Advertisement
ಡಾ. ಪ್ರೇಮಲತ ಬಿ. ಬರೆದ ಈ ದಿನದ ಕವಿತೆ

ಡಾ. ಪ್ರೇಮಲತ ಬಿ. ಬರೆದ ಈ ದಿನದ ಕವಿತೆ

ಹಾಯ್…. ಹೇಗಿದ್ದಿ?

”ಹಾಯ್, ಹೇಗಿದ್ದಿ?’ ಎಂದೇನೋ ಕೇಳುತ್ತೀಯ
ಕಂಡಾಗಲೆಲ್ಲ ಕಣ್ಣಲ್ಲಿ ಮಿಂಚು ತುಳುಕಿಸಿ
ಕಿರುನಗೆಯ ತುಟಿಯ ಕೊಂಕಿಸಿ
ಹೇಗಿರುವೆನೆಂದು ಹೇಗೆ ಹೇಳಲಿ?
‘ಫೈನ್’ ಎನ್ನುತ್ತೇನೆ ನಿನ್ನೆ ಕಂಡ ಕನಸುಗಳ ನೆನೆಸಿ
ಬಿಗಿಬಂಧದ ಸಿಹಿಮುತ್ತುಗಳ ಸವಿಯ ಒರೆಸಿ

ಒಡೆದು ಹೋಗಿದೆ ಈಗೀಗ ನನ್ನ ಭಾಷೆ
ಅರ್ಥಗಳು ಮರುಜೋಡನೆಯಾಗಿ ರಮಿಸಿ
ಕನಸು, ಅಪಾಯ ಮತ್ತು ವಾಸ್ತವಕೆ ಅಮಲು ಬೆರೆಸಿ
ಸುಳಿವು ಹಿಡಿಯುತ್ತೀಯ ಕಾಯುತ್ತ ನೀನು
ನನ್ನ ಮರುವಾಕ್ಯಕ್ಕಾಗಿ, ಇಲ್ಲ ಗೆಳೆಯ
ಒಂದಕ್ಷರವೂ ಉಳಿದಿಲ್ಲ
ನನ್ನೆಲ್ಲ ನಿನಗೆ ಅರ್ಪಿಸಿಬಿಟ್ಟೆ ನಿನ್ನೆ ರಾತ್ರಿ

ಮನಸೆಂಬ ಮಾಯದ ಕನ್ನಡಿ
ಕನಸೆಂಬ ಬದುಕಿನ ಸೂರಿನಡಿ
ಇಂದು ಹೊಸತು
ಮನದ ನೋವುಗಳ ಹೊರದೂಡಿ
ಸಂತಸದ ಹೊಸ ತಂಪು ಹರಡಿ
ಮೈಯೊಳಗಿನ ಶೃಂಗಾರ
ಎದೆ ತುಳುಕಿ ಹೊರಗಿಣುಕಿರುವಾಗ
ಗೊತ್ತಿದ್ದರೆ ಹೇಳು, ಬಿಡುಗಡೆ ಬೇಡದ
ನನ್ನೀ ನೋವನುಂಡವರೆಷ್ಟು ಮಂದಿ?

ನಮ್ಮೀ ನಡುವಿನ ಮೌನ ನೂಲು
ಹೊಸೆದು ಬೆರೆಯುವ ಕ್ಷಣ
ಮೂಡುತ್ತದೆ ಬಯಕೆಗಳ ಬೆಚ್ಚಗಿನ ಕೌದಿಯೊಂದು
ಬಿಡಬೇಡ, ಹೋಗಗೊಡಬೇಡ
ಕೈ ಹಿಡಿದು ತಬ್ಬಿ ನಿಲ್ಲಿಸು
ಅಡಿಯಿಟ್ಟಿರುವ ಪ್ರೀತಿಗೆ ಬೆರೆಸಿ ರಂಗು
ನನ್ನಂತೆ ನಿನಗೂ ಗೊತ್ತು
ಪ್ರೀತಿ-ಪ್ರೇಮಕ್ಕಿಲ್ಲ ತರ್ಕಗಳ ಹಂಗು

About The Author

ಡಾ.ಪ್ರೇಮಲತ

ಡಾ. ಪ್ರೇಮಲತಾ ಲೇಖಕಿ ಮೂಲತಃ ತುಮಕೂರಿನವರು, ಕಳೆದ ೨೧ ವರ್ಷಗಳಿಂದ ಇಂಗ್ಲೆಂಡಿನಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ದಂತವೈದ್ಯೆ. ಹವ್ಯಾಸಿ ಬರಹಗಾರ್ತಿ. ‘ಐದು ಬೆರಳುಗಳುʼ, ‘ತಿರುವುಗಳುʼ, ‘ನಂಬಿಕೆಯೆಂಬ ಗಾಳಿಕೊಡೆʼ ಇವರ ಪ್ರಕಟಿತ ಕಥಾಸಂಕಲನಗಳು. ‘ಕೋವಿಡ್‌ ಡೈರಿʼ ಎಂಬ ಅಂಕಣ ಬರಹಗಳ ಪುಸ್ತಕ ಮತ್ತು ‘ಬಾಯೆಂಬ ಬ್ರಮ್ಹಾಂಡʼ ಇವರ ಇತರೆ ಪುಸ್ತಕಗಳು. ‘ಐದು ಬೆರಳುಗಳುʼ ಕಥಾ ಸಂಕಲನಕ್ಕೆ ಡಾ.ಹೆಚ್. ಗಿರಿಜಮ್ಮ ಪ್ರಶಸ್ತಿ ದೊರಕಿದೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ