Advertisement
ಲತಾ ಶ್ರೀನಿವಾಸ್

ಲತಾ ಶ್ರೀನಿವಾಸ್‌ ಮೂಲತಃ ತುಮಕೂರಿನವರು. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಚಿತ್ರಕಲೆ ಹಾಗೂ ಪ್ರವಾಸ ಇವರ ಹವ್ಯಾಸಗಳು. ಮುದ್ದುಮಗಳೇ ಇವರ ಪ್ರಕಟಿತ ಕೃತಿ.

ಅನಾದಿ ವೇದಾಂತ

ವ್ಯಾಪಾರಿಯ ಜೊತೆ ನಾಳೆ ಲೋಡು ಎಷ್ಟು ಬರುತ್ತೆ, ಎಷ್ಟೊತ್ತಿಗೆ ಎಂದೆಲ್ಲ ಕೇಳಿದ. ಬೇಗನೆ ಎದ್ದಿದ್ದೆವು. ಹಣ್ಣಿನ ಬುಟ್ಟಿಗಳ ಇಳಿಸಿ ಹತ್ತಾರು ಅಂಗಡಿಗಳಿಗೆ ಹೊತ್ತೊಯ್ದು ಇಟ್ಟೆವು. ಇಡೀ ದಿನವೆಲ್ಲ ಹಗುರಾದ ಕೆಲಸಗಳನ್ನು ಮಾಡಿಸಿದ. ತರಕಾರಿ ಮೂಟೆಗಳನ್ನು ತಾನೇ ಹೊತ್ತು ಸಹಕರಿಸಿದ. ಜೋಡಿಸಿ ಇಡುವುದಷ್ಟೆ ನನ್ನ ಕೆಲಸವಾಗಿತ್ತು. ಮಧ್ಯಾನ್ಹವಾಗಿತ್ತು. ಶಿವರಾಂಪೇಟೆಯ ಸಂದಿಯ ಮಾಂಸದ ಹೋಟೆಲಿಗೆ ಕರೆದೊಯ್ದ. ಅಲ್ಲೆಲ್ಲ ನಮ್ಮಂತವರೇ ಇದ್ದರು. ನಿತ್ಯ ಕೂಲಿಗಳು. ಅದೇ ನರಕದಲ್ಲಿ ಸ್ವರ್ಗ ಕಾಣುವವರು. ದುಡಿಮೆಯ ಸಡಗರದಲ್ಲಿ ಅವರಾಗಲೇ ಕುಡಿದು ಅಮಲಾಗಿದ್ದರು.
ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯಲ್ಲಿ ಹೊಸ ಬರಹ

Read More

ಬಿಕಾರಿಯ ಮನುಷ್ಯತ್ವದ ಗುರುತುಗಳು

ಅಪನಂಬಿಕೆಗಳಲ್ಲೇ ಮನುಷ್ಯ ಎಷ್ಟೊಂದು ನಂಬಿಕೆಗಳ ಹುಟ್ಟಿಸುವನಲ್ಲಾ… ಆದರೆ ದೇವರ ನಂಬಿಕೆಗಳಲ್ಲಿ ಎಷ್ಟೆಲ್ಲ ಅಪನಂಬಿಕೆ ಅಂತರ ತಾರತಮ್ಯಗಳಿವೆಯಲ್ಲಾ… ಇಂತಹ ದ್ವಂದ್ವಗಳಲ್ಲಿ ಬದುಕು ಸವೆದ ಎಕ್ಕಡವಾಗಿರುತ್ತದೆಯೇ. ಜೋಪಾನ ಮಾಡಿದ್ದ ಎಕ್ಕಡ ಕೊನೆಗೆ ಎಲ್ಲಿ ಹೋಗಿ ಬೀಳುತ್ತದೆ? ಹೆಗಲ ಮೇಲೆ ಕೈ ಹಾಕುವಷ್ಟು ಸಲಿಗೆ ಬಂದುಬಿಟ್ಟಿತಲ್ಲ ಇವನಿಗೆ… `ಬೀಡಿ ಸೇದುವೆಯಾ’ ಎಂದ? `ಹೂಂ; ಕೊಡು’ ಎಂದು ಜೊತೆಗೆ ಸೇದಿದೆ. ಯಾರ ವಯಕ್ತಿಕ ವಿವರವನ್ನೂ ಕೇಳುವವನಲ್ಲ ನಾನು. ಹಾಗೆಯೆ ಯಾರಾದರೂ ನನ್ನ ಬಗ್ಗೆ ಕೇಳಿದರೆ ಸರಿ ಉತ್ತರ ನೀಡಲಾರೆ. ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ ‘ನನ್ನ ಅನಂತ ಅಸ್ಪೃಶ್ಯ ಆಕಾಶ’

Read More

ಈ ಗದ್ದುಗೆ ಈ ಹಿಂಸೆ ಈ ಅನಾಥ ಸಂಬಂಧಗಳು

ಅವನು ಒಬ್ಬ ಅಪರಾಧಿ ಎಂಬಂತೆ ನನ್ನೆದ್ರು ಕೂತು ಒಪ್ಪಿಸುತ್ತಿದ್ದ. ವಿಚಾರಣಾಧಿಕಾರಿಯಂತೆ ನನ್ನ ಪ್ರಶ್ನೆಗಳಿದ್ದವು. ಒಂದೇ ತಾಯ ಬಳ್ಳಿಯವರು. ಅವನೇ ಬೇರೆ ನಾನೇ ಬೇರೆ ಎಂಬಂತಿತ್ತು. ಅಂದು ಅವನು ದೊಡ್ಡ ಸಾಹೇಬನಾಗಿ ಬರುತ್ತಾನೆ ಎಂದು ಅವನು ಅತಾರಿ ಇರಬೇಕೂ; ಇದೇ ನನ್ನ ತಮ್ಮನ ಬಗ್ಗೆ ತಾನೆ ಅಪ್ಪನ ಮುಂದೆ ರೀಲು ಬಿಡುತ್ತಿದ್ದುದು. ಒಂದು ಕನಸಿನ ಲೋಕವನ್ನೇ ಹೆಣೆದಿದ್ದರಲ್ಲ ಆ ರಾತ್ರಿ ಅಮಲಾಗಿ. ಈಗ ಈ ತಮ್ಮನ ಬಗ್ಗೆ ಯಾರೂ ಕನಸು ಕಟ್ಟುವುದಿಲ್ಲ. ಯಾರಿಗೂ ಬೇಡವಾದವನು.
ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯ 26ನೇ ಕಂತು

Read More

`ಕ್ರಾಂತಿ ಕನ್ನೆಯ ಮೋಹದ ಮಳೆಯಲ್ಲಿ’

ರೂಮಿನ ವರಾಂಡದಲ್ಲಿ ಕೆಲವು ವಿದ್ಯಾರ್ಥಿ ಮಿತ್ರರು ನನ್ನ ಪರವಾಗಿ ಬಂದು ಬಾಗಿಲು ಬಡಿದು ಕೂಗಿದ್ದರು. ಒಳಗಿದ್ದವರು ಹೆದರಿದ್ದರು. ಗುಂಡ್ಲುಪೇಟೆಯ ಶಿವಬುದ್ಧಿ ಎಂಬ ಮಿತ್ರ ಇದ್ದ. ದ.ಸಂ.ಸದ ಅರೆಕಾಲಿಕ ಕಾರ್ಯಕರ್ತನಾಗಿ ರಾಜ್ಯಶಾಸ್ತ್ರದಲ್ಲಿ ಎಂ.ಎ.ಮುಗಿಸುತ್ತಿದ್ದ. ಅವಾಜ್ ಹಾಕಿದ್ದ. ‘ಬಾಗ್ಲು ತಗೀಲಿಲ್ಲಾ ಅಂದ್ರೆ ಯೀಚ್ವಾರಿಂದ ಬೀಗಾ ಹಾಕಂದು ಪೋಲಿಸ್ಗೆ ಕಂಪ್ಲೇಂಟ್ ಕೊಡ್ತೀನಿ’ ಎಂದು ಅಬ್ಬರಿಸಿದ್ದ. ಅವರು ನನ್ನನ್ನು ಹೊರಗೆ ಬಿಡಲೇ ಬೇಕಿತ್ತು. ಅವನೊಮ್ಮೆ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿ ಆಗಿದ್ದಾಗ ಅವರ ಕಾರಿಗೆ ಅಡ್ಡ ನಿಂತು ಧಮಕಿ ಹಾಕಿ ನಮ್ಮ ಹಳ್ಳಿಗೆ ಇಂತಿಂತಹ ಕೆಲಸಗಳನ್ನು ಮಾಡಿಕೊಡಬೇಕೆಂದು ಆಗ್ರಹಿಸಿ ಯಶಸ್ವಿ ಆಗಿದ್ದ.
ಮೊಗಳ್ಳಿ ಗಣೇಶ್ ಬರೆಯುವ ಸರಣಿ.

Read More

ಅಲೆಗಳು ಕರೆತಂದಿದ್ದವು ದಂಡೆಗೆ

ಅದೇ ಅವನು ನಮ್ಮಪ್ಪ ನರಭಕ್ಷಕ ಬಾಂಡ್ಲಿಯಲ್ಲಿ ಬೋಂಡ ಹಾಕುತಿದ್ದ. ಅವನ ಹೆಂಡತಿ ಸಪ್ಲೆರ‍್ರಾಗಿದ್ದಳು. ಪುಟ್ಟ ಹುಡುಗಿ; ಅವಳ ಹೆಸರು ಮೀನಾಕ್ಷಿ, ಶಾಲೆಗೆ ಸೇರಿದ್ದಳೊ ಇಲ್ಲವೊ ಗೊತ್ತಿರಲಿಲ್ಲ. ಅವಳ ತಾಯ ತದ್ರೂಪ. ಅಲಲಲಾ… ಎಂತಹ ಪಾಳೆಯಗಾರ… ಇಲ್ಲಿ ಫುಟ್‌ಪಾತಲ್ಲಿ ಬಂದು ಬಿದ್ದಿದ್ದಾನಲ್ಲಾ. ಇವನೆನಾ ನಮ್ಮಪ್ಪ! ಕೊಂದು ಬಿಡಲು ಎಷ್ಟು ಸಲ ಯತ್ನಿಸಿ ವಿಫಲನಾಗಿದ್ದನಲ್ಲಾ! ಈಗ ಇಲ್ಲಿ ಈ ಪಾಡಿನಲ್ಲಿ. ಮೆರೆದಿದ್ದವನ ಗತಿಯೇ ಇದೂ ಎಂದು ಗಕ್ಕನೆ ನಿಂತೆ. ನನ್ನ ಅನಂತ ಅಸ್ಪೃಶ್ಯ ಆಕಾಶ ಸರಣಿಯಲ್ಲಿ ಮೊಗಳ್ಳಿ ಗಣೇಶ್ ಬರಹ. 

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ