Advertisement
ಡಾ. ಚಂದ್ರಮತಿ ಸೋಂದಾ ಬರೆದ ಈ ದಿನದ ಕವಿತೆ

ಡಾ. ಚಂದ್ರಮತಿ ಸೋಂದಾ ಬರೆದ ಈ ದಿನದ ಕವಿತೆ

ಅರೆ ಎಲ್ಲಿ ಹೋದನೀತ
ಲೋಕ ಕಾಯುತ್ತಿದೆ
ಎಂಥ ಗೈರು ಹಾಜರಿ!
ಕೆಲವೊಮ್ಮೆ ಬರುತ್ತಾನೆ
ದಂಡು ದಳವಾಯಿ ಸಮೇತ
ಆ ಆರ್ಭಟಕ್ಕೆ ಲೋಕ ದಿಗಿಲು
ಸಾಕು ಮಹರಾಯ ಹೊರಡು
ಎಷ್ಟು ಬಿನ್ನಹ ಪ್ರಾರ್ಥನೆ
ಊಹೂಂ ಬರೀ ಕಿವುಡು

ಸೂರ್ಯ ದೇವನ ನಗು
ಜೀವಸಂಕುಲ ತತ್ತರ
ಮಾರುತ ಕಳೆದು ಹೋಗಿದ್ದಾನೆ
ಬದಲಾಯಿತೆ ನೀರದ ನಕ್ಷೆ
ಬೇವು ಬೆಲ್ಲ ನಿಜವೇ
ಯುಗಾದಿ ಪುರುಷ
ನಿನ್ನೊಂದಿಗೆ ಕರೆದು ತಾ
ವರುಣನನ್ನೂ ಮಹಾರಾಯ

ಮಾಸ್ತರಿಕೆ ಮರೆತನೇ ಭಗವಂತ
ಲೋಕದ ನಂಬಿಕೆ ಹಾಗಂತ
ಹಾಜರಿ ಕರೆಯೋ ದೇವಾ
ಬಂದಾರು ಮೇಘ ಪವನರು
ಇಲ್ಲ ಅಭಿಷೇಕ ನಿನಗೂ ವರ್ಜ್ಯ

About The Author

ಡಾ. ಚಂದ್ರಮತಿ ಸೋಂದಾ

ಡಾ. ಚಂದ್ರಮತಿ ಸೋಂದಾ ಅವರಿಗೆ ಸಾಹಿತ್ಯದಲ್ಲಿ ಆಸಕ್ತಿ. ‘ಮೈಸೂರು ಮಿತ್ರ’ದಲ್ಲಿ ಬರೆದ ಇವರ ಅಂಕಣಗಳು ಆರು ಸಂಕಲನಗಳಲ್ಲಿ ಪ್ರಕಟವಾಗಿವೆ. ಮಹಿಳಾಪರ ಚಿಂತನೆ ಅವರ ಆದ್ಯತೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ