Advertisement

ಸರಣಿ

ನಮ್ಮ ತಾತ ಪಾಲಹಳ್ಳಿ ರಾಮಸ್ವಾಮಯ್ಯ

ನಮ್ಮ ತಾತ ಪಾಲಹಳ್ಳಿ ರಾಮಸ್ವಾಮಯ್ಯ

ರಾಮಸ್ವಾಮಯ್ಯನವರು ಪಾಲಹಳ್ಳಿಯಲ್ಲಿ ಹುಟ್ಟಿದ್ದಿರಬಹುದು. ಆದರೆ ಅವರಿಗೆ ಅಲ್ಲಿ ಏನಾದರೂ ಜಮೀನು ಇತ್ತೋ ಇಲ್ಲವೋ ತಿಳಿಯದು. ಅಂತೂ ಅವರು ಮೈಸೂರಿನ ಮರದ ವ್ಯಾಪಾರಿಯೊಬ್ಬರ ಬಳಿ ಕೆಲಸ ಮಾಡುತ್ತಿದ್ದರ೦ತೆ. ರಾಮಯ್ಯನವರು ಹಲವಾರು ಬಾರಿ ಅವರ ಬಡತನದ ಬಗ್ಗೆ ಹೇಳುತ್ತಾರೆ; ಆದ್ದರಿಂದ ರಾಮಸ್ವಾಮಯ್ಯನವರು ಸ್ಥಿತಿವಂತರಾಗಿದ್ದ ಹಾಗೆ ಕಾಣಿಸುವುದಿಲ್ಲ. ಅವರ ಫೋಟೋ ಎಲ್ಲೂ ಇಲ್ಲ.

read more
ಮಧ್ಯಮ ವರ್ಗದ ತಳಮಳಕ್ಕೆ ಕಥನರೂಪ ಕೊಡುವ ʻತ್ರೀ ಮಂಕೀಸ್ʼ

ಮಧ್ಯಮ ವರ್ಗದ ತಳಮಳಕ್ಕೆ ಕಥನರೂಪ ಕೊಡುವ ʻತ್ರೀ ಮಂಕೀಸ್ʼ

ಮಗ ಇಸ್ಮಾಯಿಲ್ ಗೆ ಮನೆಯ ಹತ್ತಿರ ಇರುವ ರೈಲ್ ಲೈನಿನ ಬದಿಯಲ್ಲಿರುವ ಸಿಮೆಂಟ್‌ ಕಂಬಗಳ ಕಾಂಪೌಂಡ್ ಮೇಲೇರಿ ದಾಟಿ ಹೋಗುವ ಅಭ್ಯಾಸ. ಅವನ ಮನಸ್ಸಿನ ಪರಿಯನ್ನು ನಿರೂಪಿಸುವ ಈ ದೃಶ್ಯ ರೂಪಕ್ಕೆ ಬೆಂಬಲವಾಗಿ, ಓಡುವ ರೈಲಿನ ಶಬ್ದವನ್ನೂ ನಿರ್ದೇಶಕ ಬಳಸಿಕೊಳ್ಳುತ್ತಾನೆ. ಇಷ್ಟೇ ಅಲ್ಲದೆ ರೈಲಿನಲ್ಲಿ ಕುಳಿತು ಗಾಳಿಗೆದುರಾಗಿ ಮುಖವಿಟ್ಟು, ಮನಸ್ಸು ಹರಿಬಿಟ್ಟು‌, ತನ್ನದೇ ಲೋಕ ರಚಿಸಿಕೊಳ್ಳುವ ಸ್ಥಿತಿಯಲ್ಲಿದ್ದಾನೆ ಅವನು.

read more
ಗುಲಾಬ್ ಜಾಮೂನು ಕೊಡಿಸಿದ್ದ ಬಾಬುಮಾಮಾ

ಗುಲಾಬ್ ಜಾಮೂನು ಕೊಡಿಸಿದ್ದ ಬಾಬುಮಾಮಾ

ಶ್ರೀಮಂತರಿಗೆ ಮತ್ತು ಮಧ್ಯಮವರ್ಗದವರಿಗೆ ಸಕ್ಕರೆಯ ಹುಚ್ಚು ಹಿಡಿದಿತ್ತು. ಬಾಬು ಮಾಮಾ ತನ್ನದೇ ರೀತಿಯಲ್ಲಿ ಪ್ಲ್ಯಾನ್ ಮಾಡಿದ. ನಾವು ಮೊದಲಿಗೆ ಇದ್ದ ಮದ್ದಿನಖಣಿ ಓಣಿಯಲ್ಲಿನ ನಮ್ಮ ಪರಿಚಯಸ್ಥರ ಮನೆಗೆ ಹೋಗಿ ‘ನಮಗೆ ಸಕ್ಕರೆ ಬೇಡ, ನಿಮಗೆ ಬೇಕಾದರೆ ತಂದು ಕೊಡುವುದಾಗಿ ತಿಳಿಸುತ್ತಿದ್ದ. ಅವರು ಕೈಚೀಲದೊಂದಿಗೆ ರೇಷನ್ ರೇಟಿಗಿಂತಲೂ ಹೆಚ್ಚಿಗೆ ಹಣ ಕೊಡುತ್ತಿದ್ದರು. ಆ ಮೇಲೆ ಕೈಚೀಲವೂ ಇಲ್ಲ, ಸಕ್ಕರೆಯೂ ಇಲ್ಲ. ಹೀಗೆ ದಿನಕ್ಕೊಬ್ಬರಾದರೂ ನಮ್ಮ ಮನೆ ಹುಡುಕಿಕೊಂಡು ಬರುತ್ತಿದ್ದರು….

read more
ಕೊನೆಯ ಬುಲೆಟ್ಟು ಹಾರುವ ಮುನ್ನ….

ಕೊನೆಯ ಬುಲೆಟ್ಟು ಹಾರುವ ಮುನ್ನ….

ದುನ್ಯಾ ಅವನ ಹತ್ತಿರವೇ ನಿಂತಿದ್ದಳು. ಸೇತುವೆಯ ಮೇಲೆ ಕಾಲಿಡುತ್ತಿದ್ದ ಹಾಗೇ ರಾಸ್ಕೋಲ್ನಿಕೋವ್ ಅವಳನ್ನ ನೋಡಿದ್ದ, ಗಮನಿಸದೆ ಮುಂದೆ ಹೋಗಿದ್ದ. ದುನ್ಯಾ ಹೀಗೆ ಯಾವತ್ತೂ ಅವನನ್ನ ರಸ್ತೆಯ ಮೇಲೆ ನೋಡಿರಲಿಲ್ಲ. ಈಗ ಹೀಗೆ ಅವನನ್ನು ನೋಡಿ ಭಯವಾಯಿತು. ನಿಂತಳು. ಹೇಮಾರ್ಕೆಟ್ಟಿನ ಕಡೆಯಿಂದ ಸ್ವಿದ್ರಿಗೈಲೋವ್ ಬರುತ್ತಿರುವುದನ್ನು ದುನ್ಯಾ ತಟ್ಟನೆ ಗಮನಿಸಿದ್ದಳು.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು.

read more
ಅತ್ತೆಯರ ಲೋಕದಲ್ಲಿ ನಾನೆಷ್ಟೋಂದು ಅತ್ತೆ…

ಅತ್ತೆಯರ ಲೋಕದಲ್ಲಿ ನಾನೆಷ್ಟೋಂದು ಅತ್ತೆ…

ಒಂದು ದಿನ ಎದೆ ಬಡಿತವ ಸುಧಾರಿಸಿಕೊಂಡು ಎಲ್ಲರ ಜೊತೆ ಏನೋ ಜೋಕು ಹೇಳುತ್ತಾ ನಗಿಸುತ್ತಿದ್ದೆ. ಅಷ್ಟು ದೂರದ ಆಚೆ ಮೂಲೆಯಲ್ಲಿ ಮರದಡಿ ನಿಂತು ಯಾರೊ ಹೆಂಗಸರು ಗಮನಿಸುತ್ತಿದ್ದಾರೆಂಬ ಅನುಮಾನ ಬಂತು. ಗಮನಿಸಿ ಅವರತ್ತ ದಿಟ್ಟಿಸಿದೆ. ಅವರು ನನ್ನನ್ನು ಹೇಗೆ ನೋಡುತ್ತಿದ್ದರೆಂಬುದಕ್ಕೆ ನನ್ನ ಬಳಿ ವಿವರಿಸಲು ತಕ್ಕ ಶಬ್ದಗಳೇ ಇಲ್ಲ. ಮೈ ಜುಂ ಎಂದು ಕತ್ತಲಿಡಿದಂತಾಯಿತು. ಒಂದು ಕ್ಷಣ ಮೈ ನೀರು ತುಳುಕಿದಂತಾಗಿ ಕೆಳಗೆ ಒಂದು ಹನಿ ನೀರು ಜಾರಿತ್ತು. ಗಂಟಲು ಕೂಡಲೇ ಒಣಗಿತು.
ಮೊಗಳ್ಳಿ ಗಣೇಶ್ ಬರೆಯುವ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯ ಎರಡನೆಯ ಕಂತು

read more
ಹದಿಮೂರನೇ ರೂಮಿನಲ್ಲಿ ವಾಸ್ತವ್ಯದ ಮಹಿಮೆ

ಹದಿಮೂರನೇ ರೂಮಿನಲ್ಲಿ ವಾಸ್ತವ್ಯದ ಮಹಿಮೆ

ಯಾವುದಕ್ಕೂ ಕಂಡೀಷನ್ ಹಾಕದ ನಮ್ಮ ಸೀನಿಯರ್ಸ್ ಒಂದು ವಿಷಯಕ್ಕೆ ಮಾತ್ರ ನಿರ್ಬಂಧ ಹೇರಿದ್ದರು. ರೂಮಿನ ಹಿಂಗೋಡೆಯಲ್ಲಿ ಒಂದು ಕಿಟಕಿ ಇತ್ತು. ಆ ಕಿಟಕಿ ಹತ್ತಿರ ಮಾತ್ರ ನಮ್ಮನ್ನ ಕೂರಲು ಬಿಡುತ್ತಿರಲಿಲ್ಲ. ಬದಲಿಗೆ ರಂಗಸ್ವಾಮಿ ಮತ್ತು ಕೃಷ್ಣಮೂರ್ತಿ ಮಧ್ಯಾಹ್ನ ಕಾಲೇಜು ಮುಗಿಸಿಕೊಂಡು ಬಂದವರೇ ಕಿಟಕಿ ಓಪನ್ ಮಾಡಿಕೊಂಡು ಹಾಜರಿರುತ್ತಿದ್ದರು. ಅವರೇಕೆ ಈ ನಿರ್ಬಂಧ ಹೇರಿದ್ದಾರೆ ಎಂಬುದನ್ನು ನಾವು ಬಹಳ ತಡವಾಗಿ ಪತ್ತೆ ಮಾಡಿದ್ದೆವು.
‘ಟ್ರಂಕು ತಟ್ಟೆ’ ಸರಣಿಯಲ್ಲಿ ಗುರುಪ್ರಸಾದ್ ಕಂಟಲಗೆರೆ ಬರೆದ ಹಾಸ್ಟೆಲ್ ಜೀವನಾನುಭವದ ಬರಹ  ಇಲ್ಲಿದೆ.

read more
ಪ್ರಸಂಗ ರಚನೆಯ ಕೌಶಲಕ್ಕೆ ಸಿಕ್ಕಿದ ವೇದಿಕೆ ‘ಪೊಳಲಿ’

ಪ್ರಸಂಗ ರಚನೆಯ ಕೌಶಲಕ್ಕೆ ಸಿಕ್ಕಿದ ವೇದಿಕೆ ‘ಪೊಳಲಿ’

ಕಿರಿಯ ಬಲಿಪರು ಪೂರ್ಣ ಪ್ರದರ್ಶನವೊಂದರಲ್ಲಿ ಮೊದಲು ಭಾಗವತಿಕೆ ಮಾಡಿದ್ದು ಪೊಳಲಿ ಎಂಬಲ್ಲಿ.  ಪ್ರಸಂಗ ಹೊಸದಾಗಿದ್ದರೆ ಆಟಕ್ಕೆ ಅವಕಾಶ ನೀಡಬಹುದು ಎಂದು ಆಡಿಸುವವರ ಷರತ್ತು.  ಪ್ರದರ್ಶನದ ದಿನದಂದೇ, ಹೊಸ  ಕಥೆಯನ್ನು ಪೊಳಲಿಯ ಶೀನಪ್ಪ ಹೆಗಡೆಯವರು ಹೇಳುವುದು ಎಂದು ನಿರ್ಧಾರವಾಯಿತು.  ಬಲಿಪರು ನಿರ್ಧಾರವಾದ ಆಟವನ್ನು ಯಾವುದೇ ಕಾರಣಕ್ಕೂ ಬಿಡುವಂತಿಲ್ಲ ಎಂದು ತೀರ್ಮಾನಿಸಿ ಬಳಿಯ ಅಂಗಡಿಯಲ್ಲಿ…

read more
ವಿಷ ವರ್ತುಲದ  ಒಂದು ವಿಚಿತ್ರ ವೃತ್ತಾಂತವು..

ವಿಷ ವರ್ತುಲದ ಒಂದು ವಿಚಿತ್ರ ವೃತ್ತಾಂತವು..

ಆಕೆಯ ಹೆಸರು ರೇಖಾ, ವಯಸ್ಸು ಇಪ್ಪತ್ತೈದು. ಗಂಡ ಕಾರ್ಯಪ್ಪನ ಪ್ರಕಾರ ಸಾಧಾರಣವಾಗಿ ಆರೋಗ್ಯವಾಗಿಯೇ ಇದ್ದ ಆಕೆ ಅಂದು ರಾತ್ರಿ ಪಕ್ಕನೆ ಎದೆ ನೋವು, ಸುಸ್ತು ಎನ್ನುತ್ತ ವಾಂತಿ ಮಾಡತೊಡಗಿದ್ದಳು. ತುಂಬಾ ಸುಸ್ತಾಗಿದ್ದ ಆಕೆ ನರಳುತ್ತಾ ತನಗೆ ಉಸಿರಾಡಲು ತೊಂದರೆಯಾಗುತ್ತಿದೆ, ತುಂಬಾ ತಲೆನೋವು, ತಲೆ ತಿರುಗುತ್ತಿದೆ, ಕಿವಿಯಲ್ಲಿ ಏನೋ ಶಬ್ಧ ರಿಂಗಣಿಸುತ್ತಿದೆ ಎನ್ನುತ್ತಿದ್ದಳು. ನಾನು ಚಿಕಿತ್ಸೆ ಮಾಡುತ್ತಿದ್ದಂತೆಯೇ, ಆಕೆಗೆ ಅಪಸ್ಮಾರ ಬಂತು.

read more
ನಮ್ಮ ಪೂರ್ವಿಕರು ಮತ್ತು ಹೆಸರುಗಳ ಸೊಬಗು

ನಮ್ಮ ಪೂರ್ವಿಕರು ಮತ್ತು ಹೆಸರುಗಳ ಸೊಬಗು

ಚಿಕ್ಕಂದಿನಲ್ಲಿ ನಮ್ಮ ಅಮ್ಮ ಹೆಚ್ಚು ತಮಿಳು ಮಾತನಾಡುತ್ತಿದ್ದಿರಬಹುದು. ಅದರೆ ಹಾಸನದಲ್ಲಿ ಹುಟ್ಟಿ ಬೆಳೆದಿದ್ದರಿಂದ ಕನ್ನಡವೂ ಚೆನ್ನಾಗಿ ಬರುತ್ತಿತ್ತು. ಅವರ ಅಣ್ಣ ರಾಮಕೃಷ್ಣರ ಜೊತೆ ಕನ್ನಡದಲ್ಲಿಯೇ ಮಾತನಾಡುತ್ತಿದ್ದರು. ಅವರ ತಂದೆಯ ಕಡೆ ಸಂಬಂಧಿಗಳು ದೊಡ್ಡ ಕೆಲಸಗಳಲ್ಲಿದ್ದರೆಂದು ಕೇಳಿದ್ದೆ. ಆಗಾಗ್ಗೆ ಅವರಿವರು ಮನೆಗೆ ಬರುತ್ತಿದ್ದರು;

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ