Advertisement
ಕಾರ್ತಿಕ್ ಕೃಷ್ಣ ಬರೆದ ಈ ದಿನದ ಕವಿತೆ

ಕಾರ್ತಿಕ್ ಕೃಷ್ಣ ಬರೆದ ಈ ದಿನದ ಕವಿತೆ

ಒಂದೈದು ನಿಮಿಷ ತಡೆದು ಹೊರಡೋಣ ಗೆಳತಿ,
ಮುಂಗಾರು ಈಗಷ್ಟೇ ಧರೆಗಿಳಿಯುತಿದೆ.
ದಿನಮಣಿಯ ತೆರೆಗೆ ನೂಕಿ,
ಕಡು ಮೋಡವು ಹರುಷದಿ ಹಿಗ್ಗಿದಂತೆ,
ಮುಂಗಾರು ಹನಿ ಹನಿಯಾಗಿ ಧರೆಗಿಳಿಯುತಿದೆ!

ಇನ್ನೂ ಕೊಂಚ ಸುರಿಯಲಿ ಬಿಡು,
ಮಣ್ಣಿನ ಕೆಂಪು ಹರಡಲಿ ಬಿಡು,
ಇನ್ನೇನು ಬಾಡುವ ದಾಸವಾಳಕೆ
ಸಿಹಿಮುತ್ತಿನ ವಿದಾಯವ ಹೇಳಲು ಬಿಡು!

ಪ್ರಕೃತಿಯ ಶೃಂಗಾರ ಕಾವ್ಯವಿದು,
ಇಳೆಯೊಡನೆ ಒಡನಾಡುವ ದಾಟಿಯಿದು.
ಕಣ್ತೆರೆದು ನೋಡು ಗೆಳತಿ,
ಮುತ್ತಿನ ಹಾರದಂತೆ ಹೊಳೆಯುವ
ಜೇಡರ ಬಲೆಯನ್ನು..
ಗಮನವಿಟ್ಟು ಕೇಳು ಗೆಳತಿ,
ತನ್ನ ಸಂಗಾತಿಯ ಕರೆಯುವ
ಗೊರವಂಕದ ಕೂಗನ್ನು!

ಜೀವನದ ಅಸಾಧ್ಯ ಓಟದಲ್ಲಿ
ಕುಂಟಿಕೊಂಡು ಸಾಗುವ ನಾವು,
ಅರೆಕ್ಷಣ ನಿಂತು ಇವೆಲ್ಲನ್ನೂ ನೋಡಬೇಕು ಗೆಳತಿ!
ದಪ್ಪನೆಯ ರೈನುಕೋಟಿನೊಳಗೆ
ಬೆಚ್ಚನೆ ಸಾಗುವ ನಾವು,
ಅಪ್ಪಳಿಸುವ ಮಳೆಹನಿಗೆ ಮೈಯೊಡ್ಡಬೇಕು,
ಕೃತಕ ಹವೆಯ ಎಸಿ ಕಾರಿನ ಕಿಟಕಿಯನು ಇಳಿಸಿ,
ಮಳೆಯನು ಬೊಗಸೆಯಲಿ ಹಿಡಿಯಬೇಕು!

About The Author

ಕಾರ್ತಿಕ್ ಕೃಷ್ಣ

ಕಾರ್ತಿಕ್ ಕೃಷ್ಣ, ವೃತ್ತಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್. ಹವ್ಯಾಸಿ ಬರಹಗಾರ. ದಿನಪತ್ರಿಕೆಗಳಲ್ಲಿ ಇವರ ಹಲವು ಲಲಿತ ಪ್ರಬಂಧಗಳು ಹಾಗೂ ವಿಜ್ಞಾನ ಬರಹಗಳು ಪ್ರಕಟಗೊಂಡಿವೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ