Advertisement

ಕೆ ಟಿ ಗಟ್ಟಿ

ಬೊಳುವಾರು ಆತ್ಮಕತೆ ‘ಮೋನು ಸ್ಮೃತಿ’ಯ ಪುಟಗಳು

ಆ ದಿನಗಳಲ್ಲಿ ನನ್ನೂರ ನನ್ನ ಓದುಗರಲ್ಲಿ ನೂರಕ್ಕೆ ತೊಂಬತ್ತೊಂಬತ್ತು ಮಂದಿ ಮುಸ್ಲಿಮೇತರರು. ದುಡ್ಡು ಕೊಟ್ಟು ದಿನಪತ್ರಿಕೆಗಳನ್ನೂ, ವಾರ ಅಥವಾ ಮಾಸ ಪತ್ರಿಕೆ ಗಳನ್ನೂ ತರಿಸಿಕೊಂಡು ಟೀಪಾಯಿಗಳನ್ನು ಚಂದಗಾಣಿಸುತ್ತಿದ್ದವರು ಅವರು ಮಾತ್ರ. ಓದುಗರಲ್ಲಿ ಹೆಚ್ಚಿನವರು ಅಡಿಕೆಭಟ್ಟರುಗಳು. ಹಾಗಾದರೆ, ಅವರೆಲ್ಲರಿಂದ ನನಗೆ ಸಿಗುತ್ತಿದ್ದ ಮೆಚ್ಚುಗೆಗಳೆಲ್ಲವೂ ಮುಸ್ಲಿಮರ ಕಂದಾಚಾರಗಳನ್ನು ಪ್ರಶ್ನಿಸುತ್ತಿರುವುದಕ್ಕೆ ಮಾತ್ರವೆ? ಹಿಂದೂಗಳ ಕಂದಾಚಾರಗಳನ್ನು ಪ್ರಶ್ನಿಸಿದರೆ, ಅವರಿಗೂ ನಾನೊಬ್ಬ ‘ಹರಾಮಿ’ಯಾಗಿ ಕಾಣಿಸಲಾರಂಭಿಸುತ್ತೇನೆಯೆ? ಯಾರಲ್ಲಿ ಕೇಳುವುದು?
ಬೊಳುವಾರು ಮಹಮದ್ ಕುಂಞಿ ಅವರ ಆತ್ಮಕತೆ ‘ಮೋನು ಸ್ಮೃತಿ’ಯ ಒಂದು ಅಧ್ಯಾಯ ನಿಮ್ಮ ಓದಿಗೆ

Read More

ಪ್ರೇಮದ ಬೆಳಕು ಹೊತ್ತ ಒಂದಿಷ್ಟು ಕವಿತೆಗಳು

‘ಬಂದಂತೆ ಮರು ವಸಂತ, ನೀ ಬಂದೆ ಬಾಳಿಗೆ; ಅನುರಾಗ, ಆಮೋದ ಎದೆಯಲ್ಲಿ ತುಂಬಿದೆ’  ಎಂಬ ಸಾಲುಗಳು ಕವಿ ಬಿ.ಆರ್. ಲಕ್ಷ್ಮಣ ರಾವ್ ಅವರದು. ಎದೆಯಲ್ಲಿ ಅನುರಾಗ ಸೆಲೆಯನ್ನು ತುಂಬುವ ಪ್ರೇಮವು ಸದಾ ಜೀವನ್ಮುಖಿ.  ಕಾಲ ದೇಶಗಳ ಹಂಗಿಲ್ಲದ ಜೀವಜಗತ್ತಿನ ಗಾಲಿಯನ್ನು ಮುನ್ನಡೆಸುವ ಪ್ರೇಮದ ಕುರಿತು ಬರೆಯದವರಾರು ? ತರ್ಕವನ್ನು ಮೀರಿದ ಪ್ರೀತಿಗೆ ಕಾವ್ಯವೇ ಆಸರೆ. ಪ್ರೇಮದ ನೆನಪುಗಳ ಜತನ ಮಾಡಿಕೊಳ್ಳುವುದೆಂದರೆ ಬದುಕಿಗೊಂದು ಚೈತನ್ಯದ ಬುತ್ತಿ ಕಟ್ಟಿಕೊಂಡಂತೆ.  ಅಂತಹ ಪ್ರೇಮದೀಪದ ಬೆಳಕನ್ನು ಅಂತರಂಗದಲ್ಲಿ ಬಚ್ಚಿಟ್ಟುಕೊಂಡ ಕೆಲವು ಸುಂದರ ಕವಿತೆಗಳು ಇಲ್ಲಿವೆ.

Read More

ಕೆ.ವಿ. ತಿರುಮಲೇಶ್‌ ಅನುವಾದಿಸಿದ ಇಂಗ್ಲಿಷ್‌ ಕವಿ ಹೆರಾಲ್ಡ್‌ ಮೊನ್ರೋನ ಒಂದು ಕವಿತೆ

“ಹೊಳೆವ ಹಾಲಿನ ಬಳೆಯ ಮುದ್ದಾಡುತ್ತದೆ,
ಕ್ಷೀರ ಸಾಗರದಲ್ಲಿ ಗದ್ದ ಅದ್ದುತ್ತದೆ. ಬಾಲ ಬಲು ಬಲಹೀನವಾಗಿ
ಜೋತು ಬೀಳುತ್ತದೆ. ಬಾಗುವ ಒಂದೊಂದೂ ಮೊಣಕಾಲ ಕೆಳಗೆ
ಪ್ರತಿಯೊಂದು ಪಂಜ ಎರಡಾಗಿದೆ.”- ಕೆ.ವಿ. ತಿರುಮಲೇಶ್‌ ಅನುವಾದಿಸಿದ ಇಂಗ್ಲಿಷ್‌ ಕವಿ ಹೆರಾಲ್ಡ್‌ ಮೊನ್ರೋನ ಒಂದು ಕವಿತೆ

Read More

ಮತ್ತೆ ಮಳೆ ಹೊಯ್ಯುತಿದೆ ಎಲ್ಲ ನೆನಪಾಗುತಿದೆ!

ಅನಂತಮೂರ್ತಿ ಬರೆಯುತ್ತಿದ್ದ ಪತ್ರಗಳನ್ನು ನಾನು ಜೋಪಾನವಾಗಿ ಇಡಬೇಕಿತ್ತು. ಎಂಥ ಪತ್ರಗಳವು! ಅವರು ಚೆನ್ನೈ ಹೋಗಿದ್ದಾಗ ಅಲ್ಲಿ ಅನಿರೀಕ್ಷಿತವಾಗಿ ಸುರಿದ ಮಳೆಯನ್ನು ನೆನೆದು ಪುಳಕಿತರಾಗಿ ನನಗೆ ಬರೆದ ಪತ್ರದಲ್ಲಿ ಒಂದು ಕವನವನ್ನೇ ಬರೆದು ಕಳುಹಿಸಿದ್ದರು: `ಮತ್ತೆ ಮಳೆ ಹೊಯ್ಯುತ್ತಿದೆ!’ ಒಮ್ಮೆ `ಓದು’ ಅಂತ ಗೋಪಾಲಕೃಷ್ಣ ಅಡಿಗರ `ಭೂಮಿಗೀತ’ ಕವನವನ್ನು ಕಳುಹಿಸಿಕೊಟ್ಟಿದ್ದರು. ಡಾ. ಪೃಥ್ವೀರಾಜ ಕವತ್ತಾರು ನಿರೂಪಣೆಯ ಎಸ್ತರ್ ಅನಂತಮೂರ್ತಿಯವರ ಆತ್ಮಕತೆ ‘ನೆನಪು ಅನಂತ’ ಕೃತಿಯ ಅಧ್ಯಾಯವೊಂದು ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ನಿಮ್ಮೂರಿಗೆ ಮಾನ್ಸೂನ್....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ