Advertisement

ಕೆಂಡಸಂಪಿಗೆ

ಕಳ್ಳತನಕ್ಕೆ ಗುಡ್ ಬೈ ಹೇಳಿದ ಗಂಟಿಚೋರರು ಮಾಡಿದ್ದೇನು?

ಆಗ ತುಡುಗು ಮಾಡುವುದು ಅವರ ಆರ್ಥಿಕತೆಯ ಪ್ರಧಾನ ಮೂಲವಾಗಿತ್ತು. ಅಂತೆಯೇ ಹಣ ಬಂಗಾರ ಮಾತ್ರವಲ್ಲದೆ ದಿನಬಳಕೆಯ ವಸ್ತುಗಳನ್ನು ಹೆಚ್ಚು ತುಡುಗು ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಈ ಸಮುದಾಯವು ಮುಖ್ಯವಾಗಿ ತುಡುಗು ಮಾಡುವ ಉದ್ದೇಶದಲ್ಲಿ ಹೊಟ್ಟೆಪಾಡಿನ ಅನಿವಾರ್ಯತೆ ಇತ್ತು. ಹಾಗಾಗಿ ಹಿಂದೆಯೂ ಕೂಡ ಈ ಸಮುದಾಯದಲ್ಲಿ ತುಡುಗುತನ ಇದ್ದದ್ದು ಹೆಚ್ಚಾಗಿ ಹಸಿವನ್ನು ನೀಗಿಸುವ ವಸ್ತುಸಂಗತಿಗಳಿಗೆ ಸಂಬಂಧಿಸಿದ್ದು ಎನ್ನುವುದನ್ನು ಗಮನಿಸಬೇಕು.
ಡಾ.ಅರುಣ್ ಜೋಳದ ಕೂಡ್ಲಿಗಿ ಬರೆಯುವ ‘ಗಂಟಿಚೋರರ ಕಥನಗಳು’ ಸರಣಿಯ ಹತ್ತನೆಯ ಕಂತು.

Read More

ಗಂಟಿಚೋರ ಸಮುದಾಯದ ತುಡುಗು ನುಡಿ

ಇಂದು ಬುಡಕಟ್ಟುಗಳ ಭಾಷೆಯ ಬಿಕ್ಕಟ್ಟೆಂದರೆ, ಆಯಾ ಭಾಗದ ಬಹುಸಂಖ್ಯಾತರ ಭಾಷೆಯನ್ನು ಬುಡಕಟ್ಟುಗಳು ಅನಿವಾರ್ಯವಾಗಿ ಬಳಸಬೇಕಾಗಿದೆ. ಹಾಗಾಗಿ ತಮ್ಮ ವೃತ್ತಿ ಬದುಕಿಗೆ ಅಂಟಿಕೊಂಡಿದ್ದ ಭಾಷೆಗಳನ್ನು ಬುಡಕಟ್ಟುಗಳ ಹೊಸ ತಲೆಮಾರು ಬಳಸುತ್ತಿಲ್ಲ. ಬಳಸುವ ಅಗತ್ಯವೂ ಕಾಣುತ್ತಿಲ್ಲ. ಆದರೆ ಎಷ್ಟೋ ಬಾರಿ ಈ ಬುಡಕಟ್ಟು ಭಾಷೆ ನುಡಿಗಟ್ಟುಗಳು ಆಯಾ ಸಮುದಾಯದ ಚರಿತ್ರೆಯನ್ನೂ ಹೇಳುತ್ತಿರುತ್ತದೆ. ಹೀಗೆ ಬುಡಕಟ್ಟುಗಳ ಭಾಷೆಯೊಂದು ನಶಿಸಿದರೆ, ಅದರ ಜತೆ ಆ ಸಮುದಾಯದ ಚರಿತ್ರೆಯೂ ನಶಿಸಿದಂತೆ. ಈ ಬಗ್ಗೆ ನೋಮ್ ಚೋಮಸ್ಕಿಯನ್ನು ಒಳಗೊಂಡಂತೆ ಜಗತ್ತಿನ ಭಾಷಾತಜ್ಞರು ಎರಡು ದಶಕಗಳಿಂದ ಇಂತಹ ಆತಂಕ ವ್ಯಕ್ತಪಡಿಸುತ್ತಾ ಬಂದಿದ್ದಾರೆ.
ಡಾ.ಅರುಣ್ ಜೋಳದ ಕೂಡ್ಲಿಗಿ ಬರೆಯುವ ‘ಗಂಟಿಚೋರರ ಕಥನಗಳು’ ಸರಣಿಯ ಒಂಭತ್ತನೇ ಕಂತು.

Read More

ತುಡುಗುತನಕ್ಕಂಟಿದ ನಂಬಿಕೆಯ ಲೋಕ

ಈ ಕತೆ ಸಿಕ್ಕಿದ್ದು ಬಾಲೆಹೊಸೂರಿನಲ್ಲಿ. ಇದರ ವಿವರಗಳನ್ನು ನೋಡಲಾಗಿ ಈ ಊರಿನಲ್ಲಿಯೇ ‘ದ್ಯಾಮವ್ವ’ ಪೂಜೆಗೊಳ್ಳುತ್ತಾಳೆ. ಹೀಗಾಗಿ ಇಲ್ಲಿನ ತುಡುಗು ಮಂದಿಯೇ ಈ ಕಥೆಯ ನಾಯಕರಿರಬಹುದು. ಇದು ಸೃಷ್ಟಿ ಕತೆಯಲ್ಲ ಆದರೆ ಈಗಾಗಲೇ ಇರುವ ಸಮುದಾಯದ ಪ್ರವೃತ್ತಿಯನ್ನು ಬೆಂಬಲಿಸಿ ಪಾರುಮಾಡುವ ಕತೆಯಾಗಿದೆ. ಅಂತೆಯೇ ಸಮುದಾಯ ದೈವಗಳ ಜತೆ ಹೊಂದಿದ್ದ ಅವಿನಾಬಾವ ಸಂಬಂಧವನ್ನು ಕೂಡ ಸೂಚಿಸುತ್ತದೆ. ಅಂತೆಯೇ ದ್ಯಾಮವ್ವ ತಮ್ಮನ್ನು ಪೊರೆಯುತ್ತಾಳೆ…

Read More

ಗಂಟಿಚೋರರೇ ನೆನಪಿಟ್ಟುಕೊಂಡ ಕಥನಗಳಲ್ಲಿದೆ ಚರಿತ್ರೆ

ಸೇಟ್‌ಜೀ ಒಬ್ಬರು ಬೆಂಗಳೂರಿನಿಂದ ಮುಂಬೈಗೆ ಹೆಚ್ಚುವರಿ ಗೋಲ್ಡ್ ಬಿಸ್ಕೆಟ್ ಸಾಗಿಸುವ ಮಾಹಿತಿ ಸಂಗ್ರಹಿಸಿ ಪ್ಲಾನ್ ಮಾಡಿದಂತೆ ಅವರೆಲ್ಲ ಸೇರಿ ‘ರಾಬರಿ’ ಮಾಡಿದರು. ಎಲ್ಲವೂ ಪ್ಲಾನ್ ಪ್ರಕಾರವೇ ನಡೆಯಿತು, ಆದರೆ ತಪ್ಪಿಸಿಕೊಳ್ಳುವಾಗ ಈ ಟೀಮಿನ ಇಬ್ಬರು ಸಿಕ್ಕಿಹಾಕಿಕೊಂಡರು.  ಮರುದಿನ ದೊಡ್ಡ ಸುದ್ದಿಯಾಯಿತು. ಸಿಕ್ಕಿಹಾಕಿಕೊಂಡ ಸದಸ್ಯರು ಕಳ್ಳತನದ ಕುರಿತು ಬಾಯಿಬಿಡಲಿಲ್ಲ. ಆಗ ಪೊಲೀಸರೊಂದು ಉಪಾಯ ಮಾಡಿ, ಬಂಧಿತರನ್ನು ಬಿಡುಗಡೆ ಮಾಡಲು ನಿರ್ಧರಿಸಿದರು. ಮುಂದೇನಾಯಿತು ?
‘ಗಂಟಿಚೋರರ ಕಥನಗಳು’ ಸರಣಿಯಲ್ಲಿ ಡಾ.ಅರುಣ್ ಜೋಳದ ಕೂಡ್ಲಿಗಿ ಬರಹ. 

Read More

ಭಾರತ್ ಬ್ಲೇಡಿನ ಲಕ್ಷೆ ಮತ್ತು ಮನೆಕನ್ನದ ಕತೆಗಳು

ಮಹಿಳೆಯರು ಗಂಟಿಚೋರ್ ಸಮುದಾಯದ ಎಲ್ಲಾ ಸಂಗತಿಗಳಲ್ಲಿಯೂ ಪಾಲುದಾರರಾಗಿದ್ದರು. ತುಡುಗುತನದಲ್ಲಿಯೂ ಮಹಿಳೆಯರ ಪಾಲ್ಗೊಳ್ಳುವಿಕೆ ಕುತೂಹಲಕಾರಿಯಾಗಿದೆ. ಗುಂಪಾಗಿ ತುಡುಗು ಮಾಡುವುದಕ್ಕಿಂತ ಒಂಟಿಯಾಗಿ ತುಡುಗು ಮಾಡುವ ಪ್ರಮಾಣ ಹೆಚ್ಚಾಗಿತ್ತು. ಹಾಗಾಗಿ ಗಂಟಿಚೋರರ ತುಡುಗುತನದ ಪ್ರವೃತ್ತಿಯಲ್ಲಿ ಮಹಿಳೆಯರ ಪಾಲುದಾರಿಕೆ ವಿಶೇಷವಾಗಿದೆ. ಇವರಲ್ಲಿಯೂ ಪ್ರಾದೇಶಿಕವಾಗಿ ತುಂಬಾ ಪ್ರಸಿದ್ಧಿಯನ್ನು ಪಡೆದ ಮಹಿಳೆಯರೂ ಇದ್ದಾರೆ. ‘ಗಂಟಿಚೋರರ ಕಥನಗಳು’ ಸರಣಿಯಲ್ಲಿ ಅರುಣ್ ಜೋಳದ ಕೂಡ್ಲಿಗಿ ಬರೆದ ಬರಹ ಇಲ್ಲಿದೆ. 

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ