Advertisement
ರಾಜು ಹೆಗಡೆ ಬರೆದ ಈ ದಿನದ ಕವಿತೆ

ರಾಜು ಹೆಗಡೆ ಬರೆದ ಈ ದಿನದ ಕವಿತೆ

ಹಾಗೇ ನಿಂತು ಹೋಗಬಹುದು

ಕವಿತೆ ಬರೆಯುವ
ದಿನಚರಿಯ ಪುಸ್ತಕ ಕಾಣುತ್ತಿಲ್ಲ
ಹಳೆಯ ಡೈರಿ ಅದು
ಅವಳು ಕೊಟ್ಟಿದ್ದಳು
ಬರೆಯಿರಿ ಇದರ ತುಂಬ
ಎಂದು.

ಈ ಮಳೆಗಾಲ ಮಜಾ ಇದೆ
ಮೋಡ ಕವಿದು ಇನ್ನೇನು
ದಿನವಿಡಿ ಭರಭರ ಹೊಯ್ಯುತ್ತದೆ
ಎಂದುಕೊಂಡರೆ
ಛಕ್ಕನೆ ಮಾಯವಾಗಿ
ಬಿಸಿಲು
ಗಿಡಮರಗಳು ಉಸಿರಾಡತೊಡಗಿದಾಗ
ಮತ್ತೆ ಮೋಡ.

ನನ್ನ ಕವಿತೆಗೂ ಅದಕ್ಕೂ
ಯಾವ ಸಂಬಂಧವಿಲ್ಲ, ಬಿಡಿ!

ವಯಸ್ಸಾದವರಂತೆ ಆಡುತ್ತಿದ್ದೀರಿ
ಎಂದು ನನ್ನ ಆತ್ಮೀಯ ವಿರೋಧಿ ಹೇಳುತ್ತಿದ್ದಾನೆ
ಚಿರಶಾಂತಿ ಕೋರುತ್ತೇನೆ
ಅವನ ಆತ್ಮಕ್ಕೆ.

ಇಂದು ನಾನು ಹುಟ್ಟಿದ ದಿವಸ
ಅಂದು ಜೋರಾಗಿ ಮಳೆ ಹೊಯ್ದು
ಅಂಗಳದವರೆಗೆ ನೆಗಸು ಬಂದಿತ್ತಂತೆ
ದೋಣಿಯ ಮೇಲೆ ಬಂದಿಳಿದನಂತೆ
ಅಪ್ಪಯ್ಯ ಭಟ್ಟರ ಜೊತೆಗೆ.

ಈಗ ಜಿಮಿರು ಮಳೆ
ಹಾಗೇ ನಿಂತು ಹೋಗಬಹುದು

About The Author

ರಾಜು ಹೆಗಡೆ

ಕವಿಗಳು, ಲೇಖಕರು ಮತ್ತು ಸಿರಸಿಯ ಎಂ ಎಂ ಕಾಲೇಜಿನಲ್ಲಿ ಉಪನ್ಯಾಸಕರು.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ