Advertisement

ಅಲಕಾ ಕಟ್ಟೆಮನೆ

ಹೊಗಳಿಕೆಯ ಹಿಂದಿದೆ ನಿರೀಕ್ಷೆಯೆಂಬ ಒತ್ತಡ

ಹೆಣ್ಣುಮಕ್ಕಳಿಗೆ ಅವರ ದೇಹ ವರವೂ ಹೌದು ಶಾಪವೂ ಹೌದು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೆಣ್ಣುಮಕ್ಕಳಿಗೆ ಹಿಂದೆಂದಿಗಿಂತಲೂ ಹೆಚ್ಚು ಸವಾಲುಗಳಿವೆ. ಅದರಲ್ಲೂ ಹೊರಗೆ ದುಡಿಯುವ ಹೆಣ್ಣುಮಕ್ಕಳಿಗೆ ದಿನದಲ್ಲಿ ಒಂದು ತಾಸು ಸಮಾಧಾನದಿಂದ ಕೂರಲು ನಿಲ್ಲಲೂ ಸಮಯ ಸಿಗುವುದಿಲ್ಲ. ಹಿಂದೆಲ್ಲ ನಟಿಯರು, ಮಾಡೆಲಿಂಗ್‌ ಕ್ಷೇತ್ರದಲ್ಲಿರುವವರು ಮಾತ್ರವೇ ಹೆಚ್ಚಾಗಿ ತಮ್ಮ ದೇಹ ಸೌಂದರ್ಯವನ್ನು ಕಾಪಿಟ್ಟುಕೊಳ್ಳುವಲ್ಲಿ ಕೆಲಸ ಮಾಡುತ್ತಿದ್ದರು. ಈಗ ಹಾಗಿಲ್ಲ. ಫೇಸ್‌ಬುಕ್ಕು, ಇನ್ಸ್ಟಾಗ್ರಾಂಗಳ ರಂಗುರಂಗಿನ ಜಗತ್ತು ಎಲ್ಲರ ಮೇಲೂ ಪರೋಕ್ಷ ಒತ್ತಡ ಸೃಷ್ಟಿಸುತ್ತಿದೆ.   ಅದರ ಆಕರ್ಷಣೆಯಿಂದ ಸೌಂದರ್ಯ ಪ್ರಜ್ಞೆ ಎಲ್ಲರಲ್ಲೂ, ಎಲ್ಲಾ ಕ್ಷೇತ್ರಗಳಲ್ಲೂ ಜಾಗೃತವಾಗಿದೆ ಎನ್ನುತ್ತಾರೆ ರೂಪಶ್ರೀ ಕಲ್ಲಿಗನೂರ್‌

Read More

ಅಕ್ಕಂದಿರೊಟ್ಟಿಗೆ ಆಗಸದ ಚುಕ್ಕಿ, ತಾರೆಗಳೆಣಿಸುತ್ತಾ..

ಬೆಳಗ್ಗೆ ಅಂಬಲಿಯೋ, ಬೆಣ್ಣೆ ಹಾಕಿದ ಬಿಸಿಬಿಸಿ ರೊಟ್ಟಿಯನ್ನೋ ತಿಂದು, ಅಡುಗೆ ಮನೆ ಕೆಲಸಗಳನ್ನು ಮಾಡಿ, ಜೊತೆಗೆ ಕೊಟ್ಟಿಗೆ ದನಕರುಗಳ ಕೆಲಸವಾದ ಮೇಲೆ, ಮಧ್ಯಾಹ್ನ ಊಟಕ್ಕಿಂತ ಮೊದಲು ಎಲ್ಲರೂ ಸ್ನಾನ ಮಾಡಿಕೊಳ್ಳುತ್ತಿದ್ದರು. ಅಲ್ಲೆಲ್ಲ ಮಧ್ಯಾಹ್ನದ ಹೊತ್ತಿಗೆ ರಣರಣ ಬಿಸಿಲು. ಹಾಗಾಗಿ ಆ ಹೊತ್ತಿನಲ್ಲಿ ಕೆಲಸ ಸಾಗುತ್ತಲೇ ಇರುತ್ತಿರಲಿಲ್ಲ. ಹಾಗಾಗಿ, ಬಹುತೇಕವಾಗಿ ಇಬ್ಬರು ಅಕ್ಕಂದಿರು, ಎಲ್ಲರ ಬಟ್ಟೆಗಳನ್ನೂ ಹಾಗೂ, ಪಾತ್ರೆಗಳನ್ನೂ ಒಂದೊಂದು ಬುಟ್ಟಿಗಳಲ್ಲಿ ಹಾಕಿಕೊಂಡು ಕೆರೆಗೆ ಹೋಗಿ ಅವನ್ನೆಲ್ಲ ತೊಳೆದುಕೊಂಡು ಬರುತ್ತಿದ್ದರು.
ರೂಪಶ್ರೀ ಕಲ್ಲಿಗನೂರ್‌ ಬರಹ ಇಂದಿನ ಓದಿಗಾಗಿ

Read More

ನಾವು ತಿನ್ನುವ ಆಹಾರದ ಮೂಲ ಯಾವುದು?

ನಾವು ತಿನ್ನುವ ಆಹಾರದ ಬಗ್ಗೆ ಬೆಳೆದ ಪ್ರಜ್ಞೆಯಿಂದ ಒಂದಷ್ಟು ಕಂಪೆನಿಗಳು ಹೊಸ ರೀತಿಯಲ್ಲಿ ಲಾಭಮಾಡಿಕೊಳ್ಳಲಾರಂಭಿಸಿದ್ದು ಒಂದೆಡೆಯಾದರೆ, ಮತ್ತೊಂದಷ್ಟು ಜನ ತೀರಾ ಮತ್ತೊಂದು ಹಾದಿಯಲ್ಲಿ ಯೋಚಿಸಲಾರಂಭಿಸಿದ್ದರು. ನಾವು ತಿನ್ನುವ ತರಕಾರಿಗಳನ್ನು ನಾವೇ ಬೆಳೆದುಕೊಂಡರೆ ಹೇಗೆ? ಹೀಗಂದುಕೊಂಡ ಬಹುತೇಕ ಜನರು ಇದ್ದದ್ದು ಬೆಂಗಳೂರಿನಂಥ ಮಹಾನಗರಗಳಲ್ಲಿ. ಮನೆ ಕಟ್ಟಲಿಕ್ಕೆ ಒಂದು ಸೈಟಿಗೆ ಸಾಕಷ್ಟು ಒದ್ದಾಡಬೇಕಾದಾಗ ಇನ್ನು ತರಕಾರಿಗಳನ್ನು ಬೆಳೆದುಕೊಳ್ಳುವುದು ಹೇಗೆ ಅನ್ನುವ ಜಿಜ್ಞಾಸೆಯ ಸಮಯದಲ್ಲೇ ಕೆಲವೊಂದಷ್ಟು ಜಾಣರು ಟೆರೆಸ್‌ ಗಾರ್ಡನಿಂಗ್‌ ಆರಂಭಿಸಿಯೇ ಬಿಟ್ಟರು. ರೂಪಶ್ರೀ ಕಲ್ಲಿಗನೂರ್‌ ಬರಹ

Read More

ಪೂರಂ ಎಂಬ ಸಂಭ್ರಮವೂ ಆನೆಗಳ ಗಾಂಭೀರ್ಯವೂ

ನಾವು ಅಲ್ಲಿಗೆ ಹೋಗಿ ತಾಸು ಹೊತ್ತಿನ ಮೇಲೆ ಒಂದೊಂದೇ ಆನೆಗಳು ಮೆಲ್ಲಗೆ ತಮ್ಮ ಮೇಲೆ ನಿಂತಿದ್ದ ಎರಡು-ಮೂರು ಜನ ಹಾಗೂ ಮಾವುತರೊಟ್ಟಿಗೆ, ದೇವಸ್ಥಾನದ ಒಳಗೆ ಹೊರಡಲಾರಂಭಿಸಿದವು. ನಮಗೆ ಮೂರ್ನಾಲ್ಕು ಆನೆಗಳನ್ನು ಹತ್ತಿರದಿಂದಲೇ ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿತು. ಇನ್ನೇನು ಆ ಕಾರ್ಯಕ್ರಮ ಮುಗಿಯುವ ಹಂತಕ್ಕೆ ಬಂದಾಗ, ನಾವು ಮೆಲ್ಲನೆ ಅಲ್ಲಿಂದ ಹೊರಟು, ಕಾಂಪೌಂಡ್‌ನ ಇನ್ನೊಂದು ಬದಿಗೆ ಬಂದು, ಆನೆಗಳ ಸಾಲು ನಿಂತಿದ್ದಲ್ಲಿಗೆ ಹೋದಾಗ, ಅಲ್ಲಿ ಆಗಲೇ ಜನರ ಗುಂಪು ಮೆಲ್ಲನೆ ಕರಗಲಾರಂಭಿಸಿದ ಕಾರಣ, ಅಲ್ಲಿ ಇನ್ನೊಂದಷ್ಟು ಹತ್ತಿರದಿಂದ ಆನೆಗಳನ್ನು ಕಾಣಲು ಸಿಕ್ಕಿತು.
ಕೇರಳದ ತ್ರಿಶ್ಶೂರ್‌ ಪೂರ ಕುರಿತು ತಮ್ಮ ಅನುಭವಗಳನ್ನು ಬರೆದಿದ್ದಾರೆ ರೂಪಶ್ರೀ ಕಲ್ಲಿಗನೂರ್

Read More

ತನ್ನ ಪಾಡಿಗೆ ಬೆಳಗನ್ನು ಆನಂದಿಸುತ್ತಿದ್ದ ಕವಿಮನೆ

ಕವಿಶೈಲಕ್ಕೆ ಎಷ್ಟೊಂದು ಜನರು  ಪ್ರವಾಸಿಗರಾಗಿ ಬಂದಿದ್ದರು !  ಬಂದಷ್ಟು ಜನರಲ್ಲಿ ಕೇವಲ ಒಂದು ಪರ್ಸೆಂಟ್‌ ನಷ್ಟು ಮಾತ್ರದವರು ಕೆಲಕಾಲ ಸುಮ್ಮನೆ ಇದ್ದು ಹೋದರು. ಬಹುತೇಕರು ಎಲ್ಲಿ ನಿಂತುಕೊಂಡರೆ ಫೋಟೋ ಚೆನ್ನಾಗಿ ಬರಬಹುದು? ರೀಲ್ಸ್‌ಗೆ ಯಾವ ಜಾಗ ಸೂಕ್ತ? ಅನ್ನುವ ಯೋಚನೆಯಲ್ಲಿದ್ದವರೇ. ಸುತ್ತಲಿನ ಮೌನವನ್ನು ಸವಿಯುವುದಕ್ಕೆ ಮುಂಜಾನೆ  ಮಂಜಿನಲ್ಲಿ ಕುಪ್ಪಳಿಯ ಕವಿಮನೆ ಮತ್ತು ಕವಿಶೈಲಕ್ಕೆ ಭೇಟಿ ನೀಡಿದ ಒಂದು ಅನುಭವವನ್ನು ಪ್ರಸ್ತುತಪಡಿಸಿದ್ದಾರೆ ರೂಪಶ್ರೀ ಕಲ್ಲಿಗನೂರು.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ