Advertisement
ಎಂ. ಎಸ್. ಪ್ರಕಾಶ್ ಬಾಬು ಬರೆದ ಈ ದಿನದ ಕವಿತೆ

ಎಂ. ಎಸ್. ಪ್ರಕಾಶ್ ಬಾಬು ಬರೆದ ಈ ದಿನದ ಕವಿತೆ

ನಾ ಸಿಕ್ಕಲಿಲ್ಲ

ನನಗೆ ಗೊತ್ತು
ನೀನು ಹುಡುಕುತ್ತಿದ್ದೆ
ಆದರೆ..
ನನ್ನನ್ನಲ್ಲ
ನಾ ನಿನಗೆ
ಸಿಕ್ಕಲಿಲ್ಲ

ಕಟ್ಟೆಯ ಕೆಳಗೆ
ಮೆಟ್ಟಿಲ ಪಕ್ಕ
ಬಚ್ಚಲಲ್ಲಿ
ಹಿತ್ತಲಲ್ಲಿ
ಯಲ್ಲೆಂದರಲ್ಲಿ
ಎಲ್ಲಿ ಹುಡುಕಿದರೂ
ನಾ ಸಿಕ್ಕಲಿಲ್ಲ

ತಿಳಿಯಲಿಲ್ಲ ನಾನೇನೆಂದು
ನಿನಗೆ
ನೀನೇನೆಂದು ತಿಳಿಯಲಿಲ್ಲ
ನನಗೆ,
ತಿಳಿಯುವ ಜರೂರತ್ತು
ಇರಲಿಲ್ಲ
ಇಬ್ಬರಿಗೂ
ನಾ ನಿನಗೆ
ನೀ ನನಗೆ
ಸಿಕ್ಕಲಿಲ್ಲ

ಪುರಾತನ ಸಿಕ್ಕುಗಳಲ್ಲಿ
ಸಿಕ್ಕಿದ್ದೆವು
ನಾವಿಬ್ಬರೂ
ಬಿಡಿಸಿಕೊಳ್ಳಬೇಕಿನ್ನು
ಸಿಕ್ಕುಗಳ ಬಾಚಿ
ಒಬ್ಬರನ್ನೊಳಬ್ಬರು ಹೊಕ್ಕು
ಹುಡುಕಿದರೂ
ಸಿಕ್ಕಲಿಲ್ಲ

ಭುವಿಮುಗಿಲಿಗೆಷ್ಟು
ಅಂತರ?
ಹಿಗ್ಗಿದಷ್ಟೂ ಕುಗ್ಗಿದೆವು
ಬಸಿರುಗಟ್ಟುವ ಸಂಜೆ
ಮತ್ತೆ ನೀ ನೆನಪಾದೆ
ಆದರೆ ನಾ ನಿನಗೆ
ನೀ ನನಗೆ
ಎಂದೂ ದಕ್ಕುವುದೂ
ಇಲ್ಲ

About The Author

ಎಂ.ಎಸ್. ಪ್ರಕಾಶ್ ಬಾಬು

ಚಿತ್ರ ನಿರ್ದೇಶಕ,ಕಥಾಲೇಖಕ ಮತ್ತು ಕಲಾವಿದ. ‘ಅತ್ತಿಹಣ್ಣು ಮತ್ತು ಕಣಜ’ ಇವರ ಪ್ರಶಸ್ತಿ ವಿಜೇತ ಚಿತ್ರ. ಚಿತ್ರದುರ್ಗ ಹುಟ್ಟೂರು.ಈಗ ಇರುವುದು ಬೆಂಗಳೂರು.

1 Comment

  1. Giridhar Khasnis

    ತುಂಬಾ ಚೆನ್ನಾಗಿದೆ, ಪ್ರಕಾಶ್.

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ