Advertisement

ಸರಣಿ

ಪಡುವಣದ ಗಾಳಿಯಲಿ ಅಧ್ಯಾತ್ಮದ ಗಂಧ ಹರಡಿದ ಅಲೆಮಾರಿ ಬೋಧಕ

ಪಡುವಣದ ಗಾಳಿಯಲಿ ಅಧ್ಯಾತ್ಮದ ಗಂಧ ಹರಡಿದ ಅಲೆಮಾರಿ ಬೋಧಕ

ವಿವೇಕಾನಂದರು ನೀಡಿದ ಅನೇಕ ಉಪನ್ಯಾಸಗಳು  1896ರಲ್ಲಿ ಪ್ರಕಟವಾಗಿವೆ. ಪಶ್ಚಿಮದ ಅಧ್ಯಾತ್ಮ ಓದುಗರ ಕುತೂಹಲ ಆಸಕ್ತಿಗಳನ್ನು ಹೆಚ್ಚಿಸಿವೆ. ಹಿಂದೂ ನಂಬಿಕೆಗಳಲ್ಲಿ ಅಂತರ್ಗತವಾಗಿರುವ ದೇವರ ಕಲ್ಪನೆಯ ಪ್ರಚಾರಕನಾಗಿ ಬ್ರಿಟನ್ನಿಗೆ ಬಂದರು , ಎಲ್ಲ ಧರ್ಮಗಳ ಅರಿವಿನ ಪರಿಧಿಯನ್ನು ಹೆಚ್ಚಿಸಿ ಹೋದರು. ಭಾರತದಲ್ಲಿ ಜನಪ್ರಿಯವಾಗಿರುವ ವಿವಿಧ ನಂಬಿಕೆಗಳಿಂದ ನೇರ ಉದಾಹರಣೆಗಳನ್ನು ಆಧಾರವಾಗಿಸಿ ವಿವರಿಸುತ್ತಿದ್ದರು.ಎಲ್ಲ ನಂಬಿಕೆಗಳ ಒಳಹರಿವಾಗಿ , ಭಾರತೀಯ ಯೋಚನಾಕ್ರಮವನ್ನು ಆಧರಿಸಿದ ತತ್ವಶಾಸ್ತ್ರವನ್ನು ಬೋಧಿಸಿದರು. ವೇದ ಉಪನಿಷತ್ತು ಭಗವದ್ಗೀತೆಗಳನ್ನು ಉಲ್ಲೇಖಿಸಿದರು. ʻನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರುʼ ಸರಣಿಯಲ್ಲಿ ಯೋಗೀಂದ್ರ ಮರವಂತೆ ಬರಹ ಇಲ್ಲಿದೆ.

read more
ನನ್ನ ತಂದೆ ಶರಣರಂತೆ, ಸಂತರಂತೆ

ನನ್ನ ತಂದೆ ಶರಣರಂತೆ, ಸಂತರಂತೆ

ಅವರು ಜೀವನದಲ್ಲಿ ಸಾಲವನ್ನೇ ಮಾಡಲಿಲ್ಲ. ದುಡಿಮೆಯೆ ಅವರ ಬ್ಯಾಂಕು.  ವಾಪಸ್ ಮಾಡುವ ಶಕ್ತಿಇಲ್ಲವೆಂದ ಮೇಲೆ ಸಾಲ ಮಾಡಬಾರದು ಎಂಬುದು ಅವರ ನೀತಿಯಾಗಿತ್ತು. ಸಮಾಜ ಜಾತಿ ಉಪಜಾತಿಗಳ ಬಂಧನದಲ್ಲಿ ಸಿಕ್ಕಿ ಹಾಕಿಕೊಂಡಿದ್ದರೂ ಅಸ್ಪೃಶ್ಯತೆ ಆಚರಿಸುತ್ತಿದ್ದರೂ  ಆ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ‘ನೀವು ಹಾಗಿರಬೇಕು, ಹೀಗಿರಬೇಕು’ ಎಂದು ಯಾರಿಗೂ ಉಪದೇಶ ಮಾಡಲಿಲ್ಲ. ಆದರೆ ಸ್ವಂತಕ್ಕೆ ಜಾತಿ, ಧರ್ಮ ಮತ್ತು ಅಸ್ಪೃಶ್ಯತೆ ಮುಂತಾದವುಗಳನ್ನು ಮೀರಿ ಬದುಕಿದವರು. ನಾನು ಶನಿವಾರ ಜನಿಸಿದ್ದರಿಂದ ಪ್ರತಿ ಶನಿವಾರ ನನ್ನನ್ನು ಕರೆದುಕೊಂಡು ಶನಿದೇವರ ಗುಡಿಗೆ ಹೋಗುತ್ತಿದ್ದರು. ರಂಜಾನ್‌ ದರ್ಗಾ ಬರೆಯುವ  ನೆನಪಾದಾಗಲೆಲ್ಲ ಸರಣಿ

read more
ಅಸ್ಪೃಶ್ಯ ಆಕಾಶದ ಚಲನೆ

ಅಸ್ಪೃಶ್ಯ ಆಕಾಶದ ಚಲನೆ

ಚಲುವರಾಜನ ತಮ್ಮ ಚಂದ್ರ ಹಾಸ್ಟಲಲ್ಲೆ ಇದ್ದ. ಇನ್ನು ಚಿಕ್ಕವನು. ಬಾರೋ ಎಂದು ಕರೆದೊಯ್ದು ಎಲ್ಲ ಕ್ಲೀನ್ ಮಾಡಿಸಿದೆ. ಆ ಬ್ಯಾಗಲ್ಲಿದ್ದ ಅಕ್ಕಿ ಎಂತಾವು ನೋಡು ಎಂದೆ. ಯೋಗ್ಯ ಇದ್ದರೆ ಕೊಂಡೊಯ್ಯುವ ಎನಿಸಿತ್ತು. ಕಲ್ಲು ಮಿಶ್ರತ ಹುಳು ಹಿಡಿದ ಬೂಸ್ಲು ನುಚ್ಚಕ್ಕಿಯಾಗಿದ್ದವು. ಆ ನಾಯಿಗೆ ಇದನ್ನು ಬೇಯಿಸಿ ಹಾಕುತ್ತಿದ್ದರೆ ಈ ಪ್ರಾಧ್ಯಾಪಕರು.. ‘ನೀನೂ ಅದನ್ನೆ ಊಟ ಮಾಡಪ್ಪ’ ಎಂದಿದ್ದನಲ್ಲ ಮಹಾಶಯ! ಆ ನಾಯಿ ಮನೆ ಬಿಟ್ಟು ಹೋಗಿರುವುದರಲ್ಲಿ ನಮ್ಮ ಪಾಲು ಎಷ್ಟಿದೆಯೊ ಏನೊ!
ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯ 32ನೇಯ ಕಂತು.

read more
ಈ‌ ಒಂಟೆಗೇಕೆ ಮರಿಯ ಮೇಲಿಷ್ಟು ಸಿಟ್ಟು..

ಈ‌ ಒಂಟೆಗೇಕೆ ಮರಿಯ ಮೇಲಿಷ್ಟು ಸಿಟ್ಟು..

ಚಿತ್ರದ ಕಥಾವಸ್ತು ಹುಬ್ಬೇರಿಸುವಂಥಾದ್ದು. ಒಂಟೆಯೊಂದು ಬಿಳಿ ಬಣ್ಣದ ಮರಿ ಹಾಕಲು ಎರಡು ದಿನ ತೆಗೆದುಕೊಂಡ ನಂತರ ಮರಿಗೆ ಪ್ರೀತಿ ನಿರಾಕರಿಸಿ ಹಾಲು ಕುಡಿಯಲು ಬಿಡುವುದಿಲ್ಲ. ಮಾಡಿದ ಪ್ರಯತ್ನಗಳೆಲ್ಲ ವ್ಯರ್ಥವಾಗಿ ಕೊನೆಗೆ ತಾಯಿ ಒಂಟೆಗೆ ಅದರ ಮರಿಯ ಮೇಲೆ ಪ್ರೀತಿ ಹುಟ್ಟಿಸುವುದಕ್ಕೆ ಪಿಟೀಲು ವಾದನ ಕೇಳಿಸುವುದರಿಂದ ಸಮಸ್ಯೆ ನಿವಾರಣೆಯಾಗುತ್ತೆ. ಒಂದು ರೀತಿಯಲ್ಲಿ ಚಿತ್ರ ಸುಖಾಂತ.
ಎ.ಎನ್. ಪ್ರಸನ್ನ ಬರೆಯುವ ʻಲೋಕ ಸಿನಿಮಾ ಟಾಕೀಸ್‌ʼನಲ್ಲಿ ಮಂಗೋಲಿಯ ʻದ ಸ್ಟೋರಿ ಆಫ್‌ ವೀಪಿಂಗ್‌ ಕ್ಯಾಮೆಲ್‌ʼ ಸಿನಿಮಾದ ವಿಶ್ಲೇಷಣೆ

read more
ಅರುವತ್ತು ವರ್ಷಗಳ ರಾಜಕೀಯ ಅರಿವು

ಅರುವತ್ತು ವರ್ಷಗಳ ರಾಜಕೀಯ ಅರಿವು

ನನಗೆ ಬಾಲ್ಯದಲ್ಲೇ ರಾಜಕೀಯ ಪ್ರಜ್ಞೆ ಮೂಡತೊಡಗಿತು. ಆಗ ಎಲ್ಲ ರಾಜಕೀಯ ಪಕ್ಷದವರು ತಮ್ಮ ಚುನಾವಣಾ ಚಿಹ್ನೆಗಳುಳ್ಳ ಬಿಲ್ಲೆಗಳನ್ನು ಚುನಾವಣಾ ಭಾಷಣದ ಸಂದರ್ಭದಲ್ಲಿ ಹಂಚುತ್ತಿದ್ದರು. ಕಾಂಗ್ರೆಸ್ ಚಿಹ್ನೆ ನೊಗಹೊತ್ತ ಜೋಡೆತ್ತು ಇದ್ದರೆ, ಜನಸಂಘದ್ದು ಅಲ್ಲಾವುದ್ದೀನ ಚಿರಾಗದಂಥ ದೀಪದ ಚಿಹ್ನೆಯಾಗಿತ್ತು. ಸ್ವತಂತ್ರ ಪಕ್ಷದ್ದು ನಕ್ಷತ್ರ ಆಗಿತ್ತು. ಈ ಪ್ಲ್ಯಾಸ್ಟಿಕ್ ಅಥವಾ ತಗಡಿನ ಬಿಲ್ಲೆಗಳನ್ನು ಸಂಗ್ರಹಿಸುವುದಕ್ಕಾಗಿ ನಾವು ಹುಡುಗರು ಎಲ್ಲ ಪಕ್ಷಗಳ ಚುನಾವಣಾ ಸಭೆಗಳಿಗೆ ಹೋಗುತ್ತಿದ್ದೆವು. ಅವರ ಭಾಷಣಗಳನ್ನು ನಾನಂತೂ ತದೇಕಚಿತ್ತದಿಂದ ಕೇಳುತ್ತಿದ್ದೆ.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ನೆನಪಾದಾಗಲೆಲ್ಲ ಸರಣಿಯ 40ನೆಯ ಕಂತು.

read more
ಹೆಣ್ಣನ್ನು ಮುಟ್ಟಿದ್ದೀವಾ…

ಹೆಣ್ಣನ್ನು ಮುಟ್ಟಿದ್ದೀವಾ…

ಇಂತಹ ಹತ್ತಾರು ನಿದರ್ಶನಗಳಿಂದ ಆಕೆಗೆ ಏನೂ ತಿಳಿಯುತ್ತಿರಲಿಲ್ಲ. ನಾನು ಬಿಡಿಸಿ ಹೇಳುವಂತಿರಲಿಲ್ಲ. ಬೆದರಿ ಹೋಗಿದ್ದಳು. ಇದನ್ನು ಹೇಗೆ ಇಂಗ್ಲೀಷಿನಲ್ಲಿ ಸರಳೀಕರಿಸಿ ತಿಳಿಸಬಹುದು ಎಂದು ಮನದಲ್ಲೆ ಯತ್ನಿಸಿ; ಥತ್; ಇಂತಾ ಅಲ್ಕಾ ಟ್ರಾನ್ಸ್‌ಲೇಶನ್‌ನಿಂದಾಗಿ ಆಕೆ ನನ್ನ ಬಗ್ಗೆ ಕೆಟ್ಟದಾಗಿ ಭಾವಿಸಿ; ಎಲ್ಲಿ ನನಗೆ ಕಿರುಕುಳ ನೀಡುತ್ತಿದ್ದಾನೆಂದು ಆರೋಪಿಸುವಳೊ ಎಂದು ಆದಷ್ಟು ಅಂತರ ಕಾಯ್ದುಕೊಳ್ಳುತಿದ್ದೆ. ಆಕೆಯೊ ಲೈಬ್ರರಿಗೆ ಹುಡುಕಿ ಬಂದು ವಿವರಿಸು ಎಂದು ಒತ್ತಾಯಿಸುತ್ತಿದ್ದಳು.
ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ

read more
ರಾವಸಾಹೇಬ್ ಆದ ಪೊಲೀಸ್ ಅಧಿಕಾರಿ ಸಿದ್ರಾಮಪ್ಪ ಲಕ್ಷ್ಮೇಶ್ವರ

ರಾವಸಾಹೇಬ್ ಆದ ಪೊಲೀಸ್ ಅಧಿಕಾರಿ ಸಿದ್ರಾಮಪ್ಪ ಲಕ್ಷ್ಮೇಶ್ವರ

ಅಪರಾಧಿ ಬುಡಕಟ್ಟು ಎಂದು ಅಪಮಾನಕ್ಕೀಡಾದ ಯುವಕರಿಗೆ ಸಂಸ್ಕಾರ ನೀಡಿ ಸಭ್ಯ ಗೃಹಸ್ಥರನ್ನಾಗಿ ಮಾಡುವುದು ಬಹಳ ಕಷ್ಟದ ಕೆಲಸ. ಅದಕ್ಕಾಗಿ ಅಪರಿಮಿತವಾದ ತಾಳ್ಮೆ ಬೇಕು. ‘ಅವರಲ್ಲೂ ಮನುಷ್ಯತ್ವ ಇದೆ’ ಎಂಬ ಅಚಲವಾದ ನಂಬಿಕೆ ಬೇಕು. ದೈನಂದಿನ ಬದುಕಿನ ಎಲ್ಲ ಹಂತಗಳಲ್ಲಿ ಅವರನ್ನು ನಿರೀಕ್ಷಿಸುವ ಮೂಲಕ ಅವರನ್ನು ತಿದ್ದುವುದು. ಅವರಲ್ಲಿ ಹೊಸ ಕನಸುಗಳ ಸೃಷ್ಟಿ ಮಾಡುವುದು. ತಮಗೂ ಬೇರೆಯರಿಗೂ ಯಾವುದೇ ವ್ಯತ್ಯಾಸವಿಲ್ಲ ಎಂಬ ಆತ್ಮವಿಶ್ವಾಸ ಮೂಡಿಸುವುದು.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ಸರಣಿಯ 39ನೆಯ ಕಂತು .

read more
ನಿನ್ನ ಪ್ರೇಮ ನಿನ್ನೆಯ ವೃತ್ತಪತ್ರಿಕೆಯಂತೆ..

ನಿನ್ನ ಪ್ರೇಮ ನಿನ್ನೆಯ ವೃತ್ತಪತ್ರಿಕೆಯಂತೆ..

ಒರ್ಲಾಂಡೊ ಯಾವಾಗಲೂ ಸಮೀಪದಲ್ಲಿ ಇದ್ದಾನೆ ಎನ್ನುವ ಭಾವನೆ ಅವಳಿಗೆ. ಹೀಗಾಗಿ ಅವಳು ಕಾರಿನಲ್ಲಿ ಹೋಗುವಾಗ ಹಿಂಬದಿಯ ಸೀಟಿನಲ್ಲಿ ಅವನು ಕುಳಿತಿರುವಂತೆ ತೋರುವುದು, ಹಾಡುಗಳ ಮಧ್ಯೆ ಉಳಿದವರೆಲ್ಲ ಮಾಯವಾಗಿ ಅಷ್ಟು ದೂರದಿಂದ ತನ್ನೆಡೆಗೆ ಹಸನ್ಮುಖಿಯಾಗಿ ನಡೆದು ಬರುತ್ತಿರುವಂತೆ ಕಾಣುವುದು ಮತ್ತು ಎಲ್ಲರೂ ಮರೆಯಾಗಿ ಬೆಳ್ಳಿ ಪದರುಗಳ ರೆಕ್ಕೆಗಳು ಮೂಡಿ ಹಾರಾಡುತ್ತಿರುವ ಭಾವನೆಯಿಂದ ನರ್ತಿಸುವುದನ್ನು ಕಲ್ಪಿಸಿಕೊಳ್ಳುತ್ತಾಳೆ.
ಎ.ಎನ್‌. ಪ್ರಸನ್ನ ಬರೆಯುವ ಲೋಕ ಸಿನಿಮಾ ಟಾಕೀಸ್‌ ಸರಣಿ

read more
ಕಾಮನ ಬಿಲ್ಲ ಎದೆಗೆ ಏರಿಸಿದ್ದೆ

ಕಾಮನ ಬಿಲ್ಲ ಎದೆಗೆ ಏರಿಸಿದ್ದೆ

ಪೆಂಟೆಗೆ ಬಂದೆ. ತೋಟದ ಮರೆಯಲ್ಲೊಂದು ಮಾಯಾಲೋಕ ಅದು. ಪಡ್ಡೆ ಹುಡುಗ ಹುಡುಗಿಯರೆ ಹೆಚ್ಚಿದ್ದರು. ಕುಡುಕರ ಸ್ವರ್ಗ. ಮಾಂಸಕ್ಕೆ ಕಾರ ಮಸಾಲೆ ಹಚ್ಚಿ ಸೌದೆ ಬೆಂಕಿಯಲ್ಲಿ ಸುಟ್ಟು ಎಂಡಗುಡುಕರಿಗೆ ಮಾರುತಿದ್ದರು. ವಿಚಿತ್ರ ಕಂಟು ಕಮಟು ವಾಸನೆ. ಟಿಕೇಟು ಪಡೆದೆ. ಇಷ್ಟವಾದ ಬಟಾಣಿ, ಕಡಲೆ ಬೀಜ ತಿನ್ನುತ್ತ ಕೂತಿದ್ದೆ. ಹತ್ತು ಗಂಟೆಗೆ ಸಿನಿಮಾ ಆರಂಭವಾಗುತ್ತಿದ್ದುದು. ಮೈಸೂರಿನದೇ ನೆನಪು. ತಾತನೂ ಸರಿ ಇಲ್ಲ ಎನಿಸಿತ್ತು. ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯಲ್ಲಿ ಹೊಸ ಬರಹ

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ