Advertisement
ಅಭಿಷೇಕ್ ವೈ.ಎಸ್. ಬರೆದ ಈ ದಿನದ ಕವಿತೆ

ಅಭಿಷೇಕ್ ವೈ.ಎಸ್. ಬರೆದ ಈ ದಿನದ ಕವಿತೆ

ವಿಳಾಸಕ್ಕೆ ಮರೆಯದೇ ತಲುಪಿಸು

ಮಳೆ ಬಿಟ್ಟ ಸಂಜೆಯ
ಖಾಲಿ ಮುಖವನ್ನು
ನೋಡಲು ಭಯವಾಗುತ್ತಿದೆ.
ಹೊತ್ತಾದರೂ
ಒಂಟಿಯಾಗಿ
ಮರದ ದಗರಿಯಮೇಲೆ ಕೂತು
ವಿರಹದ ದನಿಯನ್ನು
ಕಕ್ಕುತ್ತಿರುವ ಹಕ್ಕಿ;
ಹಿಡಿದು ಕೊಂದುಹಾಕಿಬಿಡಬೇಕೆನ್ನುವ
ಮೌನ;
ಅನಾಥವಾಗಿ ನಿದ್ದೆಹೋದ
ಚಪ್ಪಲಿಗಳು;
ಶೋಕಗೀತೆಯ
ಬಿಟ್ಟು ಬಿಟ್ಟು ಹಾಡುತ್ತಿರುವ
ಮತಿಭ್ರಮಣ ಕನಸು

ಈ ನಡುವಿನ
ಖಾಲಿತನದೊಳಗೆ
ಸದ್ದಿಲ್ಲದೆ
ತುಂಬಿಕೊಳ್ಳುವ ನೀನು
ಖಾಲಿಯಾದದ್ದೆ
ಅರಿವಿಗೆ ಬಾರಲಿಲ್ಲ..!

ಸಿಗಿದು
ಚರ್ಮಸುಲಿದಂಥ
ನೆನ್ನೆಗಳ ಮೇಲೆ
ಕನಿಕರಪಟ್ಟು ಮುದುರಿ
ಕೂತರೆ
ನಾಳೆಗಳ
ಮಾರಣಹೋಮ
ನಡೆಯುವುದು ಶತಸಿದ್ಧ

ಮಳೆಬಿದ್ದ ನೆಲದಲ್ಲಿ
ನೆನಪುಗಳ
ಕಲಸಿ ತಿಂದರೂ
ನನ್ನ ಹಸಿವು
ನೀಗಿತ್ತಿಲ್ಲ;
ಹಸಿವ ನೀಗಿಸಲು
ಒಂದು ತೊಟ್ಟು
ಅನುರಾಗದ
ವಿಷವನ್ನಾದರೂ ನನ್ನ
ವಿಳಾಸಕ್ಕೆ
ಮರೆಯದೇ ತಲುಪಿಸು…

 

ಅಭಿಷೇಕ್ ವೈ.ಎಸ್ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಎಂ.ಎ ಪದವಿ ಪಡೆದಿದ್ದಾರೆ.
‘ಕಣ್ಣಿಲ್ಲದ ಕತ್ತಲರಾತ್ರಿ’ ಇವರ ಪ್ರಕಟಿತ ಕವನ ಸಂಕಲನ
ಕಥೆಗಳನ್ನು ಬರೆಯುವುದು,ಕವಿತೆಗಳನ್ನು ಬರೆಯುವುದು, ಛಾಯಾಗ್ರಹಣ, ತಿರುಗಾಟ ಇವರ ಹವ್ಯಾಸಗಳು

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

2 Comments

  1. SIDDARTH

    Beautiful ♥️

    Reply

Leave a comment

Your email address will not be published. Required fields are marked *

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ