Advertisement
ನಂದಿನಿ ವಿಶ್ವನಾಥ ಹೆದ್ದುರ್ಗ ಬರೆದ ಹನಿಗವಿತೆಗಳು

ನಂದಿನಿ ವಿಶ್ವನಾಥ ಹೆದ್ದುರ್ಗ ಬರೆದ ಹನಿಗವಿತೆಗಳು

ಮುಟ್ಟು ನಿಲ್ಲುವ
ಸಮಯದಲಿ
ಕೆಳಹೊಟ್ಟೆಯಲಿ ಕೂಸು
ಕದಲುವ ಕನವರಿಕೆಯಾಗುತಿದೆ..

*

ತುಟಿಯ ತುದಿಯಿಂದ ತುಳುಕಿದ
ಮುತ್ತುಗಳ ಗುಂಪೊಂದು
ಅವನ ಹುಡುಕಿ ಹೊರಟಿವೆ..

*

ಪ್ರತಿ ರಾತ್ರಿಗಳೂ ಕತ್ತಲಿಗೆ
ಒಡ್ಡಿಕ್ಕೊಳ್ಳುತ್ತವೆ ಜಗದ ಪಾಲಿಗೆ.
ನಕ್ಷತ್ರದೂರಿಗೆ ನಾವು ಜೊತೆಯಾಗಿ ನಡೆದದ್ದು
ತಿಳಿಯಲೇ ಇಲ್ಲ ಸಧ್ಯ ಯಾರಿಗೂ.

*

ಒಂಟಿ ಹೆಣ್ಣು ಮಲಗಿದ್ದ ಹಾಸಿನಲ್ಲಿ
ಹಸಿಹಸಿ ವೀರ್ಯದ
ವಾಸನೆ.
ಕಾಮನೊಂದಿಗೆ
ಕನಸಿನೂರಿನ ಹಾದಿ
ಸಾಗಿದ್ದು ತಿಳಿದದ್ದು
ಸೂರ್ಯ
ನೇವರಿಸಿದ ಮೇಲೆ.

*

ನಾಳೆಗಳ ಕುರಿತು ಹೇಳದಿರು ಗೆಳೆಯನೆ.
ಇಲ್ಲೊಂದು ಹೂವು
ಅರಳಿದ ಮರುಘಳಿಗೆಯೆ
ಅತಿ ಗಾಳಿ ಸಹಿತ
ಆಲಿಕಲ್ಲು ಮಳೆ.

*

ಜಗದೆಲ್ಲಾ ಹೆಣ್ಣುಗಳ ಕಣ್ಣಿಗೆ
ಅಷ್ಟಾವಕ್ರನನ್ನಾಗಿಸು
ಅವನ.
ಕವಿತೆ ಹುಟ್ಟುವಾಗೊಮ್ಮೆ
ಕಣ್ಣೂ ತುಳುಕಿ
ನೋಯುವ ಸುಖದ ವಿವರಣೆ
ನೀಡುತ್ತದೆ.
ನಾ ಹೇಗಿದ್ದರೂ ರಾಜನ ಮಡದಿಯೇ.!

ಗರಿ ತಾಕಿದಂತೆ ತಾಕಿಬಿಡು
ನನ್ನವನೆ.!
ಜಗದ ಜನರೆದುರಿಗೆ
ಬರಿಯ ಪರಿಚಿತರಂತೆ
ಕುಳಿತಾಗ ಸನಿಹ ನಾವು.!
ಕನಲಿದ್ದು ನಿನಗೆ ಮಾತ್ರ ತಿಳಿವ
ಸುಖವ ಉಳಿಸು ನನಗಾಗೆ.

*

ಕಣ್ಣುಜ್ಜುತ್ತಾ
ಉದುರಿದ ಪಾರಿಜಾತಗಳ
ಸೆರಗಲ್ಲಿಡುವಾಗ
ಅನಾಯಾಸ ಹರಡಿದ ಹೆರಳ
ತುರುಬಾಗಿಸಿಕೊಳ್ಳುತ್ತೇನೆ.
ಪಾರಿಜಾತದ ಘಮಲು
ಅವನ ಪತರಗುಡಿಸಿದ್ದು
ಹಸಿಹಸಿ ಎದೆಯಲಿದೆ.

ನಂದಿನಿ ವಿಶ್ವನಾಥ ಹೆದ್ದುರ್ಗ ಕಾಫಿಬೆಳೆಗಾರ್ತಿ ಮತ್ತು ಕೃಷಿ ಮಹಿಳೆ.
ಕಾವ್ಯ, ಸಾಹಿತ್ಯ ಮತ್ತು ಫೋಟೋಗ್ರಫಿ ಇವರ ಆಸಕ್ತಿಯ ವಿಷಯಗಳು

 

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ