ತಾತ್ವಿಕತೆ ನಿರಾಕರಣೆಯ ಮಾಯಾಲೋಕ
ಕುಂಟಿನಿಯ ಕತೆಗಳು ಕೆಲವೊಮ್ಮೆ ಈ ಕಾಲದ್ದಾದರೂ ಅವಧೂತರ ಆಧ್ಯಾತ್ಮಿಕ ವಿಲಾಸವನ್ನು ಹೊತ್ತಿರುತ್ತವೆ; ಜಲಾಲುದ್ದೀನ್ ರೂಮಿಯ ಕತೆಗಳನ್ನು, ಸೂಫಿ- ಝೆನ್ ಕತೆಗಳನ್ನು ನೆನಪಿಸುತ್ತವೆ. ಕೆಲವೊಮ್ಮೆ ಅತ್ಯಂತ ಪುರಾತನವೆನಿಸುವ ಇಂಥ ಕತೆಗಳಲ್ಲೇ ಹೊಸದೆನಿಸುವ ಕಾಣ್ಕೆಗಳನ್ನು ಕಾಣಿಸಬಲ್ಲ ಆಧುನಿಕ ಮನಸ್ಸೊಂದು ಮಿಡಿಯುತ್ತಿರುತ್ತದೆ. ಒಂದು ಇನ್ನೊಂದಾಗುವ, ಒಬ್ಬ ಇನ್ನೊಬ್ಬನಾಗುವ, ಒಬ್ಬರಿನ್ನೊಬ್ಬರಲ್ಲಿ ಬೆರೆತುಬಿಡುವ, ಇದೇನು ಉಪನಿಷತ್ತಿನ ಕತೆಯೇ ಎಂಬಂತೆ ಭಾಸವಾಗುವ ಹಲವು ಕತೆಗಳನ್ನು ಕುಂಟಿನಿ ಬರೆದಿದ್ದಾರೆ.
ಗೋಪಾಲಕೃಷ್ಣ ಕುಂಟಿನಿ ಅವರ ಹೊಸ ಪುಸ್ತಕ ‘ಮಾರಾಪು’ ಸಂಕಲನಕ್ಕೆ ಹರೀಶ್ ಕೇರ ಬರೆದ ಮುನ್ನುಡಿ