Advertisement

ಸರಣಿ

‘ಠೂ..’ ಬಿಟ್ಟ ಗೆಳೆಯರನ್ನು ಒಂದಾಗಿಸಿಬಿಡುತ್ತಿದ್ದ ಹಬ್ಬಗಳು

‘ಠೂ..’ ಬಿಟ್ಟ ಗೆಳೆಯರನ್ನು ಒಂದಾಗಿಸಿಬಿಡುತ್ತಿದ್ದ ಹಬ್ಬಗಳು

ನಾಗರಪಂಚಮಿಯಲ್ಲಿ ತವರು ಮನೆಗೆ ಬಂದ ಹೆಣ್ಣುಮಕ್ಕಳು ಜೋಕಾಲಿ ಆಡುವ ಜೋಷ್ ಬಗ್ಗೆ ಬರೆಯಲು ಶಬ್ದಗಳು ಸಾಲುತ್ತಿಲ್ಲ. ಒಂದು ಜೋಕಾಲಿಯಲ್ಲಿ ಇಬ್ಬರು ಮಹಿಳೆಯರು ಎದುರು ಬದುರಾಗಿ ಜೋಕಾಲಿ ಜೀಕುವಾಗ ಶಕ್ತಿಯ ಜೊತೆಗೇ ಅವರ ಸ್ವಾತಂತ್ರ್ಯದ ಸುಖ ಎದ್ದು ಕಾಣುತ್ತಿತ್ತು. ಹುತ್ತಕ್ಕೆ ಹಾಲೆರೆಯುವ ಮೂಢನಂಬಿಕೆ ಜೊತೆಗೇ ಅದನ್ನು ಮೀರಿ ನಮ್ಮ ಜನರ ಆಶಯಗಳ ಬಗ್ಗೆಯೂ ಚಿಂತಿಸುವ ಶಕ್ತಿಯನ್ನು…

read more
ನವ್ಯೋತ್ತರದ ಮುಖ್ಯ ಕವಿ ರಾಮಚಂದ್ರದೇವ

ನವ್ಯೋತ್ತರದ ಮುಖ್ಯ ಕವಿ ರಾಮಚಂದ್ರದೇವ

ರಾಮಚಂದ್ರ ದೇವರೂ ‘ಮೂಗೇಲ’ ಕತೆಯಲ್ಲಿ ಮೂಗೇಲನ ಅಪ್ಪನಂಥವರು ಮನುಷ್ಯ ಸಂಬಂಧಗಳಿಗಿಂತ ಆರ್ಥಿಕ ಲಾಭಕ್ಕೆ ಪ್ರಾಮುಖ್ಯ ನೀಡುವುದನ್ನು ತೋರಿಸಲು ಮೂಗೇಲನ ಮೂಗನ್ನು ಅಸಂಗತವಾಗಿ ಹನುಮಂತನ ಬಾಲದಂತೆ ಬೆಳೆಸಿದ್ದಾರೆ. ಈ ಕತೆ ಮೇಲ್ನೋಟಕ್ಕೆ ಭಾರತೀಯ ಅಥವಾ ಕನ್ನಡದ ವಿಶಿಷ್ಟ ಸನ್ನಿವೇಶವನ್ನು ಸೂಚಿಸುವಂಥದ್ದಲ್ಲ. – ‘ಕರಾವಳಿಯ ಕವಿರಾಜಮಾರ್ಗ’ ಸರಣಿಯಲ್ಲಿ ನವ್ಯೋತ್ತರದ ಮುಖ್ಯ ಕವಿ ರಾಮಚಂದ್ರದೇವ
ಅವರ ಕುರಿತು ಬರೆದಿದ್ದಾರೆ ಡಾ.ಬಿ. ಜನಾರ್ದನ ಭಟ್.

read more
ನಮ್ಮ ತಾತ ಪಾಲಹಳ್ಳಿ ರಾಮಸ್ವಾಮಯ್ಯ

ನಮ್ಮ ತಾತ ಪಾಲಹಳ್ಳಿ ರಾಮಸ್ವಾಮಯ್ಯ

ರಾಮಸ್ವಾಮಯ್ಯನವರು ಪಾಲಹಳ್ಳಿಯಲ್ಲಿ ಹುಟ್ಟಿದ್ದಿರಬಹುದು. ಆದರೆ ಅವರಿಗೆ ಅಲ್ಲಿ ಏನಾದರೂ ಜಮೀನು ಇತ್ತೋ ಇಲ್ಲವೋ ತಿಳಿಯದು. ಅಂತೂ ಅವರು ಮೈಸೂರಿನ ಮರದ ವ್ಯಾಪಾರಿಯೊಬ್ಬರ ಬಳಿ ಕೆಲಸ ಮಾಡುತ್ತಿದ್ದರ೦ತೆ. ರಾಮಯ್ಯನವರು ಹಲವಾರು ಬಾರಿ ಅವರ ಬಡತನದ ಬಗ್ಗೆ ಹೇಳುತ್ತಾರೆ; ಆದ್ದರಿಂದ ರಾಮಸ್ವಾಮಯ್ಯನವರು ಸ್ಥಿತಿವಂತರಾಗಿದ್ದ ಹಾಗೆ ಕಾಣಿಸುವುದಿಲ್ಲ. ಅವರ ಫೋಟೋ ಎಲ್ಲೂ ಇಲ್ಲ.

read more
ಮಧ್ಯಮ ವರ್ಗದ ತಳಮಳಕ್ಕೆ ಕಥನರೂಪ ಕೊಡುವ ʻತ್ರೀ ಮಂಕೀಸ್ʼ

ಮಧ್ಯಮ ವರ್ಗದ ತಳಮಳಕ್ಕೆ ಕಥನರೂಪ ಕೊಡುವ ʻತ್ರೀ ಮಂಕೀಸ್ʼ

ಮಗ ಇಸ್ಮಾಯಿಲ್ ಗೆ ಮನೆಯ ಹತ್ತಿರ ಇರುವ ರೈಲ್ ಲೈನಿನ ಬದಿಯಲ್ಲಿರುವ ಸಿಮೆಂಟ್‌ ಕಂಬಗಳ ಕಾಂಪೌಂಡ್ ಮೇಲೇರಿ ದಾಟಿ ಹೋಗುವ ಅಭ್ಯಾಸ. ಅವನ ಮನಸ್ಸಿನ ಪರಿಯನ್ನು ನಿರೂಪಿಸುವ ಈ ದೃಶ್ಯ ರೂಪಕ್ಕೆ ಬೆಂಬಲವಾಗಿ, ಓಡುವ ರೈಲಿನ ಶಬ್ದವನ್ನೂ ನಿರ್ದೇಶಕ ಬಳಸಿಕೊಳ್ಳುತ್ತಾನೆ. ಇಷ್ಟೇ ಅಲ್ಲದೆ ರೈಲಿನಲ್ಲಿ ಕುಳಿತು ಗಾಳಿಗೆದುರಾಗಿ ಮುಖವಿಟ್ಟು, ಮನಸ್ಸು ಹರಿಬಿಟ್ಟು‌, ತನ್ನದೇ ಲೋಕ ರಚಿಸಿಕೊಳ್ಳುವ ಸ್ಥಿತಿಯಲ್ಲಿದ್ದಾನೆ ಅವನು.

read more
ಗುಲಾಬ್ ಜಾಮೂನು ಕೊಡಿಸಿದ್ದ ಬಾಬುಮಾಮಾ

ಗುಲಾಬ್ ಜಾಮೂನು ಕೊಡಿಸಿದ್ದ ಬಾಬುಮಾಮಾ

ಶ್ರೀಮಂತರಿಗೆ ಮತ್ತು ಮಧ್ಯಮವರ್ಗದವರಿಗೆ ಸಕ್ಕರೆಯ ಹುಚ್ಚು ಹಿಡಿದಿತ್ತು. ಬಾಬು ಮಾಮಾ ತನ್ನದೇ ರೀತಿಯಲ್ಲಿ ಪ್ಲ್ಯಾನ್ ಮಾಡಿದ. ನಾವು ಮೊದಲಿಗೆ ಇದ್ದ ಮದ್ದಿನಖಣಿ ಓಣಿಯಲ್ಲಿನ ನಮ್ಮ ಪರಿಚಯಸ್ಥರ ಮನೆಗೆ ಹೋಗಿ ‘ನಮಗೆ ಸಕ್ಕರೆ ಬೇಡ, ನಿಮಗೆ ಬೇಕಾದರೆ ತಂದು ಕೊಡುವುದಾಗಿ ತಿಳಿಸುತ್ತಿದ್ದ. ಅವರು ಕೈಚೀಲದೊಂದಿಗೆ ರೇಷನ್ ರೇಟಿಗಿಂತಲೂ ಹೆಚ್ಚಿಗೆ ಹಣ ಕೊಡುತ್ತಿದ್ದರು. ಆ ಮೇಲೆ ಕೈಚೀಲವೂ ಇಲ್ಲ, ಸಕ್ಕರೆಯೂ ಇಲ್ಲ. ಹೀಗೆ ದಿನಕ್ಕೊಬ್ಬರಾದರೂ ನಮ್ಮ ಮನೆ ಹುಡುಕಿಕೊಂಡು ಬರುತ್ತಿದ್ದರು….

read more
ಕೊನೆಯ ಬುಲೆಟ್ಟು ಹಾರುವ ಮುನ್ನ….

ಕೊನೆಯ ಬುಲೆಟ್ಟು ಹಾರುವ ಮುನ್ನ….

ದುನ್ಯಾ ಅವನ ಹತ್ತಿರವೇ ನಿಂತಿದ್ದಳು. ಸೇತುವೆಯ ಮೇಲೆ ಕಾಲಿಡುತ್ತಿದ್ದ ಹಾಗೇ ರಾಸ್ಕೋಲ್ನಿಕೋವ್ ಅವಳನ್ನ ನೋಡಿದ್ದ, ಗಮನಿಸದೆ ಮುಂದೆ ಹೋಗಿದ್ದ. ದುನ್ಯಾ ಹೀಗೆ ಯಾವತ್ತೂ ಅವನನ್ನ ರಸ್ತೆಯ ಮೇಲೆ ನೋಡಿರಲಿಲ್ಲ. ಈಗ ಹೀಗೆ ಅವನನ್ನು ನೋಡಿ ಭಯವಾಯಿತು. ನಿಂತಳು. ಹೇಮಾರ್ಕೆಟ್ಟಿನ ಕಡೆಯಿಂದ ಸ್ವಿದ್ರಿಗೈಲೋವ್ ಬರುತ್ತಿರುವುದನ್ನು ದುನ್ಯಾ ತಟ್ಟನೆ ಗಮನಿಸಿದ್ದಳು.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು.

read more
ಅತ್ತೆಯರ ಲೋಕದಲ್ಲಿ ನಾನೆಷ್ಟೋಂದು ಅತ್ತೆ…

ಅತ್ತೆಯರ ಲೋಕದಲ್ಲಿ ನಾನೆಷ್ಟೋಂದು ಅತ್ತೆ…

ಒಂದು ದಿನ ಎದೆ ಬಡಿತವ ಸುಧಾರಿಸಿಕೊಂಡು ಎಲ್ಲರ ಜೊತೆ ಏನೋ ಜೋಕು ಹೇಳುತ್ತಾ ನಗಿಸುತ್ತಿದ್ದೆ. ಅಷ್ಟು ದೂರದ ಆಚೆ ಮೂಲೆಯಲ್ಲಿ ಮರದಡಿ ನಿಂತು ಯಾರೊ ಹೆಂಗಸರು ಗಮನಿಸುತ್ತಿದ್ದಾರೆಂಬ ಅನುಮಾನ ಬಂತು. ಗಮನಿಸಿ ಅವರತ್ತ ದಿಟ್ಟಿಸಿದೆ. ಅವರು ನನ್ನನ್ನು ಹೇಗೆ ನೋಡುತ್ತಿದ್ದರೆಂಬುದಕ್ಕೆ ನನ್ನ ಬಳಿ ವಿವರಿಸಲು ತಕ್ಕ ಶಬ್ದಗಳೇ ಇಲ್ಲ. ಮೈ ಜುಂ ಎಂದು ಕತ್ತಲಿಡಿದಂತಾಯಿತು. ಒಂದು ಕ್ಷಣ ಮೈ ನೀರು ತುಳುಕಿದಂತಾಗಿ ಕೆಳಗೆ ಒಂದು ಹನಿ ನೀರು ಜಾರಿತ್ತು. ಗಂಟಲು ಕೂಡಲೇ ಒಣಗಿತು.
ಮೊಗಳ್ಳಿ ಗಣೇಶ್ ಬರೆಯುವ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯ ಎರಡನೆಯ ಕಂತು

read more
ಹದಿಮೂರನೇ ರೂಮಿನಲ್ಲಿ ವಾಸ್ತವ್ಯದ ಮಹಿಮೆ

ಹದಿಮೂರನೇ ರೂಮಿನಲ್ಲಿ ವಾಸ್ತವ್ಯದ ಮಹಿಮೆ

ಯಾವುದಕ್ಕೂ ಕಂಡೀಷನ್ ಹಾಕದ ನಮ್ಮ ಸೀನಿಯರ್ಸ್ ಒಂದು ವಿಷಯಕ್ಕೆ ಮಾತ್ರ ನಿರ್ಬಂಧ ಹೇರಿದ್ದರು. ರೂಮಿನ ಹಿಂಗೋಡೆಯಲ್ಲಿ ಒಂದು ಕಿಟಕಿ ಇತ್ತು. ಆ ಕಿಟಕಿ ಹತ್ತಿರ ಮಾತ್ರ ನಮ್ಮನ್ನ ಕೂರಲು ಬಿಡುತ್ತಿರಲಿಲ್ಲ. ಬದಲಿಗೆ ರಂಗಸ್ವಾಮಿ ಮತ್ತು ಕೃಷ್ಣಮೂರ್ತಿ ಮಧ್ಯಾಹ್ನ ಕಾಲೇಜು ಮುಗಿಸಿಕೊಂಡು ಬಂದವರೇ ಕಿಟಕಿ ಓಪನ್ ಮಾಡಿಕೊಂಡು ಹಾಜರಿರುತ್ತಿದ್ದರು. ಅವರೇಕೆ ಈ ನಿರ್ಬಂಧ ಹೇರಿದ್ದಾರೆ ಎಂಬುದನ್ನು ನಾವು ಬಹಳ ತಡವಾಗಿ ಪತ್ತೆ ಮಾಡಿದ್ದೆವು.
‘ಟ್ರಂಕು ತಟ್ಟೆ’ ಸರಣಿಯಲ್ಲಿ ಗುರುಪ್ರಸಾದ್ ಕಂಟಲಗೆರೆ ಬರೆದ ಹಾಸ್ಟೆಲ್ ಜೀವನಾನುಭವದ ಬರಹ  ಇಲ್ಲಿದೆ.

read more
ಪ್ರಸಂಗ ರಚನೆಯ ಕೌಶಲಕ್ಕೆ ಸಿಕ್ಕಿದ ವೇದಿಕೆ ‘ಪೊಳಲಿ’

ಪ್ರಸಂಗ ರಚನೆಯ ಕೌಶಲಕ್ಕೆ ಸಿಕ್ಕಿದ ವೇದಿಕೆ ‘ಪೊಳಲಿ’

ಕಿರಿಯ ಬಲಿಪರು ಪೂರ್ಣ ಪ್ರದರ್ಶನವೊಂದರಲ್ಲಿ ಮೊದಲು ಭಾಗವತಿಕೆ ಮಾಡಿದ್ದು ಪೊಳಲಿ ಎಂಬಲ್ಲಿ.  ಪ್ರಸಂಗ ಹೊಸದಾಗಿದ್ದರೆ ಆಟಕ್ಕೆ ಅವಕಾಶ ನೀಡಬಹುದು ಎಂದು ಆಡಿಸುವವರ ಷರತ್ತು.  ಪ್ರದರ್ಶನದ ದಿನದಂದೇ, ಹೊಸ  ಕಥೆಯನ್ನು ಪೊಳಲಿಯ ಶೀನಪ್ಪ ಹೆಗಡೆಯವರು ಹೇಳುವುದು ಎಂದು ನಿರ್ಧಾರವಾಯಿತು.  ಬಲಿಪರು ನಿರ್ಧಾರವಾದ ಆಟವನ್ನು ಯಾವುದೇ ಕಾರಣಕ್ಕೂ ಬಿಡುವಂತಿಲ್ಲ ಎಂದು ತೀರ್ಮಾನಿಸಿ ಬಳಿಯ ಅಂಗಡಿಯಲ್ಲಿ…

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ