ಕಾರವಾರದ ಆ ದಿನಗಳು: ರಂಜಾನ್ ದರ್ಗಾ ಸರಣಿ
‘ನಮ್ಮ ಕಷ್ಟ ಸುಖದಲ್ಲಿ ಇವರು. ಇವರ ಕಷ್ಟ ಸುಖದಲ್ಲಿ ನಾವು. ನಮ್ಮ ನಡುವೆ ಧರ್ಮಗಳು ಅಡ್ಡ ಬರುವುದಿಲ್ಲ. ಧರ್ಮಗಳ ಗೋಜಿಗೆ ನಾವು ಹೋಗುವುದಿಲ್ಲ. ಅವುಗಳ ಪಾಡಿಗೆ ಅವು ಇರುತ್ತವೆ. ನಮ್ಮ ಪಾಡಿಗೆ ನಾವು ಇರುತ್ತೇವೆ. ಕೆಲಸ ಮಾಡುವವರಿಗೆ ಎಲ್ಲ ಧರ್ಮಗಳು ಒಂದೇ. ಕೆಲಸವಿಲ್ಲದವರಿಗೆ ಮತ್ತು ಕೆಲಸವಿಲ್ಲದೆ ಬದುಕಬೇಕೆನ್ನುವವರಿಗೆ ಧರ್ಮಗಳು ಬೇರೆ ಬೇರೆಯಾಗಿ ಕಾಣುತ್ತವೆ. ಆ ಅವರು ಉಗ್ರರೂಪ ತಾಳಿ ಅನ್ಯ ಧರ್ಮೀಯರನ್ನು ಕೊಲ್ಲುತ್ತಾರೆ ಇಲ್ಲವೆ ಅವರಿಂದ ಕೊಲೆಗೀಡಾಗುತ್ತಾರೆ.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 100ನೇ ಕಂತು ನಿಮ್ಮ ಓದಿಗೆ
ನಿದ್ದೆ ಮತ್ತು ಚಲನೆ; ಪಯಣ ಹೇಳುವ ಕಥೆ: ರಾಮ್ ಪ್ರಕಾಶ್ ರೈ ಕೆ. ಸರಣಿ
ದೈವ ದರುಶನದ ನಂತರ ಜೇಮ್ಸ್ ತನ್ನ ಪತ್ನಿಯ ಕಾಲಿಗೆ ಮುಲಾಮು ಹಚ್ಚಿ ನೇವೇರಿಸುವ ದೃಶ್ಯ ಬರುತ್ತದೆ. ಅದನ್ನು ಸ್ನಾನ ಮುಗಿಸಿ ಬರುವ ಮಗ ನೋಡುತ್ತಾ ನಿಲ್ಲುತ್ತಾನೆ. ಗಂಡಸರ ತುಕ್ಕು ಹಿಡಿದ ಈಗೋಗಳಿಗೆ ಈ ದೃಶ್ಯ ಚಾಟಿ ಏಟಿನಂತೆ ಕಾಣುತ್ತದೆ. ಮುಂದೆ, ಜೇಮ್ಸ್ ಕಾಣೆಯಾಗಿ ಸುಂದರಂ ಆಗಿ ಬದಲಾದಾಗ, ಬಸ್ಸಿನಲ್ಲಿದ್ದ ಒಂದು ಪರಿವಾರ ಎರ್ನಾಕುಳಮ್ ನತ್ತ ಸಾಗುವ ಗಾಡಿಯ ಹತ್ತಿ ಹೋಗಿ ಬಿಡುತ್ತದೆ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿ
ಸ್ರೀರಾಮ್ನೋಮಿ: ಸುಮಾ ಸತೀಶ್ ಸರಣಿ
ರಾಮುನ್ನ ಒಲಿಸ್ಕಣಾದು ಕಷ್ಟ. ಹನುಮಂತನ್ನ ಒಲಿಸ್ಕಣಾದು ಸುಲ್ಬ. ರಾಮಾ ಅಂದ್ರೆ ಸಾಕು ಹನುಮ ಓಡೋಡ್ಕಂಡು ಬರ್ತಾನೆ. ಆಗ ಬ್ಯಾರೆ ಆಟ ಕಟ್ದೆ ರಾಮ್ನೂ ಹಿಂದಿಂದ್ಲೇ ಬತ್ತಾನೆ ಅಂಬೋದು ಅಜ್ಜಿ ಯೋಳ್ತಿದ್ದ ಇಚಾರ. ಅಂಗಾಗಿ ರಾಮನ ಹತ್ರುಕ್ಕೆ ಹೋಗಾಕೆ ಸಲೀಸು ಹನುಮಂತನ ಭಜನೆ ಮಾಡೋದು. ಹನುಮ ಕಪಿ ಅಲ್ವೇ. ಕಿಚಪಿಚಾಂತ ನಾವೂ ಕಪಿಗಳಂಗೇ ಭಜನೆ ಹಾಡ್ತಿದ್ವಿ. ಮರದಾಗಿರೋವೂ ಜಾತಿಪ್ರೀತಿಗೆ ಓಡಿಬರೋ ಅಂಗೆ ಇರ್ತಿತ್ತು ನಮ್ಮ ಆಲಾಪ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿ
ಓದುತ್ತಿದ್ದಾಗಲೇ ನಾನು ಮೇಷ್ಟ್ರು ಎಂಬ ಸುಳ್ಳಿನ ಕತೆ ಕಟ್ಟಿದ್ದು!!!: ಬಸವನಗೌಡ ಹೆಬ್ಬಳಗೆರೆ ಸರಣಿ
ಅವಳು “ನಿಮ್ಮ ತರಹದವರನ್ನೇ ನಾನು ಕಾಲೇಜಿನಲ್ಲಿ ನೋಡಿದೆ” ಎಂದಾಗ ನಾನು ನಗುತ್ತಾ “ಹೋ.. ಹೋ… ಅವನಾ? ನನ್ನ ತಮ್ಮ, ಅವನನ್ನು ನೋಡಿ ನೀನು ನಾನೇ ಎಂದು ಭಾವಿಸಿದೆಯಾ” ಎಂದು ಹೊಸ ಕಥೆ ಕಟ್ಟಿದೆ. ಆಗ ಅವಳು “ಅದ್ಹೇಗೆ? ನೀವಿಬ್ಬರೂ ಒಂದೇ ಕ್ಲಾಸಲ್ಲಿ ಇರಬೇಕಿತ್ತಲ್ವಾ?” ಎಂದಾಗ “ಹೋ ಹೋ ಅದಾ ಅವನು ಫೇಲ್ ಆಗೀ ಆಗೀ ಹಿಂದಕ್ಕೆ ಉಳಿದುಕೊಂಡ ನಾನು ಪಾಸ್ ಆಗೀ ಆಗೀ ಮುಂದಕ್ಕೆ ಹೋದೆ” ಎಂದೆ. ಅವಳು ನಂಬಿದಳು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ
ವೈ ದಿಸ್ ಡೆಲಿವರಿ ಡೆಲಿವರಿ ಡಿ…: ಸುಮಾವೀಣಾ ಸರಣಿ
ಮೊನ್ನೆ ಆಚೆ ಹೋಗಕೆ ಇದ್ದೆ. ಅಲ್ಲೊಬ್ಬ ಡೆಲಿವರಿ ಬಾಯ್ ಫೋನ್ ಲೌಡಲ್ಲಿ ಇಟ್ಕೊಂಡು “ಹಲೋ ಇವತ್ತು ಡಿಲೆವರಿ ಇತ್ತು” ಎಂದ. ಆಚೆಕಡೆಯಿಂದ ಹಲೋ ತಮ್ಮ ಹೆಸರು ಅಂದ್ರೆ ರತ್ನ ಅಂದ್ರು. ಹೌದು ಮೇಡಮ್ ಡೆಲಿವರಿ ಮಾಡ್ತೀನಿ ನೀವ್ ಇರ್ತೀರ ಎಂದರೆ ಆ ಕಡೆಯಿಂದ ಇಲ್ಲ ನನ್ ಮಗಳ್ ಇರ್ತಾಳೆ ಫೋನ್ ಮಾಡಿ ಹೇಳ್ತೀನಿ… ಹಣ ಕಳ್ಸ್ತೀನಿ ಅಲ್ಲೆ ಡೆಲಿವರಿ ಮಾಡಿ” ಅನ್ನೋದ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಹದಿನೈದನೆಯ ಬರಹ ನಿಮ್ಮ ಓದಿಗೆ
‘ರೈತ ಕವಿ’ ಲೆನಾರ್ಟ್ ಸ್ಯೋಗ್ರೆನ್ : ಎಸ್. ಜಯಶ್ರೀನಿವಾಸ ರಾವ್ ಸರಣಿ
ಈ ಕಾರ್ಯದ ವಿರೋಧಾಭಾಸದ ಸ್ವರೂಪವು ಅವರ ಕವಿತೆಗಳಿಗೆ ಒಂದು ರೀತಿಯ ಮೊಂಡುತನದ ನಿಷ್ಠುರತೆಯನ್ನು ನೀಡುತ್ತದೆ. ಮೌನದ ದಿಕ್ಕಿನಲ್ಲಿ ಮಾತನಾಡುವ ಈ ಮಾತು, ಭಾಷೆಯ ಮೂಲಕ ಭಾಷೆಯಿಲ್ಲದವರ ಜಗತ್ತನ್ನು ವ್ಯಾಖ್ಯಾನಿಸುವ ಈ ಪ್ರಯತ್ನ – ಅದರೊಂದಿಗೆ, ಯಾವಾಗಲೂ ಅಡಗಿರುವ ವೈಫಲ್ಯದ ಭಾವನೆಯ ಜೊತೆ – ಸ್ಯೋಗ್ರೆನ್ ಅವರು ಇದನ್ನು ಮುವ್ವತ್ತಕ್ಕೂ ಹೆಚ್ಚು ಕವನ ಸಂಕಲನಗಳಲ್ಲಿ ನಿರಂತರವಾಗಿ ಮತ್ತು ಸಮಚಿತ್ತದಿಂದ ನಿರ್ವಹಿಸುತ್ತಾ ಬಂದಿದ್ದಾರೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಸ್ವೀಡನ್ ದೇಶದ ಕವಿ ಲೆನಾರ್ಟ್ ಸ್ಯೋಗ್ರೆನ್-ರವರ (Lennart Sjögren, 1930) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು
ಎಡವಟ್ಟುಗಳ ಸರಮಾಲೆ…: ಎಚ್. ಗೋಪಾಲಕೃಷ್ಣ ಸರಣಿ
ಇಲ್ಲೂ ಒಂದು ಭಾರೀ ತಪ್ಪು ಆಗಿಬಿಟ್ಟಿತು, ನಮ್ಮ ಯಾರ ನೆರವೂ ಇಲ್ಲದೆ… ಮೆಟ್ಟಲಿಗೆ ಅಂತ ಬಾರ್ ಬೆಂಡರ್ ಕಂಬಿ ಕಟ್ಟಿದ. ಕಾಂಕ್ರೀಟು ದಿವಸ ಅವನಿರಲಿ ಅಂತ ಮಲ್ಲಯ್ಯ ಹೇಳಲಿಲ್ಲ, ನಾನೂ ಅವನಿಗೆ ಹೇಳಲಿಲ್ಲ. ಕಾಂಕ್ರಿಟ್ ಹಾಕ್ತಾ ಇದಾರೆ. ಮೆಟ್ಟಲಿಗೆ ಅಂತ ಕಟ್ಟಿದ ಕಂಬಿ ಮುಂದಿನಿಂದ ಮೆಟ್ಟಲು ಏರುವ ರೀತಿ ಇರಬೇಕಿತ್ತು. ಅದು ಹೇಗೆ ಇಟ್ಟರೂ ಸರಿ ಬರ್ತಿಲ್ಲ! ನೋಡಿ ನಿಮ್ಮೋನು ಮಾಡಿರೋ ತಿರುಪತಿ ಕೆಲಸ. ಅವನಿಗೆ ಈಗಲೇ ಬರಕ್ಕೆ ಹೇಳಿ…! ಅವನನ್ನ ಹುಡುಕಿ ನಾನೆಲ್ಲಿ ಹೋಗಲಿ ಆ ಸಮಯದಲ್ಲಿ? ಫೋನ್ ಬೇರೆ ಇಲ್ಲ!
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ
ಕಡುಬಿನ ಪುರಾಣ: ಭವ್ಯ ಟಿ.ಎಸ್. ಸರಣಿ
ಮಳೆಗಾಲದಲ್ಲಿ ಮಲೆನಾಡಿನ ಹಸು, ಎತ್ತುಗಳಿಗೆ ಹುರುಳಿಕಾಳು ಬೇಯಿಸಿ ಕೊಡುತ್ತಾರೆ. ಈ ಹುರುಳಿ ಬೇಯಿಸಿದ ನೀರಿಗೆ ಹುರುಳಿಕಟ್ಟು ಎನ್ನುತ್ತಾರೆ. ಇದರ ರುಚಿ ಬಲ್ಲವರೇ ಬಲ್ಲರು. ಕುದ್ದು ದಪ್ಪಗಾಗಿ ಹದಗೊಂಡ ಹುರುಳಿಕಟ್ಟಿಗೆ ಸಾಸಿವೆ, ಬೆಳ್ಳುಳ್ಳಿ, ಕರಿಬೇವು, ಒಣ ಮೆಣಸಿನ ಒಗ್ಗರಣೆ ಕೊಟ್ಟು, ಸ್ವಲ್ಪ ವಾಟೆಹುಳಿ ಅಥವಾ ಹುಣಸೆಹಣ್ಣು ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿದರೆ ಘಮಘಮಿಸುವ ಹುರುಳಿಕಟ್ಟಿನ ಸಾರು ತಯಾರಾಗುತ್ತದೆ. ಇದನ್ನು ಕಡುಬಿಗೆ ಕಲಸಿ ತಿಂದರೆ ಸ್ವರ್ಗಕ್ಕೆ ಮೂರೇ ಗೇಣು.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿ
ಯುಗ ಯುಗಾದಿ ಕಳೆದರೂ ಮರೆಯಲಾಗದ ಸಂಭ್ರಮ: ಸುಮಾ ಸತೀಶ್ ಸರಣಿ
ಮನೆ ಹೆಂಗಸರಿಗೆ ಮಧ್ಯರಾತ್ರಿಯಿಂದಲೇ ಸುರುವಾಗ್ತಿತ್ತು. ಬೆಳಗಿನ ಜಾವ ಎರಡು ಗಂಟೆಯಿಂದಲೇ ಹೂರಣ ರುಬ್ಬುವ, ಒಬ್ಬಟ್ಟು ತಟ್ಟುವ, ಬೇಯಿಸುವ ಸದ್ದು. ಹೋಳಿಗೆ ವಾಸನೆಗೆ ಊರೆಲ್ಲಾ ಘಮಗುಡುತ್ತಿತ್ತು. ಒಬ್ಬಟ್ಟು ಸಾರು ಮರಳಿಸುತ್ತಿದ್ದರೆ ಮೂಗಿನ ಹೊಳ್ಳೆಗಳು ಅರಳಿ, ನಿಮಿರುತ್ತಿದ್ದವು. ದೊಡ್ಡ ದೊಡ್ಡ ಬೇಸನ್ನುಗಳಲ್ಲಿ ಒಬ್ಬಟ್ಟಿನ ರಾಶಿ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಹಳ್ಳಿ ಯುಗಾದಿಯ ಸಂಭ್ರಮಗಳ ಕುರಿತ ಬರಹ ನಿಮ್ಮ ಓದಿಗೆ









