ನೀನಾಸಮ್ `ಸಂಸ್ಕೃತಿ ಶಿಬಿರ’ದಲ್ಲಿ `ತಟ್ಟೀರಾಯ’ನ ಮರಿಗಳು: ಚನ್ನಕೇಶವ ಬರೆಯುವ ರಂಗಪುರಾಣ
“ನಾವು ನಾಲ್ಕಾರು ಜನ ಕೂಡಿಕೊಂಡು ಆ ಬಿದಿರಿನ ದೊಡ್ಡ ಗೊಂಬೆಯನ್ನು ಮಾಡಲು ಪ್ರಾರಂಭಿಸಿದ್ದು ಶಿಬಿರ ಶುರುವಾಗುವ ನಾಲ್ಕು ದಿನಗಳ ಮೊದಲಷ್ಟೇ. ನಮ್ಮ ಆ ಗೊಂಬೆ ಕಟ್ಟುವ ಉಮೇದಿಯ ಕೆಲಸದಲ್ಲಿ ನಿದ್ರೆ ನಮ್ಮನ್ನು ತೊರೆದೇ ಹೋಗಿತ್ತು. ಶಿಬಿರ ಶುರುವಾಗುವ ಹಿಂದಿನ ದಿನ ಸಂಜೆ, ಶಿಬಿರದ ವೇದಿಕೆ ತಯ್ಯಾರು ಮಾಡುವಬಳಗದವರು ಬಂದು, ನಮ್ಮ ಗೊಂಬೆಯನ್ನು ಸಂಭಾಂಗಣದ ಹೊರಗೆ ಆ ಕೂಡಲೇ ತೆಗೆದುಕೊಂಡು ಹೋಗಿ…”
ದ ಮೋಸ್ಟ್ ಬ್ಯೂಟಿಫುಲ್: ಕುರೊಸಾವ ಆತ್ಮಕತೆಯ ಮತ್ತೊಂದು ಪುಟ
“ಆ ಹುಡುಗಿಯರು ನಿಸ್ವಾರ್ಥದಿಂದ ದೇಶಪ್ರೇಮಿಗಳಂತೆ ವರ್ತಿಸಬೇಕೆಂದು ನಾನೇನು ಪ್ರಜ್ಞಾಪೂರ್ವಕವಾಗಿ ಬಯಸಿರಲಿಲ್ಲ. ಆ ಚಿತ್ರದ ಥೀಮ್ ದೇಶಕ್ಕಾಗಿ ನಿಸ್ವಾರ್ಥ ಸೇವೆ ಮಾಡುವುದು. ನಾವು ಈ ರೀತಿಯಲ್ಲಿ ತಯಾರಿ ಮಾಡಿಕೊಳ್ಳದಿದ್ದರೆ ಪಾತ್ರಗಳು ನೈಜವಾಗಿರದೆ ಕೇವಲ ಕಾರ್ಡ್ಬೋರ್ಡ್ನ ಕಟೌಟ್ ಗಳಂತಾಗಿಬಿಡುತ್ತಿದ್ದವು. ಕಾರ್ಖಾನೆಯ ಡಾರ್ಮಿಟರಿಯ ಮೇಲ್ವಿಚಾರಿಕೆ ನೋಡಿಕೊಳ್ಳುವ ಪಾತ್ರವನ್ನು ಐರಿ ಟಕಾಕಿ ಎನ್ನುವ ನಟಿ ನಿರ್ವಹಿಸುತ್ತಿದ್ದಳು.”
ಸುಗತ ಸಂಶಿರೊ- ಭಾಗ 2: ಕುರಸೋವಾ ಆತ್ಮಕತೆಯ ಮತ್ತೊಂದು ಪುಟ
“ಒಂದು ದಿನ ಆತನ ದೃಶ್ಯಗಳು ಬೇಗ ಮುಗಿದಿದ್ದರಿಂದ ಆತನನ್ನು ಒಬ್ಬನೇ ಹೋಗಲು ಕಳುಹಿಸಿಕೊಟ್ಟೆವು. ಹಿಮಾಚ್ಛಾದಿತ ಕಣಿವೆಯಲ್ಲಿ ಇದರ ಚಿತ್ರೀಕರಣ ನಡೆಯುತ್ತಿತ್ತು. ಕಣಿವೆಯತ್ತ ಬರುತ್ತಿದ್ದ ಏರುಹಾದಿಯಲ್ಲಿ ಬರುತ್ತಿದ್ದ ಏಳು ಮಂದಿ ಸ್ಕೀಯರ್ಗಳು ಇದ್ದಕ್ಕಿದ್ದಂತೆ ನಿಂತುಬಿಟ್ಟವರು ಕ್ಷಣಮಾತ್ರದಲ್ಲಿ ಹಿಂದಕ್ಕೆ ತಿರುಗಿ ಬೆಟ್ಟದ ಕೆಳದಾರಿಯಲ್ಲಿ ವೇಗವಾಗಿ ಹೋಗಿಬಿಟ್ಟರು. ಇದನ್ನೆಲ್ಲ ನಾನು ಮೇಲೆ ನಿಂತು ನೋಡುತ್ತಿದ್ದೆ. ಅವರಿಗೆ ಆಶ್ಚರ್ಯವಾಗಿತ್ತು”
ತಾವರೆ ಅರಳುವ ಸದ್ದು: ಅಕಿರ ಕುರಸೋವಾ ಆತ್ಮಕತೆಯ ಕಂತು
“ಇಲ್ಲೇ ನಾನೊಂದು ವಿಷಯವನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ಗುರುಗಳಿಂದ ಬೈಯಿಸಿಕೊಂಡ ನಂತರ ತನ್ನ ಗುರುಗಳಿಗಾಗಿ ತಾನು ಪ್ರಾಣಕೊಡಲು ಕೂಡ ಸಿದ್ಧ ಎನ್ನುವುದನ್ನು ತೋರಿಸಲು ಉದ್ಯಾನದಲ್ಲಿದ್ದ ಕೊಳದೊಳಕ್ಕೆ ಹಾರುತ್ತಾನೆ. ಇಡೀ ರಾತ್ರಿ ಅಲ್ಲೇ ದಿಮ್ಮಿಯೊಂದನ್ನು ಹಿಡಿದು ಕಳೆಯುತ್ತಾನೆ. ಅವನ ಹಠ ಮುರಿದು ವಿಧೇಯತೆ ಅವನಲ್ಲಿ ಮೂಡುತ್ತದೆ.”
ಏರಲಿರುವ ಶಿಖರ: ಕುರಸೋವ ಆತ್ಮಕಥೆಯ ಕಂತು
“ಯಮಾಸಾನ್ ತಮ್ಮ ಹಾಸಿಗೆಯ ಮೇಲೆ ಬಾಗಿಲಿಗೆ ಬೆನ್ನು ಹಾಕಿ ಕೂತಿದ್ದರು. ನನ್ನ ಸುಗತ ಸಾನ್ಶಿರೊ ಚಿತ್ರಕತೆಯನ್ನು ಓದುತ್ತಾ ಕೂತಿದ್ದರು. ಪ್ರತಿ ಪುಟವನ್ನೂ ಗಮನವಿಟ್ಟು ನೋಡುತ್ತಾ ಕೆಲವೆಡೆ ಮತ್ತೆ ಮತ್ತೆ ಹಿಂದಿನ ಪುಟ ತಿರುವಿ ಓದುತ್ತಿದ್ದರು. ದಿನದ ಶೂಟಿಂಗ್ ನ ಆಯಾಸವಾಗಲಿ, ಸಂಜೆಯ ಕುಡಿತದ ನಶೆಯ ಕುರುಹಾಗಲಿ ಅವರು ಕೂತಿದ್ದ ಭಂಗಿಯಲ್ಲಿರಲಿಲ್ಲ. ಪುಟ ತಿರುವುವ ಸದ್ದು ಬಿಟ್ಟರೆ ಉಳಿದಂತೆ ನಿಶ್ಯಬ್ದ.”
ಕಹಿಗಳಿಗೆಗಳು: ಕುರಸೋವ ಆತ್ಮಕತೆಯ ಮತ್ತೊಂದು ಕಂತು
“ಒಟ್ಟಿನಲ್ಲಿ ಸೆನ್ಸಾರ್ ಶಿಪ್ ಬ್ಯೂರೋದ ಡಾಬರ್ ಮನ್ ಗಳು ಅಂದಿನ ಅಧಿಕಾರಶಾಹಿಯ ಕೈಗೊಂಬೆಯಾಗಿದ್ದರು ಎನ್ನುವುದಂತೂ ಸತ್ಯ. ಸಮಯದ ಕೈಗೊಂಬೆಯಾಗಿ ಸ್ವಂತಿಕೆಯಿಲ್ಲದ ಒಬ್ಬ ಅಧಿಕಾರಿಶಾಹಿ ಮನುಷ್ಯನಿಗಿಂತ ಅಪಾಯಕಾರಿ ಮತ್ತೊಬ್ಬರಿಲ್ಲ. ನಾಜಿ ಯುಗದಲ್ಲಿ ಹಿಟ್ಲರ್ ಹುಚ್ಚುಮನುಷ್ಯ. ಆದರೆ ಅವನ ಹಿಂದಿದ್ದ ಹಿಮ್ಲರ್ ಮತ್ತು ಈಚಮನ್ ನಂತಹವರನ್ನು ನೋಡಿದಾಗ ಅವರ ರಾಕ್ಷಸಿ ಮನೋಭಾವದ ಅರಿವಾಗುತ್ತದೆ….”
ಹೃದಯವಂತರು: ಅಕಿರ ಕುರಸೋವ ಆತ್ಮಕಥೆಯ ಕಂತು
“ಮಿಜುಸಾನನಿಗೆ ಒಬ್ಬ ಅದ್ಭುತ ಪ್ರತಿಭಾವಂತ ಸಹನಿರ್ದೇಶಕ ಇದ್ದ. ಅವನ ಹೆಸರು ಇನೊಯಿ ಶಿನ್. ಅವನು ನಿರ್ದೇಶಕನಾಗುವ ಮೊದಲೇ ಸತ್ತುಹೋದ. ಫಿಲಿಫೈನ್ಸ್ ನಲ್ಲಿ ಶೂಟಿಂಗ್ ಗೆ ಹೋಗಿದ್ದಾಗ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಸತ್ತುಹೋದ. ಆದರೆ ಫಿಲಿಫೈನ್ಸಿಗೆ ಹೋಗುವುದಕ್ಕೂ ಮುಂಚೆ ಅಲ್ಲಿಗೆ ಹೋಗುವುದೋ ಬೇಡವೋ ಎಂದು ನನ್ನ ಸಲಹೆ ಕೇಳಲು ಬಂದಿದ್ದ. ನನಗೇಕೋ…”
ಹುಟ್ಟುಗುಣ ಸುಟ್ಟರೂ ಹೋಗಲ್ಲ: ಕುರಸೋವ ಆತ್ಮಕತೆಯ ಮತ್ತೊಂದು ಕಂತು.
“ಆ ಸಮಯದಲ್ಲಿ ಸೈನ್ಯದಲ್ಲಿದ್ದವರ ಅಧಿಕಾರದ ದರ್ಪ ಯಾವ ಮಟ್ಟದ್ದೆಂದರೆ ಮಕ್ಕಳು ಅಳಲು ಕೂಡ ಇವರ ಅನುಮತಿ ತೆಗೆದುಕೊಳ್ಳಬೇಕು ಅನ್ನುವ ರೀತಿಯಲ್ಲಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ನಾನು ನೇರವಾಗಿ ಕೊಲೊನಿಯಲ್ ಮಬುಚಿಯನ್ನೇ ಎದುರುಹಾಕಿಕೊಂಡಿದ್ದೆ. ಆದೇಶವನ್ನು ಹಿಂತೆಗೆದುಕೊಳ್ಳುವ ಸಾಧ್ಯತೆಗಳು ಬಹಳ ಕಡಿಮೆಯಿತ್ತು. ಯಮಾ ಸಾನ್ ಮತ್ತು ನಿರ್ಮಾಪಕ ಮೊರಿಟ ನೊಬ್ಯೊಶಿ ನಿಧಾನವಾಗಿ ದೃಶ್ಯವನ್ನು ಕತ್ತರಿಸಿಬಿಡುವ ಅನಿವಾರ್ಯತೆಯನ್ನು ಒಪ್ಪಿಕೊಳ್ಳುವತ್ತಲೇ…”
ಮರೆಯಲಾಗದ ಮೇಷ್ಟ್ರ ಕತೆ (ಭಾಗ-2): ಕುರಸೋವ ಆತ್ಮಕತೆಯ ಕಂತು
“ಯಮಾ ಸಾನರಿಂದ ಸಂಕಲನ ಕುರಿತು ಬೆಟ್ಟದಷ್ಟು ವಿಷಯಗಳನ್ನು ಕಲಿತೆ. ಆದರೆ ಒಂದು ಮುಖ್ಯವಾದ ಸತ್ಯವೆಂದರೆ ಸಂಕಲನ ಮಾಡುವಾಗ ನಿಮ್ಮದೇ ಕೃತಿಯನ್ನು ನೀವು ವಸ್ತುನಿಷ್ಠವಾಗಿ ನೋಡಬೇಕು. ಕಷ್ಟಪಟ್ಟು ತೆಗೆದ ತಮ್ಮದೇ ಸಿನೆಮಾವನ್ನು ಯಮಾ ಸಾನ್ ನಿರ್ದಾಕ್ಷಿಣ್ಯವಾಗಿ ಕತ್ತರಿಸಿಬಿಡುತ್ತಿದ್ದರು. ಅವರು ಸಂಕಲನದ ಕೋಣೆಯೊಳಗೆ ಖುಷಿಯಾಗಿ ಬಂದು “ಕುರೊಸೊವ ನಿನ್ನೆ ರಾತ್ರಿ ಯೋಚಿಸಿದೆ. ನೀನು ಈ ದೃಶ್ಯಗಳನ್ನು ಕತ್ತರಿಸು” ಎಂದು ಹೇಳುತ್ತಿದ್ದರು.”









