ಕರೆವ ಕಡಲಿನ ಹಿಂದೆ ಹಿಂದೆ: ವಿನತೆ ಶರ್ಮಾ ಅಂಕಣ
“ಇದ್ದಕ್ಕಿದ್ದಂತೆ ಎದುರಿದ್ದ ಆ ಅಗಾಧ ಜೀವಿ ಹತ್ತಿರಕ್ಕೆ ಬಂತು. ಎಷ್ಟು ಹತ್ತಿರಕ್ಕೆ ಎಂದರೆ ಅದು ಅವರಿಗೆ ಇಂದ್ರಿಯಗಳಿಗೆ ಗೋಚರವಾಗಿ, ಮನಸ್ಸಿನ ಅನುಭವವಾಗಿ ರೂಪಗೊಂಡಿತಂತೆ. ಅದನ್ನು ಮುಟ್ಟಬೇಕು ಎಂಬ ಆಸೆ ಅವರಲ್ಲಿ ಮೊಳಕೆಯೊಡೆಯಿತು. ಅದರ ಮುಖ ಅವರ ದೇಹಕ್ಕೆ ಬಲು ಹತ್ತಿರದಲ್ಲಿತ್ತು. ತಿಮಿಂಗಿಲ ತನ್ನನ್ನೇ ದಿಟ್ಟಿಸಿ ನೋಡುತ್ತಿರುವುದು ಅವರಿಗೆ ಚೆನ್ನಾಗಿ ಅರಿವಾಯ್ತು. ಮೈ ಜುಮ್ಮ್ ಎಂದಿತ್ತು.”
ಜೇಡ ಕಡಿಸಿಕೊಂಡವ ನೀನು, ಸ್ಪೈಡರ್ ಮ್ಯಾನ್ ಆಗ್ತೀಯ! : ಮುನವ್ವರ್ ಜೋಗಿಬೆಟ್ಟು ಅಂಕಣ
“ನಮ್ಮ ಹೆಂಚಿನ ಮನೆಯಲ್ಲಿ ಜೇಡರ ಬಲೆ ತೆಗೆಯುವುದೇ ಕಡು ಕಷ್ಟದ ಕೆಲಸ. ತೆಗೆದ ಒಂದೇ ವಾರಕ್ಕೆ ಇಲ್ಲಿ ಒಕ್ಕಲೇ ಇಲ್ಲ ಎನ್ನುವಷ್ಟು ಜೇಡರಬಲೆ ತುಂಬಿ ಬಿಡುತ್ತಿದ್ದವು. ಆಗೆಲ್ಲಾ ಒಂದು ಮಾತಿತ್ತು. “ಗಂಡಸರು ಜೇಡರ ಬಲೆ ತೆಗೆದರೆ ಜೇಡ ಬಲೆ ಕಟ್ಟುವುದು ನಿಲ್ಲಿಸುವುದಂತೆ” ಅಂತ. ಆದರೆ ಇದೆಷ್ಟು ಸುಳ್ಳು ಅಂದರೆ ನಾನು ಬಲೆ ತೆಗೆದ ಮೂರನೇ ದಿನಕ್ಕೆ ಮತ್ತೆ ಜೇಡಗಳು ಬಲೆ ಕಟ್ಟಲು ತೊಡಗುತ್ತಿದ್ದವು….”
ಎಪ್ಪತೈದರ ಹೊಸ್ತಿಲಲಿ ನಿಂತು: ಆಶಾ ಜಗದೀಶ್ ಅಂಕಣ
“ಕಣ್ಣಿಗೆ ಕಾಣುವ ಪ್ರಪಂಚದ ವಿಸ್ತಾರದೊಂದಿಗೆ ಗುರುತಿಸಿಕೊಳ್ಳುತ್ತಾ ನನ್ನ ಪ್ರಪಂಚವೇ ದೊಡ್ಡದೆಂದುಕೊಳ್ಳುವ ಭ್ರಾಮಕ ಸಮೂಹದ ಮುಂದೆ ಮನೆ ಕುಟುಂಬ ಎನ್ನುವ ಪುಟ್ಟ ಜಗತ್ತಿನ ಅಗಾಧ ಆಳ ವಿಸ್ತಾರದೊಂದಿಗೆ ಮುಖಾಮುಖಿಯಾಗುತ್ತಾ ಅದನ್ನು ತಮ್ಮ ಬರಹದಲ್ಲಿ ತಂದವರು ವೈದೇಹಿಯವರು. ಅವರಿಗೆ ತಾವು ಎಂಥದ್ದೋ ಸಾಧನೆ ಮಾಡಿರುವೆ ಎನ್ನುವ ಭ್ರಮೆಯಿಲ್ಲ. ತನಗೆ ತಿಳಿಯದ್ದೂ ಇಲ್ಲಿದೆ…”
ಕಲಾಭಿರುಚಿಯ ಹಲವು ಮುಖಗಳು: ರೂಪಶ್ರೀ ಕಲ್ಲಿಗನೂರ್ ಅಂಕಣ
“ಹೆಚ್ಚಾಗಿ ಭಾರತೀಯ ಸಂಗೀತವನ್ನು ಕೇಳುವ ನನಗೆ ಪಾಪ್ ಮತ್ತು ರಾಕ್ ಸಂಗೀತ ಪ್ರಾಕಾರಗಳು ಅಷ್ಟು ರುಚಿಸಿರಲಿಲ್ಲ. ಆದರೆ ಇವೆರೆಡು ಹಾಡುಗಳು ಮನಸ್ಸಿಗೆ ಮುದ ನೀಡಿದ್ದವು ಅನ್ನೋದನ್ನು ತಳ್ಳಿಹಾಕಲಾರೆ. ಹಾಗಾಗಿ ಚಿತ್ರದ ಬಗ್ಗೆ ಕೊಂಚ ನಿರೀಕ್ಷೆ ಇಟ್ಟುಕೊಂಡೇ “ಬೊಹೇಮಿಯನ್ ರ್ಯಾಪ್ಸೊಡಿ”ಯನ್ನು ನೋಡಿದ್ದೆ. ಆ ಮೊದಲು ಫ್ರೆಡ್ಡಿಯ ಪೂರ್ವಾಪರವೇನೂ ನನಗೆ ಗೊತ್ತಿರಲಿಲ್ಲ.”
ಹತ್ತನೆಯ ರಸದ ಕುರಿತು (ಅನ್ನಮಾಚಾರ್ಯರ ಒಂದು ಕೀರ್ತನೆಯ ಸುತ್ತ): ದಿಲೀಪ್ ಕುಮಾರ್ ಅಂಕಣ
“ಭಾಷಾಂತರ ಅನ್ನುವುದು ಚಲನೆ ಮತ್ತು ಬದಲಾವಣೆ ಅನ್ನುವುದನ್ನ ಒಪ್ಪಿದರೂ ಮೂಲ ಪಠ್ಯನಿಷ್ಟವಾಗುವುದು ಎಲ್ಲಾ ಕಾಲದಲ್ಲೂ ಬಹಳ ಮುಖ್ಯವಾಗುತ್ತದೆ. ಆ ಚಲನೆ ಅರ್ಥಸ್ಥರದಲ್ಲಿ ಮಾತ್ರ ಆದಷ್ಟು ಉಪಯೋಗ. ಪರಿಚಯಾತ್ಮಕವಾಗಿ ಮೊದಲಬಾರಿಗೆ ನಮ್ಮ ಭಾಷೆಗೆ ಭಾಷಾಂತರ ಮಾಡುವಾಗಲಂತೂ ಈ ಚಲನೆ ಮತ್ತು ಬದಲಾವಣೆಯನ್ನು….’
ಶಿಕ್ಷಣ ಮತ್ತು ಮೀಸಲಾತಿಗಳು: ಮಧುಸೂದನ್ ವೈ.ಎನ್ ಅಂಕಣ
“ಮ್ಯಾನೇಜ್ಮೆಂಟ್ ಕೋಟಾದಿಂದ ಬಂದವರು ಕೆಲಸ ಮಾಡುವಾಗ ಒದ್ದಾಡುವುದನ್ನು ಕಣ್ಣಾರೆ ಕಂಡಿದ್ದೇನೆ. ಸಂಬಂಧಿಕರ ಸ್ನೇಹಿತರ ಸಂಪರ್ಕ ಬಳಸಿ ಕಂಪನಿ ಸೇರಿಕೊಂಡುಬಿಡುತ್ತಾರೆ. ಹಂಗೂ ಹಿಂಗೂ ಕಾಲ ತಳ್ಳಿ ಒಂದು ಮ್ಯಾನೇಜ್ಮೆಂಟು ಕೋರ್ಸು ಮುಗಿಸಿ ಮ್ಯಾನೇಜ್ಮೆಂಟ್ ವಲಯಕ್ಕೆ ಹಾರುತ್ತಾರೆ. ಇಂಗ್ಲೀಷು ಮತ್ತು ಎಲೈಟಿಸ್ಟ್ ಅಪ್ಪಿಯರೆನ್ಸು – ಅಲ್ಲಿ ಬೇಕಾದ ಬಹುಮುಖ್ಯವಾದ ಅಸ್ತ್ರಗಳು. ಕೋಟಿಯಷ್ಟು ಹಣ ಸುರಿದು ಡಿಗ್ರಿ ಪಡೆದ ಇವರ ಪ್ರಾಥಮಿಕ ಶಿಕ್ಷಣವು ಇಂಟರ್ ನ್ಯಾಶನಲ್ ಕಾನ್ವೆಂಟುಗಳಲ್ಲಾಗಿದ್ದು ಸಹಜವಾಗಿಯೆ ಅವುಗಳನ್ನು ಒಲಿಸಿಕೊಂಡು ಬಂದಿರುತ್ತಾರೆ.”
ದೇಸಿ ವಿದ್ಯಾರ್ಥಿಗಳ ಇನ್ನಷ್ಟು ಕಥೆಗಳು: ಡಾ. ವಿನತೆ ಶರ್ಮ ಅಂಕಣ
“ಭಾರತದಲ್ಲಿ ಸರ್ಜನ್ ಆಗಿದ್ದ ಗಂಡನಿಗೆ ಕೆಲಸವಿಲ್ಲದೇ ನಿರುದ್ಯೋಗಿ ಪಟ್ಟ ಸಿಕ್ಕು ತಲೆಕೆಟ್ಟಂತಾಗಿತ್ತು. ಇಲ್ಲಿನ ಕ್ರಮ, ಪದ್ಧತಿಯಂತೆ ದಂತವೈದ್ಯನಾಗಿ ನೋಂದಣಿ ಮಾಡಿಸಲು, ತನ್ನ ವೃತ್ತಿಯನ್ನು ಪ್ರಾಕ್ಟಿಸ್ ಮಾಡಲು ಪರವಾನಗಿ ಪಡೆಯಬೇಕಿತ್ತು. ಅದಕ್ಕಾಗಿ ಬಹುಕಷ್ಟದ ಪರೀಕ್ಷೆಗಳನ್ನು ಬರೆದು ಉತ್ತಮ ಅಂಕಗಳನ್ನು ಪಡೆಯಬೇಕಿತ್ತಂತೆ. ಅದಕ್ಕಾಗಿ ಆತ ಹೆಣಗಾಡುತ್ತಿದ್ದ. ಅವರಿಬ್ಬರ ಮಧ್ಯೆ ಆ ಐದು ವರ್ಷದ ಬಾಲಕ ಕಂಗೆಟ್ಟುಹೋಗಿದ್ದ.”
ಕೇರಳ ಕಾಂತೆಯರು: ಆಶಾ ಜಗದೀಶ್ ಅಂಕಣ
“ಸ್ತ್ರೀವಾದಿ ಎನ್ನುವುದರ ಅರ್ಥ ಸ್ತ್ರೀವಾದಿ ಅಂತ ಮಾತ್ರ ಅಷ್ಟೇ… ಸ್ತ್ರೀವಾದಿ ಎಂದರೆ ಪುರದ ದ್ವೇಷಿ ಎಂದಲ್ಲ. ಎಂದಾಗಬೇಕಾಗೂ ಇಲ್ಲ. ಈ ಭಾವದ ಅದೆಷ್ಟೋ ಚಿಂತಕಿಯರು ನಮ್ಮ ನಡುವಿದ್ದಾರೆ. ಅವರ ಯೋಚನೆಗಳ ಮೂಲ ಪ್ರಚೋದನೆ ಏನೇ ಇರಲಿ ಇಂದಿಗೂ ತಮ್ಮ ಬದುಕನ್ನು ಹಂಚಿಕೊಂಡ ಪುರುಷರನ್ನು ದ್ವೇಷಿಸಿ ಸ್ತ್ರೀವಾದವನ್ನು ಕಟ್ಟಬೇಕೆಂದು ಪ್ರಚೋದಿಸಿದವರನ್ನು ಕಾಣುವುದು ಕಷ್ಟ.”
ಜೋಗಿಬೆಟ್ಟುವಿನಲ್ಲಿ ಚಿರತೆ: ಮುನವ್ವರ್ ಜೋಗಿಬೆಟ್ಟು ಅಂಕಣ
“ಒಮ್ಮೆ ನಮ್ಮಜ್ಜಿ ಮನೆಯಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ದನವೊಂದು ಕಳವಾಯಿತಂತೆ. ಎಲ್ಲಿ ಹುಡುಕಿದರೂ ಪತ್ತೆ ಇಲ್ಲ. ಮುತ್ತಜ್ಜಿಯ ಧ್ವನಿ ಗುರುತಿಸಿ ಬರುತ್ತಿದ್ದ ದನ ಎಷ್ಟು ಕರೆದರೂ ಬಾರಲೇ ಇಲ್ಲವಂತೆ. ಕೊನೆಗೆ ಆಗ ಸಣ್ಣವರಿದ್ದ ನನ್ನಜ್ಜಿಯನ್ನು ಕೈಲಿ ಹಿಡಿದುಕೊಂಡು ಮುತ್ತಜ್ಜಿ ಹುಡುಕಲೆಂದು ಹೊರಟರಂತೆ. ಅದು ಸಂಜೆಯ ಹೊತ್ತು, ಮುತ್ತಜ್ಜಿ ಮೊದಲಡಿ ಬಳಿಗೆ “ದಾ ದಾ” ಎಂದು ಕರೆಯಬೇಕಾದರೆ..”









