Advertisement
ಅಭಿಷೇಕ ಬಳೆ ಮಸರಕಲ್ ಬರೆದ ಈ ದಿನದ ಕವಿತೆ

ಅಭಿಷೇಕ ಬಳೆ ಮಸರಕಲ್ ಬರೆದ ಈ ದಿನದ ಕವಿತೆ


ಶಹರಕ್ಕೆ
ಬಂದ
ಮತ್ತೊಬ್ಬ ಹುಚ್ಚ

ಜಂಗಮ ಫಕೀರನ ಜೋಳಿಗೆ
ಹೆಗಲಿಗೇರಿಸಿಕೊಂಡು
ಗೋಡೆ ಕಟ್ಟುವ ಕೈಗಳಿಗೆ
ದ್ವೇಷ ಬಿತ್ತುವ ಮನಸುಗಳಿಗೆ
ಕತ್ತು ಸೀಳುವ ತಲ್ವಾರ್‌ಗಳಿಗೆ
ಕಲ್ಲಂಗಡಿ ಒಡೆಯುವ ಕಲ್ಲೆದೆಗಳಿಗೆ
ಮದ್ದು ಗುಂಡು ಎಸೆಯುವ ಗಡಿಗಳಿಗೆ
ಮೈಲಿಗೆ ಎನ್ನುವ ಗುಡಿ ಮಸೀದಿ ಚರ್ಚ್ ಗಳಿಗೆ
ತಾಯಿಗಿಂತ ದೇವರು ದೊಡ್ಡವನು ಎನ್ನುವ ಧರ್ಮಗ್ರಂಥದ ಹಾಳೆಗಳಿಗೆ
ಮನುಷ್ಯ ಪ್ರೀತಿಯ
ಹಂಚಲು ಹೊರಟಿದ್ದಾನೆ

ಅರೇ
ಇವನೆಂಥ ಹುಚ್ಚ
ಇಲ್ಲಿ
ಪ್ರೀತಿ, ಮಾನವೀಯತೆ
ಕರುಣೆ, ಅಂತಃಕರಣ ಬಹು
ತುಟ್ಟಿ ಸರಕುಗಳು

ಹೌದು
ಈ ದುನಿಯಾದಲ್ಲಿ
ಹುಚ್ಚರಷ್ಟೇ ಪ್ರೀತಿಯನ್ನು ಹಂಚುತ್ತಾರೆ
ಮತ್ತು ಮನುಷ್ಯರು ದ್ವೇಷವನ್ನು

ಅಭಿಷೇಕ್ ಬಳೆ ರಾಯಚೂರು ಜಿಲ್ಲೆಯ ಮಸರಕಲ್ ಊರಿನವರು.
ಬಿ.ಎಸ್ಸಿ, ಬಿ.ಎಡ್ ವ್ಯಾಸಂಗ ಮಾಡಿದ್ದಾರೆ
ಓದು ಮತ್ತು ಕವಿತೆ ರಚನೆ ಇವರ ಹವ್ಯಾಸಗಳು

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ