ಕನ್ನಡ ಭಾಷೆಗೆ ಗೆಜ್ಜೆಯ ದಾರಿ… ಭಾವನೃತ್ಯದ ಸುಂದರ ಪರಿ: ಎಲ್.ಜಿ.ಮೀರಾ ಅಂಕಣ
ಭಾವಗೀತೆಯು ಕನ್ನಡ ನವೋದಯ ಸಾಹಿತ್ಯದ(1870-1940) ಸಂದರ್ಭದಲ್ಲಿ ಹುಟ್ಟಿತಲ್ಲವೇ. ಆ ಕಲಾಪ್ರಕಾರವು ಅನೇಕ ಕವಿಗಳ ಸಾಹಿತ್ಯವನ್ನು ಗೀತೆಗಳ ಮೂಲಕ, ಸಾಹಿತ್ಯ ಕ್ಷೇತ್ರದಲ್ಲಿ ಮಾತ್ರವಲ್ಲ, ಸಾಹಿತ್ಯಕ್ಷೇತ್ರದ ಆಚೆಗಿನ ದೊಡ್ಡ, ಅದರಲ್ಲೂ ಅನಕ್ಷರಸ್ಥ ಜನಸಮುದಾಯಕ್ಕೂ ತಲುಪಿಸುವ ಕೆಲಸ ಮಾಡಿತು. ನಮ್ಮ ಸಂಸ್ಕೃತಿಯು ಸಾಹಿತ್ಯಪ್ರಸರಣದಲ್ಲಿ ಭಾವಗೀತೆಯನ್ನು ದುಡಿಸಿಕೊಂಡಂತೆ ಭಾವನೃತ್ಯವನ್ನು ಸಹ ದುಡಿಸಿಕೊಳ್ಳಬಹುದು.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ
ಮೂಳೆ ಮಾಂಸದ ತಡಿಕೆ: ಸುಧಾ ಆಡುಕಳ ಅಂಕಣ
ಇವಳ ಜತೆಯಲ್ಲಿ ನಡೆಯುವ ಗೆಳತಿಯರು ಮೈ ಕೈ ತಾಗಿಸಿಕೊಳ್ಳದೇ ದೂರದೂರವೇ ನಡೆಯುವಾಗ ನೀಲಿಗೆ ಅಳುವೇ ಬಂದಂತಾಗಿತ್ತು. “ನಾ ಹೇಳದಿದ್ರೆ ನಿಮಗೆಲ್ಲ ನಾ ಮುಟ್ಟು ಅಂತ ಗೊತ್ತಾಗ್ತಾನೇ ಇರಲಿಲ್ಲ. ದಿನಾ ಶಾಲೇಲಿ ಅದೆಷ್ಟು ಹುಡುಗಿರು ಮುಟ್ಟಾಗಿ ಬರ್ತಾರೋ ಗೊತ್ತಿದ್ಯಾ?” ಎಂದು ಅವರನ್ನು ತಿದ್ದಲು ನೋಡಿದಳು. ಅದಕ್ಕವರು ಜಗ್ಗದೇ, “ಗೊತ್ತಾಗದಿದ್ರೆ ದೋಷ ಇಲ್ಲಾಂತ ನಮ್ಮಜ್ಜಿ ಹೇಳಿದಾರೆ. ಗೊತ್ತಾಗಿಯೂ ಮೈಲಿಗೆಯಾದ್ರೆ ಅದು ನಮ್ಮ ತಪ್ಪು.” ಎಂದು ಬೇರೆಯದೇ ವಾದ ಹೂಡಿದರು. ಬಸ್ ಹತ್ತಿದಾಗಲೂ ತನ್ನ ಸೀಟಿನಲ್ಲಿ ಪರಚಯದವರ್ಯಾರೂ ಕುಳಿತುಕೊಳ್ಳದಿದ್ದಾಗ ನೀಲಿ ಈ ಹುಡುಗಿಯರೆಲ್ಲ ಇಡಿಯ ಶಾಲೆಗೆ ಈ ವಿಷಯವನ್ನು ಡಂಗೂರ ಸಾರದಿದ್ದರೆ ಸಾಕೆಂದುಕೊಂಡಳು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣ
ನವರಾತ್ರಿಗೆ ಒಂದಿಷ್ಟು ಆಸ್ಟ್ರೇಲಿಯಾ ಕಥೆಗಳು: ಡಾ. ವಿನತೆ ಶರ್ಮಾ ಅಂಕಣ
ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರಿದ್ದು ಅವರು ಹಿಂದೂ ಧರ್ಮವನ್ನು ಆಚರಿಸುವುದಾಗಿ ಜನಗಣತಿಯಲ್ಲಿ ಹೇಳಿದ್ದರೆ, ಅವರ ಹಕ್ಕುಮಾನ್ಯತೆಯನ್ನು ಪರಿಗಣಿಸಿ ದೇವಸ್ಥಾನಕ್ಕೆ ಒಪ್ಪಿಗೆ ಕೊಡಬಹುದು. ಇದಾದ ಮೇಲೆ ದೇವಾಲಯ ಕಟ್ಟಡದ ನಿರ್ಮಾಣಕ್ಕೆ ಹಣ ಹೊಂದಿಸಬೇಕು. ದೇವಸ್ಥಾನ ಸ್ಥಾಪನೆಯ ಕನಸು ಕಂಡವರು ಹಗಲುರಾತ್ರಿ ಶ್ರಮವಹಿಸಿ ನಿಧಿಸಂಗ್ರಹಣೆ ಮಾಡಬೇಕು. ಕೆಲವರಿಗಂತೂ ಇದೇ ಅವರ ನಿತ್ಯಜೀವನವಾಗುತ್ತದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
ಗೂಗಲ್ ಜಮಾನಾದಲ್ಲಿ ಗುರು ಯಾರು..!: ಡಾ. ಎಲ್.ಜಿ. ಮೀರಾ ಅಂಕಣ
ಏನು ಕಲಿಯಬೇಕು ಎಂಬುದನ್ನು ಮಾತ್ರವಲ್ಲ ಅದನ್ನು ಏಕೆ ಮತ್ತು ಹೇಗೆ ಕಲಿಯಬೇಕು ಎಂಬುದನ್ನು ಕೂಡ ವಿದ್ಯಾರ್ಥಿಗಳಿಗೆ ಕಲಿಸಬಲ್ಲರು. ತಾವು ಕಲಿಸುತ್ತಿರುವ ಇಂಗ್ಲಿಷ್, ವಿಜ್ಞಾನ ಅಥವಾ ಸಮಾಜ ಪಾಠವು ತಾವು ಹೇಳುತ್ತಿರುವ ಭಾಷೆಯಲ್ಲಿ ಮಕ್ಕಳಿಗೆ ಅರ್ಥ ಆಗುತ್ತಿಲ್ಲ ಎಂದು ಅನ್ನಿಸಿದಾಗ ತಕ್ಷಣ ಅದನ್ನು ಮಕ್ಕಳ ಮಾತೃಭಾಷೆಯಲ್ಲಿ ಹೇಳಿ ಮಕ್ಕಳಿಗೆ ಅದನ್ನು ತಲುಪಿಸಬಲ್ಲರು. ಶಿಕ್ಷಕ ಅಂದರೆ ಎರಡನೆಯ ಪೋಷಕ ಎಂಬ ಮಾತಿದೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಮೂರನೆಯ ಬರಹ
ಜೇನ್ನೊಣದ ಬಿಲಿಯನ್ ಡಾಲರ್ ಕೊಡುಗೆ: ಡಾ. ವಿನತೆ ಶರ್ಮಾ ಅಂಕಣ
ನಮ್ಮ ಹವ್ಯಾಸಿ ಕೈತೋಟ ಸದಸ್ಯರಲ್ಲಿ ಒಂದು ನಿಯಮವಿದೆ – ತಾವು ಬೆಳೆಯುವ ತರಕಾರಿ ಹಣ್ಣುಗಳಿಗೆ ಯಾವುದೇ ರಾಸಾಯನಿಕ ಪದಾರ್ಥಗಳನ್ನು ಬಳಸುವಂತಿಲ್ಲ. ಹಾಗೇನಾದರೂ ಬಳಸಿದರೆ ಅಂತಹ ಆಹಾರವನ್ನು ಸದಸ್ಯರಲ್ಲಿ ಹಂಚಿಕೊಳ್ಳಬಾರದು. ಈ ನಿಯಮದಿಂದ ಸದಸ್ಯರಲ್ಲಿ ಪ್ರಕೃತಿಯ ಬಗ್ಗೆ ಕಾಳಜಿ ಹೆಚ್ಚುತ್ತದೆ. ತಮ್ಮ ತರಕಾರಿ ಹಣ್ಣು ಗಿಡಗಳನ್ನು ಕ್ರಿಮಿಕೀಟಗಳು ಭಾದಿಸುತ್ತಿವೆ ಎಂದಾದರೆ ಅವನ್ನು ತೊಲಗಿಸಲು ಸದಸ್ಯರು ತಮಗೆ ಗೊತ್ತಿರುವ ನೈಸರ್ಗಿಕ ವಿಧಾನಗಳನ್ನು ಸೂಚಿಸುತ್ತಾರೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
ಗಾರ್ಮೆಂಟ್ ಗಾಮಿನಿಯರು, ಕಿಟ್ಟಿಪಾರ್ಟಿ ಕಿನ್ನರಿಯರು: ಡಾ. ಎಲ್.ಜಿ. ಮೀರಾ ಅಂಕಣ
ಅದೃಷ್ಟದ ಮೇಲೆ ಯಾವ ಭರವಸೆಯನ್ನೂ ಇಟ್ಟುಕೊಳ್ಳದೆ `ಮನುಷ್ಯ ತನ್ನ ಅದೃಷ್ಟವನ್ನು ತಾನೇ ರೂಪಿಸಿಕೊಳ್ಳುತ್ತಾನೆʼ ಎನ್ನುವ ವಿಚಾರವಾದಿಗಳೂ ಇದ್ದಾರಲ್ಲವೇ? ಮನುಷ್ಯನ ಯಶಸ್ಸಿನಲ್ಲಿ ಪುರುಷಪ್ರಯತ್ನ, ಪರಿಶ್ರಮಗಳ ಪಾಲು ಇರುವುದು ನಿಜವಾದರೂ, ಒಟ್ಟು ಬದುಕು ಕೊನೆತನಕ ನೆಮ್ಮದಿಯಿಂದ ಸುಖಮಯವಾಗಿ ದೊಡ್ಡ ಕೊರಗಿಲ್ಲದೆ ಕಳೆಯುವುದು ಮನುಷ್ಯನ ಕೈಯಲ್ಲಿದೆಯೇ? “ಅಯ್ಯೋ, ತನ್ನ ನಾಳೆ ಹೇಗಿರುತ್ತದೆ ಎಂದು ಗೊತ್ತಿರದ ಮನುಷ್ಯನ ದುರ್ವಿಧಿಯೇ!!!..”
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಎರಡನೆಯ ಬರಹ
ಹೊಳೆಸಾಲಿನ ಮೊದಲ ಗ್ಯಾದರಿಂಗ್: ಸುಧಾ ಆಡುಕಳ ಅಂಕಣ
ಮರುದಿನ ಬೆಳಗಾಗುವ ಹೊತ್ತಿಗೆ ಮೈಕ್ ಮತ್ತದೇ ಮೂಷಿಕವಾಹನ ಹಾಡನ್ನು ಇನ್ನೂ ಮಧುರವಾಗಿ ಹಾಡತೊಡಗಿತು. ಯುವಕರ ದಂಡು ಒಂದಾಗಿ ಫಂಡಿನ ಬಂಟರನ್ನೆಲ್ಲ ಹೆಡೆಮುರಿ ಕಟ್ಟಿ ಒಂದು ದಿನದ ಮಟ್ಟಿಗೆ ಸದಾನಂದ ಹೆಗಡೆಯವರ ಉಪ್ಪರಿಗೆಯಲ್ಲಿ ಕೂಡಿಹಾಕಿತು. ಮಾಸ್ರ್ರ ಅಣತಿಯಂತೆ ಹೊಳೆಸಾಲಿನ ಲೈನ್ಮನ್ ರಾಮಪ್ಪ ಯಾರೂ ಕರೆಂಟಿನ ಡಬ್ಬಕ್ಕೆ ಕೈ ಹಾಕದಂತೆ ಟ್ರಾನ್ಸಫರ್ ಪೆಟ್ಟಿಗೆಯ ಹತ್ತಿರವೇ ಕಾವಲು ನಿಂತ.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣ
ಗಣೇಶ ತರುವ ಸುಖ, ಸಂತೋಷ…: ವಿನತೆ ಶರ್ಮಾ ಅಂಕಣ
ಈ ಪ್ರಪಂಚದ ಒಂದಷ್ಟು ದೇಶಗಳನ್ನು ಸುತ್ತುವಾಗ ಗಣೇಶನ ಖ್ಯಾತಿ ಅಚ್ಚರಿ ತಂದಿತ್ತು. ಯೂರೋಪ್, ಯುನೈಟೆಡ್ ಕಿಂಗ್ಡಮ್ ಅಲ್ಲಂತೂ ಗಣೇಶನ ಪರಿಚಯ ಸುಮಾರು ಜನರಿಗಿದೆ. ಅಂದಚೆಂದಕ್ಕೆಂದು ಅವನ ಮೂರ್ತಿಗಳನ್ನು ಇಟ್ಟಿರುವುದು ದಿಟ. ನಮ್ಮ ಆಸ್ಟ್ರೇಲಿಯದಲ್ಲೇಕೋ ಗಣಪನ ಹೆಸರು ಜನರಿಗೆ ಅಷ್ಟೊಂದು ಗೊತ್ತಿಲ್ಲ. ‘ಯು.ಕೆ. ಮತ್ತು ಅಮೇರಿಕಕ್ಕೆ ಹೋಲಿಸಿದರೆ ಆಸ್ಟ್ರೇಲಿಯಾ ಇಪ್ಪತ್ತು ವರ್ಷಗಳಷ್ಟು ಹಿಂದಿದೆ’ ಎನ್ನುವ ಜಾಣ್ಣುಡಿ ನಿಜವೇನೂ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
ಡಾ. ಎಲ್.ಜಿ. ಮೀರಾ ಹೊಸ ಅಂಕಣ “ಮೀರಕ್ಕರ” ಆರಂಭ
ಯಾಕೆ ಹೀಗೆ ಮಾಡುತ್ತೇವೆ ನಾವು ಮನುಷ್ಯರು? ನಮ್ಮ ಬದುಕಿನ ನೆಮ್ಮದಿ, ಸಂತೃಪ್ತಿಗಳನ್ನು ದುಬಾರಿ ವಸ್ತುಗಳಲ್ಲಿ, ಅಥವಾ ನಾವು ಅವುಗಳನ್ನು ಕೊಂಡೆವೆಂದು ನಮಗೆ ಮಾನ್ಯತೆ ಕೊಡುವ ಜನರ ಸ್ಪಂದನೆಗಳಲ್ಲಿ, ಮೌಲ್ಯೀಕರಣಗಳಲ್ಲಿ ಯಾಕೆ ಹುಡುಕುತ್ತೇವೆ? ಸೂಫಿ ಕಥೆಯೊಂದರಲ್ಲಿ ಬರುವ ಮುದುಕಿಯಂತೆ ಮನೆಯಲ್ಲಿ ಕಳೆದುಹೋಗಿರುವ ಬೀಗದ ಕೈಯನ್ನು ರಸ್ತೆಯಲ್ಲಿ ಬೆಳಕಿದೆ ಎಂದು ಅಲ್ಲಿ ಹುಡುಕುತ್ತಿದ್ದೇವಾ?
ಡಾ. ಎಲ್.ಜಿ. ಮೀರಾ ಹೊಸ ಅಂಕಣ “ಮೀರಕ್ಕರ”









