಕಾಳಿಂಗಮರ್ದನ ಲಕ್ಷ್ಮೀನಾರಾಯಣ ಮೊದಲಾದ ಮೂರ್ತಿಗಳನ್ನು ಕಾಣಬಹುದು. ದೇವಾಲಯದ ಹಿಂಬದಿಯ ಮೂರು ದಿಕ್ಕುಗಳಲ್ಲಿ..”
ಆದಿಚುಂಚನಗಿರಿಯ ಕಾಲಭೈರವ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಮಂಡ್ಯಜಿಲ್ಲೆಯ ನಾಗಮಂಗಲ ತಾಲ್ಲೂಕಿಗೆ ಸೇರಿದ ಈ ಆದಿಚುಂಚನಗಿರಿ ಕ್ಷೇತ್ರ ನಾಥಪಂಥದ ಪ್ರವರ್ತಕನಾದ ಸಿದ್ಧಯೋಗಿಯಿಂದ ಸ್ಥಾಪಿತವಾದುದೆಂದು ಪ್ರತೀತಿ. ಸುದೀರ್ಘ ಗುರುಪರಂಪರೆಯ ಕೃಪೆಗೆ ಪಾತ್ರವಾದ ಈ ಕ್ಷೇತ್ರದ ಪೀಠವು ಈವರೆಗೆ ಎಪ್ಪತ್ತೊಂದು ಗುರುವರೇಣ್ಯರ ಆರೋಹಣದಿಂದ ಪಾವನವೆನಿಸಿಕೊಂಡಿದೆ. ಚೋಳರಿಂದ ಮೊದಲುಗೊಂಡು ಹೊಯ್ಸಳ, ಸಾಳ್ವ, ವಿಜಯನಗರ, ಯಲಹಂಕ ಮೊದಲಾದ ಅರಸುಮನೆತನಗಳವರೆಗೆ ಶತಶತಮಾನಗಳ ಕಾಲ…”
ನಾಡಕಲಸಿಯ ಜೋಡಿ ದೇಗುಲಗಳು: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಮಲ್ಲಿಕಾರ್ಜುನ ದೇವಾಲಯಕ್ಕೆ ಶಿಖರವಿಲ್ಲ. ರಾಮೇಶ್ವರ ಗುಡಿಗಿಂತ ವಿಸ್ತೀರ್ಣದಲ್ಲಿ ದೊಡ್ಡದಾದ ಈ ಗುಡಿ ನಕ್ಷತ್ರಾಕಾರದ ತಳಹದಿ ಹೊಂದಿದ್ದು ತೆರೆದ ಮಂಟಪದ ಕಕ್ಷಾಸನವೂ ನಕ್ಷತ್ರದ ಆಕಾರದಲ್ಲೇ ಮುಂದುವರೆದಿದೆ. ಮೂರು ಕಡೆ ತೆರೆದ ಬಾಗಿಲು. ಮುಂಭಾಗದ ಬಾಗಿಲಲ್ಲೇ ದೊಡ್ಡ ನಂದಿ ಶಿವನಿಗೆ ಅಭಿಮುಖನಾಗಿ ಕುಳಿತಿದ್ದಾನೆ. ನಂದಿಯ ಸಾಲಂಕೃತ ಶಿಲ್ಪ ಮುದ್ದಾಗಿದೆ. ನಂದಿಯ ಕಣ್ಣು, ಕಿವಿ, ಮುಖ…”
ಸೋಂದೆಯ ರಮಾ ತ್ರಿವಿಕ್ರಮ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಸೋಂದೆಯ ಶ್ರೀವಾದಿರಾಜಮಠದ ಆವರಣದಲ್ಲಿ ವಾದಿರಾಜ ಮತ್ತಿತರ ಯತಿಗಳ ವೃಂದಾವನಗಳಲ್ಲದೆ ಅನೇಕ ಪ್ರಾಚೀನ ಗುಡಿಗಳಿದ್ದು ಅವುಗಳಲ್ಲಿ ಶ್ರೀವಾದಿರಾಜರೇ (ಕ್ರಿ.ಶ.1585) ಸ್ಥಾಪಿಸಿದ ರಮಾ ತ್ರಿವಿಕ್ರಮದೇಗುಲವು ಪ್ರಮುಖವಾಗಿದೆ. ಮಠದ ಆವರಣದ ನಡುವೆ ಸ್ಥಿತವಾಗಿರುವ ಈ ಪ್ರಾಚೀನ ದೇಗುಲಕ್ಕೆ ಚಾಲುಕ್ಯಶೈಲಿಯ ಸರಳವಾದ ಶಿಖರ. ಆರು ಸ್ತರಗಳ ಮೇಲೆ ಲೋಹದ ಕಳಶ.”









