Advertisement
ಮಾಲಾ ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ

ಮಾಲಾ ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ

ಭೂಲೋಕದ ನರಕ

ಭೂಲೋಕದ ನರಕ
ಜನರ ಓಡಾಟ ಇರುವೆಯಂತೆ
ಚೀರಾಟ, ನೋವು ದಟ್ಟಡವಿ
ಯಾರಿಗೂ ಕಿವಿ ಕೇಳಿಸಲ್ಲ
ಕಣ್ಣು ಕಾಣಲ್ಲ, ಹೃದಯವೂ ಸತ್ತಿದೆ

ಸ್ಟ್ರೆಚರ್ ಮೇಲೆ ಮೂರು ವರ್ಷದ ಹೂವು
ಹೊಟ್ಟೆ ಹಿಡಿದು ನರಳುತ್ತ
“ನೀರು ನೀರು ನೀರು” ಕೊಡಿ
ಅಂಗಲಾಚಿ ಗೊಗರೆಯುವ
ಒಡೆದಿತ್ತಂತೆ ‘ಅಪೆಂಡಿಕ್ಸ್’

ಜನ್ಮ ಕೊಟ್ಟ ತಂದೆ ತಾಯಿ ಇಬ್ಬರೂ
ಅಲ್ಲೆಲ್ಲೋ ಅಂಗವೈಕಲ್ಯದಲ್ಲಿ ಹೊರಳಾಡುವ
ಕಣ್ಣೀರ ತುಂಬಿಕೊಂಡ
ತಾಯಿಯಂತಿರುವವಳು ಸಮಾಧಾನಿಸಲು
ಭಗೀರಥನಂತೆ ನುಂಗಿ ದುಃಖ
‘ನೀರ್ ಕೊಡಬಾರದು’ ಪಾಲಿಸಿ
ಅದೆಂಥ ರೋಗವೋ?

ದೂರದಲ್ಲಿ ಕೂತ
ನನ್ನ ಕಣ್ಣಲ್ಲೂ ನೀರು
ಅವರವರ ದುಃಖ
ಅವರವರೆ ಅನುಭವಿಸುವ
ಪಾಲುದಾರಿಕೆ ಇಲ್ಲ

ಕರುಣಾಮೂರ್ತಿಗೆ ಕಾಣದೆ
ಈ ಬಾಡಲಿರುವ ಹೂವು?
ಅಂಗಗಳೆಲ್ಲವೂ ಸರಿಯಿರುವವ
ಅಂಗವೈಕಲ್ಯ ತೋರಿಸಿದರೆ?
ಜಗ ಮೆಚ್ಚುವುದೇ?

About The Author

ಮಾಲಾ ಮ. ಅಕ್ಕಿಶೆಟ್ಟಿ

ಮಾಲಾ ಅಕ್ಕಿಶೆಟ್ಟಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿ. ಲೇಖನ, ಕವಿತೆ, ಕಥೆ, ಲಲಿತ ಪ್ರಬಂಧ, ಮಕ್ಕಳ ಕಥೆಗಳನ್ನು ಬರಿಯೋದು ಹವ್ಯಾಸ. ಹಲವು ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ