Advertisement
ಅಭಿಷೇಕ ಬಳೆ ಮಸರಕಲ್ ಬರೆದ ಈ ದಿನದ ಕವಿತೆ

ಅಭಿಷೇಕ ಬಳೆ ಮಸರಕಲ್ ಬರೆದ ಈ ದಿನದ ಕವಿತೆ


ಶಹರಕ್ಕೆ
ಬಂದ
ಮತ್ತೊಬ್ಬ ಹುಚ್ಚ

ಜಂಗಮ ಫಕೀರನ ಜೋಳಿಗೆ
ಹೆಗಲಿಗೇರಿಸಿಕೊಂಡು
ಗೋಡೆ ಕಟ್ಟುವ ಕೈಗಳಿಗೆ
ದ್ವೇಷ ಬಿತ್ತುವ ಮನಸುಗಳಿಗೆ
ಕತ್ತು ಸೀಳುವ ತಲ್ವಾರ್‌ಗಳಿಗೆ
ಕಲ್ಲಂಗಡಿ ಒಡೆಯುವ ಕಲ್ಲೆದೆಗಳಿಗೆ
ಮದ್ದು ಗುಂಡು ಎಸೆಯುವ ಗಡಿಗಳಿಗೆ
ಮೈಲಿಗೆ ಎನ್ನುವ ಗುಡಿ ಮಸೀದಿ ಚರ್ಚ್ ಗಳಿಗೆ
ತಾಯಿಗಿಂತ ದೇವರು ದೊಡ್ಡವನು ಎನ್ನುವ ಧರ್ಮಗ್ರಂಥದ ಹಾಳೆಗಳಿಗೆ
ಮನುಷ್ಯ ಪ್ರೀತಿಯ
ಹಂಚಲು ಹೊರಟಿದ್ದಾನೆ

ಅರೇ
ಇವನೆಂಥ ಹುಚ್ಚ
ಇಲ್ಲಿ
ಪ್ರೀತಿ, ಮಾನವೀಯತೆ
ಕರುಣೆ, ಅಂತಃಕರಣ ಬಹು
ತುಟ್ಟಿ ಸರಕುಗಳು

ಹೌದು
ಈ ದುನಿಯಾದಲ್ಲಿ
ಹುಚ್ಚರಷ್ಟೇ ಪ್ರೀತಿಯನ್ನು ಹಂಚುತ್ತಾರೆ
ಮತ್ತು ಮನುಷ್ಯರು ದ್ವೇಷವನ್ನು

ಅಭಿಷೇಕ್ ಬಳೆ ರಾಯಚೂರು ಜಿಲ್ಲೆಯ ಮಸರಕಲ್ ಊರಿನವರು.
ಬಿ.ಎಸ್ಸಿ, ಬಿ.ಎಡ್ ವ್ಯಾಸಂಗ ಮಾಡಿದ್ದಾರೆ
ಓದು ಮತ್ತು ಕವಿತೆ ರಚನೆ ಇವರ ಹವ್ಯಾಸಗಳು

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ