Advertisement
ಡಾ.ಪ್ರೇಮಲತ ಬಿ. ಬರೆದ ಈ ದಿನದ ಕವಿತೆ

ಡಾ.ಪ್ರೇಮಲತ ಬಿ. ಬರೆದ ಈ ದಿನದ ಕವಿತೆ

ಕಾಲ ನಿಯಮ

ಕರಿಹಾವ ಬಿಲದೊಳಗೆ
ಬಿಳಿದೊಗಲ ಜಾರು ಮೈ
ಗೋಡೆಗಳು ಹೊರಗೊಳಗೆ
ಏರಲಾಗದು ಸಿಗದೆ ಕೈ

ಹಸಿರಿಹುದು ಹೊರಗಿನ ಬಯಲು
ಒಳಗಿಣುಕುತಿಹ ಬೇರು
ದಾಟಲಾಗದ ಬೇಲಿಗಳ ಮೀರಿ
ಕರೆದು ಮಿನುಗುತಿಹ ಬಾನು

ಕತ್ತಲಿನ ಕೊರಕಲೊಳು ಮುಗಿಯದ
ಕ್ರಮಾನುಗತ ಅಧಿಪತ್ಯ
ಚಿಟ್ಟೆಗಳು ಹೂತಿಟ್ಟ ಕನಸುಗಳು
ಪಿಸುಗುಟ್ಟಿ ಬೆಳೆಯುತಿವೆ ಸತತ

ಎದ್ದು ನಿಂತಿಹ ಎತ್ತರದ ಗೋಪುರಗಳು
ಅಡಗಿಸಿಟ್ಟಿವೆ ನೂರು ಭಾವಗಳು
ಒಂದೊಮ್ಮೆ ಅಭೇದಿತ ಗೋಡೆಗಳು
ಸಿಡಿದು ಹಾರಿವೆ ಇಂದು ಕುದ್ದು ಆಕ್ರೋಶ

ದೂರ ದೂರಕೆ ಜನ್ಮ ಜನ್ಮಾಂತರದ
ಹೊಸತಿಗೆ , ಮರುಹುಟ್ಟಿಗೆ
ಒಡಲಾಳದ ಒತ್ತಡದಿ ವಿಷಯ
ವಸ್ತುಗಳ ಬಯಸಿ ಮುರಿದು ನೇಮನಿಷ್ಠೆ

ಹೊಸತಾಗುತ್ತವೆ ಮರಳಿ ಪ್ರಕೃತಿ ಬಯಲು, ಬಾನು
ಪರಂಪಾನುಗತ ಸಂಪ್ರದಾಯಗಳನು ಮೀರಿ
ಹೊಸ ಧಾರಣೆ, ಚಿತಾವಣೆ, ಇಲ್ಲದಿರುವುದೆ
ಕಾಲನಿಯಮದಲಿ ಬದಲಾಗದ್ದು ಏನು?

About The Author

ಡಾ.ಪ್ರೇಮಲತ

ಡಾ. ಪ್ರೇಮಲತಾ ಲೇಖಕಿ ಮೂಲತಃ ತುಮಕೂರಿನವರು, ಕಳೆದ ೨೧ ವರ್ಷಗಳಿಂದ ಇಂಗ್ಲೆಂಡಿನಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ದಂತವೈದ್ಯೆ. ಹವ್ಯಾಸಿ ಬರಹಗಾರ್ತಿ. ‘ಐದು ಬೆರಳುಗಳುʼ, ‘ತಿರುವುಗಳುʼ, ‘ನಂಬಿಕೆಯೆಂಬ ಗಾಳಿಕೊಡೆʼ ಇವರ ಪ್ರಕಟಿತ ಕಥಾಸಂಕಲನಗಳು. ‘ಕೋವಿಡ್‌ ಡೈರಿʼ ಎಂಬ ಅಂಕಣ ಬರಹಗಳ ಪುಸ್ತಕ ಮತ್ತು ‘ಬಾಯೆಂಬ ಬ್ರಮ್ಹಾಂಡʼ ಇವರ ಇತರೆ ಪುಸ್ತಕಗಳು. ‘ಐದು ಬೆರಳುಗಳುʼ ಕಥಾ ಸಂಕಲನಕ್ಕೆ ಡಾ.ಹೆಚ್. ಗಿರಿಜಮ್ಮ ಪ್ರಶಸ್ತಿ ದೊರಕಿದೆ.

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ