Advertisement

Month: April 2026

ಕೋಡಿಹಳ್ಳಿ ಮುರಳಿಮೋಹನ್ ಅನುವಾದಿಸಿದ ತೆಲುಗಿನ ಸೈಯದ್ ಸಲೀಂ ಕತೆ “ಬೂದು ಬಣ್ಣದ ಆಕಾಶ”

ನಾನು ಭಯಪಟ್ಟ ಸಮಯ ಕೊನೆಗೂ ಬಂತು… ಬ್ರೂನೊವನ್ನು ಮೆರ್ಸಿ ಕಿಲಿಂಗ್ ಮಾಡುವ ಸಮಯ… ನಾನು ಬ್ರೂನೋ ಕಡೆಗೆ ದಯೆಯಿಂದ ನೋಡಿದೆ. ಅದು ಹಿಂದಿನಂತೆ ನನ್ನನ್ನು ಗುರುತಿಸುತ್ತಿಲ್ಲ. ತನ್ನ ತುಟಿಗಳನ್ನು ಚಾಚಿ ನಗುವುದು ಮರೆತಿದೆ. ಚುರುಕಾಗಿ ಚಲಿಸುತ್ತಿದ್ದ ಹಿಂದಿನ ಬ್ರೂನೊ ಇಲ್ಲ ಈಗ. ಅದರ ಚಲನೆಗಳಲ್ಲಿಯೂ, ವ್ಯವಹಾರದಲ್ಲಿಯೂ ಬಹು ಬದಲಾವಣೆಗಳು. ಅದು ಈಗ ವೈದ್ಯಶಾಸ್ತ್ರ ಸಂಶೋಧನೆಗೆ ಕೆಲಸಕ್ಕೆ ಬರದ ಪ್ರಾಣಿ.
ಕೋಡಿಹಳ್ಳಿ ಮುರಳಿಮೋಹನ್ ಅನುವಾದಿಸಿದ ತೆಲುಗಿನ ಸೈಯದ್ ಸಲೀಂ ಕತೆ “ಬೂದು ಬಣ್ಣದ ಆಕಾಶ”‌

Read More

ನಾನೆಂಬ ‘ನನ್ನ’ನ್ನು ಅಳಿಸುವ ಆಧ್ಯಾತ್ಮಿಕ ಜಗತ್ತು: ಜುಲೇಖಾ ಬೇಗಂ ಜೀವನ ವೃತ್ತಾಂತ

ಕುರ್ಚಿ ಅಡಿಗಳಲ್ಲಿ, ನೆಲ ಮತ್ತು ಚಾಪೆಯ ಸ್ಥಳಗಳನ್ನು ಗುಡಿಸಿ ಸ್ವಚ್ಛಗೊಳಿಸುವುದೆಂದರೆ ಬರೋಬ್ಬರಿ ಎರಡು ಗಂಟೆಗಳ ಕೆಲಸ. ನನ್ನ ಎಳೆ ರಟ್ಟೆಯಲ್ಲಿದ್ದ ಶಕ್ತಿಯೆಲ್ಲವೂ ಸೋರಿ ಹೋದಂತೆ ಅನಿಸುತ್ತಿತ್ತು. ನಟಿ ಫ್ಲೋರಿನಾ ಬಾಯಿಯವರದ್ದೇ ಮೇಲುಸ್ತುವಾರಿ. ‘ಇನ್ನೂ ಆಗಿಲ್ಲವಾ?’ ಎಂದು ಅಧಿಕಾರ ಸಾಧಿಸುವ ಮಾತುಗಳನ್ನೇ ಪ್ರಶ್ನೆಯಾಗಿ ಕೇಳುತ್ತಿದ್ದರು. ಅಂದಹಾಗೆ, ಇದೆಲ್ಲದರ ನಡುವೆ ಅವರ ಸಾಕಿದ ಮಗಳು ದೂರದ ಹಾಸ್ಟೆಲ್‌ನಲ್ಲಿ ಓದುತ್ತಿದ್ದಳು. ರಜೆಗೆಂದು ಬಂದಾಗ ನನ್ನನ್ನು ಕಂಡಳು. ಆಡಲು ಜೊತೆಯಾಗುತ್ತಾಳೆ ಎಂದುಕೊಂಡಿದ್ದಳೋ ಏನೊ, ಅದಕ್ಕಾಗಿ ನನ್ನ ಬರುವಿಕೆಯನ್ನೇ ದೂರದಲ್ಲೇ ನಿಂತು ಕಾಯುತ್ತಿದ್ದಳು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ”

Read More

ಕಂಡಂಥ ಕನಸುಗಳು… ಮತ್ತೂ…: ಎಚ್. ಗೋಪಾಲಕೃಷ್ಣ ಸರಣಿ

ಈ ಹಿನ್ನೆಲೆಯಲ್ಲಿ ನಾನೂ ಪ್ರಕಾಶಕ ಆದೆ. ಪುಸ್ತಕ ಮಾರಾಟದಲ್ಲಿ, ಗ್ರಂಥಾಲಯಕ್ಕೆ (ರಾಜ್ಯದಲ್ಲಿನ ಗ್ರಂಥಾಲಯಗಳಿಗೆ ಅವರು ಕೇಳಿದಾಗ ಎರಡು ಮೂರು ಪ್ರತಿ ರವಾನಿಸಬೇಕು)ಕೊಡುವಲ್ಲಿ ಮತ್ತು ಕೆಲವು ಸಲ ಲಂಚವನ್ನು ಕೊಡಬೇಕಾದ ಸಂದರ್ಭ ಸಹ ಹುಟ್ಟುತ್ತದೆ… ಈ ಸಮಸ್ಯೆ ಆಳಕ್ಕೆ ಇಳಿದ ಹಾಗೆ ಇದು ನನ್ನಂತಹ ಸಭ್ಯ, ಸಜ್ಜನನಿಗೆ ಸರಿಹೋಗದ ವ್ಯಾಪಾರ ಅನಿಸಿತಾ? ಇನ್ನುಮೇಲೆ ಪ್ರಕಾಶಕ ಎಂದು ಕರೆಸಿಕೊಳ್ಳಬಾರದು ಎಂದು ನಿರ್ಧರಿಸಿದೆ. ಹೀಗೆ ಒಬ್ಬ ಪ್ರಕಾಶಕ ಆಗಿ ಪೆಂಗ್ವಿನ್ ಅಂತಹ ದೊಡ್ಡ ಸಂಸ್ಥೆಗೆ ಪೈಪೋಟಿ ಕೊಡುವ ನನ್ನಾಸೆ ಅಂದೇ ಕಮರಿ ಹೋಯಿತು!
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ

Read More

ಪುರಂದರದಾಸರು ಕನ್ನಡಮಾತೆಯ ಸುಪುತ್ರರಾಗಬಹುದು, ಕನಕದಾಸರಿಗೆ ಆ ಭಾಗ್ಯವಿಲ್ಲ!: ಸುಕನ್ಯಾ ಕನಾರಳ್ಳಿ ಅಂಕಣ

ಕನ್ನಡ ಸಿನೆಮಾ ಪುರಂದರದಾಸ ಮತ್ತು ಕನಕದಾಸರನ್ನು ಅರಿವಿಗೆ ದಕ್ಕಿಸಿಕೊಂಡ ರೀತಿಯಲ್ಲಿ ವ್ಯತ್ಯಾಸವಿರುವುದನ್ನು ಗಮನಿಸದೇ ಇರುವುದು ಕಷ್ಟ. ಎರಡೂ ಕಥಾನಕಗಳಲ್ಲಿ ಸಾಮಾನ್ಯ ಅಂಶಗಳಿರುವುದೂ ಸರಿಯೆ. ಉದಾಹರಣೆಗೆ ಬ್ರಾಹ್ಮಣ, ಬ್ರಾಹ್ಮಣೀಯತೆ, ಬ್ರಾಹ್ಮಣಿಕೆ ಮುಂತಾದ ಪರಿಕಲ್ಪನೆಗಳು ಎರಡರಲ್ಲೂ ಸಾಕಷ್ಟು ಲೇವಡಿಗೆ ಒಳಗಾಗುತ್ತವೆ. ಹಾಗೆ ನೋಡಿದರೆ ಕನ್ನಡದ ಹೆಚ್ಚಿನಂಶ ಎಲ್ಲ ಸಂತಚರಿತೆಗಳಲ್ಲಿ ಅದು ಸಾಮಾನ್ಯವೇ. ಕನಕ ಒಬ್ಬ ಅಬ್ರಾಹ್ಮಣ. ಕ್ಷತ್ರಿಯನೊ ಕುರುಬನೋ ಆಗಿದ್ದಿರಬೇಕು. ಚಿತ್ರದ ಹೆಚ್ಚಿನಂಶ ಅವನು ಬ್ರಾಹ್ಮಣ ವಿರೋಧವನ್ನು ನಿಭಾಯಿಸುವುದಕ್ಕೇ ಮೀಸಲಾಗುತ್ತದೆ. ಅವರಿಗಿಂತ ಅವನು ಹೇಗೆ ‘ಹೆಚ್ಚು’ ಬುದ್ಧಿವಂತ, ವಿವೇಕಿ, ಮತ್ತು ಅವನೂ ಸಹ ತನ್ನ ಪರಮಭಕ್ತಿಯ ಕಾರಣದಿಂದ ಮೋಕ್ಷಕ್ಕೆ ಅರ್ಹ ಎನ್ನುವುದನ್ನು ಸಾಬೀತುಪಡಿಸಲು ಚಿತ್ರ ಉದ್ದಕ್ಕೂ ಹೆಣಗುತ್ತದೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ

Read More

ಸುಂದರ ಕಾಡಿನ ರೋಚಕ ಕಥೆಗಳು-೮: ರೂಪಾ ರವೀಂದ್ರ ಜೋಶಿ ಸರಣಿ

ಜೇನು ತುಂಬಿದ ರಟ್ಟಿನ ಜೊತೆಗೆ ಇರುವ ಜೇನು ನೊಣಗಳ ಮೊಟ್ಟೆ ಮರಿ ತುಂಬಿದ್ದ ರಟ್ಟನ್ನು ನಿರ್ದಯವಾಗಿ ಬಿಸಾಡಲಾಗುತ್ತಿತ್ತು. ಈ ಹೊಗೆಯ ತಾಪಕ್ಕೆ ನೂರಾರು ಜೇನು ನೊಣಗಳು ಸಾಯುತ್ತಿದ್ದವು. ಒಂದಿಷ್ಟು ದಿಕ್ಕೆಟ್ಟು ಹಾರಿ ಹೋಗುತ್ತಿದ್ದವು. ಇದನ್ನೆಲ್ಲಾ ಈಗ ನೆನೆದರೆ, ‘ಛೆ… ನಾವು ಮನುಷ್ಯರು ಎಷ್ಟು ಸ್ವಾರ್ಥಿಗಳು. ಪಾಪದ ನೊಣಗಳು ಊರೂರು ಸುತ್ತಿ ಮಕರಂದ ಸಂಗ್ರಹಿಸಿ ತಮಗಾಗಿ ತಯಾರಿಸಿಕೊಂಡಿದ್ದ ಊಟವನ್ನು ಮೋಸದಿಂದ ಅಪಹರಿಸುವುದಲ್ಲದೇ ಅವರ ಪ್ರಾಣಕ್ಕೂ ಹಾನಿಯುಂಟು ಮಾಡುತ್ತೇವಲ್ಲಾ..
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿಯ ಹದಿನೇಳನೆಯ ಕಂತು

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ