ಶಹರಕ್ಕೆ
ಬಂದ
ಮತ್ತೊಬ್ಬ ಹುಚ್ಚ

ಜಂಗಮ ಫಕೀರನ ಜೋಳಿಗೆ
ಹೆಗಲಿಗೇರಿಸಿಕೊಂಡು
ಗೋಡೆ ಕಟ್ಟುವ ಕೈಗಳಿಗೆ
ದ್ವೇಷ ಬಿತ್ತುವ ಮನಸುಗಳಿಗೆ
ಕತ್ತು ಸೀಳುವ ತಲ್ವಾರ್‌ಗಳಿಗೆ
ಕಲ್ಲಂಗಡಿ ಒಡೆಯುವ ಕಲ್ಲೆದೆಗಳಿಗೆ
ಮದ್ದು ಗುಂಡು ಎಸೆಯುವ ಗಡಿಗಳಿಗೆ
ಮೈಲಿಗೆ ಎನ್ನುವ ಗುಡಿ ಮಸೀದಿ ಚರ್ಚ್ ಗಳಿಗೆ
ತಾಯಿಗಿಂತ ದೇವರು ದೊಡ್ಡವನು ಎನ್ನುವ ಧರ್ಮಗ್ರಂಥದ ಹಾಳೆಗಳಿಗೆ
ಮನುಷ್ಯ ಪ್ರೀತಿಯ
ಹಂಚಲು ಹೊರಟಿದ್ದಾನೆ

ಅರೇ
ಇವನೆಂಥ ಹುಚ್ಚ
ಇಲ್ಲಿ
ಪ್ರೀತಿ, ಮಾನವೀಯತೆ
ಕರುಣೆ, ಅಂತಃಕರಣ ಬಹು
ತುಟ್ಟಿ ಸರಕುಗಳು

ಹೌದು
ಈ ದುನಿಯಾದಲ್ಲಿ
ಹುಚ್ಚರಷ್ಟೇ ಪ್ರೀತಿಯನ್ನು ಹಂಚುತ್ತಾರೆ
ಮತ್ತು ಮನುಷ್ಯರು ದ್ವೇಷವನ್ನು

ಅಭಿಷೇಕ್ ಬಳೆ ರಾಯಚೂರು ಜಿಲ್ಲೆಯ ಮಸರಕಲ್ ಊರಿನವರು.
ಬಿ.ಎಸ್ಸಿ, ಬಿ.ಎಡ್ ವ್ಯಾಸಂಗ ಮಾಡಿದ್ದಾರೆ
ಓದು ಮತ್ತು ಕವಿತೆ ರಚನೆ ಇವರ ಹವ್ಯಾಸಗಳು