Advertisement
ಎಸ್. ಜಯಶ್ರೀನಿವಾಸ ರಾವ್

ಜಯಶ್ರೀನಿವಾಸ ರಾವ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ-ಪದ್ಯಗಳ ಅನುವಾದಕರು.  ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು, ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನದಲ್ಲಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು, ಹಾಗೂ ಕೇರೂರ ವಾಸುದೇವಾಚಾರ್ಯರ ಸ್ವರಚಿತ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಶರ್ಲಾಕ್ ಹೋಮ್ಸ್ ಕತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ.  “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು" (ಪೋಲೀಷ್‌ ಕವಿತೆಗಳ ಕನ್ನಡಾನುವಾದಿತ ಸಂಕಲನ).  ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ’ ಹಾಗೂ ‘ಮ್ಯೂಜ಼್ ಇಂಡಿಯ’ ದಲ್ಲಿ ಪ್ರಕಟವಾಗಿವೆ.  ಹೈದರಾಬಾದಿನ CIEFLನಿಂದ (ಈಗ The EFL University) ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003ರಲ್ಲಿ PhD ಪದವಿ ಪಡೆದಿದ್ದಾರೆ.  ಎಸ್ಟೋನಿಯಾ, ಲ್ಯಾಟ್ವಿಯಾ ಹಾಗೂಲಿಥುವೇನಿಯಾ ದೇಶದ ಕವಿತೆಗಳ ಸಂಕಲನ 'ಬಾಲ್ಟಿಕ್ ಕಡಲ ಗಾಳಿ' ಇತ್ತೀಚೆಗೆ ಪ್ರಕಟವಾಗಿದೆ.

ಕೊರೋನಾ ಎಂಬ ಸಾವಿನ ರೂಪಕ: ಲಕ್ಷ್ಮಣ ವಿ.ಎ. ಅಂಕಣ

“ನ್ಯಾಷನಲ್ ಜಿಯೋಗ್ರಾಫಿಕ್ ಚ್ಯಾನೆಲ್ ನಲ್ಲಿ ಆಫ್ರಿಕಾದ ಮಸಾಯ್ ಮಾರಾ ಕಾಡಿನಲ್ಲಿ ಹಸಿದ ಹುಲಿಗಳು ಬೇಟೆಯಾಡುವುದನ್ನು ನೀವು ನೋಡಿರಬಹುದು. ಹುಲಿ ತನ್ನ ಬೇಟೆಯನ್ನು ಬಲು ಜಾಣ್ಮೆಯಿಂದ ಅಷ್ಟೇ ಎಚ್ಚರಿಕೆಯಿಂದ ಗುಂಪಿನಲ್ಲಿರುವ ಅತಿ ದುರ್ಬಲವಾದ ಪ್ರಾಣಿಯನ್ನೇ ಆಯ್ದುಕೊಂಡಿರುತ್ತದೆ. ಕಾರಣವಿಷ್ಟೇ ಹುಲಿಗೆ ಸುಲಭವಾಗಿ ಯಾವುದೇ ಪ್ರತಿರೋಧವಿಲ್ಲದೆ ತನ್ನ ಆಹಾರ ಸಂಪಾದಿಸಬೇಕೆನ್ನುವ ಇರಾದೆಯಷ್ಟೇ..”

Read More

ಇಸ್ಪೀಟಾಟ್ಟ ಮತ್ತು ಕ್ರಿಕೆಟ್ಟಾಟ ಎಂಬ ಆಧ್ಯಾತ್ಮ: ಲಕ್ಷ್ಮಣ ವಿ.ಎ. ಅಂಕಣ

“ಮಳೆ ಬೀಳದ ಊರಿನಲ್ಲಿ ಕೂಲಿ ನಾಲಿ ಕೆಲಸ ಸಿಗುವುದೂ ಅಷ್ಟರಲ್ಲೇ ಇತ್ತು, ಅಥವ ಇದೊಂದು ನೆಪವೇನೋ.. ಈ ಇಸ್ಪೀಟೆಲೆಗಳನ್ನು ನೀಟಾಗಿ ಯಾರಿಗೂ ಕಾಣದಂತೆ ಅಷ್ಟೇ ಕಲಾತ್ಮಕವಾಗಿ ಮಡಚಿ ಹಿಡಿಯುವುದು, ಮತ್ತೆ ಜೋಕರುಗಳು ಬಂದಾಗ ಒಳಗೊಳಗೇ ಖುಷಿಪಡುವುದು, ತಮಗೆ ಬೇಕಾದ ನಂಬರು ಸಿಗದಿದ್ದಾಗ ಆಕ್ರೋಶಗೊಂಡು ಪಟ್ ಅಂತ ಇಸ್ಪೀಟಿನೆಲೆ ನೆಲಕೆ ಬಡಿಯುವುದು…”

Read More

ಧಾರವಾಡದ ದಿನಗಳ ನೆನೆಯುತ್ತಾ…: ಲಕ್ಷ್ಮಣ ವಿ.ಎ. ಅಂಕಣ

“ಎಲೆಯುದುರುವ ಕಾಲವಿದು. ರಾತ್ರಿ ಮೈಯ್ಯೆಲ್ಲ ಥರಗುಟ್ಟುವ ಚಳಿ. ಕಾಲಿಗೆ ಬರುವ ಹೊದಿಕೆ ತಲೆಗೆ ಬರುತ್ತಿರಲಿಲ್ಲ ತಲೆಗೆ ಬಂದದ್ದು ಕಾಲಿಗೆ ಬರುತ್ತಿರಲಿಲ್ಲ. ಅಷ್ಟೇ ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕು ವಿಶೇಷವಾಗಿ ಚಳಿಗಾಲದಲ್ಲಿ ಹೀಗಾಗಿ ತಾಯ ಗರ್ಭದಲ್ಲಿ ಮಗು ಮಲಗಿರುತ್ತದಲ್ಲ ಎರಡು ಕಾಲು ಮಡಚಿ ತಲೆ ತಗ್ಗಿಸಿ ಅರ್ಧ ಬಿಲ್ಲಿನಾಕಾರಾದಲ್ಲಿ ಹಾಗೆ ಮಲಗುತ್ತಿದ್ದೆ, ಧಾರವಾಡದ ಸಪ್ತಾಪೂರದ ಮಿಚಿಗನ್ ಕಂಪೌಂಡಿನ ಸಿಂಗಲ್ ಔಟ್ ಹೌಸ್ ರೂಮಿನಲ್ಲಿ…”

Read More

ಕಚ್ಚಾ ಹಾಳೆಯಂತಹ ನನ್ನ ಊರು: ಲಕ್ಷ್ಮಣ ವಿ.ಎ. ಅಂಕಣ

“ಉತ್ತರ ದಿಕ್ಕಿನ ಅಂಗಳದ ಎಡಭಾಗದಲ್ಲಿ ಎರಡು ಹಿಂಡುವ ಎಮ್ಮೆ ಮತ್ತು ಇನ್ನೊಂದು ವಯಸ್ಸಾದ ಮುರುಕುಕೋಡಿನ ಗೊಡ್ಡೆಮ್ಮೆ. ದಕ್ಷಿಣದ ಬಾಗಿಲಿನ ಹಿತ್ತಲಿನಲ್ಲಿ ಜೋಳದ ದಂಟಿನಿಂದ ಮರೆಮಾಚಿದ ಸ್ನಾನಕ್ಕೆಂದು ಮರೆಮಾಡಿದ ಎರಡಗಲದ ಒಂದು ಜಾಗ, ಸ್ನಾನದ ನೀರು ಹೋಗಿ ಇಂಗುವಲ್ಲಿ ತಿಪ್ಪೆ, ಆ ತಿಪ್ಪೆಯಲ್ಲಿ ಎಮ್ಮೆ ಆಡುಗಳ ಯಥೇಚ್ಛ ಗೊಬ್ಬರ ಇಂತಹ ಊರಿನಲ್ಲಿ ಬಹುಬೇಗ ಬೆಳೆಯುವಂತವು ಒಂದು ತಿಪ್ಪೆಗಳು ಮತ್ತು ಇನ್ನೊಂದು ಮೈ ನೆರೆದ ಹುಡುಗಿಯರು…”

Read More

ಕಾಯುವುದಿಲ್ಲ ಕವಿತೆಗೆ ಯಾರೂ ಕವಿಯೊಬ್ಬನಲ್ಲದೆ…: ಲಕ್ಷ್ಮಣ ವಿ.ಎ. ಅಂಕಣ

“ಮೊನ್ನೆ ಮೊನ್ನೆ ನಮ್ ರಸ ಋಷಿ ಕುವೆಂಪು ಅವರ ಜನ್ಮ ಶತಮಾನೋತ್ಸವ ಇದ್ದಾಗ ರವೀಂದ್ರ ಕಲಾಕ್ಷೇತ್ರದಾಗ ಒಂದ ಕವಿಗೋಷ್ಠಿ ಇಟ್ಟಿದ್ರು. ನಾಡಿನ ಎಲ್ಲ ಯುವಕವಿಗಳೂ ದಂಡಿ ದಂಡಿಯಾಗಿ ಬಂದಿದ್ರು… ಆದರೆ ಕೇಳೋ ಕಿವಿಗಳು ಅಲ್ಲೊಂದು ಇಲ್ಲೊಂದು…. ಎಲ್ಲಾರೂ ತಮ್ಮ ತಮ್ಮ ಕವಿತೆ ಓದಿದ ಮ್ಯಾಲ ಶಾಲು ಸನ್ಮಾನ ಮಾಡಿಸ್ಕೊಂಡು ಸಿಟಿ ಮಾರ್ಕೆಟಿಗೆ ಸಂತಿ ಮಾಡ್ಲಿಕ್ಕ ಹೋಗಬೇಕ!? ಕೊನೆಗೆ ವೇದಿಕೆ ಮೇಲೆ ಉಳಿದವರು ಕವಿಗೋಷ್ಠಿ ಅಧ್ಯಕ್ಷರು ಮತ್ತು ನಿರೂಪಕರು.”

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ