Advertisement

ಕೆಂಡಸಂಪಿಗೆ

ಕಾಯುವುದಿಲ್ಲ ಕವಿತೆಗೆ ಯಾರೂ ಕವಿಯೊಬ್ಬನಲ್ಲದೆ…: ಲಕ್ಷ್ಮಣ ವಿ.ಎ. ಅಂಕಣ

“ಮೊನ್ನೆ ಮೊನ್ನೆ ನಮ್ ರಸ ಋಷಿ ಕುವೆಂಪು ಅವರ ಜನ್ಮ ಶತಮಾನೋತ್ಸವ ಇದ್ದಾಗ ರವೀಂದ್ರ ಕಲಾಕ್ಷೇತ್ರದಾಗ ಒಂದ ಕವಿಗೋಷ್ಠಿ ಇಟ್ಟಿದ್ರು. ನಾಡಿನ ಎಲ್ಲ ಯುವಕವಿಗಳೂ ದಂಡಿ ದಂಡಿಯಾಗಿ ಬಂದಿದ್ರು… ಆದರೆ ಕೇಳೋ ಕಿವಿಗಳು ಅಲ್ಲೊಂದು ಇಲ್ಲೊಂದು…. ಎಲ್ಲಾರೂ ತಮ್ಮ ತಮ್ಮ ಕವಿತೆ ಓದಿದ ಮ್ಯಾಲ ಶಾಲು ಸನ್ಮಾನ ಮಾಡಿಸ್ಕೊಂಡು ಸಿಟಿ ಮಾರ್ಕೆಟಿಗೆ ಸಂತಿ ಮಾಡ್ಲಿಕ್ಕ ಹೋಗಬೇಕ!? ಕೊನೆಗೆ ವೇದಿಕೆ ಮೇಲೆ ಉಳಿದವರು ಕವಿಗೋಷ್ಠಿ ಅಧ್ಯಕ್ಷರು ಮತ್ತು ನಿರೂಪಕರು.”

Read More

‘ಅಪ್ಪನ ಅಂಗಿ’ಗೆ ಬರೆದ ನನ್ನ ಮಾತುಗಳು: ಲಕ್ಷ್ಮಣ ವಿ ಎ ಅಂಕಣ

“ಬೆಳಕು ಹರಿಯುವಷ್ಟರಲ್ಲಿ ಬೆಂಗಳೂರು ತಲುಪಿದೆ. ಅವರಿವರ ವಿಚಾರಿಸಿ ಅಗ್ರಿ ಕಾಲೇಜಿನ ಬಸ್ಸು ಹತ್ತಿ ಪ್ರವೇಶ ಪರೀಕ್ಷೆಯನ್ನೂ ಬರೆದೆ. ಇನ್ನೇನು ಸಂಜೆಯಾಯಿತು ವಾಪಸು ಧಾರವಾಡಕ್ಕೆ ಬಸ್ಸಿರುವುದು ರಾತ್ರಿ ಒಂಬತ್ತೂವರೆಗೆ ಅಲ್ಲಿಯವರೆಗೂ ಏನು ಮಾಡುವುದು? ಸಿನೇಮಾ ನೋಡಲು ಮನಸಿರಲಿಲ್ಲ. ಏಕೆಂದರೆ ಕರೀಶ್ಮಾ ಕಪೂರಳ ಆ ಚೆಲುವು, ಕಾರಿನ ಹೆಡ್ ಲೈಟಿನಂತಹ ಅವಳ ಎರಡು ಕಣ್ಣುಗಳು…”

Read More

ಗೋಕುಲ ನಿರ್ಗಮನದ ಪುತಿನ ಮತ್ತು ಎಚ್ ಎಸ್ ವಿ: ಲಕ್ಷ್ಮಣ ವಿ.ಎ. ಅಂಕಣ

“ಹಿರಣ್ಯಕಶಪುವಿಗೆ ಕಂಬ ಮಾತ್ರ ಕಂಡಿತು; ಪ್ರಹ್ಲಾದನಿಗೆ ಕಂಬದ ಒಳಗೆ ಅಡಗಿರುವ ನರಸಿಂಹ ಕಂಡ! ಕಾಣಲಿಕ್ಕೆ ದೃಷ್ಟಿಯಷ್ಟೇ ಸಾಲದು…. ಅದೃಷ್ಟವೂ ಇರಬೇಕು. ಅದಕ್ಕೆ ಮಹಾಕವಿಗಳು ಹೇಳಿದ್ದು ಕಂಡ ಕಂಡವರಿಗೆಲ್ಲಾ ಕಾಣುವುದಿಲ್ಲ…. ಕಂಡವರಿಗಷ್ಟೇ ಕಾಣಬೇಕಾದ್ದು ಕಾಣುವುದು ಎಂದು! ಅದನ್ನೇ ನಾವು ದರ್ಶನ ಎನ್ನುವುದು. ಇಂತಹ ದರ್ಶನದಿಂದ ತುಂಬಿರುವುದರಿಂದಲೇ ಪುಟ್ಟಪ್ಪನವರು ತಮ್ಮ ಕಾವ್ಯಕ್ಕೆ ರಾಮಾಯಣ ದರ್ಶನನಂ ಎಂದು ಹೆಸರಿಟ್ಟರು.”

Read More

ದಾರು ಸಿದರಾಮ ಮತ್ತು ಸಾಸಿವೆ ಡಬ್ಬ: ಡಾ. ಲಕ್ಷ್ಮಣ ವಿ.ಎ. ಅಂಕಣ

“ಕೇರಿಗೊಂದು ದಾರಿಯಿರುವಂತೆ ಊರಿಗೊಬ್ಬ ಸಿದರಾಮನಿದ್ದ. ಹೆಂಡತಿ, ಮಕ್ಕಳು, ಹಿಂದೆ, ಮುಂದೆ, ಎಡಕೆ, ಬಲಕೆ ಯಾರೂ ಇಲ್ಲದ ಅನಾಥ. ಹಾಗಂತ ಅವನು ಯಾರ ಹತ್ತಿರಾನೂ ಅನುಕಂಪ ನಿರೀಕ್ಷಿಸುವವನೂ ಅಲ್ಲ. ಬೆಳಗಾದರೆ ಸೈಕಲ್ ಬೆನ್ನಿಗೆ ಐಸ್ ಡಬ್ಬಾ ಕಟ್ಕೊಂಡು ‘ಗಾರೇಗಾರ’ ಮಾರುವುದು. ರಾತ್ರಿಯಾಗುತ್ತಿದ್ದಂತೆ ಊರಾಚೆಗಿನ ಗೂಡಂಗಡೀಲಿ ದಾರು ಮಾರುತ್ತಿದ್ದ. ಹೀಗಾಗಿ ಊರಲ್ಲಿ ಅವನನ್ನ ಕರೆಯೋದೆ ದಾರು ಸಿದರಾಮ ಅಂತ. ದಾರೂ ಮಾರಿದರೂ ಒಂದು ದಿನವೂ ಸಾರಾಯಿ ಕುಡಿದಿದ್ದನ್ನ ಯಾರೂ ಕೇಳಿರಲಿಲ್ಲ ಕಂಡಿರಲಿಲ್ಲ.”

Read More

ಸರ್ವೇಜನ ಸುಖೀನೋ ಭವಂತು….: ಲಕ್ಷ್ಮಣ ವಿ.ಎ. ಅಂಕಣ

“ಈ ದೇಶದ ಶ್ರಮಿಕವರ್ಗವಿದೆಯಲ್ಲ ಇವರ್ಯಾರೂ ಧರ್ಮ ಪಂಥ ಪಂಗಡಗಳ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಂಡವರಲ್ಲ. ದೇವರನ್ನು ಮನೆಯ ಜಗುಲಿಗಳಿಗೇ ಕಟ್ಟಿ ಹಾಕಿ ರೊಟ್ಟಿ ಬುತ್ತಿ ಅಂಬಲಿಯನ್ನು ಸಾಬರು ಮಾಲಗಾರರು ಲಿಂಗಾಯತರೆನ್ನದೇ ಜೋಳದ ಹೊಲದಲ್ಲಿ ಕುಳಿತು ಬುತ್ತಿಯ ಬಿಚ್ಚಿ ಹಂಚಿ ತಿಂದು ಬದುಕುವವರು. ಹೀಗೆ ಮಾಡುವುದು ಇದೊಂದು ಅವರಿಗೆ ಆದರ್ಶವೆನ್ನುವ ಅಹಂ…”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ