Advertisement
ದೇವರಾಜ್ ಹುಣಸಿಕಟ್ಟಿ ಬರೆದ ಈ ದಿನದ ಕವಿತೆ

ದೇವರಾಜ್ ಹುಣಸಿಕಟ್ಟಿ ಬರೆದ ಈ ದಿನದ ಕವಿತೆ

ಒಂದು ಹಿಡಿ ಸಂಕಟ..

ಏಸು ಋತುಗಳಲಿ
ಅರಳಿ ಬಂದಿದೆ ಒಂದು ಹಿಡಿ
ಸಂಕಟ..
ಎದೆಯ ಕಿಟಕಿಯ ಹಾದು..
ಇರುಳ ನಿದ್ದೆಯ ಕದ್ದು..
ಚಿಂತೆ ಹಾಸಿಗೆ ಹೊದ್ದು…
ಮರಳಿ ಹೊರಳಿ ಬಂದಿದೆ ಸಂಕಟ…

ಎದೆಯ ಗೂಡಿಗೆ..
ಹೃದಯದ ಹಾಡಿಗೆ..
ಕರುಳ ನಾದವ ನುಡಿಸಿ..
ಗುಟುಕು ಉಸಿರನು ಸುರಿಸಿ..
ನಿಟ್ಟುಸಿರುಗಳ ಹಡೆದು ಬಂದಿದೆ ಸಂಕಟ….
ಮನದ ಬಾಗಿಲಿಗೆ ಮರಳಿ ಬಂದಿದೆ ಸಂಕಟ…

ಚರಾ ಚರ ಮುಟ್ಟಿ
ಸುರಾಸುರರ ತಟ್ಟಿ
ಕಟ್ಟಿ ಹಾಡಿದೆ ಸಂಕಟ..
ಸುಲಬಕೆ ಬಿಚ್ಚಿ ಕೊಳ್ಳದೆ ಕಗ್ಗಂಟ

ಏಸು ಬಣ್ಣಗಳ ಕಳಚಿ
ಏಸು ಕನಸುಗಳ ನುಂಗಿ
ಬೆಳಕ ಹಾದಿಯ ತುಂಬಾ ಕತ್ತಲೆ ಹಾಸಿಗೆ ಹಾಸಿ..
ತನ್ನ ಹಸುವೆ ತಾನೇ ನೀಗಿ ಕೊಳ್ಳಲು..
ಮನದ ಬಾಗಿಲಿಗೆ ಮರಳಿ ಬಂದಿದೆ ಸಂಕಟ…

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ