Advertisement
ಡಾ. ಚಂದ್ರಮತಿ ಸೋಂದಾ ಬರೆದ ಈ ದಿನದ ಕವಿತೆ

ಡಾ. ಚಂದ್ರಮತಿ ಸೋಂದಾ ಬರೆದ ಈ ದಿನದ ಕವಿತೆ

ಅರೆ ಎಲ್ಲಿ ಹೋದನೀತ
ಲೋಕ ಕಾಯುತ್ತಿದೆ
ಎಂಥ ಗೈರು ಹಾಜರಿ!
ಕೆಲವೊಮ್ಮೆ ಬರುತ್ತಾನೆ
ದಂಡು ದಳವಾಯಿ ಸಮೇತ
ಆ ಆರ್ಭಟಕ್ಕೆ ಲೋಕ ದಿಗಿಲು
ಸಾಕು ಮಹರಾಯ ಹೊರಡು
ಎಷ್ಟು ಬಿನ್ನಹ ಪ್ರಾರ್ಥನೆ
ಊಹೂಂ ಬರೀ ಕಿವುಡು

ಸೂರ್ಯ ದೇವನ ನಗು
ಜೀವಸಂಕುಲ ತತ್ತರ
ಮಾರುತ ಕಳೆದು ಹೋಗಿದ್ದಾನೆ
ಬದಲಾಯಿತೆ ನೀರದ ನಕ್ಷೆ
ಬೇವು ಬೆಲ್ಲ ನಿಜವೇ
ಯುಗಾದಿ ಪುರುಷ
ನಿನ್ನೊಂದಿಗೆ ಕರೆದು ತಾ
ವರುಣನನ್ನೂ ಮಹಾರಾಯ

ಮಾಸ್ತರಿಕೆ ಮರೆತನೇ ಭಗವಂತ
ಲೋಕದ ನಂಬಿಕೆ ಹಾಗಂತ
ಹಾಜರಿ ಕರೆಯೋ ದೇವಾ
ಬಂದಾರು ಮೇಘ ಪವನರು
ಇಲ್ಲ ಅಭಿಷೇಕ ನಿನಗೂ ವರ್ಜ್ಯ

About The Author

ಡಾ. ಚಂದ್ರಮತಿ ಸೋಂದಾ

ಡಾ. ಚಂದ್ರಮತಿ ಸೋಂದಾ ಅವರಿಗೆ ಸಾಹಿತ್ಯದಲ್ಲಿ ಆಸಕ್ತಿ. ‘ಮೈಸೂರು ಮಿತ್ರ’ದಲ್ಲಿ ಬರೆದ ಇವರ ಅಂಕಣಗಳು ಆರು ಸಂಕಲನಗಳಲ್ಲಿ ಪ್ರಕಟವಾಗಿವೆ. ಮಹಿಳಾಪರ ಚಿಂತನೆ ಅವರ ಆದ್ಯತೆ.

Leave a comment

Your email address will not be published. Required fields are marked *

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ