Advertisement
ಗೀತಾ ಹೆಗಡೆ ಬರೆದ ಈ ದಿನದ ಕವಿತೆ

ಗೀತಾ ಹೆಗಡೆ ಬರೆದ ಈ ದಿನದ ಕವಿತೆ

ಪ್ರಹಸನ

ಎಂದಾದರೂ ನಿಮಗನಿಸಿತ್ತೆ?
ಜಗತ್ತಿಗೆ ಸಾಕ್ಷಿ ಕೊಡಬೇಕಾ-
ಗಬಹುದೆಂದು;
ನೀವು ಬಯಸಿದ್ದಿರಿ- ಬದುಕಲು-
ನಿಮ್ಮದೇ ಬದುಕನ್ನು- ಎಂದು..

ಲಕ್ಷ- ಕೋಟಿ ಜನ ಉಸಿರಾಡಿದ
ಗಾಳಿಯೇ ಇರಬಹುದು;
ಆದರೆ- ಶ್ವಾಸಕೋಶದೊಳಗೆ ಹರಿದಾಡಿದ
ಉಸಿರು- ನಿಮ್ಮದೇ-
ಆಗಿದೆ ಎಂದು..

ಹೂವು-ಹಕ್ಕಿಗಳೆಲ್ಲ ವಿಶ್ವಾತ್ಮನ ಸೃಷ್ಟಿ-
ಯೇ ಇರಬಹುದು;
ಆದರೆ- ಅವು ತಂದ ಮುದ, ಹಿಗ್ಗು
ನಿಮ್ಮೊಳಗ ಅರಳಿಸುವುದೆಂದು..

ಒಡಂಬಡಿಕೆಗಳ ಕಂತೆ-ಕಂತೆ
ಕಂತಿನಲ್ಲೂ ಸಿಗಬಹುದೆಲ್ಲೆಲ್ಲೂ;
ಆದರೆ- ಕ್ಷಣಭಂಗುರತೆಯ ತಿರುಳ
ನೀವು ಹೀರಿಕೊಂಡಿರುವಿರೆಂದು..

ಏನು, ಎತ್ತ, ಏಕೆ… ಪ್ರಶ್ನೆಗಳೇ
ಕಾಡಬಹುದು ದನಿಯಾಗಿ;
ಆದರೆ- ನಿಗೂಢತೆಯ ಒಡಪು
ಬಿಡಿಸಬೇಕಾದವರು-
ನೀವೇ- ಎಂದು..

ಹುಸಿನಗುವಿನ ಕೊಸರಾಟಕೆ
ಬುದ್ಬುದದ ಜೀವರಾಶಿ
ಬೀಳುತೇಳುವ ಪ್ರಹಸನ!

ಅನಿಸಿತ್ತೆ ನಿಮಗೆ- ಎಂದಾದರೂ?
ಒಂದಲ್ಲ- ಒಂದು ದಿನ-
ಸ್ವಸ್ತಿವಾಚನದಭಯದಾನ-
ಒದಗೀತು ಅಯಾಚಿತ- ಎಂದು..

ಅಥವಾ,

ಒಂದು ಕವಿತೆ ಮೂಡಿದ ಕ್ಷಣ!-
ಮೀರಬಲ್ಲಿರಿ ನೀವು ಎಲ್ಲ-
ಎಲ್ಲವನ್ನೂ;
ಸಾಕ್ಷಿ-ಪುರಾವೆಗಳ-
ಹಂಗು-ಗೊಡವೆಯನ್ನೂ!!- ಎಂದು.

About The Author

ಗೀತಾ ಹೆಗಡೆ, ದೊಡ್ಮನೆ

ಕವಯತ್ರಿ, ಲೇಖಕಿ ಗೀತಾ ಹೆಗಡೆಯವರಿಗೆ ಸಂಗೀತ ಮತ್ತು ಪ್ರಕೃತಿಯಲ್ಲಿ ಆಸಕ್ತಿ. ‘ಅಕ್ಷರ ಚೈತನ್ಯ’ ಇವರ ಪ್ರಕಟಿತ ಕೃತಿ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ