Advertisement

ಸಂಪಿಗೆ ಸ್ಪೆಷಲ್

ಫೋಟೋ ಒಂದರ ಪ್ರತಿಫಲನ : ಜಯಂತ ಕಾಯ್ಕಿಣಿ ಬರಹ

ಫೋಟೋ ಒಂದರ ಪ್ರತಿಫಲನ : ಜಯಂತ ಕಾಯ್ಕಿಣಿ ಬರಹ

“ವ್ಯಕ್ತಿಗತವಾಗಿ ವಿಭಿನ್ನವಾದ ಹುಡುಕಾಟ, ನೋಟ, ನಿಲುವುಗಳಿದ್ದರೂ, ಒಟ್ಟಾರೆ ಸೇರಿ ಏನೋ ಒಂದು ಒಳ್ಳೆಯದರಲ್ಲಿ ತೊಡಗಿರುವ ಭಾವವೊಂದು ಇಲ್ಲಿ ನಿಚ್ಚಳವಾಗಿದೆ. ಬೇಂದ್ರೆ ಮತ್ತು ಅಡಿಗರ ನಡುವೆ ಕಾಯ್ಕಿಣಿ, ಎಕ್ಕುಂಡಿ, ಶರ್ಮ ಇರುವುದೇ ಒಂದು ರೂಪಕ. ಬಹುಶಃ ಇದು ಆಗ ನಡೆದಿದ್ದ ಕುಮಟಾ ಸಾಹಿತ್ಯ ಸಮ್ಮೇಳನಕ್ಕೆ ಬಂದಿದ್ದ ಇವರೆಲ್ಲ ಗೋಕರ್ಣವನ್ನೂ ನೋಡಿಕೊಂಡು ಹೋಗಲು ಬಂದಾಗ ನಡೆದ ಕೂಟ ಕಲಾಪ.”

read more
ಮಹಾ ಮೊಸರನ್ನ ಪುರಾಣ: ವಾಸುದೇವ ಕೃಷ್ಣಮೂರ್ತಿ ಬರೆದ ಲೇಖನ

ಮಹಾ ಮೊಸರನ್ನ ಪುರಾಣ: ವಾಸುದೇವ ಕೃಷ್ಣಮೂರ್ತಿ ಬರೆದ ಲೇಖನ

“ಹೇಗಾದ್ರು ಮಾಡಿ ಅಮೇರಿಕಾದಲ್ಲಿ ಮೊಸರನ್ನು ಹೆಪ್ಪಾಕ್ಬೇಕು ಅಂತ ಶಪಥ ಮಾಡಿ, ಯೋಗರ್ಟ್ ಅನ್ನು ಹಾಲಿಗೆ ಸೇರಿಸಿ ರಾತ್ರಿ ಇಟ್ಟ. ಅವನಿಗೆ ರಾತ್ರಿಯೆಲ್ಲಾ ಸಂಭ್ರಮ, ಇನ್ನು ನಾಳೆಯಿಂದ ನನ್ನ ಊರಿನಲ್ಲಿ ಸಿಗುವ ಗಟ್ಟಿ ಮೊಸರಿನ ತರಹ ಇಲ್ಲೂ ಕೂಡ ತಯಾರಿಸಬಹುದೆಂದು. ಬೆಳಿಗ್ಗೆ ಬಲಗಡೆ ಎದ್ದು ಮೊಬೈಲ್ ನೋಡದೆ ಮೊಸರನ್ನು ನೋಡಲು ಓಡಿದ. ಪಾತ್ರೆಯ ಮುಚ್ಚಳ ತೆಗೆದು ಸ್ವಲ್ಪ ಮೊಸರಂತೆ..”

read more
ಆಸ್ಮ ಎಂಬ ಸಂಗಾತಿ:  ಕೆ.ವಿ. ತಿರುಮಲೇಶ್ ಬರೆದ ಲೇಖನ

ಆಸ್ಮ ಎಂಬ ಸಂಗಾತಿ: ಕೆ.ವಿ. ತಿರುಮಲೇಶ್ ಬರೆದ ಲೇಖನ

“ಇದೆಲ್ಲದರಿಂದ ರೋಗ ಪರಿಹಾರ ಆಗುತ್ತದೆ ಎನ್ನಲಾಗದು, ಆಸ್ಮ ಪರಿಹಾರವಾಗುವುದು ಎಂದಿಲ್ಲ, ಸ್ವಲ್ಪ ತಹಬಂದಿಗೆ ಬರುತ್ತದೆ ಅಷ್ಟೆ. ಅಷ್ಟಾದರೆ ಅದೇ ದೊಡ್ಡ ವಿಷಯ. ಆರಂಭದಲ್ಲಿ ನನಗೆ ಏರುಪೇರುಗಳಿದ್ದುವು, ತಿಂಗಳಿಗೊಮ್ಮೆಯಾದರೂ ಏದುಸಿರು ಜೋರಾಗುತ್ತಿತ್ತು. ಆಗಲೆಲ್ಲ ನನ್ನ ಪಕ್ಕೆಗಳು ನೋಯುತ್ತಿದ್ದು ಸಹಿಸಲು ಕಷ್ಟವಾಗುತ್ತಿತ್ತು. ಅಮ್ಮ ನನ್ನ ಬೆನ್ನು ಉಜ್ಜುತ್ತಿದ್ದಳು. ಇಂಥದೊಂದು ಮಗುವಿಗೆ ಜನ್ಮವಿತ್ತೆನಲ್ಲ ಎಂದು ಅವಳಿಗೆ ದುಃಖವಾಗಿರಬೇಕು.”

read more
ತಿರುಮಲೇಶ್ ಅನುವಾದಿಸಿದ ಫ್ರೆಂಚ್ ಕಾದಂಬರಿಕಾರ ಜಾನ್ ದ ಓರ್ಮೆನ್ಸನ್  ಕೃತಿಯ ಕೆಲವು ಪುಟಗಳು

ತಿರುಮಲೇಶ್ ಅನುವಾದಿಸಿದ ಫ್ರೆಂಚ್ ಕಾದಂಬರಿಕಾರ ಜಾನ್ ದ ಓರ್ಮೆನ್ಸನ್ ಕೃತಿಯ ಕೆಲವು ಪುಟಗಳು

ಅವನ ಅತ್ಯಂತ ಸಂತೋಷದ ಸಂಗತಿಯೆಂದರೆ ಪುರೋಹಿತರ ಮಾತುಗಳನ್ನು ಆಲಿಸುವುದಾಗಿತ್ತು. ಬೇರೆ ಹುಡುಗರ ಜತೆ ಹೋಗಿ ಆಡುವುದು ಬಿಟ್ಟು, ಅವನೆಷ್ಟೇ ಮೃದುವಾಗಿದ್ದರೂ ಆ ಹುಡುಗರಿಗೆ ಅವನ ಬಗ್ಗೆ ಸಂದೇಹ ಇತ್ತು; ಅವನು ಯಾವುದಾದರೊಂದು ಪವಿತ್ರ ಪ್ರದೇಶದಲ್ಲಿ ನೆಲೆಗೊಂಡು, ಚಲಿಸದೆ ಅಥವಾ ಮಾತಾಡದೆ, ದೇವರುಗಳ ಮೂಲ ಮತ್ತು ವಿಶ್ವದ ಸ್ಥಿರತತ್ವ ಮುಂತಾದ ಸಂಗತಿಗಳ ಕುರಿತಾದ…”

read more
ಪ್ರೊ. ಷ. ಶೆಟ್ಟರ್ ಜೊತೆ ಡಾ. ಗೀತಾ ವಸಂತ ನಡೆಸಿದ್ದ ಮಾತುಕತೆ

ಪ್ರೊ. ಷ. ಶೆಟ್ಟರ್ ಜೊತೆ ಡಾ. ಗೀತಾ ವಸಂತ ನಡೆಸಿದ್ದ ಮಾತುಕತೆ

“ವ್ಯಾಕರಣ, ಛಂದಸ್ಸುಗಳನ್ನು ಬಾಲ್ಯದಲ್ಲಿ ಉರು ಹೊಡೆಸುತ್ತಿದ್ದರು. ಆಗ ಅದು ತಲೆಗೆ ಹತ್ತಲೇ ಇಲ್ಲ. ಕಂಠಪಾಠವು ಸಂಸ್ಕೃತದ ಕಲಿಕಾವಿಧಾನ. ಆದರೆ, ವ್ಯಾಕರಣ, ಛಂದಸ್ಸುಗಳು ಭಾಷೆಯ ಸಮಗ್ರ ತಿಳುವಳಿಕೆಗೆ ಅಗತ್ಯ. ಆ ಗ್ರಂಥಗಳನ್ನೂ ರಸಾಸ್ಪಾದಕ್ಕಾಗಿ, ರಸಾಸ್ಪಾದದ ಮೂಲಕ ಓದಲು ಸಾಧ್ಯ. ವ್ಯಾಕರಣ ಗ್ರಂಥಗಳ ಲೇಖಕರೂ ತುಂಟರು. ಸಾಕಷ್ಟು ರಸಿಕರು! ಉದಾಹರಣೆಗಳನ್ನು ಕೊಡುವಾಗ ರಸಾಸ್ವಾದದ ಸ್ಥಳಗಳನ್ನು ನಿರ್ಮಿಸುವಲ್ಲಿ ಅವರು ನಿಪುಣರು. ಇಂಥ ಸೂಕ್ಷ್ಮಗಳನ್ನು ಬೋಧಕರು ಗಮನಿಸಬೇಕು. ಕಾವ್ಯವನ್ನು ಸಹ ರಸಾಸ್ಪಾದದ ಮೂಲಕವೇ ತಲುಪಿಸುವುದು ಜಾಣತನ.”

read more
ಪ್ರೊ. ಶೆಟ್ಟರ್ ಎಂದರೆ ಕನ್ನಡದ ಹೆಮ್ಮೆ, ಅಚ್ಚರಿ: ಎಚ್.ಆರ್.ರಮೇಶ ಬರೆದ ಲೇಖನ

ಪ್ರೊ. ಶೆಟ್ಟರ್ ಎಂದರೆ ಕನ್ನಡದ ಹೆಮ್ಮೆ, ಅಚ್ಚರಿ: ಎಚ್.ಆರ್.ರಮೇಶ ಬರೆದ ಲೇಖನ

“ಕನ್ನಡದ ಈ ವಿಶಿಷ್ಟಬಗೆಯ ಸ್ಪಂದನೆಯ ಬರಹಗಾರ, ಚಿಂತಕ, ಇತಿಹಾಸಕಾರ ಇಲ್ಲದ ನೋವು ಕನ್ನಡದ ಮನಸುಗಳಿಗೆ ನಿಜಕ್ಕೂ ತಡೆದುಕೊಳ್ಳಲಾರದಂತಹ ದುಃಖ. ಇವರ ಜೊತೆ ಎರಡು ದಿನಗಳನ್ನು ಕೊಡಗಿನ ದೇವರಕಾಡುಗಳಲ್ಲಿ ಕಳೆದ ನೆನಪುಗಳು ನನ್ನ ಮನಸ್ಸಿನಲ್ಲಿ ಸದಾ ಹಚ್ಚ ಹಸಿರಾಗಿದೆ. ಅಭಿನವ ರವಿಕುಮಾರ್ ಅವರು ಒಂದು ದಿನ ಫೋನ್ ಮಾಡಿ ರಮೇಶ್ ಶೆಟ್ಟರ್ ಅವರು ಕೊಡಗಿನ ದೇವರ ಕಾಡುಗಳ ಬಗ್ಗೆ ತಿಳಿದುಕೊಳ್ಳಲು ಬರುತ್ತಿದ್ದಾರೆ…”

read more
ಕಣ್ಣು ತೆರೆಸುವ ಹೆಣ್ಣಿನ ನೈಜ ಕಥನಗಳು: ಸುಧಾ ಆಡುಕಳ ಲೇಖನ

ಕಣ್ಣು ತೆರೆಸುವ ಹೆಣ್ಣಿನ ನೈಜ ಕಥನಗಳು: ಸುಧಾ ಆಡುಕಳ ಲೇಖನ

“ಹೆಣ್ಣನ್ನು ವ್ಯಾಖ್ಯಾನಿಸುವ ಸೌಂದರ್ಯ, ಸೌಶೀಲ್ಯ, ಪಾತಿವ್ರತ್ಯ ಈ ಎಲ್ಲ ಪದಗಳಿಗೆ ಇಲ್ಲಿಯ ಪಾತ್ರಗಳು ತಮ್ಮ ಅನುಭವಲೋಕದ ಮೂಲಕವೇ ಭಿನ್ನ ವ್ಯಾಖ್ಯಾನವನ್ನು ನೀಡುತ್ತವೆ. ತನ್ನ ಮೂಗನ್ನು ಕಳಕೊಂಡು ಕುರೂಪಿಯಾದ ಶೂರ್ಪನಖಿ ಸುಂದರವಾದ ಬನವನ್ನು ಸೃಷ್ಟಿಸುತ್ತಾಳೆ. ಗಂಡನ ಅಗಲುವಿಕೆಯ ನಂತರವೂ ಮಂಡೋದರಿ ತನ್ನ ಅಲಂಕಾರವನ್ನು ತೆಗೆಯುವುದನ್ನು ವಿರೋಧಿಸುತ್ತಾಳೆ. ತನ್ನನ್ನು ವಿಚಾರಿಸುವ ಹಕ್ಕನ್ನು ತಾನು ಯಾರಿಗೂ ಕೊಡಲಾರೆ…”

read more
“ತೇಜೋ-ತುಂಗಭದ್ರಾ” ಕುರಿತು ಶ್ರೀ ತಲಗೇರಿ ಲೇಖನ

“ತೇಜೋ-ತುಂಗಭದ್ರಾ” ಕುರಿತು ಶ್ರೀ ತಲಗೇರಿ ಲೇಖನ

“ಜಗತ್ತಿನ ಬೇರೆ ಬೇರೆ ಧರ್ಮಗಳ ನಡುವೆ ಕಿತ್ತಾಟವಂತೂ ಇದ್ದೇ ಇದೆ, ಆದರೆ ಒಂದೇ ಧರ್ಮದಲ್ಲಿ ಬೇರೆ ಬೇರೆ ಸ್ತರಗಳು ಹೇಗೆ ಮತ್ತು ಅವುಗಳು ಹೇಗೆ ಪಾಶ್ಚಾತ್ಯ ದೇಶಗಳಿಗೆ ವಿಸ್ಮಯಕಾರಿಯಾದವು.. ಶ್ರೀಮಂತ ದೇಶವಾಗಿದ್ದ ಭಾರತದ ಆ ಕಾಲಘಟ್ಟದ ಆಚರಣೆಗಳೇನಾಗಿದ್ದವು, ಅದು ಹೇಗೆ ಇತರರನ್ನು ಆಕರ್ಷಿಸುತ್ತಿತ್ತು.. ಒಂದೇ ಸಮಯದಲ್ಲಿ ಬೇರೆ ಬೇರೆ ಭೂಭಾಗದಲ್ಲಿ ಒಂದೇ ವಸ್ತುವಿನ ಬೆಲೆ ಹೇಗೆ ಭಿನ್ನವಾಗಿತ್ತು.. ಮೂಲವನ್ನು ಬದಲಿಸಿದ ಮೇಲೂ ಮನುಷ್ಯ ಮೂಲಕ್ಕೆ…”

read more
ಸಾಹಿತಿ ಮಾಹಿತಿ ಕೋಶ ಎಂಬ ಮುಗಿಯದ ರೊಮ್ಯಾನ್ಸ್: ಕೆ.ವಿ. ತಿರುಮಲೇಶ್ ಲೇಖನ

ಸಾಹಿತಿ ಮಾಹಿತಿ ಕೋಶ ಎಂಬ ಮುಗಿಯದ ರೊಮ್ಯಾನ್ಸ್: ಕೆ.ವಿ. ತಿರುಮಲೇಶ್ ಲೇಖನ

“ಹಾಥಾರ್ನ್ ನ ವಿವರಗಳನ್ನು ಓದಿದ ನಂತರ ನಾನು ಕಣ್ಣೋಡಿಸಿದ ನಮೂದು ಸರ್ ವಾಲ್ಟರ್ ಸ್ಕಾಟ್ ಗೆ ಸಂಬಂಧಿಸಿದ್ದು. ಈ ಸುಪ್ರಸಿದ್ಧ ಐತಿಹಾಸಿಕ ಕಾದಂಬರಿಕಾರನ “ಐವಾನ್ ಹೊ” ಎಂ.ಎ. ಯ ಓದಿನ ಪಟ್ಟಿಯಲ್ಲಿ ಇದ್ದರೂ ನಾನದನ್ನು ಓದಿರಲಿಲ್ಲ. ನಾವು ವಿದ್ಯಾರ್ಥಿಗಳು ಪಾಠಪಟ್ಟಿಯಲ್ಲಿ ಇದ್ದುದೆಲ್ಲವನ್ನೂ ಓದುತ್ತಿರಲಿಲ್ಲ, ಅದಕ್ಕೆ ಸಮಯವೂ ಇರುತ್ತಿರಲಿಲ್ಲ. ಪ್ರಶ್ನೆ ಪತ್ರಿಕೆಯಲ್ಲಿ ಆಯ್ಕೆಗೆ ಅವಕಾಶವಿದ್ದುದರಿಂದ ನಾವು ಈ ರಿಸ್ಕನ್ನು ತೆಗೆದುಕೊಳ್ಳುತ್ತಿದ್ದೆವು.”

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ