Advertisement

ಸರಣಿ

ʻಲವ್ಲಿ ಮ್ಯಾನ್ʼ: ವಿಷಾದವೆಂಬ ನೆರಳಿನಡಿ ಸಂಸಾರದ ಚಿತ್ರ

ʻಲವ್ಲಿ ಮ್ಯಾನ್ʼ: ವಿಷಾದವೆಂಬ ನೆರಳಿನಡಿ ಸಂಸಾರದ ಚಿತ್ರ

ʻಲವ್ಲೀ ಮ್ಯಾನ್‌ʼ ಕೇವಲ ಎಪ್ಪತ್ತಾರು ನಿಮಿಷಗಳ ಚಿತ್ರ. ಬೇರೆ ಚಿತ್ರಗಳಿಗೆ ಹೋಲಿಸಿದರೆ ಕಡಿಮೆ ಅವಧಿಯದು. ಚಿತ್ರದಲ್ಲಿ ತನ್ನ ಆಶಯವನ್ನು ಪೂರ್ಣಗೊಳಿಸಲು ಕೇವಲ ಒಂದು ದಿನದ ಅವಧಿಯಲ್ಲಿ ನಡೆಯುವ ಕಥಾ ಹಂದರವಿರುವ ಕಥನವನ್ನು ಪ್ರಸ್ತುತಪಡಿಸುತ್ತಾನೆ. ಚಿತ್ರದಲ್ಲಿ ತೀವ್ರತರ ಭಾವನೆಗಳನ್ನು ಉಂಟುಮಾಡುವ ಸನ್ನಿವೇಶಗಳನ್ನು ಅತ್ಯಂತ ನಿಯಂತ್ರಿತ ರೀತಿಯಲ್ಲಿ ನಿರೂಪಿಸುತ್ತಾನೆ. 
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್‌’ನಲ್ಲಿ ಇಂಡೊನೇಷಿಯದ ʻಲವ್ಲಿ ಮ್ಯಾನ್‌ʼಸಿನಿಮಾದ ವಿಶ್ಲೇಷಣೆ

read more
ಹೃದಯ ತುಂಬುವಂತೆ ಮಾಡುವ ಮಾನವೀಯ ಸಂಬಂಧಗಳು

ಹೃದಯ ತುಂಬುವಂತೆ ಮಾಡುವ ಮಾನವೀಯ ಸಂಬಂಧಗಳು

ಧಾರ್ಮಿಕ ಸಮಾಜಗಳಲ್ಲಿ ಮೂಲಭೂತವಾದಿಗಳು, ಕೋಮುವಾದಿಗಳು ಮತ್ತು ಏನೂ ಗೊತ್ತಿಲ್ಲದ ಕರ್ಮಠರದೇ ಕಾರುಬಾರು ಜಾಸ್ತಿ ಇರುತ್ತದೆ. ಜನರನ್ನು ಹಿಂದೂ ಮುಸ್ಲಿಂ ಮಾಡುವುದರಲ್ಲೇ ಅವರು ತಲ್ಲೀನರಾಗಿರುತ್ತಾರೆ.  ರಂಜಾನ್ ಮತ್ತು ಬಕ್ರೀದಗಳಲ್ಲಿ ನನ್ನ ತಂದೆ ದೊಡ್ಡ ಹಂಡೆಯಲ್ಲಿ ಶುರಕುಂಬಾ ತಯಾರಿಸಲು ಎಲ್ಲ ವ್ಯವಸ್ಥೆ ಮಾಡುತ್ತಿದ್ದರು. ನಾವಿಗಲ್ಲಿಯ ಜನರೆಲ್ಲ ಶುರಕುಂಬಾ ಕುಡಿಯಬೇಕೆಂಬುದು ಅವರ ಆಶಯವಾಗಿತ್ತು.”

read more
ಮನೆ ತಲುಪುವ ಕನಸುಗಳ ಕಿತ್ತುಕೊಂಡ ಬಿರುಗಾಳಿ

ಮನೆ ತಲುಪುವ ಕನಸುಗಳ ಕಿತ್ತುಕೊಂಡ ಬಿರುಗಾಳಿ

ಡರ್ಬನ್ ನಿಂದ ಹೊರಟ ಆ ಹಡಗು, ನೋಡ ನೋಡುತ್ತಿದ್ದಂತೆ ಲಟ್ಟಣಿಗೆ ಮುರಿದು ಹಾಕುವಂತೆ ಅಷ್ಟು ದೊಡ್ಡ ಹಡಗು ಇಬ್ಭಾಗವಾಯಿತು. ಬೃಹತ್ ಗಾತ್ರದ ಅಲೆಯೊಂದು ಎದ್ದು ನೀರಿಗೆ ಧುಮುಕಿದ ಹಲವರನ್ನೂ ಎತ್ತಿ ದೂರ ದೂರಕ್ಕೆ ಎಸೆಯಿತು. ಬಹುಶಃ ದೂರವೆಂದರೆ ಮುಳುಗುತ್ತಿರುವ ಹಡಗಿನ ದೀಪ ಮಂಜಾಗಿ ಕಾಣಿಸುವಷ್ಟು. ದೂರದಲ್ಲಿ ಹಡಗಿನ ದೀಪ ಗಿರ ಗಿರನೆ ಸುತ್ತುವುದು ನೋಡಿದಾಗ ಇದಿನಬ್ಬನಿಗೆ ಪರಿಸ್ಥಿತಿಯ ಅರಿವಾಯಿತು. ಹಿಂದಿರುಗಿ ನೋಡಿದರೆ ಅಷ್ಟು ದೊಡ್ಡ ಹಡಗನ್ನು ಹೊಟ್ಟೆ ಬಾಕ ಸಮುದ್ರ ತಿಂದು ಮುಗಿಸಿದೆ. ಕನಸುಗಳು ನುಚ್ಚು ನೂರಾಗಿವೆ. -ಮುನವ್ವರ್ ಜೋಗಿಬೆಟ್ಟು ಬರೆಯುವ ಡರ್ಬನ್ ಇದಿನಬ್ಬ ಕಿರುಕಾದಂಬರಿಯ ಹನ್ನೊಂದನೇ ಕಂತು

read more
ಚಿತ್ರಾನ್ನದಲ್ಲಿ ಕಡ್ಳೆ ಬೀಜಕ್ಕಾಗಿ ಹೋರಾಟ

ಚಿತ್ರಾನ್ನದಲ್ಲಿ ಕಡ್ಳೆ ಬೀಜಕ್ಕಾಗಿ ಹೋರಾಟ

ಹಿಂದಿನ ಬೆಂಚಿನಲ್ಲಿ ಸತೀಶ ಎಂಬ ತೀಟಲೆ ಹುಡುಗನಿದ್ದ. ಅವನು ಗುಂಪು ಕಟ್ಟಿಕೊಂಡು ‘ಮರಿ’ ಜಾಗದಲ್ಲಿ ‘ಮುದಿ’ ಸೇರಿಸಿ ರಾಗವಾಗಿ ಹೇಳುತ್ತಿದ್ದನು. ಈ ಅಪಬ್ರಂಶವನ್ನು ಕೇಳಿದ್ದೆ ತಡ, ಧ್ವನಿ ಬಂದ ಕಡೆಗೆ ನುಗ್ಗಿ ಕೈಗೆ ಸಿಕ್ಕಿದವರನ್ನು ರಪರಪನೆ ಚೆಚ್ಚಿ ಬಿಡುತ್ತಿದ್ದರು. ಎಷ್ಟು ಸರ್ತಿ ಹೇಳಿಕೊಟ್ಟರೂ ಕೆಲ ಹುಡುಗರು ಮತ್ತೆ ಮತ್ತೆ ಹಾಗೆ ಹೇಳುತ್ತಿದ್ದರು. ಇದರಿಂದ ಉರಿದು ಬೀಳುತ್ತಿದ್ದ ಮಾಸ್ಟರ್ ಸಿಟ್ಟಿನಿಂದಲೇ ಹಾರ್ಮೋನಿಯಂ ಎತ್ತಿಕೊಂಡು ಹೊರ ಹೋಗಿಬಿಡುತ್ತಿದ್ದರು.
ಗುರುಪ್ರಸಾದ್ ಕಂಟಲಗೆರೆ ಬರೆಯುವ ‘ಟ್ರಂಕು-ತಟ್ಟೆ’ ಸರಣಿಯ ಐದನೆಯ ಕಂತು

read more
ನೀಲ ಕುರುಂಜಿಯ ನಾಡಿನಲ್ಲಿ ರಕ್ತಸಿಕ್ತ ಅಧ್ಯಾಯ

ನೀಲ ಕುರುಂಜಿಯ ನಾಡಿನಲ್ಲಿ ರಕ್ತಸಿಕ್ತ ಅಧ್ಯಾಯ

ಯಾವುದೇ ಮನೆ, ಕಾಂಕ್ರೀಟ್ ಕಾಡಿನ ಕಟ್ಟಡಗಳಿಲ್ಲದ, ಒಂದು ಪ್ರಶಾಂತವಾದ ಜಾಗ. ಆದರೆ ಅಲ್ಲಿಗೆ ಹೋಗಿ ತಲುಪುವುದು ಸ್ವಲ್ಪ ಕಷ್ಟದ ಕೆಲಸ. ಹತ್ತು ಕಿಲೋಮೀಟರು ದೂರದವರೆಗೆ ನಿಮ್ಮ ವಾಹನಗಳಲ್ಲಿ ಹೋಗಿ, ಅಲ್ಲಿಂದ ಮುಂದೆ ಅದಕ್ಕೆಂದೇ ಬಾಡಿಗೆ ಇರುವ ಕೆಲವು ಫೋರ್ ವ್ಹೀಲ್ ಜೀಪ್‌ಗಳಲ್ಲಿ ಮಾತ್ರ ಹೋಗಬಹುದು. ಓರೆ ಕೋರೆ, ನೀರು ಹರಿದು, ಅರ್ಧ ಹಾಳಾದ ರಸ್ತೆಯಲ್ಲಿ ಹೋಗುವುದೇ ಒಂದು ಸಾಹಸ ಕ್ರೀಡೆ ಅರ್ಥಾತ್ ಅಡ್ವೆಂಚರ್. ಸಮುದ್ರ ಮಟ್ಟದಿಂದ ನಾಲ್ಕು ಸಾವಿರ ಅಡಿ ಮೇಲೆ ಇರುವ ಸ್ಥಳ.
ಡಾ. ಕೆ.ಬಿ. ಸೂರ್ಯಕುಮಾರ್ ಬರೆಯುವ ‘ನೆನಪುಗಳ ಮೆರವಣಿಗೆ’

read more
ಚಪ್ಪಲಿ ಸಾಹೇಬರ ಚೌರ್ಯಸಂಬಂಧೀ ನೆನಪು

ಚಪ್ಪಲಿ ಸಾಹೇಬರ ಚೌರ್ಯಸಂಬಂಧೀ ನೆನಪು

ಸುಮಾರು ದೂರ ಓಡಿ ಅವರನ್ನು ಹಿಡಿದು ಭುಜ ತಟ್ಟಿ ಮಾತಾಡಿಸಿ ಅದೇನೋ ಕೇಳಿದ. ಕೂಡಲೇ ನಕ್ಕು ಪ್ರತಿಕ್ರಿಯಿಸಿದ ಆ ವಯೋವೃದ್ಧರು ತಮ್ಮ ಕೈಲಿದ್ದ ಪ್ಲಾಸ್ಟಿಕ್ ಸಂಚಿಯನ್ನು ಇವನ ಕೈಗೆ ವರ್ಗಾಯಿಸಿದರು. ಇವನು ಅವರ ಕೈ ಕುಲುಕಿದ. ನಾವು ಎಲ್ಲವೂ ಅಯೋಮಯವಾದಂತೆ ನೋಡುತ್ತ ಪಿಳಿಪಿಳಿ ಕಣ್ಣು ಬಿಡುತ್ತಾ ನಿಂತೇ ಇದ್ದೆವು. ಇಬ್ಬರ ಮುಖದಲ್ಲೂ ಹುಸಿನಗೆಯೊಂದು ಕಾಣುತ್ತಲೇ ಇತ್ತಾಗಿ ಧೈರ್ಯ. ಮತ್ತಾವುದೇ ಕಿರಿಕ್ ನಡೆಯದೆಂಬ ಸಮಾಧಾನ. ಮಧುರಾಣಿ ಬರೆಯುವ ‘ಮಠದ ಕೇರಿ’ ಕಥಾನಕ

read more
ಛಡಿಯಾಮಿ ಛಂ ಛಂ, ವಿದ್ಯಾಯಾಮಿ ಘಂ ಘಂ

ಛಡಿಯಾಮಿ ಛಂ ಛಂ, ವಿದ್ಯಾಯಾಮಿ ಘಂ ಘಂ

ಪ್ರತಿಯೊಬ್ಬ ವಿದ್ಯಾರ್ಥಿ ವೈವಿಧ್ಯಮಯವಾಗಿ ಬನಿಯನ್ ಬಾಕ್ಸ್‌ಗಳಲ್ಲಿ ಸರಸ್ವತಿಯ ಚಿತ್ರವಿಟ್ಟು ತನ್ನಿಚ್ಛೆಯಂತೆ ಸಿಂಗರಿಸಿ ಖುಷಿ ಪಡುತ್ತಿದ್ದ. ತುಂಬ ಶ್ರಮವಹಿಸಿ ತಯಾರಿಸಿದ ಈ ಸುಂದರ ‘ಸರಸ್ವತೀಮಂದಿರ’ಗಳನ್ನು ಬೇರೆ ವಿದ್ಯಾರ್ಥಿಗಳು ನೋಡುವುದು ಕಡಿಮೆ. ಪ್ರತಿಯೊಬ್ಬ ವಿದ್ಯಾರ್ಥಿ ತನ್ನ ಸಿಂಗರಿಸಿದ ಸರಸ್ವತಿಯನ್ನು ತಾನೇ ನೋಡುತ್ತ, ನೋಡುತ್ತ ಆನಂದತುಂದಿಲನಾಗಿ ತನ್ನ ಮತ್ತು ಸರಸ್ವತಿಯ ಮಧ್ಯೆ ಯಾರೂ ಇಲ್ಲದ ಹಾಗೆ ತದೇಕಚಿತ್ತನಾಗಿರುತ್ತಿದ್ದ. ಆ ಕ್ಷಣದ ಆನಂದವೇ ಆನಂದ. ಇದು ಒಂದುರೀತಿಯ ಲಿಂಗಾಂಗಸಾಮರಸ್ಯದಂತೆ!
ರಂಜಾನ್‌ ದರ್ಗಾ ಬರೆಯುವ ‘ನೆನಪಾದಾಗಲೆಲ್ಲ’ ಸರಣಿಯ ಹನ್ನೆರಡನೆಯ ಕಂತು

read more
ಚಿನ್ನದ ಗಣಿಯಲ್ಲಿ ಭಯಾನಕ ದಿನಗಳು

ಚಿನ್ನದ ಗಣಿಯಲ್ಲಿ ಭಯಾನಕ ದಿನಗಳು

ಹತ್ತುವರ್ಷಗಳ ಕಾಲ ಕೆಲಸ ಮಾಡುವ ಕರಾರು ಮುಕ್ತಾಯವಾಗುತ್ತಲೇ ಗಣಿಯಿಂದ ಒಬ್ಬೊಬ್ಬರೇ ಹೊರಡತೊಡಗಿದರು. ಇದಿನಬ್ಬ ಕೂಡ, ಸಂಬಳ ಕೊಡುವ ಕಂಪೆನಿಯ ಮ್ಯಾನೇಜರ್ ಬಳಿ ಬಂದು ವಿನಮ್ರನಾಗಿ ನಿಂತು,’ಸರ್, ನಾನು ಊರಿಗೆ ಹೋಗುತ್ತೇನೆ’ ಎಂದ. ಹೋಗಬಹುದು ಎಂದು ಮ್ಯಾನೇಜರ್ ಒಪ್ಪಿದ. ನನ್ನ ಸಂಬಳ ಕೊಟ್ಟುಬಿಡಿ ಎಂದು ಮನವಿ ಮಾಡಿದಾಗ, ಅಧಿಕಾರಿ ಅಚ್ಚರಿಯಿಂದ, ‘ಯಾವ ಸಂಬಳ ? ಅದನ್ನು ಸಿಲೋನಿನಲ್ಲೇ ಕೊಟ್ಟಾಗಿದೆಯಲ್ಲಾ..’ ಎಂದು ಹೇಳಿದ. ಈ ಮಾತು ಕೇಳಿದ ಇದಿನಬ್ಬ ಕುಸಿದು ಕುಳಿತುಬಿಟ್ಟ. ಮುನವ್ವರ್ ಜೋಗಿಬೆಟ್ಟು ಬರೆಯುವ ಡರ್ಬನ್ ಇದಿನಬ್ಬ ಕಿರುಕಾದಂಬರಿಯ ಹತ್ತನೇ ಕಂತು.

read more
ದಾರಿ ಯಾವುದಯ್ಯಾ….

ದಾರಿ ಯಾವುದಯ್ಯಾ….

ಎಷ್ಟೋ ದಿನಗಳ ನಂತರ ಮೊದಲ ಬಾರಿಗೆ ‘ಮನಸ್ಸು ಸ್ವಸ್ಥವಾಗಿದೆ,’ ಅನ್ನಿಸುತಿತ್ತು. ‘ಏನು ಆಗತ್ತೋ ಆಗಲಿ, ಸ್ವಿದ್ರಿಗೈಲೋವ್ ವಿಚಾರ ಮುಗಿಸಬೇಕು, ಎಷ್ಟು ಬೇಗ ಆಗತ್ತೋ ಅಷ್ಟು ಬೇಗ. ಅವನೂ ಕೂಡ ನನಗಾಗಿ ಕಾಯತಾ ಇದಾನೆ ಅನಿಸತ್ತೆ,’ ಅಂದುಕೊಂಡ. ಆ ಕ್ಷಣದಲ್ಲಿ, ಅವನ ದಣಿದ ಮನಸಿನಲ್ಲಿ ಎಷ್ಟು ದ್ವೇಷ ಹುಟ್ಟಿತೆಂದರೆ ಸ್ವಿದ್ರಿಗೈಲೋವ್ ಅಥವಾ ಪೋರ್ಫಿರಿ ಇಬ್ಬರಲ್ಲಿ ಒಬ್ಬರನ್ನಾದರೂ ಕೊಲ್ಲಬೇಕು ಅನಿಸಿತು.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು.

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ