Advertisement

ವಿನಾಯಕ ಅರಳಸುರಳಿ

ಯಕ್ಷಗಾನ ಶೈಲಿಯಲ್ಲಿ ಪು.ತಿ.ನ ವಿರಚಿತ “ಹರಿಣಾಭಿಸರಣ”

ಕವಿ ಪು.ತಿ.ನರಸಿಂಹಾಚಾರ್‌ ಅವರ ಗೀತನಾಟಕ ʻಹರಿಣಾಭಿಸರಣʼವನ್ನು ಯಕ್ಷಗಾನ ರೂಪಕಕ್ಕೆ ಅಳವಡಿಸುವ ಪ್ರಥಮ ಪ್ರಯೋಗವಿದು. ಕನ್ನಡ ಸಾಹಿತ್ಯ ಕಂಡ ಅಪರೂಪದ ದಾರ್ಶನಿಕ ಕವಿ ಪು.ತಿ.ನ. ಅವರ, ʻಹಂಸ ದಮಯಂತಿ ಮತ್ತು ಇತರ ರೂಪಕಗಳುʼ ಎಂಬ ಗುಚ್ಛದಲ್ಲಿನ ಒಂದು ರೂಪಕ ʻಹರಿಣಾಭಿಸರಣʼ. ಯಕ್ಷಗಾನದ ಛಂದಸ್ಸಿನಲ್ಲಾಗಲೀ ಅಥವಾ ಅದಕ್ಕೆ ಪೂರಕವಾದ ಮಟ್ಟಿನಲ್ಲಾಗಲೀ ಈ ಸಾಹಿತ್ಯ ಇಲ್ಲ. ಕೆಲವು ಚಿಕ್ಕ-ಪುಟ್ಟ ಬದಲಾವಣೆಗಳೊಂದಿಗೆ ಇದನ್ನು ಯಕ್ಷಗಾನ ಪಠ್ಯಕ್ಕೆ ಹೊಂದಿಸಿಕೊಂಡು, ರೂಪಕದ ಚೌಕಟ್ಟಿಗೆ ಅಳವಡಿಸಲು ಪ್ರಯತ್ನಿಸಿದ್ದೇವೆ. ರಾಮಾಯಣದ ಪಂಚವಟಿಯಲ್ಲಿನ ಮಾಯಾಜಿಂಕೆಯ ಕಥಾವಸ್ತುವನ್ನು ಹೊಂದಿರುವ ಈ ಕೃತಿ, ಯಕ್ಷಗಾನದ ಪಠ್ಯಗಳಿಗಿಂತ ಕೊಂಚ ಭಿನ್ನವಾಗಿದ್ದು, ಕವಿಯ ಕಲ್ಪನೆಯನ್ನು ಅಂತೆಯೇ ರೂಪಕಕ್ಕೆ ಅಳವಡಿಸಲು ಯತ್ನಿಸಿದ್ದೇವೆ. ಮೂಲ ಪಠ್ಯದಲ್ಲಿರುವ ಗದ್ಯ-ಪದ್ಯಗಳೆರಡನ್ನೂ ಸೂಕ್ತವಾಗಿ ಬಳಸಿಕೊಂಡು, ರಂಗಪ್ರಯೋಗದ ಹರವನ್ನು ವಿಸ್ತರಿಸುವ ನೂತನ ಸಾಧ್ಯತೆಯೊಂದರ ಈ ಅನ್ವೇಷಣೆ ಇದಾಗಿದೆ.

ಕೃಪೆ: ಅನಂತ ಹೆಗಡೆ ದಂತಳಿಗೆ

Read More

ಅಭಿಷೇಕ ಬಳೆ ಮಸರಕಲ್ ಬರೆದ ಈ ದಿನದ ಕವಿತೆ

“ಅದೆಂಥ ಜೋರು ಮಳೆಯೆಂದರೆ ಅದೆಷ್ಟು ಬಾರಿ ತೊಯ್ದು ತೊಪ್ಪೆಯಾದೆನೊ
ತುಸು ಎದ್ದು ಮೈ ಕೊಡವಿ
ಮತ್ತೆ ಮಡಚಿಟ್ಟ ಪುಟದ ನಡುವೆ ಪತ್ರವನ್ನು
ಆಗ
ತಾನೇ ಹಡೆದ ಮಗುವಿನಂತೆ
ಜಾಗರೂಕತೆಯಿಂದ ಇಟ್ಟು
ಒಂದು ದೀರ್ಘವಾದ ಉಸಿರನ್ನು ಬಿಟ್ಟಾಗ”- ಅಭಿಷೇಕ ಬಳೆ ಮಸರಕಲ್ ಬರೆದ ಈ ದಿನದ ಕವಿತೆ

Read More

ಕನ್ನಡಿಯ ಮುಂದೆ ಆವರಣ ಕಳಚಿಕೊಳ್ಳುತ್ತ…..

ಸೈದ್ಧಾಂತಿಕ ಹಠಮಾರಿತನವು ಚೌಕಟ್ಟುಗಳನ್ನು ನಿರ್ಮಿಸುತ್ತದೆ. ಆ ಚೌಕಟ್ಟಿನಾಚೆ ಯೋಚಿಸುವ ಸಹನೆಯನ್ನೇ ಅದು ಕಳೆದುಕೊಳ್ಳುತ್ತದೆ. ತನ್ನ ಚೌಕಟ್ಟಿಗೆ ಒಗ್ಗದವರನ್ನು ಅದು ‘ಅನ್ಯ’ವಾಗಿಸುತ್ತ ಆ ‘ಅನ್ಯ’ವನ್ನು ದ್ವೇಷಿಸುತ್ತ ನಡೆಯುತ್ತದೆ. ಬಲಪಂಥ, ಎಡಪಂಥಗಳೆಂಬ ಚೌಕಟ್ಟುಗಳೂ ಹಾಗೆಯೇ ಕಾಣಿಸುತ್ತಿವೆ. ಅನೇಕರು ಬರಹಗಾರರನ್ನು ನಿರ್ದೇಶಿಸುವ ಪರಿ ಹೇಗಿದೆಯೆಂದರೆ, “ನೀವು ಆ ಚೌಕಟ್ಟಿನಲ್ಲಾದರೂ ಕುಳಿತುಕೊಳ್ಳಿ, ಈ ಚೌಕಟ್ಟಿನಲ್ಲಾದರೂ ಕುಳಿತುಕೊಳ್ಳಿ. ಸರಿಯಾಗಿ ನೀವದಕ್ಕೆ ಫಿಟ್ ಆಗದಿದ್ದರೆ ನಿಮ್ಮ ರೆಕ್ಕೆಗಳನ್ನು ಕತ್ತರಿಸಿಕೊಳ್ಳಿ. ಚೌಕಟ್ಟಿಗೆ ತಕ್ಕಂತೆ ಮುದುರಿಕೊಳ್ಳಿ. ಆದರೆ ಚೌಕಟ್ಟು ಮಾತ್ರ ಅಲುಗಾಡಬಾರದು!” ಮನುಷ್ಯರಿಗಿಂತ ಚೌಕಟ್ಟುಗಳೇ ಮುಖ್ಯವಾಗುವ ವಿಪರ್ಯಾಸವಿದು.
ಇಂದು ಬಿಡುಗಡೆಯಾಗಲಿರುವ ಡಾ. ಗೀತಾ ವಸಂತ ಅವರ “ಅವಳ ಅರಿವು” ಅಂಕಣ ಬರಹಗಳ ಸಂಕಲನದ ಒಂದು ಲೇಖನ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ