Advertisement

ಕೀರ್ತಿ ಬೈಂದೂರ್

ಲೋಕದ ಚಿಂತಿ ಯಾಕ ಮಾಡತಿ..?: ಎಸ್ ನಾಗಶ್ರೀ ಅಜಯ್ ಅಂಕಣ

ಹತ್ತು ಜನರ ನಡುವಿದ್ದೂ ಅವರಿವರಂತಾಗದೆ, ತಮ್ಮ ಮಿತಿಯಲ್ಲಿ ಆಗುವ ಸಕಲವನ್ನೂ ಸಂತೋಷ, ಸಮಾಧಾನದಿಂದ ಮಾಡುತ್ತಾ, ಮೆಚ್ಚುಗೆಗೂ ಹಾತೊರೆಯದೆ, ಯಾರನ್ನೂ ದೂರದೆ ಸಂತರಂತೆ ಬದುಕಿದವರಿದ್ದಾರೆ. ಮನೆಮನೆಗಳಲ್ಲಿ ಅಂತಹವರನ್ನು ಕಂಡಿರುತ್ತೇವೆ. ಸದಾ ಗಿಜಿಗುಡುವ ಮನೆ, ಬಂದು ಹೋಗುವವರು, ಓದಲೆಂದು, ಕೆಲಸಕ್ಕೆಂದು ಬಂದು ಉಳಿದ ಬಂಧುಗಳ ಮಕ್ಕಳು, ದೇವಸ್ಥಾನದ ಪ್ರಸಾದ, ಚರಪು ಮಾಡುವ ಜವಾಬ್ದಾರಿ, ರೋಗಿಗಳ ಆರೈಕೆ, ಹಿರಿಯರ ಕಾಳಜಿ, ದಿನಂಪ್ರತಿ ಹದಿನೈದು ಇಪ್ಪತ್ತು ಜನರಿಗೆ ಕಡಿಮೆಯಿಲ್ಲದಂತೆ ಊಟೋಪಚಾರ…
ಎಸ್ ನಾಗಶ್ರೀ ಅಜಯ್ ಬರೆಯುವ ಲೋಕ ಏಕಾಂತ ಅಂಕಣ

Read More

ಸಾವಿರ ಕಥೆಗಳ ಸಂಸಾರ: ಎಸ್‌. ನಾಗಶ್ರೀ ಅಜಯ್‌ ಅಂಕಣ

ಎಷ್ಟೋ ಕಥೆಗಳಲ್ಲಿ ನಾವೇ ಮುಖ್ಯವೋ, ಅಮುಖ್ಯವೋ ಒಂದು ಪಾತ್ರವಾಗಿ ಚಲಿಸುತ್ತಿರುತ್ತೇವೆ. ಅಸಲಿಗೆ ನಮ್ಮ ಸತ್ವಪರೀಕ್ಷೆಯಾಗುವುದು, ಇಂತಹ ದ್ವಂದ್ವಗಳಲ್ಲಿ ತೀರ್ಮಾನ ತೆಗೆದುಕೊಳ್ಳುವ ಜವಾಬ್ದಾರಿ ನಮ್ಮ ಹೆಗಲೇರಿದಾಗ. ಹಾವು ಸಾಯಬಾರದು. ಕೋಲು ಮುರಿಯಬಾರದು ಎನ್ನುವ ನಾಜೂಕಯ್ಯರು ಹೇಗೋ ಬಚಾವಾಗುತ್ತಾರೆ. ಇದ್ದರೆ ಒಂದು ಕಡೆ. ಎರಡು ದೋಣಿಯ ಪಯಣ ನಮಗಲ್ಲ ಎನ್ನುವವರಿಗೆ ಸವಾಲು ಹೆಚ್ಚಿನದು. ಆದರೆ ಬಹಳಷ್ಟು ಸಲ ನಮ್ಮ ಪ್ರಯತ್ನಕ್ಕಿಂತ ಆ ಕ್ಷಣದ ಬಲವೇ ಹೆಚ್ಚಾಗಿ, ತುರ್ತು ಪರಿಸ್ಥಿತಿಯಲ್ಲಿ ಎರಡರಲ್ಲೊಂದು ತೀರ್ಮಾನವಾಗಿಬಿಟ್ಟಿರುತ್ತದೆ.
ಎಸ್‌. ನಾಗಶ್ರೀ ಅಜಯ್‌ ಬರೆಯುವ “ಲೋಕ ಏಕಾಂತ” ಅಂಕಣ

Read More

ನೋವಿನಲ್ಲೂ ನಗುವುದ ಕಲೀಬೇಕು: ನಾಗಶ್ರೀ ಅಜಯ್‌ ಅಂಕಣ

“ಕೆಲವೊಮ್ಮೆ ಈ ಗಂಡ, ಮಗು, ಸಂಸಾರ, ದುಡಿಮೆ, ಸಂಪಾದನೆ, ಕೊಂಕು ಮಾತು, ಅನಾರೋಗ್ಯ ಎಲ್ಲದರಿಂದ ಬಹಳ ದೂರ ಹೋಗಿ, ನಾನೊಬ್ಬಳೇ ಪ್ರಶಾಂತವಾಗಿ ಕೆಲಕಾಲ ಕಳೆಯಬೇಕನ್ನಿಸುತ್ತೆ. ಆದರೆ ಎಲ್ಲಿ ಹೋಗುವುದು? ಹೀಗೆ ವಾಸ್ತವ ಹಿಂಸೆಯೆನಿಸಿದಾಗೆಲ್ಲ, ಬೇಸರದಲ್ಲೇ ಕತ್ತಲಕೋಣೆಯಲ್ಲಿ ಉಳಿಯುವುದರ ಬದಲು, ಮನೆತುಂಬ ಬೆಳಕಾಗುವಂತೆ ಝಗಮಗಿಸಿ, ಸ್ನಾನ ಮಾಡಿ, ನಾನು ಹೊಸದಾಗಿ ಕೊಂಡ ಬಟ್ಟೆ ತೊಟ್ಟು, ನನಗೇ ಹೆಮ್ಮೆಯಾಗುವಷ್ಟು ಚೆಂದಕ್ಕೆ ಅಲಂಕರಿಸಿಕೊಂಡು ಅರ್ಧಗಂಟೆ ಕನ್ನಡಿಯ ಮುಂದೆ ನಗುಮುಖದಲ್ಲಿ ಕೂತಿರುತ್ತೇನೆ.”
ಎಸ್. ನಾಗಶ್ರೀ ಅಜಯ್‌ ಬರೆಯುವ ಲೋಕ ಏಕಾಂತ ಅಂಕಣದಲ್ಲಿ ಹೊಸ ಬರಹ

Read More

ಸಂತೃಪ್ತಿಯೆನ್ನುವುದು ಅಂತರಂಗದ ಸಮಾಚಾರ: ನಾಗಶ್ರೀ ಅಜಯ್‌ ಅಂಕಣ

ಪ್ರತಿ ಸಣ್ಣ ವಿಷಯವನ್ನು ದೊಡ್ಡದಾಗಿ ಚಿಂತಿಸುತ್ತಾ, ಹಳಹಳಿಕೆಯನ್ನೇ  ವ್ಯಸನವಾಗಿಸಿಕೊಂಡವರು, ಇರುವಷ್ಟು ಕಾಲ ತೃಪ್ತಿಯಿಂದ ಬದುಕುವವರು,ಸಾಧಕರು, ಸಾಮಾನ್ಯರು, ಪೀಡಕರು, ಪುಣ್ಯಕೋಟಿಯಂತಹವರು ಹೀಗೆ ತರಹೇವಾರಿ ಜನರು. ಒಬ್ಬೊಬ್ಬ ವ್ಯಕ್ತಿಗೆ ಒಂದೊಂದು ರೀತಿಯ ಸಮಸ್ಯೆಗಳಿದ್ದೇ ಇರುತ್ತವೆ. ಆದರೆ  ಹಳ್ಳಿಯವರೆಲ್ಲ ಮುಗ್ಧರು, ಸಿಟಿಯವರೆಲ್ಲ ಸ್ಥಿತಿವಂತರು, ಓದಿದವರು ಪೆದ್ದರು, ಕಡಿಮೆ ಓದಿದವರು ವ್ಯವಹಾರ ಚತುರರು, ಮಕ್ಕಳೆಲ್ಲಾ ದೇವರಂತಹವರು…. ಈ ರೀತಿಯ ಜನಪ್ರಿಯ ಕುರುಡು ನಂಬಿಕೆಗಳ ಪಟ್ಟಿಯಲ್ಲಿ ಹಿರಿಯರೆಲ್ಲ ಒಂದೇ ಎಂಬುದು ಕೂಡ ಸೇರಿದೆ ಅಲ್ಲವೆ. ನಾಗಶ್ರೀ ಅಜಯ್‌ ಬರೆಯುವ ಲೋಕ ಏಕಾಂತ ಅಂಕಣದಲ್ಲಿ ಹೊಸ ಬರಹ ಇಂದಿನ ಓದಿಗೆ.

Read More

ಸಂಬಂಧಗಳಿಗೂ ಒಂದು ಕೊನೆಯ ದಿನ ಇದ್ದರೆ….!

ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹ ಮತ್ತಷ್ಟು ಆತ್ಮೀಯ, ಅಪ್ಯಾಯ ಬಂಧವಾಗಿ ಬದುಕು ಹಿತವೆನಿಸುವ ದಿನಗಳಲ್ಲಿ ಯಾರಿಗಾದರೂ ಅಂತಹದ್ದೊಂದು ಸಂಬಂಧ ಜಡವಾಗಬಹುದೆಂಬ ಸುಳಿವು ಸಿಕ್ಕಿರುವುದಿಲ್ಲ. ಈ ದಿನ, ಈ ಕ್ಷಣ, ಈ ಕಾಲ ಸದಾ ಹೀಗೆಯೇ ಇರುವುದೆಂಬ ನಂಬಿಕೆ, ಆಶಯದ ಬುನಾದಿಯ ಮೇಲೆ ಕಟ್ಟಿದ ಕನಸಿನ ಗೋಪುರ ಕುಸಿಯತೊಡಗಿದಾಗ ಶುರು ಸತ್ವಪರೀಕ್ಷೆ. ಜೊತೆಯಾಗಿ ಎದುರಿಸಿದ ಕಷ್ಟ ಸುಖ, ಕೂಡಿಟ್ಟ ನೆನಪುಗಳು, ಜೋಳಿಗೆ ತುಂಬಿದ ಅನುಭವಗಳು ಮಸುಕಾಗುವವರೆಗೂ ಮುಗಿಯದ ಉಮ್ಮಳಿಕೆ‌. ಇದು ಬರಿಯ ಪ್ರೇಮಿಗಳಿಗೆ ಸಂಬಂಧಿಸಿದ ವಿಷಯವಲ್ಲ.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ