Advertisement
ಡಾ. ವಿನತೆ ಶರ್ಮ

ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.

ಜಾನ್ ಮ್ಯೂರ್ ಮತ್ತು ಆತನ ಸಾಹಸ ಗಾಥೆಗಳು: ಡಾ.ವಿನತೆ ಶರ್ಮ ಅಂಕಣ

“ಜಾನ್ ಕೈಗೊಂಡ ಅತಿಸಾಹಸಗಳಲ್ಲಿ ಹಲವನ್ನು ಹೆಸರಿಸಬೇಕು ಎಂದು ಆಯ್ದುಕೊಂಡರೆ ಅವರು ಎರಡೂ ಧ್ರುವಗಳಿಗೆ ಕಾಲ್ನಡಿಗೆಯಲ್ಲಿ ಹೋಗಿ ತಲುಪಿದ್ದು, ಆಸ್ಟ್ರೇಲಿಯಾದ ಉಪ್ಪಿನ ಸರೋವರಗಳ ಮೇಲ್ಮೈ ಮೇಲೆ ನೂರಾರು, ಮರುಭೂಮಿ ಉದ್ದ ಮತ್ತು ಅಗಲಕ್ಕೂ ಹಲವಾರು ಬಾರಿ ಸಾವಿರಾರು ಕಿಲೋಮೀಟರ್ ನಡಿಗೆಯ ಪಯಣಗಳು, ಸಮುದ್ರ ದೋಣಿಯಲ್ಲಿ ತಿಂಗಳಾನುಗಟ್ಟಲೆ ಪಯಣಗಳು, ಜೊತೆಗೆ ಪರ್ವತಾರೋಹಣ. ಅವುಗಳಲ್ಲಿ ಅನೇಕವು ಬಹು ಅಪಾಯಕಾರಿಯಾದವು.”

Read More

ಅಮ್ಮಂದಿರ ತೋಳ ಕೂಸುಗಳು: ಡಾ. ವಿನತೆ ಶರ್ಮಾ ಅಂಕಣ.

“ಅವರಿಗೆ ಸಮಾಧಾನ ಮಾಡುತ್ತ ನಾನು ಆಕೆಯೊಡನೆ ಸಂಭಾಷಣೆ ನಡೆಸುತ್ತಿದ್ದಾಗ ಅಲ್ಲೇ ಪಕ್ಕದಲ್ಲಿ ಓಡಾಡುತ್ತಾ ಆಟವಾಡುತ್ತಿದ್ದ ಮಗು ನಮ್ಮ ಬಳಿ ಬಂತು. ಆಶ್ಚರ್ಯವೆಂಬಂತೆ ತಾಯಿಯ ಕಡೆ ತಿರುಗದೆ ನನ್ನ ಬಳಿ ಬಂದು ತೊಡೆಹತ್ತಿ ಅಪ್ಪಿಕೊಂಡು ಅದರ ಭಾಷೆಯಲ್ಲಿ ಅದೇನನ್ನೋ ಹೇಳಿ ನಕ್ಕಿತು. ದತ್ತು ತಾಯಿಯ ಕಣ್ಣಲ್ಲಿ ನೀರು!! ಇಲ್ಲಿಯವರೆಗೂ ಒಂದು ಬಾರಿಯೂ ಮಗು ತಾನೇ ತಾನಾಗಿ ಬಂದು ಆಕೆಯನ್ನು ಅಪ್ಪಿಕೊಂಡಿಲ್ಲ ಎಂದು ಹೇಳುತ್ತಾ ಆಕೆ ಬೇಸರಿಸಿಕೊಂಡರು.”

Read More

ಈಸ್ಟರ್ ಬನ್ನಿ ಮತ್ತು ಈಸ್ಟರ್ ಬಿಲ್ಬಿಯ ಕಥೆ: ಡಾ. ವಿನತೆ ಶರ್ಮಾ ಅಂಕಣ.

“ಕಥೆ ಕಡೆಗೆ ಬಂದು ನಿಲ್ಲುವುದು ಹಲವಾರು ಸಂದೇಶಗಳೊಡನೆ. ಬಿಲ್ಬಿಯನ್ನು ನಾವೆಲ್ಲಾ ಕಡೆಗಣಿಸಿದ್ದೀವಿ, ಈ ಪ್ರಾಣಿ ಮತ್ತು ನಾವು ಜೊತೆಗಾರರು, ಅದರ ಮನೆಯನ್ನು, ವಾಸಸ್ಥಳವನ್ನು ನಾವು ಸಂರಕ್ಷಿಸಬೇಕು. ಬಿಲ್ಬಿಯ ಬಗ್ಗೆ ಹೆಚ್ಚು ಜನರಲ್ಲಿ ಅರಿವು ಮೂಡಿಸಬೇಕು. ಅದರ ಸಂತತಿಯನ್ನು ಉಳಿಸುವ ನಿಟ್ಟಿನಲ್ಲಿ ನಾವೆಲ್ಲಾ ಈ ಈ ತರನಾದ ಕ್ರಮಗಳನ್ನು ಕೈಗೊಳ್ಳಬೇಕು.”

Read More

ವಲಸಿಗರ ಪರದೇಶಿತನದಲ್ಲೂ ಇರೋ ಆಸೆಗಳು: ಡಾ. ವಿನತೆ ಶರ್ಮಾ ಅಂಕಣ.

“ಎಲ್ಲಿಂದಲೋ ಯಾರೋ ಇದ್ದಕ್ಕಿದ್ದಂತೆ ಬಂದು ಸಹಜವಾಗಿ ನಿರ್ಮಿತವಾದ ಒಂದು ಸಮಾಜದ ಮೇಲೆ, ಒಂದು ನೆಲದ ಮೇಲೆ ಆಕ್ರಮಣ ಮಾಡಿದರೆ ಅಷ್ಟೇ ಸಹಜವಾಗಿ ಆತಂಕ, ಶಂಕೆ, ಅಪರಾಧೀ ಪ್ರಜ್ಞೆಗಳು ಆ ಆಕ್ರಮಣಕಾರರ ರಕ್ತದಲ್ಲಿ ಬೇರೂರಿ ಬೆಸೆದುಹೋಗಿ ಅವರ ಪೀಳಿಗೆಗಳ ವಂಶವಾಹಿನಿಗಳಲ್ಲಿ ಬೇರೂರುತ್ತವೆಯೇನೋ.”

Read More

ಸಿಡ್ನಿ ಮಾರ್ಡಿ ಗ್ರಾ- “ಒಂದು ಭಿನ್ನ ಹಾದಿ”: ಡಾ. ವಿನತೆ ಶರ್ಮಾ ಅಂಕಣ

“ಎಲ್ಲರಿಂದಲೂ ಬೇರ್ಪಟ್ಟು ಒಬ್ಬಂಟಿಯಾಗಿ ನಿಂತದ್ದು ಆ ವ್ಯಕ್ತಿ. ಏಕೆಂದರೆ ಅದು ಆ ವ್ಯಕ್ತಿ ಅವನು ಎಂಬ ವ್ಯಕ್ತಿತ್ವನ್ನು, ಅಸ್ಮಿತೆಯನ್ನು ಬಿಟ್ಟು ಅವಳು ಎಂದು ಆಗಲು ಮಾರ್ಪಾಡಾಗುತ್ತಿದ್ದ ಹಂತದ ಕಥೆ. ಆ ಒಂದು ವಿಶಿಷ್ಟ ಹಂತದಲ್ಲಿ ಅವಳು ಸಹಾಯ ಬಯಸಿ ಪ್ರಾಜೆಕ್ಟ್ ಸೇರಿದ್ದಳು. ಇನ್ನೂ ಹರೆಯದ ವಯಸ್ಸು. ಕಾನೂನು ಪ್ರಕಾರ ಇನ್ನೂ ಅವನು ಎಂಬ ಲಿಂಗವೇ ಚಾಲ್ತಿಯಲ್ಲಿತ್ತು.”

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ