Advertisement
ರಾಮ್ ಪ್ರಕಾಶ್ ರೈ ಕೆ.

ರಾಮ್ ಪ್ರಕಾಶ್ ರೈ ದಕ್ಷಿಣ ಕನ್ನಡ ಜಿಲ್ಲೆ, ಕಡಬ ತಾಲೂಕು, ಕಲ್ಲುಗುಡ್ಡೆ ನಿವಾಸಿ. ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಪ್ರಾಡಕ್ಟ್ ಡಿಸೈನ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಣೆ ಹವ್ಯಾಸಿ ಬರಹಗಾರ. ಕಥೆ, ಲೇಖನಗಳೆಂದರೆ ಅಚ್ಚುಮೆಚ್ಚು. ಯಕ್ಷಗಾನ ಭಾಗವತಿಕೆ, ಮದ್ದಳೆ ವಾದನ, ಒರಿಗಾಮಿ ಇತರ ಹವ್ಯಾಸಗಳು....  

ಅಡ್ಮಿನ್ ಸೂತ್ರಧಾರಿ, ನಾವ್ ಪಾತ್ರಧಾರಿ

ಸಮಾನ ಮನಸ್ಕರ ನಡುವೆ ಸಂವಹನ ಸಾವಧಾನವಾಗಿ ಆದಾಗ ಒಳ್ಳೆಯದೆ ಆಗುತ್ತದೆ. ಅಲ್ಲಿಯೇ ಆರೋಗ್ಯಕರ ಚರ್ಚೆಗಳು ಪ್ರಾಂಭವಾಗುತ್ತವೆ. ಗುಂಪಿನಲ್ಲಿ ನಡೆಯುವ ಚರ್ಚೆಗಳು ಅನ್ಯ ಗುಂಪಿಗೂ ಹರಿಯಬಹುದು. ಪರಸ್ಪರ ಅಭಿನಂದನೆಗಳಿಗೆ ಧನ್ಯವಾದಗಳು ಒಂದು ಹಂತಕ್ಕೆ ಇದ್ದರೆ ಚಂದ ಅತಿಯಾದರೆ ಅಸಹ್ಯ! ಕ್ಷಮಿಸಿ ‘ಅಸಹ್ಯ’ ಎಂದರೆ ‘ಹೊಲಸು’ ಎಂದಲ್ಲ ಇತ್ತೀಚೆಗೆ ಹೀನಾರ್ಥ ಪಡೆದುಕೊಂಡಿರುವುದು ಅ-ಸಹ್ಯ ಎಂದರೆ ಸಹಿಸಲು ಸಾಧ್ಯವಾಗದೆ ಇರುವುದೆಂದು. ಸಂದೇಶಗಳು, ಸುತ್ತೋಲೆ, ಜ್ಞಾಪಕ ಇದ್ದಂತೆ, ಏಕ ಕಾಲಕ್ಕೆ ಅನೇಕರಿಗೆ ಸಂದೇಶ ರವಾನೆಯಾಗುತ್ತದೆ ಉದಾಹರಣೆಗೆ, ಸರಕಾರದ ಆದೇಶ ಮದುವೆ ದಿನಾಂಕ, ಕೆಲಸಗಾರರಿಗೆ ಏಕ ಕಾಲದಲ್ಲಿ ಸಂದೇಶ ತಲುಪಿಸಲು ಬಹಳ ಅನುಕೂಲವಾಗಿದೆ ಇತ್ಯಾದಿ.
ಸುಮಾವೀಣಾ ಬರಹ ನಿಮ್ಮ ಓದಿಗೆ.

Read More

ಪ್ರಜ್ಞೇನ ಸುಪ್ತಪ್ರಜ್ಞೆ ಓವರ್ ಟೇಕ್ ಮಾಡಿದೆ…..

ಮನಸ್ಸಿನ ಅಹಂಕಾರ ಮೊದಲು ಅಮಲು ಆನಂತರ ಚಟ ನಂತರ ಅಧೋಗತಿ. ಈ ಅಧೋಗತಿ ಎಂಬ ಹಂತ ಅಲ್ಲಿಯವರೆಗೆ ವ್ಯಕ್ತಿ ಪರಿವರ್ತನೆ ಆಗಲಿಲ್ಲ ಎಂದರೆ ಆತ ವೃತ್ತಿ, ವೈಯಕ್ತಿಕ ಎರಡೂ ಕಡೆ ಮುಳುಗಿದಂತೆಯೇ ಸರಿ. ಇಲ್ಲಿ ಮೊಹಂತಿ ಹೆಂಡತಿಗೆ ವಿಚ್ಛೇದನ ಕೊಡುತ್ತಾನೆ. ಆಕೆ ನೀರಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಳ್ಳಲು ನೇರ ಕಾರಣನಾಗುತ್ತಾನೆ. ಆನಂತರ ಇತರ ಮಕ್ಕಳನ್ನು ನೋಡಿ ನನಗೂ ಇದ್ದಿದ್ದರೆ ಅನ್ನುವುದು, ಅವಳು ಇನ್ನೊಮ್ಮೆ ಬಂದರೆ ಚೆನ್ನಾಗಿ ನೋಡಿಕೊಳ್ಳುವುದಾಗಿ ಕೇವಲ ಮನಸ್ಸಿನಲ್ಲಿ ಮಾತ್ರ ತೀರ್ಮಾನ ಮಾಡಿಕೊಂಡರೆ ಸಾಕೆ ಅದನ್ನು ಬಾಯಂಗಳದಲ್ಲೇ ಇರಿಸಿಕೊಂಡರೆ ಎದುರಿಗಿರುವವರ ಮನದಂಗಳ ತಲುಪುವುದು ಹೇಗೆ?
ಕೆ.ವಿ. ತಿರುಮಲೇಶರ ಕಾದಂಬರಿಗಳ ಕುರಿತು ವಿಶ್ಲೇಷಿಸಿದ್ದಾರೆ ಸುಮಾವೀಣಾ

Read More

ಅನೇಕಾನೇಕ ಹೊಳಹುಗಳು….

ಯಾರೂ ಇಲ್ಲದೇ ಇರುವ ಸ್ಥಳದಲ್ಲಿ ತನ್ನದೇ ಹೆಜ್ಜೆಯನ್ನು ಇನ್ಯಾರದೋ ಎಂದು ನೋಡುವುದು ಒಂಟಿತನ ಸ್ಥಿರವಲ್ಲ ಕಷ್ಟ ಎಂಬುದನ್ನು ಅರ್ಥೈಸುತ್ತದೆ. ವಿಶಾಲ ಬದುಕಿನಲ್ಲಿ ಆಸೆ ಇರಿಸಿಕೊಂಡವನು ಇರುವ ಚಾಕುವಿನಲ್ಲಿಯೇ ಬೇಟೆಯಾಡುವ ಅಭ್ಯಾಸ ಪ್ರಾರಂಭಿಸುತ್ತಾನೆ ಪ್ರಯೋಗಕ್ಕೂ ಅಭ್ಯಾಸಬಲವಿರಬೇಕು ಎಂಬುದು ಇಲ್ಲಿ ಸಾಬೀತಾಗುತ್ತದೆ. ಅಂತರಾಷ್ಟ್ರೀಯ ಗುಪ್ತಚರ ಬಳಗದವನು ನಾನು ಹಾಗೆ….! ನಾನು ಹೀಗೆ….!
ಕೆ.ವಿ. ತಿರುಮಲೇಶರ “ಅನೇಕ” ಕಾದಂಬರಿಯ ಕುರಿತು ಸುಮಾವೀಣಾ ಬರಹ

Read More

ಕಾದಂಬರಿಗಳಲ್ಲಿ ತಿರುಮಲೇಶರ ಅನನ್ಯತೆ

ಕಾದಂಬರಿಯ ನಿಜ ಸತ್ವ ಅಡಗಿರುವುದು ಕಾದಂಬರಿಯ ಮೂವತ್ತಮೂರನೆ ಅಧ್ಯಾಯದಲ್ಲಿಯೇ. ಕಾದಂಬರಿಯ ಆರಂಭಕ್ಕೆ ಬಂದ ಕಮಲ ಕಡೆಗೂ ಬರುತ್ತಾಳೆ. ಬೀಡಿ ಹೊಸೆದೂ ಹೊಸೆದೂ ಕುಟುಂಬ ನಿಭಾಯಿಸಿದಷ್ಟೂ ತನ್ನ ಖುಷಿಗಳನ್ನು ಹೊಸಕಿ ಹಾಕುತ್ತಿರುತ್ತಾಳೆ. ಕೈಯಲ್ಲಿ ಕೆಲವೇ ರುಪಾಯಿಗಳನ್ನು ಹಿಡಿದು ಪೇಟೆಗೆ ಹೋಗುವ ಆಕೆ ರಿಸ್ಟ್ ವಾಚನ್ನು ನೋಡುತ್ತಾಳೆ. ತೆಗೆದುಕೊಳ್ಳುವುದಿಲ್ಲ. ಬಣ್ಣ ಬಣ್ಣದ ಸೀರೆಯನ್ನು ನೋಡುತ್ತಾಳೆ ಅದಕ್ಕೆ ಹೊಂದಿಕೆಯಾಗುವ ರವಿಕೆಯನ್ನೂ ನೋಡುತ್ತಾಳೆ. ಇನ್ನೊಮ್ಮೆ ಇನ್ನೊಮ್ಮೆ ಎಂದು ತನ್ನ ಬಯಕೆಗಳನ್ನು ಮುಂದೆ ಹಾಕುತ್ತಲೇ ಅಂಗಡಿಯವನು ಬೇರೆ ಗಿರಾಕಿಗಳ ಕಡೆ ಗಮನ ಕೊಟ್ಟಾಗ ತಾನು ಸದ್ದಿಲ್ಲದೆ ಅಂಗಡಿಯಿಂದ ಹೊರಬರುತ್ತಾಳೆ.
ಕೆ.ವಿ. ತಿರುಮಲೇಶರ “ಆರೋಪ” ಕಾದಂಬರಿಯ ಕುರಿತು ಸುಮಾವೀಣಾ ಬರಹ

Read More

ಫ್ಲೈಟ್ ತಪ್ಪಿಸಿದ ಮೆಹೆಂದಿ ಮತ್ತು ನಾನು

ಯುವತಿಯೊಬ್ಬಳ ಭಾರೀ ಕನ್ನಡಕದಿಂದ ಪ್ರೇರಿತರಾದ ನಾವು ತಂಪು ಕನ್ನಡಕವನ್ನು ಹುಡುಕಿ ಹಾಕಿಕೊಂಡವು. ತಲೆಯನ್ನೊಮ್ಮೆ ನೇವರಿಸಿಕೊಳ್ಳಬೇಕೆಂದಾಗಲೇ ನಮಗೆ ಹೊಳೆದದ್ದು ನಮ್ಮ ತಲೆಯ ಮೆಹೆಂದಿಗೆ ಜಲಭಾಗ್ಯ ಕರುಣಿಸಿಲ್ಲವೆಂದು. ಅಷ್ಟರಲ್ಲಾಗಲೇ ನಮ್ಮ ಕೈಗೆ ಬೋರ್ಡಿಂಗ್ ಪಾಸ್ ದೊರೆಯಿತು. ಯಾವ ಲೌಂಜಿನಲ್ಲಿ ಕುಳಿತುಕೊಳ್ಳಬೇಕೆಂಬ ವಿವರ ಪಡೆದುಕೊಂಡೆವು. ಹಾಗೆ ಅತ್ತಿಗೆ ನಾದಿನಿಯರಿಬ್ಬರೂ ಒಬ್ಬರ ಮುಖವನ್ನೊಮ್ಮೆ ನೋಡಿಕೊಂಡೆವು… ನಗು ಬರಲಿಲ್ಲ. ನಮ್ಮ ಅವಾಂತರಕ್ಕೆ ಸಿಟ್ಟು ಬರುತ್ತಿತ್ತು. ಲೌಂಜಿನಲ್ಲೊಮ್ಮೆ ನಮ್ಮ ಲಗೇಜನ್ನು ಕುಕ್ಕರಿಸಿ ವಾಶ್ ರೂಮಿಗೆ ದೌಡಿಟ್ಟೆವು.
ಸುಮಾವೀಣಾ ಬರೆದ ಅನುಭವ ಕಥನ ನಿಮ್ಮ ಓದಿಗೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ