ಮಹೋನ್ನತ ಮಾನವ: ರಂಜಾನ್ ದರ್ಗಾ ಸರಣಿ
ಅವರೊಮ್ಮೆ ಸಸ್ಯಶಾಸ್ತ್ರದ ಪ್ರಯೋಗಾಲಯಕ್ಕೆ ಭೇಟಿ ನೀಡಿದಾಗ, ಪ್ರಯೋಗಕ್ಕಾಗಿ ಎಲ್ಲಿಂದಲೋ ತಂದ ಕಮಲದ ಹೂ ನೋಡಿದರು. ಮತಗೆ ಅದನ್ನೆತ್ತಿ ಖಲಿಲ್ ಗಿಬ್ರಾನನ ಕವನದ ಸಾಲೊಂದನ್ನು ಉಸುರಿದರು. ಅದರ ಪಕಳೆಗಳನ್ನು ಕಿತ್ತು ಪರೀಕ್ಷಿಸುವುದು ಅವರಿಗೆ ಹಿಂಸೆ ಎನಿಸಿತ್ತು.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 89ನೇ ಕಂತು ನಿಮ್ಮ ಓದಿಗೆ
ಎಂ.ಎಸ್. ರಾಮಯ್ಯ ಕಾಲದ ಬೆಂಗಳೂರು: ಎಚ್. ಗೋಪಾಲಕೃಷ್ಣ ಸರಣಿ
ಈ ರಸ್ತೆಯಲ್ಲಿ ಮಿಲಿಟರಿಗೆ ಸಂಬಂಧಿಸಿದ ಕೆಲವು ಕಚೇರಿಗಳು ಇದ್ದವು. ಇಲ್ಲೂ ಸಹ ಒಂದು ರೈಲ್ವೇ ಗೇಟ್ ಇತ್ತು. ತೀರಾ ಈಚೆಗೆ ಒಂದು ಅಂಡರ್ ಪಾಸ್ ನಿರ್ಮಾಣವಾಗಿ ರೈಲು ಅದರ ತಳಗೆ ಹೋಗುತ್ತದೆ. ಮಿಲಿಟರಿ ಕಚೇರಿಗಳಿಗೆ ಸೇರಿದ ಹಾಗೆ ಒಂದು ಕಾರ್ಖಾನೆ ಇತ್ತು. ಅದರ ಹೆಸರು ಸಿಗ್ ಫಿಲ್ ಎಂದು. ಸಿಗರೇಟ್ ಫಿಲ್ಟರ್ನ ಕಂದು ಬಣ್ಣದ ಬೊಂಬೆ ಅದರ ಮುಖ್ಯ ಫಲಕದ ಮೇಲೆ ಬಿಂಬಿತವಾಗಿತ್ತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ನಲವತ್ತಾರನೆಯ ಕಂತು ನಿಮ್ಮ ಓದಿಗೆ
ಊರ ಅಭಿವೃದ್ಧಿಯಲ್ಲಿ ಅಪ್ಪನ ಶ್ರಮ…: ಸುಮಾ ಸತೀಶ್ ಸರಣಿ
ಇಲ್ಲೂ ಒಂದು ವಿಸೇಸ ಐತೆ. ಇಡೀ ಮಧುಗಿರಿ ತಾಲೂಕಿನಾಗೆ ಮಧುಗಿರಿ ಟೌನ್ ನಾಗೆ ಮಾತ್ರವೇ ಸರ್ಕಾರಿ ಹೈಸ್ಕೂಲು ಇದ್ದಿದ್ದು. ಪ್ರವೀಟು ಇಸ್ಕೂಲ್ಗಳು ಹೋಬಳಿ ಕೇಂದ್ರ ಕೊಡಿಗೇನಹಳ್ಳೀನಾಗೂ ಸೇರಿ ಐದಾರು ಇದ್ವು ಆಟೇಯಾ. ಅಂಗಾಗಿ ಚಿಕ್ಕಮಾಲೂರು ಹೈಸ್ಕೂಲು ವಿಶೇಷವಾಗಿತ್ತು. ಅದ್ರಾಗೂ ಆ ವರ್ಸ ಇಡೀ ತುಮಕೂರು ಜಿಲ್ಲೇನಾಗೆ ಅದೊಂದೇ ಹೈಸ್ಕೂಲು ಮಂಜೂರಾಗಿದ್ದು ಅನ್ನೋದು ಇನ್ನೊಂದು ಕೋಡು ಸಿಗಿಸಿತ್ತು. ಇನ್ನಾ ಏಸೊಂದು ಕೆಲ್ಸಾ ಮಾಡವ್ರೆ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯ ಬರಹ ಇಲ್ಲಿದೆ
ಡಾಗ್ ಡೆಂಟಿಸ್ಟ್ಸ್!…: ಪೂರ್ಣೇಶ್ ಮತ್ತಾವರ ಸರಣಿ
ಏಕೆಂದರೆ, ನಾವು ಆರಂಭದಲ್ಲಿ ಅದರ ಕಣ್ಣು, ಕಿಡ್ನಿ, ಹೃದಯ,ಶ್ವಾಸಕೋಶ ಹೀಗೆ ದೇಹದ ಎಲ್ಲಾ ಭಾಗಗಳನ್ನು ಪಾರ್ಟ್ ಬೈ ಪಾರ್ಟ್ ಡಿಸೆಕ್ಷನ್ ಮಾಡಿ, ಅವುಗಳನ್ನು ಫಾರ್ಮಲಿನ್ ದ್ರಾವಣ ಹಾಕಿ ಗಾಜಿನ ಜಾರಿನಲ್ಲಿ ಪ್ಯಾಕ್ ಮಾಡಿ, ಮಣಿಪಾಲದಲ್ಲಿ ಮನುಷ್ಯರ ದೇಹದ ಭಾಗಗಳನ್ನು ಪ್ರದರ್ಶನಕ್ಕಿಟ್ಟಂತೆ ಲ್ಯಾಬ್ನಲ್ಲಿ ಪ್ರದರ್ಶನಕ್ಕಿಡಬೇಕೆಂದು ಆಸೆಪಟ್ಟಿದ್ದೆವು. ನೋಡಿದರೆ, ನಮ್ಮ ಪುಣ್ಯಕ್ಕೋ ಅಥವಾ ನಾಯಿಯ ಪುಣ್ಯಕ್ಕೋ ಅದರ ಬೋಟಿ ಖಲೀಜಾಗಳೊಂದೂ ಇರದೆ ಅದರ ಮುಖದ ಸ್ವಲ್ಪ ಭಾಗ ಬಿಟ್ಟರೆ ಉಳಿದ ಭಾಗವೆಲ್ಲಾ ಉಪ್ಪು ಮೀನು ಒಣಗಿದಂತೆ ಒಣಗಿದ ಸ್ಥಿತಿಯಲ್ಲಿತ್ತು!
ಪೂರ್ಣೇಶ್ ಮತ್ತಾವರ ಬರೆಯುವ “ನವೋದಯವೆಂಬ ನೌಕೆಯಲ್ಲಿ…” ಸರಣಿ
ಪರಿಸರ ರಕ್ಷಣೆಯ ಕಠಿಣ ವಜ್ರ ನಮೀಬಿಯಾ: ಡಾ. ವಿಶ್ವನಾಥ ಎನ್ ನೇರಳಕಟ್ಟೆ ಸರಣಿ
ನಿಸರ್ಗವನ್ನು ಆಧಾರವಾಗಿಟ್ಟುಕೊಂಡ ಜೀವನಶೈಲಿಯನ್ನು ಈಗಲೂ ಉಳಿಸಿಕೊಂಡಿರುವ ಅಲ್ಲಿನ ಹಲವು ಸಮುದಾಯಗಳು ಬದುಕನ್ನು ನಡೆಸುವುದರ ಜೊತೆಗೆ ಪ್ರಕೃತಿಯನ್ನೂ ಉಳಿಸಿ, ಬೆಳೆಸುತ್ತಿವೆ. ಇದರಿಂದಾಗಿ ನಮೀಬಿಯಾದ ಪ್ರವಾಸೋದ್ಯಮವೂ ಸಹ ಅಭಿವೃದ್ಧಿ ಕಂಡಿದೆ. ಪ್ರವಾಸೋದ್ಯಮಕ್ಕೆ ದೊರಕಿರುವ ಉತ್ತೇಜನದಿಂದಾಗಿ ಈ ಬುಡಕಟ್ಟು ಸಮುದಾಯಗಳು ಸಶಕ್ತಗೊಳ್ಳುತ್ತಿವೆ. ನಮೀಬಿಯಾದ ಬುಡಕಟ್ಟು ಸಮುದಾಯಗಳು ಅಲ್ಲಿನ ನಿಸರ್ಗವನ್ನು ಸಂರಕ್ಷಿಸಲು ನೀಡಿರುವ ಕೊಡುಗೆಯನ್ನು ವಿಶ್ವ ವನ್ಯಜೀವಿ ನಿಧಿ ಎಂಬ ಅಂತಾರಾಷ್ಟ್ರೀಯ ಸಂಘಟನೆಯು ಗುರುತಿಸಿದೆ.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿ
ಅಂಕಿಗಳ ಲೋಕದಲ್ಲಿ: ಸುಮಾವೀಣಾ ಸರಣಿ
‘420’ ಕೂಡ ಒಳ್ಳೆಯ ಸಂಖ್ಯೆ. ನಮ್ಮ ಇಂಡಿಯನ್ ಪಿನೆಲ್ ಕೋಡ್ನಲ್ಲಿ ಚೀಟಿಂಗ್ ಫೋರ್ಜರಿ ಕೇಸುಗಳು ದಾಖಲಾಗುವುದು ‘420’ ಸೆಕ್ಷನ್ನಿನ ಅಡಿಯಲ್ಲಿ. 1860 ಅಕ್ಟೋಬರ್ 6 ಇಂಡಿಯನ್ ಪಿನಲ್ ಕೋಡ್ ಬ್ರಿಟಿಷರಿಂದ ರಚಿಸಲ್ಪಟ್ಟದ್ದು. ಇದರಲ್ಲಿ ಎಲ್ಲಾ ರೀತಿಯ ಪ್ರಕರಣಗಳು ಬರುತ್ತವೆ. ಮೋಸ ಮಾಡಿದಾಗ ಹಣದ ವಿಚಾರದಲ್ಲಿ, ಆಸ್ತಿಗೆ ಸಂಬಂಧಿಸಿದಂತೆ ಮೋಸ ಮಾಡಲು ಪ್ರಚೋದನೆ ನೀಡಿದ ಪ್ರಕರಣಗಳಲ್ಲಿ ಸಿಲುಕಿದಾಗ ಆ ವ್ಯಕ್ತಿಗೆ ‘420’ ಕೇಸು ದಾಖಲಾಗುತ್ತದೆ. ಇದರಲ್ಲಿ 7 ವರ್ಷಗಳವರೆಗೂ ಶಿಕ್ಷೆ ಆಗುವ ಸಾಧ್ಯತೆ ಇರುತ್ತದೆ. ಹೀಗಾಗಿ ‘420’ ನಂಬರನ್ನು ಬಯ್ಯುತ್ತಾರೆ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಐದನೆಯ ಬರಹ
‘ಗಣಿತೀಯ ಗೀತರಚನೆಕಾರ’: ಎಸ್. ಜಯಶ್ರೀನಿವಾಸ ರಾವ್ ಸರಣಿ
“ನಾನು ಆಲಿಸುವೆ. ನಾನು ಆಲಿಸುವೆ, ನಾನು ವೀಕ್ಷಿಸುವೆ. ಸೃಜನಶೀಲತೆಗೆ ಯಾವುದೇ ನಿಯಮಗಳು ತಿಳಿದಿಲ್ಲ. ಯಾರೋ ಹೇಳಿದ ಯಾವುದೋ ಒಂದು ಮಾತಿನಿಂದ ಅಥವಾ ನೀವು ನೋಡಿದ ಯಾವುದೋ ಒಂದು ಮುಖದಿಂದ ಕಾದಂಬರಿಯ ಕಲ್ಪನೆಯನ್ನು ನೀವು ಪಡೆಯಬಹುದು. ಯಹೂದಿ ಧಾರ್ಮಿಕ ಪಂಡಿತನೊಬ್ಬ ನನಗೆ ಹೇಳಿದ ಒಮ್ಮೆ, ದೇವರು ಮೋಶೆಯ ಜತೆ ಆ ಪೊದೆಯಲ್ಲಿ ಮಾತನಾಡಿದಾಗ ಗುಡುಗಿನ ಧ್ವನಿಯಲ್ಲಿ ಮಾತನಾಡಿರಲಿಲ್ಲ, ಬಲು ಕ್ಷೀಣವಾದ ಧ್ವನಿಯಲ್ಲಿ ಮಾತನಾಡಿದ್ದ.”
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ
ಟೋಬಿ ಎಂಬ ಶಿಕ್ಷಕ: ಕೆ. ಸತ್ಯನಾರಾಯಣ ಪ್ರವಾಸ ಸರಣಿ
ಟೋಬಿ ಸ್ಪಷ್ಟ ವಿಚಾರಗಳಿಗೆ ಬಂದಿದ್ದರು. ನೀವು ಉದ್ಯೋಗರಂಗವನ್ನು ಪ್ರವೇಶಿಸಿದ ಮೇಲೂ ಕೆಲಸ ಕಾರ್ಯ ಚೆನ್ನಾಗಿ ನಿರ್ವಹಿಸಲು, ಪದೋನ್ನತಿ ಪಡೆಯಲು, ಸಹೋದ್ಯೋಗಿಗಳೊಡನೆ ಬೆರೆಯಲು, ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು, ನಿಮಗೆ ನಿಜಕ್ಕೂ ನೆರವಾಗುವುದು ಜೀವನಾನುಭವವೇ. ನಂತರ ಈ ಜೀವವಾನುಭವದಿಂದ ಮೂಡುವ ಜ್ಞಾನಾನುಭವ ಮತ್ತು ಜೀವನ ಕೌಶಲ್ಯ. ವ್ಯಕ್ತಿತ್ವ ನಿರ್ಮಾಣಗಳ ದಾರಿ ಚಿಕ್ಕ ವಯಸ್ಸಿನಲ್ಲೇ ದೊರಕಬೇಕು. ಮಕ್ಕಳ ಬಾಲ್ಯದಲ್ಲೇ ಇದಕ್ಕೆ ಭದ್ರ ಬುನಾದಿ ಹಾಕಬೇಕು.
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್ಲ್ಯಾಂಡ್ಸ್ ಬಾಣಂತನ” ಸರಣಿಯ ಆರನೆಯ ಬರಹ
ಭಾಷೆಯೆಂಬ ಬದುಕು ಮತ್ತು ಬಾಲ್ಯದ ಬಣ್ಣದ ಕನಸುಗಳು: ರಾಮ್ ಪ್ರಕಾಶ್ ರೈ ಕೆ ಸರಣಿ
ವೇಷ ತೆಗೆಯದೆ ಯುದ್ಧಕ್ಕೆ ಹೊರಡುವ ಉಪಾಧ್ಯಾಯರು, ರಾಮಣ್ಣನ ಮಾತುಕತೆ, ಮಹೇಂದ್ರನ ಚೇಷ್ಟೆ, ಅನಂತ ಪದ್ಮನಾಭರ ನಡುವಿನ ಜಗಳ, ಪಿ ಟಿ ಮಾಸ್ತರ್ರ ಗುಪ್ತ ಪ್ರೇಮ, ಮಕ್ಕಳ ಹೋರಾಟದ ಕೆಲವು ಭಾಗಗಳು ಎಲ್ಲವೂ ಇಲ್ಲಿ ಹೈಲೈಟು. ಹಾಗೆಂದು ಚಿತ್ರ ಹಾಸ್ಯಕ್ಕೆ ಸೀಮಿತಗೊಳ್ಳದೆ, ತಾನು ಹೇಳಬೇಕಾದ ಗಂಭೀರ ವಿಚಾರವನ್ನು ಭಾವಪೂರ್ಣವಾಗಿ ಹೇಳುತ್ತದೆ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿ









