Advertisement
ತೇಜಾವತಿ ಎಚ್‌ ಡಿ ಬರೆದ ಕವಿತೆ: ಸೆಣೆಸಾಡುವ ಬಣ್ಣ

ತೇಜಾವತಿ ಎಚ್‌ ಡಿ ಬರೆದ ಕವಿತೆ: ಸೆಣೆಸಾಡುವ ಬಣ್ಣ

ಸೆಣೆಸಾಡುವ ಬಣ್ಣ

ಅಲ್ಲಿ ಸಮರಗಳು ಕಾಲು ಕೆರೆಯುತ್ತಿವೆ
ವರ್ಣರಂಜಿತ ಓಕುಳಿಯಾಡಲು
ಇಲ್ಲಿ ಬಣ್ಣಗಳು ಸೆಣೆಸಾಡುತ್ತಿವೆ
ಕೆಂಪು ಹಸಿರು ನೀಲಿ ಚೆಲ್ಲಿ
ಅರಿವಿಲ್ಲದೆ ಮೂಲದ್ರವ್ಯದ ವರ್ಣ
ರಜತಬಿಲ್ಲಿಗೆ ಗೊತ್ತು ಎಲ್ಲವುಗಳ ಮರ್ಮ

ಅಂದು ಕನಕ ಸಾರಿ ಸಾರಿ ಹೇಳಿದ್ದ
ಕರಿಯ ಬಿಳಿಯ ಸಾರವ
ವ್ರೀಹಿ ನೆರೆದೆಲಗಗಳ ಬಿತ್ತಿ

ಮತ್ತೆ ಅವತರಿಸಿದರು
ಗಾಂಧಿ ಮಂಡೇಲಾ
ಬಣ್ಣವನ್ನು ಕುಡಿಯಲು
ಹಸಿವನ್ನು ನುಂಗಲು

ಶತ ಶತಮಾನದ ನೋಟಕ್ಕಿನ್ನೂ
ಅವರಿಸಿರುವ ಕಾಮಾಲೆಯ ಗ್ರಹಣ ಹೋಗದು

ಗಲ್ಲಿಗೊಂದು ಗಡಿಗೊಂದು
ಊರಿಗೊಂದು ಕೇರಿಗೊಂದು
ದೇಶಕ್ಕೊಂದು ಕೋಶಕ್ಕೊಂದು
ಹಗಲಿಗೊಂದು ಇರುಳಿಗೊಂದು

ಹೀಗೆ
ಬಣ್ಣ ಓಡಾಡುತ್ತಿದೆ
ಮತ್ತೆ ಮತ್ತೆ ವೇಷ ಧರಿಸಿ..

About The Author

ತೇಜಾವತಿ ಎಚ್ ಡಿ

ತೇಜಾವತಿ ಎಚ್ ಡಿ ತುಮಕೂರು ಜಿಲ್ಲೆಯ ಹುಳಿಯಾರಿನವರು. ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಾಲಚಕ್ರ (2019), ಮಿನುಗುವ ತಾರೆ (2019), ಬಾ ಭವಿಷ್ಯದ ನಕ್ಷತ್ರಗಳಾಗೋಣ (2021) ಇವರ ಪ್ರಕಟಿತ ಕೃತಿಗಳು. ಸಾವಿತ್ರಿಬಾಯಿ ಫುಲೆ ಪ್ರಶಸ್ತಿ, ಉತ್ತಮ ಶಿಕ್ಷಕ ಪ್ರಶಸ್ತಿ, ದೆಹಲಿಯ ಪ್ರಜಾಪತಿ ಪತ್ರಿಕೆ ಕೊಡಮಾಡುವ ಕಾವ್ಯ ಸಮ್ಮಾನ್ ಹಾಗೂ ಸಿರಿ ಕಾವ್ಯ ಪ್ರಶಸ್ತಿ ಲಭಿಸಿವೆ.

Leave a comment

Your email address will not be published. Required fields are marked *

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ