ಪೂರ್ವಾಂಚಲ ಪುರಾಣ-2: ಎಂ. ವೆಂಕಟಸ್ವಾಮಿ ಪ್ರವಾಸ ಕಥನ
ಮಾಣಿಕ್ಯ ರಾಜ ವಂಶದವರು ತ್ರಿಪುರಾ ರಾಜ್ಯವನ್ನು ಆಳುತ್ತಿದ್ದರು. ಬ್ರಿಟಿಷರ ಕಾಲದಲ್ಲೂ ಇದು ಮಹಾರಾಜರ ಆಡಳಿತದಲ್ಲೇ ಇತ್ತು. ಭಾರತಕ್ಕೆ ಸ್ವಾತಂತ್ರ್ಯ ಬಂದ ತಕ್ಷಣವೆ ಸೆಪ್ಟಂಬರ್ ೯, ೧೯೪೭ರಂದು ಭಾರತದೊಂದಿಗೆ ಐಕ್ಯಗೊಳ್ಳಲು ತ್ರಿಪುರಾ ಮಹಾರಾಣಿ ಒಪ್ಪಿಗೆ ನೀಡಿದ್ದರು.
ರಜನಿ ಗರುಡ ಬರೆದ ರಂಗಭೂಮಿಯ ನೆನಪುಗಳು
ಹತ್ತು ತಿಂಗಳ ಕೋರ್ಸ್ ಮುಗಿದೇ ಹೋಯಿತು. ಆಗ ನಾನು ಮನೆಯ ಬಗ್ಗೆ ವಿಚಾರ ಮಾಡಲು ಪ್ರಾರಂಭಿಸಿದೆ. ಆದರೆ ಮುಂದಿನ ವರ್ಷ ತಿರುಗಾಟಕ್ಕೆ ಬರಲು ಒಪ್ಪಿದ್ದೆ. ಎರಡು ತಿಂಗಳನ್ನು ಮನೆಯಲ್ಲೇ ಕಳೆಯಬೇಕಾಗಿತ್ತು. ಅಪ್ಪ-ಚಿಕ್ಕಪ್ಪ ಎಲ್ಲ ಬೇರೆಯಾಗಿದ್ದರು.
ಮದರಸಾಗಳ ಸುತ್ತಮುತ್ತ: ಫಕೀರ್ ಲೇಖನಮಾಲೆ ಶುರು
ಉತ್ತರ ಭಾರತದಲ್ಲಿ ಮದ್ರಸಾಗಳು ಸ್ಥಾಪನೆಯಾದದ್ದು ಹೆಚ್ಚುಕಮ್ಮಿ ೧೩ನೇ ಶತಮಾನದಲ್ಲಿ. ದೆಹಲಿಯೊಂದರಲ್ಲೇ ೧೪ನೇ ಶತಮಾನದ ಹೊತ್ತಿಗೆ ಒಂದು ಸಾವಿರ ಮದ್ರಸಾಗಳಲ್ಲಿ ಪಾಠ ನಡೆಯುತ್ತಿದ್ದವು. ಇಲ್ಲಿ ಕುರಾನ್ ಓದಲು ಕಲಿಯುವುದು ಮುಖ್ಯ ಪಾಠವಾಗಿತ್ತು.
ಸೂಫಿ ಕಥಾನಕ
ಮಕ್ಕಳ ಈ ಮಾತುಗಳು ಹಬೀಬ್ರವರಿಗೆ ಬಹಳವಾಗಿ ನಾಟಿತು. ಅವರು ತನ್ನ ದಾರಿ ಬದಲಿಸಿ ಶುಕ್ರವಾರ ಮಸೀದಿಯ ಸಭೆಗೆ ನಡೆಯ ತೊಡಗಿದರು. ಅಲ್ಲಿ ಹಸನ್ ಅಲ್ ಬಸ್ರೀಯವರ ಪ್ರವಚನದ ಕೆಲವು ವಾಕ್ಯಗಳು ಅವರ ಹೃದಯಕ್ಕೆ ನೇರವಾಗಿ ತಾಗಿ ಅವರಿಗೆ ಸ್ಮೃತಿ ತಪ್ಪಿದಂತಾಯಿತು.
ಲಕ್ಷ್ಮೀಶ ತೋಳ್ಪಾಡಿ ವಿರಚಿತ ಸಂಪಿಗೆ ಭಾಗವತ – ೩
ಕೃಷ್ಣ ಹೇಳಿದ: ನಮ್ಮ ಒಳಗಿನ ನಿಜ ನಮ್ಮನ್ನು ಹೇಗೆ ಸಹಿಸಿಕೊಂಡಿದೆ ಗೊತ್ತೇನು? ಆ ಒಳಗಿನ ನಿಜವನ್ನು ಬೇಕಾದರೆ ದೇವರೆನ್ನಿ. ಅದು ಈ ಲೋಕಕ್ಕೆ ನಮ್ಮನ್ನು ಒಪ್ಪಿಸಿ ತಾನು ಸದಾ ವಿದಾಯದ ಭಾವದಲ್ಲಿ ಇರುವಂತಿದೆ. ಸತ್ಯ ಅಡಗಿದೆ ಎನ್ನುತ್ತಾರಲ್ಲ- ತಿಳಿದಮಂದಿ. ಅಡಗಿದೆ ಎಂದರೆ ಸತ್ಯ ನಮ್ಮ ವಿರಹವನ್ನು ಅನುಭವಿಸುತ್ತಿದೆ. ನಮ್ಮನ್ನು ಅದಕ್ಕೆ ಒಪ್ಪಿಸದೆ ನಾವದನ್ನು ಪಡೆಯಲಾರೆವು. ಮತ್ತು ಒಪ್ಪಿಸುವುದೆಂದರೆ ನಮಗೆ ನಾವೇ ವಿದಾಯವನ್ನು ಕೋರಿದಂತೆ. ಅದಿರಲಿ; ನಿಮ್ಮ ವಿರಹ ನನ್ನನ್ನು ಎಂದೂ ಬಿಟ್ಟಗಲುವುದಿಲ್ಲ’
ಲಕ್ಷ್ಮೀಶ ತೋಳ್ಪಾಡಿ ವಿರಚಿತ ಸಂಪಿಗೆ ಭಾಗವತ – ೨
ಅಮೃತ ಕುಡಿದ ಸೊಕ್ಕಿನಿಂದ ದೇವತೆಗಳು ಗೆದ್ದರೇನೋ ನಿಜ. ಆಗ ದೈತ್ಯರ ದೊರೆಯಾಗಿದ್ದ ಬಲಿಚಕ್ರವರ್ತಿ ವಜ್ರಾಘಾತದಿಂದ ಸಾಯಬಿದ್ದ. ದೈತ್ಯಗುರುಗಳಾಗಿದ್ದ ಶುಕ್ರಾಚಾರ್ಯರು ತಮ್ಮ ಮಂತ್ರಬಲದಿಂದ ಬಲಿ ಚೇತರಿಸುವಂತೆ ಮಾಡಿದರು.
ಲಕ್ಷ್ಮೀಶ ತೋಳ್ಪಾಡಿ ವಿರಚಿತ ಸಂಪಿಗೆ ಭಾಗವತ ಮೊದಲ ಭಾಗ.
ವೇದ, ಉಪನಿಷತ್, ಮಹಾಕಾವ್ಯ,ಪರಿಸರ, ಸೌಂದರ್ಯ ಹಾಗೂ ಮಾನವ ಜೀವನದ ಕುರಿತು ಆಳವಾಗಿ, ಸ್ಪಷ್ಟವಾಗಿ ಮಾತನಾಡಬಲ್ಲ, ಬರೆಯಬಲ್ಲ ಲಕ್ಷ್ಮೀಶ ತೋಳ್ಪಾಡಿ ಕನ್ನಡದ ಈ ತಲೆಮಾರಿನ ಬಹಳ ಒಳ್ಳೆಯ ವಿದ್ವಾಂಸರಲ್ಲಿ ಒಬ್ಬರು. ತೋಳ್ಪಾಡಿಯವರು ಬರೆಯುವ ಭಾಗವತ ಕಥಾ ಸರಣಿ ಇನ್ನು ಮುಂದೆ ಪ್ರತೀ ಬುಧವಾರ ಕೆಂಡಸಂಪಿಗೆಯಲ್ಲಿ ಮೂಡಿಬರಲಿದೆ.ವರ್ತಮಾನದ ಕಥೆಗಳನ್ನೂ ಪುರಾಣಗಳ ಅಲೌಕಿಕ ಲೋಕವನ್ನೂ ಒಂದೇ ಕಡೆ ಹಿಡಿದಿಡುವ ಕೆಂಡಸಂಪಿಗೆಯ ಪ್ರಯತ್ನಗಳು ನಿಮಗೆಲ್ಲಾ ಇಷ್ಟವಾಗಬಹುದು ಎಂಬ ಆಶೆ ನಮ್ಮದು…
ರಮೇಶ್ ನಾಯಕ್ ಬರೆದ ಲಂಬಾಣಿ ಕಥಾಪ್ರಸಂಗಗಳು
ನಮ್ಮ ಗು೦ಪಿನ ನಾಲ್ಕು ಹುಡುಗ್ರು ಅವನ ಮನೆ ಕಡೆ ಹೋಗುವ ದಾರಿಯಲ್ಲೆ ಕಾದು ಕೂತೆವು. ಈ ವಿಷ್ಯ ನಮ್ಮ ತಾ೦ಡೆಯ ಹಿರಿಯ ನಾರಾಯಣ ಬುಡ್ದನಿಗೆ ಮೊದಲೆ ಹೇಳಿದ್ವಿ. ನಾರಾಯಣ ಬುಡ್ದನಿಗೆ ಪೆಮಲ್ಯಾನ ಮೇಲೆ ಯಾವುದೋ ಕಾರಣಕ್ಕೆ ಸಿಟ್ಟು ಇತ್ತು.
ಚೆನ್ನಿ ಕಥಾಕಾಲ: ರಾಜೇಂದ್ರ ಚೆನ್ನಿ
ಭಾರತಕ್ಕೆ ಮೊದಲ ಬುಕರ್ ಪ್ರಶಸ್ತಿಯನ್ನು ತಂದು ಆನಂತರ ‘ಬುಕರ್ ಆಫ್ ಬುಕರ್ಸ್’ ಪ್ರಶಸ್ತಿಯನ್ನು ಪಡೆದುಕೊಂಡು ಭಾರತೀಯರ ಇಂಗ್ಲಿಷ್ ಕಾದಂಬರಿ ಪ್ರಕಾರವನ್ನು ಇಡೀ ಜಗತ್ತು ಗಂಭೀರವಾಗಿ ಗಮನಿಸುವಂತೆ ಮಾಡಿದ್ದು ಸಲ್ಮಾನ್ ರಶ್ದಿಯ ‘ಮಿಡ್ನೈಟ್ಸ್ ಚಿಲ್ಡ್ರನ್’ ಕಾದಂಬರಿ.









