Advertisement

ಕೀರ್ತಿ ಬೈಂದೂರ್

ಅದೇ ದಾರಿ… ಅದೇ ತಿರುವು…:  ವಿನಾಯಕ ಅರಳಸುರಳಿ ಅಂಕಣ

ರಾತ್ರಿಯಾದರೆ ಸಾಕು, ಒಂದೊಂದು ಮನೆಯೂ ಒಂದೊಂದು ಬೆಳಕಿನ ಡಬ್ಬಿ. ಒಂದೊಂದು ಕಿಟಕಿಯಲ್ಲಿ ಕತ್ತಲು, ಇನ್ನೊಂದರಲ್ಲಿ ಬೆಳಕು. ಆ ಬೆಳಕಿನ ಪರದೆಯ ಹಿಂದೆಯೇ ಕಪ್ಪು ನೆರಳಾಗಿ ಕದಲುವ ಮನುಷ್ಯರು. ವಾಹನಗಳ ಭರಾಟೆ ತಗ್ಗಿರುವ ರಾತ್ರಿ ಹತ್ತರ ನೀರವದಲ್ಲಿ ಸಮೀಪದಲ್ಲೇ ಕೇಳಿಸುವ ರೈಲಿನ ಕೇಕೆ. ಅರೆರೇ, ರೈಲಿನ ಹಳಿ ಇಷ್ಟು ಹತ್ತಿರದಲ್ಲೇ ಇದೆಯೇ? ಈ ಕ್ಷಣಕ್ಕೆ ಕೇಳಿಸಿದ ಕೇಕೆಯಲ್ಲೇ ಅದು ಹಾದು ಹೋಗಲಿರುವ ನದಿ-ಬೆಟ್ಟ-ಸುರಂಗ-ಕಾಡುಗಳ ಸುಂದರ ಪ್ರಯಾಣದ ಕಲ್ಪನೆಯಾಗಿ ಮನಸ್ಸಿನಲ್ಲೇನೋ ಖುಷಿಯ ಭಾವ.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”

Read More

ಹಿನ್ನೀರಿನಲ್ಲೊಂದು ಮುಂಜಾನೆ: ವಿನಾಯಕ ಅರಳಸುರಳಿ ಅಂಕಣ

ಇದೇ ಅಲೆಯ ಬುಡದಲ್ಲಿ ಒಂದು ಕಾಲದಲ್ಲಿ ಹಳ್ಳಿಯಿತ್ತು. ಗದ್ದೆಯಿತ್ತು. ಮನೆಯಿತ್ತು. ದನಕರುಗಳು ಓಡಾಡುತ್ತಿದ್ದವು. ಮನುಷ್ಯ ವಾಸವಾಗಿದ್ದ. ಅಲ್ಲೆಲ್ಲೋ ದೂರದಲ್ಲಿ ನದಿಯೊಂದರ ದಾರಿಯ ತಡೆದ ಕಾರಣಕ್ಕೆ ಇಲ್ಲಿ ಇವೆಲ್ಲವೂ ಮುಳುಗಿದವು. ಈ ನೀರಡಿಗೀಗ ಏನೇನಿರಬಹುದು? ಮುಳುಗಡೆಯಾಗುವ ಹೊತ್ತಿಗೆ ಎದ್ದು ಹೋದ ಮಗುವೊಂದು ಅರ್ಧಕ್ಕೇ ಆಡಿ ಬಿಟ್ಟ ಆಟಿಕೆಯಿರಬಹುದೇ? ರೈತನೊಬ್ಬ ನೂರಾರು ಕಟ್ಟು ಹುಲ್ಲು ಕೊಯ್ದಿರುವ ಕತ್ತಿಯಿರಬಹುದೇ? ಅಮ್ಮ ಒಬ್ಬಳು ನೂರಾರು ಬಾರಿ ಗಂಜಿ ಕಾಯಿಸಿರುವ ಪಾತ್ರೆಯಿರಬಹುದೇ? ಹಲವು ದೇವಸ್ಥಾನಗಳೂ ಇಲ್ಲಿ ಮುಳುಗಿ ಹೋಗಿವೆಯಂತೆ… ಇನ್ನಾದರೂ ಅಲ್ಲಿ ದೇವರಿರಬಹುದೇ?
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”ಯ ಬರಹ ನಿಮ್ಮ ಓದಿಗೆ

Read More

ಬದಲಾಗಿದ್ದು ಕ್ಯಾಲೆಂಡರ್ ಮಾತ್ರವೇನಾ?:  ವಿನಾಯಕ ಅರಳಸುರಳಿ ಅಂಕಣ

ಫಸ್ಟ್ ಬರುವ ನಿರೀಕ್ಷೆಯಲ್ಲಿ ಶಾಲೆ-ಕಾಲೇಜುಗಳೇ ಮುಗಿದವು. ಏಳು, ಎಂಟಕ್ಕೆ ಏಳೇಳುತ್ತ ಹಗಲುಗಳೇ ಸವೆದವು. ಕೊನೆಯ ಬೆಂಚಿನ ಹುಡುಗಿಯ ಬದುಕಿನಲ್ಲಿ ಹೊಸ ವರ್ಷ, ಗಂಡ, ಮಕ್ಕಳೂ ಬಂದಿದ್ದಾಯಿತು. ಬೈಸಿಕೊಳ್ಳುತ್ತಲೇ ಅಮ್ಮ ಎದ್ದು ಹೋದಳು. ಕೆಲಸ ಮಾಡಿಸಿಕೊಳ್ಳದೆಯೇ ಅಪ್ಪ ಹೊರಟು ಹೋದ. ಬಂಕ್ ಮಾಡುತ್ತಿರುವಾಗಲೇ ಕಾಲೇಜಿನ ಕೊನೆಯ ದಿನ ತಲುಪಿದೆವು. ಹೊಸ ಕ್ಯಾಲೆಂಡರಿನ ಮೊದಲ ಪುಟ ತಿರುವುವ ಮೊದಲೇ ಗಂಡ/ಹೆಂಡತಿಯ ಜೊತೆ ಆಗಲೇ ಮೂರು ಬಾರಿ ಜಗಳವಾಡಿಯಾಗಿದೆ. ಅದೇ ಸೋಮಾರಿತನ, ಅದೇ ಅಶ್ರದ್ಧೆ, ಅದೇ ಸುಮ್ಮನೆ ವ್ಯಯವಾಗುವ ಮುನ್ನೂರರವತೈದು ದಿನಗಳ ಮತ್ತೊಂದು ಆವರಣಕ್ಕೆ ‘ಹೊಸ ವರ್ಷ’ ಎನ್ನುವ ಹೆಸರು ಕೊಟ್ಟು ಕುಣಿಯುತ್ತ, ಕುಡಿಯುತ್ತ, ಕೇಕೆ ಹಾಕುತ್ತ ಪ್ರವೇಶಿಸಿದೆವು!
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”

Read More

“ಏನು ಚಂದಮಾಮ ಕಥೆ ಹೇಳ್ತಿದೀಯಾ?”: ವಿನಾಯಕ ಅರಳಸುರಳಿ ಅಂಕಣ

ಈ ಅವಾಂತರಗಳೆಲ್ಲಾ ಏನೇ ಆದರೂ ಬರೆಯಬೇಕು ಎಂಬ ಸ್ವಸ್ಥ ಹವ್ಯಾಸವನ್ನು ಮೊಟ್ಟಮೊದಲ ಬಾರಿಗೆ ಅದೆಷ್ಟೋ ಮಕ್ಕಳ ಎದೆಯಲ್ಲಿ ಬಿತ್ತಿದ, ಕೈ ಹಿಡಿದು ಬರೆಸಿದ, ಬರೆದಿದ್ದಕ್ಕೊಂದು ವೇದಿಕೆ ಕಲ್ಪಿಸಿದ ಶ್ರೇಯ ಈ ಎಲ್ಲ ಮಕ್ಕಳ ಪತ್ರಿಕೆಗಳಿಗೇ ಸಲ್ಲಬೇಕು. ಅವರಿಗೆ ಇಷ್ಟವಾದ ಪಾತ್ರಗಳನ್ನು ಸೃಷ್ಟಿಸಿ ಅವುಗಳ ಮುಖಾಂತರ ವಿನೋದಮಯವಾದ ಕಥೆಗಳನ್ನು ಹೆಣೆದು, ಅದರೊಳಗೇ ಕಾಣದಂತೆ ನೀತಿಗಳನ್ನು ಬೆರೆಸಿ ಉಣಬಡಿಸುತ್ತಿದ್ದ ಈ ಪತ್ರಿಕೆಗಳು ಓದಿದವರ ಮನಸ್ಸಿನಲ್ಲಿ ಇಂದಿಗೂ ಉಳಿದಿವೆ.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”

Read More

ಕೋಮಾವೂ, ಮಂಜನ ಚಕ್ಕುಲಿಯೂ… : ವಿನಾಯಕ ಅರಳಸುರಳಿ ಅಂಕಣ

ತೊಡೆಯ ಮೇಲೆ ಪೆಟ್ಟು ತಿಂದ ಶಿವುವಿಗೆ ತಾನು ಮಂಜುವನ್ನು ಸೋಲಿಸಲಾರೆ ಎಂಬುದು ಅರ್ಥವಾಯಿತೋ ಏನೋ? ಇನ್ನೂ ಬೀಳಲಿರುವ ಒದೆಗಳಿಂದ ತಪ್ಪಿಸಿಕೊಳ್ಳಲು ಇರುವ ಏಕಮಾತ್ರ ಉಪಾಯವೆಂಬಂತೆ ಅವನು ತನ್ನ ಕಾಲು ಹಿಡಿದುಕೊಂಡು ನೆಲಕ್ಕೆ ಬಿದ್ದುಕೊಂಡು “ಅಯ್ಯೋ.. ಅಮ್ಮಾ.. ಅಯ್ಯಯ್ಯಮ್ಮಾ” ಎನ್ನುತ್ತಾ ಒದ್ದಾಡತೊಡಗಿದ. ತಾನಾಗಿ ಹೊಡೆಯಲಾಗದ ಮಂಜುವಿಗೆ ಮೇಷ್ಟರ ಕೈಯಿಂದ ಹೊಡೆಸುವ ಉಪಾಯವೂ ಅವನದಾಗಿತ್ತೋ ಏನೋ? ಪರಿಸ್ಥಿತಿಯ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿ, ಬೇಗ ಈ ವಿಷಯ ಮೇಷ್ಟರನ್ನು ಮುಟ್ಟುವಂತೆ ಮಾಡಲೆಂದು ಎದೆ, ಕಾಲು ಹಿಡಿದುಕೊಂಡು ಒದ್ದಾಡುತ್ತಾ “ಅಯ್ಯೋ.. ಅಮ್ಮಾ‌‌.. ನಂಗ್ ಉಸಿರಾಡುಕಾತಿಲ್ಯೋ.. ಅಪ್ಪಯ್ಯೋ.. ಅಬ್ಯೋ” ಎಂದು ಇನ್ನೇನು ಐಸಿಯುಗೆ ಸೇರಿಸಬೇಕಾದ ರೋಗಿಯಂತೆ ನಟಿಸತೊಡಗಿದ.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”ಯ ಬರಹ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ