Advertisement
ಚಂದ್ರಗೌಡ ಕುಲಕರ್ಣಿ ಬರೆದ ಈ ದಿನದ ಕವಿತೆ…

ಚಂದ್ರಗೌಡ ಕುಲಕರ್ಣಿ ಬರೆದ ಈ ದಿನದ ಕವಿತೆ…

ಶ್ವಾಸದ ಉಸಿರು

ಗಿಡಮರವೆಂದರೆ ಬರಿಗಿಡವಲ್ಲ
ಹೂಹೂ ಗೊಂಚಲ ತೇರು!
ಹಕ್ಕಿಯ ಚಿಲಿಪಿಲಿ ಬರಿಯುಲಿಯಲ್ಲ
ನಾದಾಮೋದದ ತವರು!

ಗುಡ್ಡ ಗಂವರ ಬರಿಜಡವಲ್ಲ
ಭೂಮಿತಾಯಿಯ ಒಡಲು!
ಚಿಗುರೆಲೆ ಮುಗುಳು ತರಗೆಲೆಯಲ್ಲ
ಹಸಿರು ಸಗ್ಗದ ಕಡಲು!

ಸುಳಿತಂಗಾಳಿ ಒಣಹವೆಯಲ್ಲ
ಶ್ವಾಸ ನಿಶ್ವಾಸದ ಉಸಿರು!
ಜುಳು ಜುಳು ಹರಿವುದು ಬರಿ ನೀರಲ್ಲ
ಅಮೃತ ಬೆರೆಸಿದ ಕೆಸರು!

ಎಳೆಹೂಬಿಸಿಲು ತಾಪವದಲ್ಲ
ಮೈಯ ಹೊಳಪಿನ ಬಣ್ಣ!
ಉದಿಸಿದ ಹಸುಳೆ ಮೊಗ್ಗನು ಅರಳಿಸಿ
ತೆರೆವುದು ತೇಜದ ಕಣ್ಣ!

ಕೋಗಿಲೆ ಕುಹುಕುಹು ಬರಿಸ್ವರವಲ್ಲ
ಚೈತ್ರದ ಜೋಗುಳ ಹಾಡು!
ನವಿಲಿನ ನೃತ್ಯ ಬರಿ ಕುಣಿತಲ್ಲ
ಗೆಜ್ಜೆ ಕಾಲ್ಗಳ ಜೋಡು!

ಚಂದ್ರಗೌಡ ಕುಲಕರ್ಣಿ ತಾಳಿಕೋಟೆಯವರು
ಎಸ್.ಕೆ. ಕಲಾ-ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸಹಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ
ಇವರ ಕತೆ, ಕವನ ಹಾಗೂ ಲೇಖನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ
ಬೆಣ್ಣೆ ಹಳ್ಳ (ಮಕ್ಕಳ ಕವಿತೆಗಳು), ಒಗಟು ಬಿಡಿಸೋ ಜಾಣ (ಒಗಟು ಕವಿತೆಗಳು), ಎಲ್ಲಮ್ಮನ ಆಟ (ಬಯಲಾಟ ಸಂಪಾದನೆ) ಇವರ ಪ್ರಕಟಿತ ಕೃತಿಗಳು

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ