ಚಕ್ರವ್ಯೂಹ: ಕುರಸೋವ ಆತ್ಮಕತೆಯ ಕಂತು
“ಸಾಹಿತ್ಯ ಮತ್ತು ಸಿನೆಮಾ ಕುರಿತ ಒಳನೋಟಗಳನ್ನು ನನಗೆ ಒದಗಿಸಿದ್ದು ನನ್ನ ದೊಡ್ಡಣ್ಣ. ಅವನು ಹೇಳುತ್ತಿದ್ದ ಪ್ರತಿ ಸಿನಿಮಾವನ್ನು ತಪ್ಪದೇ ನೋಡುತ್ತಿದ್ದೆ. ಅವನು ಚೆನ್ನಾಗಿದೆ ಎಂದು ಹೇಳಿದ ಸಿನಿಮಾ ಎಷ್ಟೇ ದೂರವಿರಲಿ ಹೋಗಿ ನೋಡುತ್ತಿದ್ದೆ. ಅಸೂಕಾವರೆಗೂ ನಡೆದು ಸಿನಿಮಾ ನೋಡಿಬರುತ್ತಿದ್ದೆ. ಅಲ್ಲಿ ಏನು ನೋಡಿದೆ ಎನ್ನುವುದು ನೆನಪಿಲ್ಲ. ಆದರೆ ಅದೊಂದು ಒಪೆರ ಥಿಯೇಟರ್ ಅನ್ನುವುದು ನೆನಪಿದೆ. ತಡರಾತ್ರಿಯ ಶೋಗಳಿಗೆ ಸಿಗುತ್ತಿದ್ದ ರಿಯಾಯ್ತಿ ಟಿಕೇಟು ಕೊಳ್ಳಲು ಉದ್ದ ಸಾಲುಗಳಲ್ಲಿ ನಿಲ್ಲುತ್ತಿದ್ದದ್ದು ನೆನಪಿದೆ.”
ಪುರದ ಪುಣ್ಯ ಪುರುಷ ಹೋದಂತೆ ಎದ್ದು ಹೋದ ಭಾಗವತಣ್ಣ: ಭಾರತಿ ಹೆಗಡೆ ಬರಹ
“ಭಾಗವತಣ್ಣನ ಪದ್ಯವೆಂದರೆ ಹಾಗೆ, ಅಷ್ಟು ಸ್ಪಷ್ಟ. ಎಂಥ ರೌದ್ರವತೆ ಇರಲಿ, ಎಂಥ ಕರುಣಾ ರಸ ಇರಲಿ, ಪ್ರತಿ ಶಬ್ದವನ್ನೂ ಸ್ಪಷ್ಟವಾಗಿ ಉಚ್ಛರಿಸುತ್ತ, ಅಷ್ಟೇ ಚೆಂದವಾಗಿ ಅಲ್ಲೊಂದು ವಾತಾವರಣವನ್ನು ಸೃಷ್ಟಿಮಾಡುವ ತಾಕತ್ತು ಅವನಿಗಿತ್ತು. ಎಂಥ ಏರು ಧ್ವನಿಯಲ್ಲೂ, ಎಂಥ ಕೋಪದ, ಉಗ್ರ ಪದ್ಯಗಳನ್ನೂ ಸ್ಪಷ್ಟವಾಗಿ, ಎಲ್ಲರಿಗೂ ತಿಳಿಯುವಂತೆ ಹೇಳುವುದು ಭಾಗವತಣ್ಣನ ಸ್ಟೈಲ್.”
ನನ್ನ ಮೆಚ್ಚಿನ ಓಹರಾ ಯೋಯಿಚಿ ಗುರುಗಳು: ಕುರಸೋವ ಆತ್ಮಕತೆಯ ಕಂತು
“ನಮ್ಮ ಕಾಲದಲ್ಲಿ ವ್ಯಕ್ತಿಯ ಸ್ವತಂತ್ರ ಚೇತನಕ್ಕೆ ಹಾಗೂ ವೈಯುಕ್ತಿಕ ವಿಶಿಷ್ಟತೆಗಳಿಗೆ ಮನ್ನಣೆ ನೀಡುವ ಶಿಕ್ಷಕರಿದ್ದರು. ಇವತ್ತಿನ ಶಿಕ್ಷಕರಿಗೆ ಅವರನ್ನು ಹೋಲಿಸಿದಾಗ ಇಂದು ಬಹಳ ಮಂದಿ ಕೇವಲ “ಸಂಬಳ”ಕ್ಕಾಗಿ ಶಿಕ್ಷಕರಾದವರಿದ್ದಾರೆ. ಈ ರೀತಿಯ ಬ್ಯೂರೊಕ್ರೆಸಿಯ ಸ್ವಭಾವದವರು ಶಿಕ್ಷಕರಾಗಿ ಮಾಡುವ ಪಾಠ ನಿಜಕ್ಕೂ ಏನನ್ನೂ ಕಲಿಸುವುದಿಲ್ಲ. ಆ ಪಾಠಗಳಲ್ಲಿ ಸತ್ವವಿರುವುದಿಲ್ಲ. ಇಂದಿನ ವಿದ್ಯಾರ್ಥಿಗಳು ಹೆಚ್ಚಿನ ಸಮಯವನ್ನು ಕಾಮಿಕ್ ಪುಸ್ತಕಗಳನ್ನು ಓದುವುದರಲ್ಲಿ ಕಳೆಯುತ್ತಿರುವುದರಲ್ಲಿ ಆಶ್ಚರ್ಯವಿಲ್ಲ.”
ಪಾರ್ವತಿ-ಗಣಪಿಯರೆಂಬ ಜೀವಕೊರಳ ಗೆಳತಿಯರು: ಭಾರತಿ ಹೆಗಡೆ ಕಥಾನಕ
“ಹಸಿಹಸಿ ಬಾಣಂತಿ ಪಾರ್ವತಿ ಮಗುವನ್ನೂ ಕರೆದುಕೊಂಡು ಮನೆಯಿಂದ ಹೊರಬಿದ್ದಳು. ಸೀದಾ ಅಘನಾಶಿನಿ ನದಿಯ ದಂಡೆಯ ಮೇಲೆ ಹೊಳೆಯನ್ನೇ ದಿಟ್ಟಿಸಿತ್ತ ಕುಳಿತಳು. ಅದೆಷ್ಟು ಹೊತ್ತು ಹಾಗೆಯೇ ಕುಳಿತಿದ್ದಳೋ… ಹಿಂದೆ ಗಣಪಿ ಬಂದು ನಿಂತದ್ದೂ ಅರಿವಿಗೆ ಬಾರದಂತೆ. ‘ಎಂತದ್ರಾ ಅಮ್ಮಾ.. ಹೀಂಗ್ ಕುಂತೀರಿ’ ಎಂದು ಗಣಪಿ ಕೇಳಿದಾಗಲೇ ಎಚ್ಚರವಾಗಿದ್ದು. ‘ಎಂತ ಇಲ್ಲ ಗಣಪಿ, ಈ ಹೊಳೆಗೇ ಬಿದ್ದು ಸತ್ಹೋಗನ ಅಂದರೆ ನಂಗೆ ಈಜು ಬರ್ತದೆ…”
ಭೂಮಿಯ ಮೇಲಿದ್ದವರೆಲ್ಲಾ ಚೆಲ್ಲಾಪಿಲ್ಲಿಯಾದ ಆ ದಿನ…
“ಆ ಭೀಕರ ಭೂಕಂಪದ ದಿನ ಮೋಡಗಳಿಲ್ಲದೆ ಕತ್ತಲಾವರಿಸಿತು. ಉರಿಯುತ್ತಿದ್ದ ಬೇಸಿಗೆಯ ಬೇಗೆಯಲ್ಲಿ ಜನ ಬೇಯುತ್ತಿದ್ದರು. ಆದರೆ ಶುಭ್ರ ನೀಲಾಕಾಶ ಕಣ್ಮರೆಯಾಗಿ ಶರತ್ಕಾಲದ ಆಗಸವನ್ನು ನೆನಪಿಸುವಂತಿತ್ತು. ಸುಮಾರು ಹನ್ನೊಂದು ಗಂಟೆಯ ಹೊತ್ತಿಗೆ ಯಾವುದೇ ಬಗೆಯ ಮುನ್ಸೂಚನೆಯಿಲ್ಲದೆ ಇದ್ದಕ್ಕಿದ್ದಂತೆ ಭೀಕರ ಬಿರುಗಾಳಿ ಎದ್ದಿತು.”
ಹಾವು ಗಣಪನ ಜಯಮಾಲಿನಿ ಹುಚ್ಚು:ಭಾರತಿ ಹೆಗಡೆ ಕಥಾನಕ
“ಇಂಥ ಗಣಪ ಇತ್ತೀಚೆಗೆ ನಾಗಿ ಬಳಿ ಪ್ರೀತಿಯಿಂದಿರಲಿಲ್ಲ. ಹಗಲೆಲ್ಲ ದುಡಿಯುತ್ತಿದ್ದರೂ ರಾತ್ರಿಹೊತ್ತು ಚೆನ್ನಾಗಿ ಹೊಡೆಯುತ್ತಿದ್ದ. ಅದೂ ಜಯಮಾಲಿನಿ ಸಿನಿಮಾ ನೋಡಿ ಬಂದಮೇಲಂತೂ ವಾರಗಟ್ಟಲೆ ಅವ ಸಮ ಇರುತ್ತಿರಲಿಲ್ಲ. ಒಂದೊಂದು ದಿನ ಒಂದೊಂದು ರೀತಿ ಇರುತ್ತಿದ್ದ. “
ಗಡ್ಡಧಾರಿ ಸ್ವಾಮಿಗಳ ಪೂರ್ವಾಪರ ಆಶ್ರಮದ ಹಕೀಕತ್ತು: ಭಾರತಿ ಹೆಗಡೆ ಕಥಾನಕ.
“ಹೀಗೆಯೇ ಒಂದು ಸಂಜೆ ಅಷ್ಟೆಅಷ್ಟೇ ಆಗಿ ಮಳೆ ಹನಿ ಉದುರುತ್ತಿತ್ತು. ಮಲ್ಲಿಗೆ ಹೂವನ್ನು ಕೊಯ್ಯಲೆಂದು ಅಂಗಳಕ್ಕೆ ಬಂದ ಶಾರಿಗೆ ಕಿಟಕಿಯ ಪಕ್ಕ ಗಡ್ಡ ಕಾಣಿಸಲಿಲ್ಲ. ‘ಅರೆ ಎಲ್ಲಿ ಹೋದ್ವಪ ನಿಮ್ಮ ಸ್ವಾಮಿಗಳು’ ಎಂದು ವ್ಯಂಗ್ಯವಾಗಿ ಕೇಳಿದಳು ಶಾರಿ. ಅವರ ಪೂರ್ವಾಶ್ರಮಕ್ಕೆ ಹೋಗಿದ್ದಾರೆ ಎಂದು ತಣ್ಣಗೆ ಹೇಳಿದ ಶಿವರಾಮಣ್ಣನಿಗೆ”
ಶಾಂತಜ್ಜ,ಮೀರ್ ಸಾದಕ ಮತ್ತು ಸಂಪೂರ್ಣ ನಾರಾಯಣರಾಯ: ಭಾರತಿ ಹೆಗಡೆ ಕಥಾನಕ
“ಶಾಂತಜ್ಜನ ಕೊನೆಯ ದಿನಗಳಲ್ಲಿ ಅವನಿಗೆ ಕಣ್ಣು ಕಾಣಿಸುತ್ತಿರಲಿಲ್ಲ. ಹೀಗಿದ್ದೂ ನಾಟಕವಾಡುವ ಖಯಾಲಿ ಬಿಡುತ್ತಲೂ ಇರಲಿಲ್ಲ. ಸ್ಟೇಜಿಗೆ ಬರುವವರೆಗೂ ಅವನನ್ನು ಯಾರಾದರೂ ಕೈ ಹಿಡಿದು ಕರೆದುಕೊಂಡು ಬರಬೇಕಾಗಿತ್ತು. ಆದರೆ ರಂಗಕ್ಕೆ ಬಂದಮೇಲೆ ಕಣ್ಣು ಕಾಣುವವರಿಗಿಂತಲೂ ಚೆನ್ನಾಗಿ ನಟಿಸುತ್ತಿದ್ದ.”
ಮಳೆ ಬಂದಾಗಲೆಲ್ಲ ಅಳುವ ಜಲದೇವತೆ: ಭಾರತಿ ಹೆಗಡೆ ಕಥಾನಕ
“ಇಡೀ ಊರು ಮಂಜ ಹೆಗಡೆರಿಗೆ ಗೌರವ ಕೊಡುತ್ತಿದ್ದರೂ ಕಲಾವತಕ್ಕ ಮಾತ್ರ ಅವರಿಗೆ ಕವಡೆ ಕಿಮ್ಮತ್ತನ್ನೂ ಕೊಡುತ್ತಿರಲಿಲ್ಲ. ತನಗೆ ಬೇಕಾದಹಾಗೆ ಇರತೊಡಗಿದಳು. ಹಾಗೆ ಮೂರನೇ ಮಗನೂ ಸತ್ತಾಗ ಮಂಜಹೆಗಡೇರು, ಕಲಾವತೀ.. ಎಂದು ಕರೆದರು. ಈ ಸಾವುಗಳೆಲ್ಲ ನಿಲ್ಲೋದ್ಯಾವಾಗ ಕಲಾವತೀ… ಎಂದು ವಿಚಿತ್ರವಾಗಿ ಕೇಳಿದರು”










