Advertisement
ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

ನವೀನ ತಂತ್ರಜ್ಞಾನದ ಕುರಿತ ನವೀನ ಮಾದರಿ ಕತೆಗಳು: ಗುರುರಾಜ ಕುಲಕರ್ಣಿ ಕೃತಿಯ ಕುರಿತು ವಸುಮತಿ ಉಡುಪ ಮಾತುಗಳು

ಈ ಕಥಾಸಂಕಲನದ ಕತೆಗಳು ಸಿದ್ಧ ಮಾದರಿಯ ಕತೆಗಳಿಗಿಂತ ವಿಭಿನ್ನವಾಗಿ ಚಿತ್ರಿತಗೊಂಡಿವೆ. ನವೀನ ತಂತ್ರಜ್ಞಾನದ ಕುರಿತು ಹೆಚ್ಚಿನ ಅರಿವಿಲ್ಲದವರಿಗೂ ತಿಳಿಯುವಂತೆ ಸರಳ ಭಾಷೆಯಲ್ಲಿ, ಸರಾಗವಾಗಿ ಕತೆ ಹೇಳಿದ್ದಾರೆ ಕುಲಕರ್ಣಿ, ಕತೆಗಳ ವೈವಿಧ್ಯ, ಭಾಷೆಯನ್ನು ಸಮರ್ಥವಾಗಿ, ಸುಲಲಿತವಾಗಿ ಬಳಸಿಕೊಂಡ ರೀತಿ, ಕತೆ ಹೇಳುವಲ್ಲಿನ ಲವಲವಿಕೆಯ ಗುಣದಿಂದಾಗಿ ಈ ಸಂಕಲನ ಛಂದ ಪುಸ್ತಕ ಬಹುಮಾನಕ್ಕೆ ಆಯ್ಕೆಯಾಗಿದೆ. ಕನ್ನಡ ಸಾಹಿತ್ಯದ ಮಟ್ಟಿಗೆ ಅಪರೂಪ ಎನಿಸುವಂತಹ ಹಲವು ಕತೆಗಳು ಸಂಕಲನದಲ್ಲಿ ಗಮನ ಸೆಳೆಯುವಂತಿವೆ.
ಗುರುರಾಜ ಕುಲಕರ್ಣಿ ಕಥಾಸಂಕಲನ “ಹ್ಯಾಷ್‌ ಟ್ಯಾಗ್”ಗೆ ಛಂದ ಪುಸ್ತಕದ ಬಹುಮಾನ ಲಭಿಸಿದ್ದು, ಈ ಕೃತಿಯ ಕುರಿತು‌ ವಸುಮತಿ ಉಡುಪ ಮಾತುಗಳು ನಿಮ್ಮ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ವಿನಯಾ ಒಕ್ಕುಂದ ಕತೆ

ಲ್ಲಯ್ಯ, ನಮ್ಮ ಅಜ್ಜಿಮನೆಯ ಮಾವಿನ ಮರದ ಕೆಳಗೆ ಸೈಕಲ್ ನಿಲ್ಲಿಸಿ ಎಲ್ಲಿಗೆ ಹೋಗುತ್ತಿದ್ದೆ ಮಾರಾಯ? ನಾನು ಪಿಯುಸಿ ಓದುತ್ತಿದ್ದ ಒಂದು ಮೇ ರಜೆಯ ಮಧ್ಯಾಹ್ನ ಚಿಪ್ಪಿಕಲ್ಲಿನ ಸಾರು ಕುದಿಸ್ತಾ ಇರುವಾಗ- ಅಮ್ಮ ದಿಕ್ಕಬಳ್ಳಿ ಮೆಟ್ಟಿ ಬಂದವಳಂತೆ ಬಂದು ‘ಹಡಬೆ ಹೆಣ್ಣೆ! ಮರ್ಯಾದೆ ಕಳೀತಿಯೇನೇ?’ ಎಂದವಳೇ ಒಲೆಮೇಲಿನ ಸಾರೆತ್ತಿ ತೊಡೆ ಮೇಲೆ ಸುರಿದುಬಿಟ್ಟಳು! ನನ್ನ ನೋವುಗಳೇ ಹೀಗೆ. ಇಲ್ಲಿದೆ ಅಂತ ತೋರಿಸಿಕೊಳ್ಳಲು ಆಗದೆ ಹಾಗೆ! ಹೇಳು, ನಾ ಮಾಡಿದ ತಪ್ಪೇನು?
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ವಿನಯಾ ಒಕ್ಕುಂದ ಕತೆ “ಒಂದು ಖಾಸಗಿ ಪತ್ರ” ನಿಮ್ಮ ಈ ಭಾನುವಾರದ ಓದಿಗೆ

Read More

ಟೊಟೊ ಪುರಸ್ಕಾರ 2026: ಕನ್ನಡ ಸೃಜನಶೀಲ ಸಾಹಿತ್ಯ ಬರಹಗಳಿಗೆ ಆಹ್ವಾನ

ಕನ್ನಡ ಸೃಜನಶೀಲ ಸಾಹಿತ್ಯ ವಿಭಾಗ ಕನ್ನಡದ ಸೃಜನಶೀಲ ಯುವ ಬರಹಗಾರರಿಗೆ ಮೀಸಲಾದ 2026 ನೇ ಸಾಲಿನ ಟೊಟೊ ಪುರಸ್ಕಾರಕ್ಕಾಗಿ...

Read More

ವಿರೇಶ ನಾಯಕ ಬರೆದ ಎರಡು ಕವಿತೆಗಳು

“ಇರುಳ ಹಾಸಿಗೆಯ ಮೇಲೆ
ನೆತ್ತರ ದಿಂಬ ಕೆಳಗೆ
ಸುರುಳಿ ಸುತ್ತಿ ಕರುಳ ಬಿಟ್ಟ
ಮಗುವೊಂದು ಗೋಗರೆಯುತಿದೆ
ಅವಳ ನೆತ್ತರ ಬಿಸಿ ಮಯ್ಯ ಮೇಲೆ
ಕಂದಿಲ ಬೆಳಕ ಬಿಡುವ
ಸೂರ್ಯನಿಗೊಂದು ಶಾಪವಿದೆ.” -ವಿರೇಶ ನಾಯಕ ಬರೆದ ಎರಡು ಕವಿತೆಗಳು

Read More

ಎ.ಎನ್.‌ ಪ್ರಸನ್ನ ಬರೆದ ನಾಲ್ಕು ಅತಿ ಸಣ್ಣ ಕತೆಗಳು

ಇದು ಅವರ ಊಹೆಯನ್ನು ಮೀರಿ ನೂರಾರು ಬಗೆಯಲ್ಲಿ ಹಬ್ಬಿತು. ನಾಲಗೆ ಒಳಗೊಂದು ಮೂಳೆ ಇದೆ. ಅದಕ್ಕೆ ಘಾತವಾದರೆ ಮಾತನಾಡುವುದಕ್ಕೆ ಸಾಧ್ಯವಾಗುವುದಿಲ್ಲ ಎನ್ನುವ ಅಭಿಪ್ರಾಯ ಇನ್ನಿಲ್ಲದಷ್ಟು ಬೆಳೆಯಿತು. ಜನರು ಪರಸ್ಪರ ಮಾತನಾಡುವಾಗ ಏನು ಮಾತನಾಡುತ್ತಿದ್ದಾರೆ ಎನ್ನುವುದಕ್ಕಿಂತ ಹೇಗೆ ಮಾತನಾಡುತ್ತಿದ್ದಾರೆ, ತಾವು ಮಾತನಾಡುವುದೂ ಅದೇ ಬಗೆಯಲ್ಲಿದೆಯೇ ಅಥವ ಭಿನ್ನವಾಗಿದೆಯೇ… ಹೀಗೆ ಹಲವು ಆಲೋಚನೆಗಳಿಗೆ ಆಸ್ಪದ ಉಂಟಾಯಿತು. ಒಮ್ಮೆ ಅನುಮಾನ ಉಂಟಾದರೆ ಸುಮ್ಮನೆ ಒಂದಿಲ್ಲೊಂದು ನೆಪದ ಕಾರಣ ತೆಗೆದುಕೊಳ್ಳಬೇಕಾದ ಕ್ರಮವನ್ನು ಮುಂದೆ ಹಾಕಲು ಯಾರಿಗೂ ಇಷ್ಟವಾಗುವಂತಿರಲಿಲ್ಲ.
ಎ.ಎನ್.‌ ಪ್ರಸನ್ನ ಬರೆದ ಅತಿ ಸಣ್ಣ ಕತೆಗಳ ಸಂಕಲನ “ಅದೊಂದು ದಿನ” ಕೃತಿಯ ನಾಲ್ಕು ಸಣ್ಣ ಕತೆಗಳು ನಿಮ್ಮ ಓದಿಗೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ