ತಂತಿ ಮೇಲೆ ನಡೆದು ಮುಳ್ಳು ತೆಗೆದವರು: ಎಲ್.ಜಿ.ಮೀರಾ ಅಂಕಣ
ಮಾರನೆಯ ದಿನ ಬೆಳಿಗ್ಗೆ ಮಹೇಶ್ ನಾಯ್ಡು ಬಂದಾಗ ಅವನನ್ನು ಕಾಲೇಜಿನ ಮೈದಾನದ ದೂರದ ಒಂದು ಕಲ್ಲುಬೆಂಚಿಗೆ ಕರೆದುಕೊಂಡು ಹೋಗಿ ಆತ ಮಾಡಿದ ತಪ್ಪು ಕೆಲಸದ ಬಗ್ಗೆ ಮತ್ತು ಇದು ಇಡೀ ಕಾಲೇಜಿಗೆ ಗೊತ್ತಾದರೆ ತಾನು ಯಾವ ಪರಿಸ್ಥಿತಿಯಲ್ಲಿರಬಹುದು ಎಂದು ಊಹಿಸುವಂತೆ ಅವನಿಗೆ ಹೇಳಿದರು. ಮೊದಮೊದಲು ತಾನು ಏನೂ ತಪ್ಪು ಮಾಡಿಲ್ಲ ಎಂದು ವಾದಿಸಿದ ಆತ ನಂತರ ಕಾಂತಿ ಮೇಡಂರ ಗಂಭೀರ ಮುಖ ಮತ್ತು ತೂಕವಾದ ಮಾತುಗಳ ಮುಂದೆ ನಿರುತ್ತರನಾದ, ಮತ್ತು ತಾನು ಆ ಪದ ಬಳಸಿದ್ದು ತಪ್ಪು ಎಂದು ಒಪ್ಪಿಕೊಂಡ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಹದಿಮೂರನೆಯ ಬರಹ